ಹಿಂಸೆಯಿಂದ ನಲುಗಿದ ಜನರ ಸ್ವಾತಂತ್ರ್ಯದ ಪರಿಕಲ್ಪನೆ ಹೇಗಿರಬಹುದು?

Date:

ಎರಡು ವರ್ಷಗಳ ಹಿಂದೆ ರೈತರ ಹೋರಾಟದಲ್ಲಿ ಸುಮಾರು ಏಳುನೂರು ಮಂದಿ ಗತಿಸಿದರು. ಅವರ ಕುಟುಂಬಸ್ಥರು ಸ್ವಾತಂತ್ರ್ಯವನ್ನು ಹೇಗೆ ಬಗೆಯಬಹುದು? ಇತ್ತೀಚೆಗೆ ಮಣಿಪುರದಲ್ಲಿ ಜರುಗಿದ ಹಿಂಸೆಯಲ್ಲಿ ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲು ಮಾಡಿ, ಅವರ ಮೆರವಣಿಗೆಯನ್ನು ಮಾಡಿ, ಅತ್ಯಾಚಾರವನ್ನು ಮಾಡಲಾಯಿತು. ಅಲ್ಲಿನ ಹಿಂಸಾಕಾಂಡದಲ್ಲಿ ಆಗಿರುವ ಆಸ್ತಿ, ಪ್ರಾಣಹಾನಿಯನ್ನು ಅನುಭವಿಸಿದವರು ಸ್ವಾತಂತ್ರ್ಯದ ಪರಿಕಲ್ಪನೆಗೆ ಹೇಗೆ ಸ್ಪಂದಿಸಬಹುದು?

ನಾವು ಎಪ್ಪತ್ತಾರನೆಯ ಸ್ವಾತಂತ್ರ್ಯೋತ್ಸವವನ್ನು ಆಚರಿಸತ್ತಿದ್ದೇವೆ. ಸ್ವಾತಂತ್ರ್ಯ ಎಂಬ ಪರಿಕಲ್ಪನೆ ಎಂದು ಚಾಲ್ತಿಗೆ ಬಂದಿತು ಎಂಬುದು ನಿಖರವಾಗಿ ಗುರುತಿಸಲು ಸಾಧ್ಯವಾಗದಿದ್ದರೂ ದಾಸ್ಯ ಎಂಬ ವ್ಯವಸ್ಥೆ ಯಾವಾಗ ಬಂದಿತೋ, ಆ ಕಾಲದಿಂದಲೇ ಮಾನವರಲ್ಲಿ ಸ್ವಾತಂತ್ರ್ಯದ ಬಗೆಗೆ ತುಡಿತಗಳು ಮೂಡಿ ಬಂದವು ಎಂದು ಅರ್ಥೈಸಬಹುದು. ಇತಿಹಾಸದ ಪುಟಗಳನ್ನು ತಿರುಗಿಸಿದರೇ, ಮೊದಲ ಗುಲಾಮರ ವಿಪ್ಲವ 135-132 ಕ್ರಿ.ಪೂ. ದಲ್ಲಿ ಜರುಗಿತು ಎಂದು ತಿಳಿದು ಬರುತ್ತದೆ. ಅದು ರೋಮನ್‌ ಸಾಮ್ರಾಜ್ಯದ ವಿರುದ್ಧ ಈಗಿನ ಇಟಲಿಯ ಸಿಸಿಲಿಯಲ್ಲಿ ಜರುಗಿತು. ಯೂನುಸ್‌ ಎಂಬ ಸಿರಿಯಾದ ಒಬ್ಬ ಗುಲಾಮ ಸುಮಾರು 400 ಗುಲಾಮರೊಡನೆ ಈ ವಿಪ್ಲವಕ್ಕೆ ಕಾರಣನಾದ. ಇದನ್ನು ಪ್ರಥಮ ಗುಲಾಮಿ ಯುದ್ಧ ಎಂದು ಕರೆಯಲಾಗುತ್ತದೆ.

ಕ್ರಿ ಪೂ 73ರಲ್ಲಿ ಸ್ಪಾರ್ಟಕಸ್‌ ಎಂಬ ಗುಲಾಮ/ಗ್ಲೆಡಿಯೇಟರ್ ಶಕ್ತಿಶಾಲಿ ರೋಮನ್‌ ಸಾಮ್ರಾಜ್ಯದ ವಿರುದ್ಧ ದಂಗೆಯೆದ್ದ. ಇದನ್ನು ಮೂರನೇ ಗುಲಾಮರ/ಗ್ಲೆಡಿಯೇಟರ್ (ಪುರಾತನ ರೋಮ್‌ ಸಾಮ್ರಾಜ್ಯದಲ್ಲಿ, ಒಂದು ಅಖಾಡದಲ್ಲಿ ಸಹಮಾನವರ ಅಥವಾ ಕಾಡು ಪ್ರಾಣಿಗಳ ಜೊತೆ ಆಯುಧಗಳೊಡನೆ ಕದನವನ್ನು ಮಾಡುವ ವ್ಯಕ್ತಿ)/ಸ್ಪಾರ್ಟಕಸ್‌ ವಿಪ್ಲವ ಎಂದು ಇತಿಹಾಸಜ್ಞರು ಗುರುತಿಸುತ್ತಾರೆ. ಸುಮಾರು ಐದು ಸಂದರ್ಭಗಳಲ್ಲಿ ಆತನ ನಾಯಕತ್ವದ ಗುಲಾಮರಿಗೆ ಜಯ ಲಭಿಸುತ್ತದೆ. ಕೊನೆಗೆ ಅವರು ಸೋಲುತ್ತಾರೆ. ಕ್ರಿ ಪೂ 71ರಲ್ಲಿ ಆತನನ್ನು ಗಲ್ಲಿಗೆ ಏರಿಸಲಾಗುತ್ತದೆ.

ನಾಗರಿಕತೆ ಮುಂದುವರೆದಂತೆ ವಿಶ್ವದ ಅನೇಕ ಪ್ರಾಂತ್ಯಗಳಲ್ಲಿ ಗುಲಾಮ ಪದ್ಧತಿ ವಿರುದ್ಧ ವ್ಯಾಪಕ ನೆಲೆಯಲ್ಲಿ ಧೀರೋದಾತ್ತ ಹೋರಾಟಗಳು ಜರುಗಿ ಸ್ವಾತಂತ್ರ್ಯದ ಕಹಳೆ ಮೊಳಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಮ್ಮ ದೇಶದ ಸ್ವಾತಂತ್ರ್ಯದ ಇತಿಹಾಸ ತಿಳಿದ ಸಂಗತಿಯಾಗಿದೆ. 1947ರಲ್ಲಿ ನಮಗೆ ಸ್ವಾತಂತ್ರ್ಯ ದೊರೆತ ಶೈಶವದಲ್ಲೇ ನಮ್ಮ ಸಂವಿಧಾನ ಕರ್ತೃ ಡಾ ಬಿ ಆರ್‌ ಅಂಬೇಡ್ಕರ್‌ ಅವರು “ ನಮಗೆ ರಾಜಕೀಯ ಸ್ವಾತಂತ್ರ್ಯ ಲಭಿಸಿದೆ. ಆದರೆ ಸಾಮಾಜಿಕ/ಆರ್ಥಿಕ ಸ್ವಾತಂತ್ರ್ಯ ನಮ್ಮ ಪ್ರಜೆಗಳಿಗೆ ದೊರಕಬೇಕು “ ಎಂದು ಮನನೀಯ ಮಾತುಗಳನ್ನು ಆಡಿದ್ದರು.

ಪ್ರಸ್ತುತ ನಾವು ಎತ್ತ ಸಾಗಿದ್ದೇವೆ? ನಮ್ಮ ಪ್ರಭುತ್ವ ಸ್ವಾತಂತ್ರ್ಯದ ಬಗೆಗೆ ಹೇಗೆ ಸ್ಪಂದಿಸುತ್ತಿದೆ? ಸಂವಿಧಾನದಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿವಿಧ ಹಕ್ಕುಗಳು ಜನತೆಗೆ ನಿಜವಾದ ಅರ್ಥದಲ್ಲಿ ದೊರಕುತ್ತಿವೆಯೇ? ಎಂಬ ಪ್ರಶ್ನೆಗಳು ಪ್ರಜ್ಞಾವಂತರನ್ನು ಕಾಡುತ್ತಿವೆ.

Manipur violence 1

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಭಾರತದಾದ್ಯಂತ ಅನೇಕ ತೆರನಾದ ಸಮಾರಂಭಗಳು ಜರುಗುತ್ತವೆ. ನಮ್ಮ ರಾಷ್ಟ್ರಧ್ವಜಕ್ಕೆ ವಂದನೆ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪಟ/ಪ್ರತಿಮೆಗಳಿವೆ ಮಾಲಾರ್ಪಣೆ, ಸಿಹಿ ಹಂಚುವಿಕೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆದರೆ ಇವುಗಳಿಗಷ್ಟೇ ಒಬ್ಬ ಪ್ರಜೆ ತನ್ನನ್ನು ಸೀಮಿತಗೊಳಿಸಿಕೊಂಡರೇ ಅದು ಸರಿಯೇ ಎಂಬ ಪ್ರಶ್ನೆ ಏಳುತ್ತದೆ. ದೇಶಾದ್ಯಂತ ಜರುಗುತ್ತಿರುವ ಹಲವು ಸಾಮಾಜಿಕ/ರಾಜಕೀಯ/ಆರ್ಥಿಕ/ ಸಾಂಸ್ಕೃತಿಕ ನಕಾರಾತ್ಮಕ ವಿದ್ಯಮಾನಗಳಿಗೆ ಕುರುಡಾಗಿ, ಸಾಂಕೇತಿಕವಾಗಿ ಸ್ವಾತಂತ್ರ್ಯೋತ್ಸವ ಆಚರಿಸುವ ಪರಿ ವರ್ಷಗಳು ಕಳೆಯುತ್ತಿರುವಂತೆ ಜರುಗುತ್ತ ಬರುತ್ತಿರುವುದು ಯೋಚನೀಯ ವಿಷಯವೇ ಸರಿ.

ಕೋಮು ದಂಗೆಗಳಲ್ಲಿ ಮೃತರಾದವರ ಮನೆಯವರು ಸ್ವಾತಂತ್ರ್ಯದ ಬಗೆಗೆ ಹೇಗೆ ಪ್ರತಿಕ್ರಿಯಿಸಬಹುದು?

ಎರಡು ವರ್ಷಗಳ ಹಿಂದೆ ರೈತರ ಹೋರಾಟದಲ್ಲಿ ಸುಮಾರು ಏಳುನೂರು ಮಂದಿ ಗತಿಸಿದರು. ಅವರ ಕುಟುಂಬಸ್ಥರು ಸ್ವಾತಂತ್ರ್ಯವನ್ನು ಹೇಗೆ ಬಗೆಯಬಹುದು? ಇತ್ತೀಚೆಗೆ ಮಣಿಪುರದಲ್ಲಿ ಜರುಗಿದ ಹಿಂಸೆಯಲ್ಲಿ ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲು ಮಾಡಿ, ಅವರ ಮೆರವಣಿಗೆಯನ್ನು ಮಾಡಿ, ಅತ್ಯಾಚಾರವನ್ನು ಮಾಡಲಾಯಿತು. ಅಲ್ಲಿನ ಹಿಂಸಾಕಾಂಡದಲ್ಲಿ ಆಗಿರುವ ಆಸ್ತಿ, ಪ್ರಾಣಹಾನಿಯನ್ನು ಅನುಭವಿಸಿದವರು ಸ್ವಾತಂತ್ರ್ಯದ ಪರಿಕಲ್ಪನೆಗೆ ಹೇಗೆ ಸ್ಪಂದಿಸಬಹುದು? ಭಾರತದಾದ್ಯಂತ ದಲಿತ ಮತ್ತು ಇತರ ದಮನಿತ ಸಮುದಾಯಗಳ ಮೇಲೆ ಜರುಗುತ್ತಲೇ ಇರುವ ನಾನಾ ಹಿಂಸೆಗಳ ಹಿನ್ನೆಲೆಯಲ್ಲಿ ಸಂತ್ರಸ್ತರು ಸ್ವಾತಂತ್ರ್ಯದ ಬಗೆಗೆ ಎಂತಹ ಅಭಿಪ್ರಾಯಗಳನ್ನು ಹೊಂದಿರಬಹುದು? ಸಾಲಗಳ ಬಾಧೆಯಿಂದ ನೇಣಿಗೆ ಶರಣಾದ ಲಕ್ಷಗಟ್ಟಲೆ ರೈತರ ಕುಟುಂಬಸ್ಥರು ಸ್ವಾತಂತ್ರ್ಯದ ಪರಿಕಲ್ಪನೆಗೆ ಹೇಗೆ ಮುಖಾಮುಖಿಯಾಗಬಹುದು? ಕೋಮು ದಂಗೆಗಳಲ್ಲಿ ಮೃತರಾದವರ ಮನೆಯವರು ಸ್ವಾತಂತ್ರ್ಯದ ಬಗೆಗೆ ಹೇಗೆ ಪ್ರತಿಕ್ರಿಯಿಸಬಹುದು?

ಇದನ್ನು ಓದಿ ಸ್ವಾತಂತ್ರ್ಯದ ಆಶಯ ಇಂದು ಕಿಂಚಿತ್ ಆದರೂ ಉಳಿದಿದೆಯೇ…?

ಇನ್ನು ಹಲವು ನಗ್ನ, ಕರ್ಕಶ ಪ್ರಶ್ನೆಗಳು ಇವೆ. ಅವುಗಳಿಗೆ ನಾವು ಹೇಗೆ ಸ್ಪಂದಿಸುತ್ತ ಬಂದಿದ್ದೇವೆ ಎಂದು ಪ್ರಾಮಾಣಿಕವಾಗಿ ಆತ್ಮಾವಲೋಕನವನ್ನು ಮಾಡಿಕೊಂಡು ಯಾವ ರೀತಿಯಲ್ಲಿ ಸಮಾಜದ ಒಟ್ಟಾರೆ ಹಿತದಲ್ಲಿ ಮಧ್ಯಪ್ರವೇಶವನ್ನು ಮಾಡಬಹುದು ಎಂಬುವುದರತ್ತ ನಮ್ಮ ಆಲೋಚನೆಗಳು ಸರಿದರೇ, ಆಗ ಸ್ವಾತಂತ್ರ್ಯೋತ್ಸವಕ್ಕೆ ನೈಜಾರ್ಥ ಲಭಿಸುತ್ತದೆ. ಕಾರ್ಲ್‌ ಮಾರ್ಕ್ಸ್‌ ಅನ್ವಯ ಮಾನವರು ಸಾಮಾಜಿಕ ಜೀವಿಗಳು. ಅವರು ತಮ್ಮ ಸಾಮಾಜಿಕ ಸಂಬಂಧಗಳಿಗೆ ಮೂರ್ತರೂಪವನ್ನು ನೀಡಿ, ಅದನ್ನು ಇತ್ಯಾತ್ಮಕವಾಗಿ ಅಭಿವೃದ್ಧಿಪಡಿಸಿದರೆ ಮಾತ್ರ ತಮ್ಮ ಸ್ವಾತಂತ್ರ್ಯವನ್ನು ಪಡೆಯಬಹುದು.

WhatsApp Image 2025 11 17 at 4.18.26 PM
ಮ ಶ್ರೀ ಮುರಳಿ ಕೃಷ್ಣ
+ posts

ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...