ಚೈತ್ರಾ ಎಂಬ ಗಾಳವನ್ನು ಬಳಸಿ, ಗೋವಿಂದ ಎಂಬ ಮೀನನ್ನು‌ ಹಿಡಿದವರಾರು?

Date:

ಬಿಜೆಪಿ ಮುಖಂಡರೇ ಚೈತ್ರಾ ಹೇಳಿದ ದೊಡ್ಡವರು ಎಂಬುದು ಮೇಲ್ನೋಟಕ್ಕೆ ಕಂಡುಬರುವ ಸಂಗತಿ. ಅದಲ್ಲದೇ ಸಾಮಾನ್ಯ ಜ್ಞಾನ ‌ಇರುವ ಯಾರಾದರೂ ಇದೇ ನಿಟ್ಟಿನಲ್ಲಿ ಆಲೋಚನೆ‌ ಮಾಡುತ್ತಾರೆ. 

ಚೈತ್ರಾ ಕುಂದಾಪುರ ಹೇಳಿದ್ದು ಇಷ್ಟು: “ಸ್ವಾಮೀಜಿ ಬಂಧನವಾಗಲಿ ದೊಡ್ಡವರ ಹೆಸರು ಹೊರ ಬರತ್ತೆ!”. ಯಾರು‌ ದೊಡ್ಡವರು? ಖಂಡಿತಾ ಬಿಜೆಪಿ ಅಥವಾ ಆರ್‌‌ಎಸ್‌‌ಎಸ್‌ ಮುಖಂಡರು ಯಾರಾದರೂ ಇರಬಹುದು. ಏಕೆಂದರೆ ಕೋಟಿ ಸಂಪಾದಿಸುವಷ್ಟು ಬುದ್ಧಿ ಇರುವ ಗೋವಿಂದರು, ಅದನ್ನು ಯಾರಾದರೂ ಅಧಿಕೃತ ಅಥವಾ ಜನಪ್ರಿಯ ಬಿಜೆಪಿ ಮುಖಂಡರಿಗೆ ತಲುಪಿಸಿದರೆ ಮಾತ್ರ ತನಗೆ ಟಿಕೆಟ್ ಸಿಗಬಹುದು, ಚೈತ್ರಾರಿಗೆ ಕೊಟ್ಟರೆ ಅದು ಅಸಾಧ್ಯ ಎಂದು ತಿಳಿಯದಷ್ಟು‌ ಮೂರ್ಖರಾಗಿರಲು ಸಾಧ್ಯವಿಲ್ಲ.

ಬಿಜೆಪಿ ಈ ದೇಶದಲ್ಲಿ ಕೋಮುವಾದ, ಹಿಂದುತ್ವ, ಧರ್ಮ ರಕ್ಷಣೆ ಎಂಬ ವಿಷಯಗಳಿಂದ ಅಧಿಕಾರಕ್ಕೆ ಬಂದರೂ ಅಧಿಕಾರಕ್ಕೆ ಬಂದ ಮೇಲೆ ಮಾಡುತ್ತಾ ಇರುವುದು ವ್ಯಾಪಕ ಅವ್ಯಾಹತ ಭ್ರಷ್ಟಾಚಾರ. ದೇಶವನ್ನೇ ಬೆರಳೆಣಿಕೆಯ ಬಹುರಾಷ್ಟ್ರೀಯ ಕಂಪೆನಿ ಮಾಲೀಕರ ಕೈಗೆ ಪರೋಕ್ಷವಾಗಿ ನೀಡುತ್ತಾ ಇದೆ. ಚೈತ್ರಾ ಪ್ರಕರಣವನ್ನು ಸೂಕ್ಷ್ಮವಾಗಿ ನೋಡಿದಾಗ ಗೋವಿಂದ ಎಂಬ ಉದ್ಯಮಿಗೆ ಮೊದಲು ಕೇಸರಿ ಶಾಲು ಹಾಕಿಸಿದ್ದು, ಆಮೇಲೆ ಅವರನ್ನು ಹಿಂದೂ ಮುಖಂಡ ಎಂದು ಹೊಗಳಿ ಅಟ್ಟಕ್ಕೇರಿಸಿದ್ದು, ಆಮೇಲೆ ಅವರಿಂದ ಕೋಟ್ಯಂತರ ರೂ. ಕಬಳಿಸಿದ್ದು, ಇದಾದ ಬಳಿಕ ಬಿಜೆಪಿಯ ನಾಯಕರಾದ ಶೋಭಾ ಹಾಗೂ ಸುನೀಲ್ ಅವರು ಪ್ರತಿಕ್ರಿಯಿಸಿ, “ನಮಗೆ ಚೈತ್ರಾ ಪರಿಚಯವಿಲ್ಲ” ಎಂದು‌ ಹೇಳಿರುವುದು ಶತಮಾನದ ದೊಡ್ಡ ಜೋಕ್.

ಬಿಜೆಪಿ ಮುಖಂಡರೇ ಚೈತ್ರಾ ಹೇಳಿದ ದೊಡ್ಡವರು ಎಂಬುದು ಮೇಲ್ನೋಟಕ್ಕೆ ಕಂಡುಬರುವ ಸಂಗತಿ. ಅದಲ್ಲದೇ ಸಾಮಾನ್ಯ ಜ್ಞಾನ ‌ಇರುವ ಯಾರಾದರೂ ಇದೇ ನಿಟ್ಟಿನಲ್ಲಿ ಆಲೋಚನೆ‌ ಮಾಡುತ್ತಾರೆ. ಹಾಗಾಗಿ‌ ತನಿಖಾ ಸಂಸ್ಥೆಗಳು ಕೂಡ ಇದೇ ನಿಟ್ಟಿನಲ್ಲಿ ತನಿಖೆ ನಡೆಸಿದರೆ ದೊಡ್ಡವರು ಯಾರು ಎಂಬುದು ಗೊತ್ತಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಒಟ್ಟಾರೆ ಸಾರಾಂಶ ಏನೆಂದರೆ ಕರಾವಳಿಯಲ್ಲಿ ಆರ್ಥಿಕವಾಗಿ‌ ಹಿಂದುಳಿದ ಯುವ ಜನತೆಯನ್ನು ಬಿಜೆಪಿ ಯಾವತ್ತೋ ಹಾಳು ಮಾಡಲು ಪ್ರಾರಂಭಿಸಿ ಆಗಿದೆ. ಈಗ ಆರ್ಥಿಕವಾಗಿ ಮುಂದೆ ಬಂದವರೂ ಹಾಳಾಗುತ್ತಾ ಇದ್ದಾರೆ. ಗೋವಿಂದ ಪೂಜಾರಿಯವರು ಸೂಟುಬೂಟಿನ ಮೇಲೆ ಕೇಸರಿ ಶಾಲು ಹಾಕಿ ತಿರುಗಾಡುವುದಕ್ಕಿಂತ ಜೀವನದಲ್ಲಿ ವಾಮಮಾರ್ಗದಲ್ಲಿ ಯಶಸ್ಸು ಕಾಣುವ ಪ್ರಯತ್ನವನ್ನು ನಿಲ್ಲಿಸಿ ನೇರ ಮಾರ್ಗದಲ್ಲಿ‌ ಬದುಕಿ ಯಶಸ್ವಿಯಾದರೆ, ಅದೇ ನೈಜ ಧರ್ಮ ಪಾಲನೆ ಆಗುತ್ತದೆ. ಶಾಲು, ಹಾಡು, ಧ್ವಜ, ಘೋಷಣೆ ಇವೆಲ್ಲವೂ ಸಂಕೇತಗಳು. ಬದುಕು ಸಾಗಿಸುವ ರೀತಿ ಧರ್ಮಮಾರ್ಗದಲ್ಲಿ ಇರದೇ ಸಂಕೇತಗಳಿಂದ ಏನೂ ಲಾಭವಿಲ್ಲ.

WhatsApp Image 2025 11 17 at 3.16.03 PM
ಅಮೃತ್‌ ಶೆಣೈ
+ posts

ಅಧ್ಯಕ್ಷರು, ʼಸಹಬಾಳ್ವೆʼ ಉಡುಪಿ‌

ಪೋಸ್ಟ್ ಹಂಚಿಕೊಳ್ಳಿ:

ಅಮೃತ್‌ ಶೆಣೈ
ಅಮೃತ್‌ ಶೆಣೈ
ಅಧ್ಯಕ್ಷರು, ʼಸಹಬಾಳ್ವೆʼ ಉಡುಪಿ‌

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...