ಬನ್ನಿ ಒಂದಷ್ಟು ಮಾತನಾಡೋಣ, ಬಾಬಾಸಾಹೇಬರನ್ನು ಮತ್ತಷ್ಟು ಎದೆಗಿಳಿಸಿಕೊಳ್ಳೋಣ

Date:

Becoming Babasaheb ಪುಸ್ತಕ ಕುರಿತು ಲೇಖಕ ಆಕಾಶ್ ಸಿಂಗ್ ರಾಥೋರ್ ಅವರು ಭಾನುವಾರ ಸಂಜೆ ಐದು ಗಂಟೆಗೆ ಆಕೃತಿ ಪುಸ್ತಕದ ಮಳಿಗೆಯಲ್ಲಿ ಸಿಗಲಿದ್ದಾರೆ… ಬನ್ನಿ ಒಂದಷ್ಟು ಮಾತನಾಡೋಣ, ಬಾಬಾಸಾಹೇಬರನ್ನು ಇನ್ನಷ್ಟು, ಮತ್ತಷ್ಟು ಎದೆಗಿಳಿಸಿಕೊಳ್ಳೋಣ.

ಕರ್ನಾಟಕದಲ್ಲಿ ದಲಿತ ಚಳವಳಿ ಎಪ್ಪತ್ತರ ದಶಕದಿಂದ ಸಕ್ರಿಯವಾಗಿದ್ದರೂ ಬಾಬಾಸಾಹೇಬರ ಬದುಕು-ಚಿಂತನೆಯ ಕುರಿತ ಕನ್ನಡದ ಸಾಂಸ್ಕೃತಿಕ ವಲಯ ನಡೆಸಿರುವ ಬೌದ್ಧಿಕ ಜಿಜ್ಞಾಸೆ ಕಡಿಮೆ ಎನ್ನಬಹುದು. ಇದಕ್ಕೆ ಜನಪ್ರಿಯ ಅನ್ನಬಹುದಾದ ಆಕರಗಳನ್ನು ಅವಲಂಬಿಸಿಯೆ ಬಾಬಾಸಾಹೇಬರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರುವುದು ಒಂದು ಕಾರಣವಾದರೆ ಮಹಾರಾಷ್ಟ್ರದ ಫುಲೆ-ಅಂಬೇಡ್ಕರೈಟ್ ಚಳವಳಿಯ ಕುರಿತು ರೋಸಲಿನ್ ಹ್ಯಾಂಡ್ಲನ್, ಎಲಿನಾರ್ ಝೆಲಿಯಟ್, ಗೇಲ್ ಓಮ್ವೆಡ್ತ್, ಕ್ರಿಸ್ಟೊಫರ್ ಝೆಫರ್‌ಲಾಟ್ ತರದ ವಿದ್ವಾಂಸರು ಜಾತಿವಿನಾಶ ಮತ್ತು ಅಂಬೇಡ್ಕರ್ ಚಳವಳಿಯ ಕುರಿತು ಮಾಡಿರುವ ಸಂಶೋಧನೆಗಳನ್ನು ಮುಟ್ಟಿಯೂ ಕೂಡ ನೋಡದಿರುವುದು ಇನ್ನೊಂದು ಕಾರಣ.

ಎಪ್ಪತ್ತರ ದಶಕದ ಸಾಹಿತ್ಯ ಚಳವಳಿಯಾಗಲೀ, ರೈತ-ದಲಿತ ಚಳವಳಿಗಳಂತಹ ಸಾಮಾಜಿಕ ಚಳವಳಿಗಳಾಗಲೀ ಜೆಪಿ ಚಳವಳಿ ಮತ್ತು ರಾಮಮನೋಹರ ಲೋಹಿಯಾ ಚಿಂತನೆಯಿಂದ ನೇರವಾಗಿ ಅರ್ಥಾತ್ ಗಾಂಧಿ‌ ಚಿಂತನೆಯಿಂದ ಪರೋಕ್ಷವಾಗಿ ಪ್ರಭಾವಿತಗೊಂಡಿದ್ದವುಗಳಾಗಿದ್ದವು.

ದಲಿತ ಚಳವಳಿ ಮತ್ತು ದಲಿತ ಚಿಂತನೆಗೆ ಅಪಾರವಾದ ಕೊಡುಗೆ ಕೊಟ್ಟ ಹಲವು ಹಿರಿಯರು ಮಾರ್ಕ್ಸ- ಗಾಂಧಿ – ಲೋಹಿಯಾ ಸಮಾಜವಾದಿಗಳಾಗಿದ್ದವರು. ದಲಿತ ಚಳವಳಿಯ ಒಳಗೆ ಮಾರ್ಕ್ಸ್-ಗಾಂಧಿ-ಲೋಹಿಯಾ ಚಿಂತನೆ ದಲಿತ ವಿಮೋಚನೆಗೆ ಅಷ್ಟು ಪೂರಕವಲ್ಲ ಅಂತ ಅರ್ಥಮಾಡಿಕೊಂಡವರಿಗೂ ಅಂಬೇಡ್ಕರ್ ಬರಹಗಳು ಸಿಕ್ಕಿದ್ದು ಎಂಬತ್ತರ ದಶಕದ ಕೊನೆಗೆ ಮತ್ತು ತೊಂಬತ್ತರ ದಶಕದ ಶುರುವಿಗೆ. ಅಲ್ಲಿಯವರೆಗೂ ನಾನಕ್ ಚಂದ್ ರತ್ತು ಸಂಪಾದಿಸಿದ್ದ ‘Thus Spoke Ambedkar’ ಭಾಷಣಗಳ ಸಂಪುಟಗಳು ಮತ್ತು ಅಂಬೇಡ್ಕರ್ ಬರಹಗಳಲ್ಲಿ ಸಾರ್ವಜನಿಕವಾಗಿ ಹೆಚ್ಚು ಚರ್ಚೆಯಾದ ಬರಹಗಳನ್ನೆ ಅವಲಂಬಿಸಬೇಕಾದ ಅನಿವಾರ್ಯತೆಯಿತ್ತು. ಇನ್ನು ಅಂಬೇಡ್ಕರ್ ಬದುಕಿನ ಬಗ್ಗೆ ಧನಂಜಯ್ ಕೀರ್ ಬರೆದ ‘Ambedkar: Life and Mission’ ಕೃತಿ authoritative ಅನ್ನಿಸಿಕೊಂಡು ಎಲ್ಲರೂ refer ಮಾಡುವ ಕೃತಿಯಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವೃತ್ತಿಪರ ‘ಜೀವನಚರಿತ್ರಕಾರ’ರಾದ ಕೀರ್ ಅಂಬೇಡ್ಕರ್, ಸಾವರ್ಕರ್, ತಿಲಕ್ ಸೇರಿದಂತೆ ಹಲವು ಗಣ್ಯರ ಜೀವನಚರಿತ್ರೆಯನ್ನು ಬರೆದಿದ್ದಾರೆ. ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಅವರ ಜೀವಿತಕಾಲದಲ್ಲೆ ಬರೆದು ಅಂಬೇಡ್ಕರ್ ಅವರಿಗೆ ತೋರಿಸಿ ಅಂಬೇಡ್ಕರ್ ಅವರೆ ಅನುಮೋದಿಸಿದ್ದರು ಅಂತ ಪ್ರಚಾರ ಕೂಡ ಮಾಡಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಅಂಬೇಡ್ಕರ್ ಬದುಕಿನ ಕುರಿತ ‘ತಿಳಿವಳಿಕೆ’ಗೆ ಧನಂಜಯ್ ಕೀರ್ ಕೃತಿ ಆಧಾರಗ್ರಂಥವಾಗಿತ್ತು. ಆದರೆ ಅಂಬೇಡ್ಕರ್ ಅವರು ಕೀರ್ ಕೃತಿಯನ್ನು ಸಂಪೂರ್ಣವಾಗಿ ಓದಿ ಒಪ್ಪಿರಲಿಲ್ಲ ಕೇವಲ ಅಲ್ಲಲ್ಲಿ ಕಣ್ಣಾಡಿಸಿ ‘ಪರವಾಗಿಲ್ಲ’ ಎನ್ನುವ ಮಾತನ್ನಷ್ಟೆ ಆಡಿದ್ದರು ಮತ್ತು ತಮ್ಮ ಬದಕಿನಲ್ಲಿ ನಡೆದ ಹಲವು ಘಟನೆಗಳ ಬಗ್ಗೆ ಹೇಳಬೇಕಾದಷ್ಟು ಹೇಳುವುದಕ್ಕೆ ಈತ‌ನಿಂದ ಸಾಧ್ಯವಾಗಿಲ್ಲ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು ಎನ್ನುವುದನ್ನು ನಾನಕ್ ಚಂದ್‌ ರತ್ತು ಬರೆದಿದ್ದಾರೆ.

ಬಾಬಾಸಾಹೇಬರ ಕುರಿತ ಧನಂಜಯ್ ಕೀರ್ ಅವರ ಪುಸ್ತಕ ಎಷ್ಟು Superficial ಎನ್ನುವುದು ನಂತರ ಬಂದ ಹಲವಾರು ಸಂಶೋಧನ ಗ್ರಂಥಗಳು ಸಾಬೀತುಪಡಿಸಿವೆ. ಅದರಲ್ಲೂ ಸಂಘಪರಿವಾರದ Ideologue ಸಾವರ್ಕರ್ ಮತ್ತು ಅಂಬೇಡ್ಕರ್ ನಡುವಿನ ಸಂಬಂಧದ ಕುರಿತು ಕೀರ್ ಕಟ್ಟಿರುವ ಕಲ್ಪಿತ ಕತೆಗಳು ಹಿಂದುತ್ವವಾದಿಗಳು ಮತ್ತು ಸಂಘಪರಿವಾರ ಅಂಬೇಡ್ಕರ್ ಅವರನ್ನು appropriate ಮಾಡಿಕೊಳ್ಳುವುದಕ್ಕೆ ಅನುಕೂಲಕರವಾಗಿ ಪರಿಣಮಿಸಿ ಅಂಬೇಡ್ಕರ್ ವ್ಯಕ್ತಿತ್ವ ಮತ್ತು ಚಿಂತನೆಗೆ ಹಾನಿಮಾಡಿವೆ. ಈ ಕೃತಿ ಕೇವಲ ಹಿಂದುತ್ವವಾದಿಗಳ appropriationಗೆ ಮಾತ್ರ ಅವಕಾಶ ಮಾಡಿಕೊಟ್ಟಿಲ್ಲ, ಗಾಂಧಿವಾದಿ-ಸಮಾಜವಾದಿಗಳಿಗೂ ಅಂಬೇಡ್ಕರ್ ಅವರ ಕುರಿತು ತಪ್ಪು ಕಲ್ಪನೆಗಳನ್ನು ಹರಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ಒಂದು ಉದಾಹರಣೆ: ಕಳೆದ ಕೆಲವು ವರ್ಷಗಳ ಹಿಂದೆ ಗಾಂಧಿವಾದಿ ಅನ್ನಬಹುದಾದ ಚಿಂತಕರೊಬ್ಬರು ಕೀರ್ ಕೃತಿಯಲ್ಲಿ ಬರುವ ಸಾವರ್ಕರ್-ಅಂಬೇಡ್ಕರ್ ಸಂಬಂಧದ ದಾಖಲೆಗಳನ್ನು ಪ್ರಸ್ತಾಪಿಸಿ ಅಂಬೇಡ್ಕರ್ ತಮ್ಮ ಕಾರ್ಯಸಾಧನೆಗಾಗಿ ಸಂಘಪರಿವಾರದ ಜೊತೆಗೆ ಕೈಜೋಡಿಸಲು ಸಿದ್ದರಿದ್ದರು, ಗಾಂಧಿಯನ್ನು ಕೊಂದವರ ಜೊತೆಗೆ ಸೌಹಾರ್ದ ಸಂಬಂಧವನ್ನಿಟ್ಟುಕೊಂಡಿದ್ದರೂ, ಆದರೂ ‘ನಾವು’ ಅಂಬೇಡ್ಕರ್ ಅವರನ್ನು ಗೌರವಿಸುತ್ತೇವೆ. ಇದನ್ನು ಗಾಂಧಿಯ ಕಟುಟೀಕಾಕಾರರಾಗಿರುವ ‘ಅಂಬೇಡ್ಕರ್‌ವಾದಿಗಳು’ ಅರ್ಥಮಾಡಿಕೊಳ್ಳಬೇಕು ಅಂತ ವಾದಿಸಿದ್ದರು.

ಆಗಿನ್ನೂ ನಾನು ಬಾಬಾಸಾಹೇಬರ ಬರಹಗಳನ್ನು ಓದುವುದಕ್ಕೆ ಶುರುಮಾಡಿರಲಿಲ್ಲ. ಎಸ್.ಚಂದ್ರಶೇಖರ್, ಡಿ.ಆರ್.ನಾಗರಾಜ್, ದೇವನೂರ ‘ಗಾಂಧಿ- ಅಂಬೇಡ್ಕರ್’ ಜೋಡಿ ಚಿಂತ‌ನೆಯ ಕುರಿತು ರಮ್ಯ ಕಲ್ಪನೆ ಇಟ್ಟುಕೊಂಡಿದ್ದ, ಗಾಂಧಿ-ಲೋಹಿಯಾ ಮೂಲಕವೇ ಅಂಬೇಡ್ಕರ್ ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ ನನಗೆ ಸಾವರ್ಕರ್-ಅಂಬೇಡ್ಕರ್ ಸಂಬಂಧದ ಕುರಿತ ಕೀರ್ ಪುಸ್ತಕ ಮತ್ತು ಗಾಂಧಿವಾದಿ ಚಿಂತಕರ ಉದಾರವಾದಿ ಗುಣದ ಹಿಂದಿರುವ ಮರ್ಮ ಅರ್ಥವಾಗಿರಲಿಲ್ಲ. ಚರಿತ್ರೆ ಇಂತಹ ಹಲಬಗೆಯ ಬೌದ್ಧಿಕ ವಂಚನೆಗಳಿಂದ ಅಂಬೇಡ್ಕರ್ ಅವರನ್ನು ಮುಚ್ಚಿಡಲು ಪ್ರಯತ್ನಿಸಿದರೂ ಅಂಬೇಡ್ಕರರ ಬೌದ್ಧಿಕತೆ ಪ್ರಖರವಾಗುತ್ತಲೆ ಹೋಗುತ್ತಿದೆ ಮತ್ತು ಹೆಚ್ಚು ಹೆಚ್ಚು ಪ್ರಸ್ತುತವಾಗುತ್ತಲೂ ಹೋಗುತ್ತಿದೆ.

ಅಂಬೇಡ್ಕರ್ ಬದುಕಿನ ಕುರಿತ ಬರಹಗಳಲ್ಲಿ ಆಗಿರುವ ಹಲವು ಬೌದ್ಧಿಕ ಎಡವಟ್ಟುಗಳಿಗೆ ಉತ್ತರದಂತೆ ಆಕಾಶ್ ಸಿಂಗ್ ರಾಥೋರ್ ಅವರ Becoming Babasaheb ಪುಸ್ತಕ ಇದೆ.

ಅಂಬೇಡ್ಕರ್ ಅವರ ಬೌದ್ಧಿಕತೆ ಕುರಿತ ಹಲವು ಮಹತ್ವದ ಸಂಶೋಧನೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಒಬ್ಬ ಸಾಮಾನ್ಯ ಮನುಷ್ಯನಾಗಿ ಹುಟ್ಟಿದ ವ್ಯಕ್ತಿ ‘ಬಾಬಾಸಾಹೇಬ್’ ಆದ ಪರಿಯನ್ನು ಅರ್ಥಮಾಡಿಕೊಳ್ಳಲು ಈ ಕೃತಿ ಸಹಾಯ ಮಾಡುತ್ತದೆ‌. ನಮಗೆ ಇಲ್ಲಿಯವರೆಗೆ ಗೊತ್ತಿಲ್ಲದ ಬಾಬಾಸಾಹೇಬರ ಕುರಿತ ಹಲವಾರು ಘಟನೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

ಈ ಕೃತಿಯ ಲೇಖಕ ಆಕಾಶ್ ಸಿಂಗ್ ರಾಥೋರ್ ನಾಳೆ ಬೆಂಗಳೂರಿನಲ್ಲಿ ಇರುತ್ತಾರೆ. ಸಂಜೆ ಐದು ಗಂಟೆಗೆ ಆಕೃತಿ ಪುಸ್ತಕದ ಮಳಿಗೆಯಲ್ಲಿ ಸಿಗಲಿದ್ದಾರೆ… ಬನ್ನಿ ಒಂದಷ್ಟು ಮಾತನಾಡೋಣ, ಬಾಬಾಸಾಹೇಬರನ್ನು ಇನ್ನಷ್ಟು, ಮತ್ತಷ್ಟು ಎದೆಗಿಳಿಸಿಕೊಳ್ಳೋಣ.

Capture
ವಿ ಎಲ್ ನರಸಿಂಹಮೂರ್ತಿ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...