ವಿಧಾನಸೌಧದಲ್ಲಿ 100% ಪಾಕ್ ಪರ ಘೋಷಣೆ ಕೂಗಿಲ್ಲ: ಮಹಮದ್ ಜುಬೇರ್

Date:

ರಾಜ್ಯಸಭಾ ಚುನಾವಣೆ ನಡೆದ ದಿನ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂದು ಮಾಧ್ಯಮಗಳು ಹಬ್ಬಿಸಿದ ಸುದ್ದಿ ರಾಜಕೀಯ ಬೇಗುದಿ ಸೃಷ್ಟಿಸಿದೆ. ಈ ನಡುವೆ, ಪಾಕ್ ಪರ ಘೋಷಣೆ ಕೂಗಿದ ಆರೋಪದಲ್ಲಿ ಮೂವರನ್ನು ಬಂಧಿಸಿದ್ದಾರೆ. ಬಿಜೆಪಿ ಫೇಕ್ ಎಫ್‌ಎಸ್‌ಎಲ್‌ ವರದಿಯನ್ನೂ ಸೃಷ್ಟಿಸಿ, ಮತ್ತಷ್ಟು ಗೊಂದಲ ಹುಟ್ಟು ಹಾಕಿದೆ. ಇದೆಲ್ಲವನ್ನೂ ಅಲ್ಲಗಳೆದಿರುವ ಫ್ಯಾಕ್ಟ್‌ಚೆಕ್‌ ಸುದ್ದಿ ಸಂಸ್ಥೆ ಆಲ್ಟ್‌ ನ್ಯೂಸ್‌ನ ಸಹ ಸಂಸ್ಥಾಪಕ ಮಹಮದ್ ಜುಬೇರ್, “ಈಗಲೂ ಹೇಳ್ತೀನಿ ಅಲ್ಲಿ 100% ಪಾಕ್‌ ಪರ ಘೋಷಣೆ ಕೂಗಿಲ್ಲ” ಎಂದು ಹೇಳಿದ್ದಾರೆ.

ಪಾಕ್‌ ಪರ ಘೋಷಣೆ ಕೂಗಲಾಗಿದೆ ಎಂಬ ಸುದ್ದಿ, ವದಂತಿ ಹಾಗೂ ಬಿಜೆಪಿಯ ರಾಜಕೀಯ ಮತ್ತು ಸರ್ಕಾರದ ನಡೆಗಳ ಬಗ್ಗೆ ಮಹಮದ್ ಜುಬೇರ್ ಟ್ವೀಟ್‌ ಮಾಡಿದ್ದಾರೆ. “ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಮೇಲೆ ಕರ್ನಾಟಕ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂದು ಗೃಹಮಂತ್ರಿಗಳೂ ಹೇಳಿಕೆ ಕೊಟ್ಟಿದ್ದಾರೆ. ಪಾಕ್‌ ಪರ ಘೋಷಣೆ ಕೂಗಿಲ್ಲವೆಂದು ಟ್ವೀಟ್ ಮಾಡಿದ್ದಕ್ಕಾಗಿ ನನ್ನನ್ನೂ ಬಂಧಿಸಬೇಕೆಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಆದರೆ ನನ್ನ ಟ್ವೀಟ್‌ಗಳಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಅಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ, ಕೂಗಿದ್ದು ‘ನಾಸಿರ್ ಸಾಬ್ ಜಿಂದಾಬಾದ್’ ಎಂಬ ಬಗ್ಗೆ ನನ್ನಲ್ಲಿ ಈಗಲೂ 100% ಖಾತ್ರಿಯಿದೆ” ಎಂದು ಹೇಳಿದ್ದಾರೆ.

“ಅನೇಕ ಸಂಭ್ರಮಾಚರಣೆಗಳ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂದು ವಿರೋಧಿಗಳು ಮತ್ತು ಅವರ ಬೆಂಬಲಿಗರ ಮೇಲೆ ಹೇಗೆ ಬಲಪಂಥೀಯರು ಮಾಡುತ್ತಿರುವ ಆರೋಪಗಳಲ್ಲಿ ಒಂದು ನಿರ್ದಿಷ್ಟ ಪ್ಯಾಟರ್ನ್ (ನಮೂನೆ) ಇರುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಈಗಿನ ಪ್ರಕರಣದಲ್ಲಿ ಕೂಡಾ ಸುಳ್ಳು ಸುದ್ದಿ ಆರಂಭವಾದುದು ಕನ್ನಡ ಸುದ್ದಿವಾಹಿನಿಗಳಿಂದ. ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬುದನ್ನು ಸದರಿ ಘಟನೆ ನಡೆದಿದೆ ಎನ್ನಲಾದ ಜಾಗದಲ್ಲಿ ಇದ್ದ ಅನೇಕ ವರದಿಗಾರರು ನಿರಾಕರಿಸಿದ್ದಾರೆ. ಹೀಗೆ ನಿರಾಕರಿಸಿದವರಲ್ಲಿ ANI ಮುಖ್ಯಸ್ಥೆ ಸ್ಮಿತಾ ಪ್ರಕಾಶ್ ಅವರ ಸಹೋದ್ಯೋಗಿ ಕೂಡಾ ಇದ್ದಾರೆ. ನಾನು ಸತ್ಯ ಹೇಳಿದ್ದಕ್ಕೆ ನನ್ನನ್ನು ಬಂಧಿಸಬೇಕು ಎಂದು ಹೇಳುತ್ತಿರುವವರಲ್ಲಿ ಈಕೆ ಮತ್ತು ಅನೇಕ ಬಲಪಂಥೀಯ ಟ್ರೋಲ್ ಗಳೂ ಸೇರಿವೆ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕರ್ನಾಟಕದಲ್ಲಿ ಸುಳ್ಳು ಮಾಹಿತಿ ಹರಡುತ್ತಿರುವುದರಲ್ಲಿ ಒಂದು ಪ್ಯಾಟರ್ನ್ ಅನ್ನು ನೀವು ನೋಡಬಹುದು. ಅದರಲ್ಲಿ ಒಂದು, ಜನವರಿಯಲ್ಲಿ, ಬಿಜೆಪಿ ಮತ್ತು ಪ್ರೊಪಗಾಂಡಾ ನ್ಯೂಸ್ ಏಜನ್ಸಿ ANI ಸಹಿತ ಮಾಧ‍್ಯಮಗಳು ‘ರಾಜ್ಯ ಸರಕಾರದ ಆದೇಶದ ಮೇರೆಗೆ ಪೊಲೀಸ್ ಸಿಬ್ಬಂದಿ ಮಂಡ್ಯದ ಕೆರಗೋಡುವಿನಲ್ಲಿ ಧ್ವಜಸ್ತಂಭದಿಂದ ಹನುಮಾನ್ ಧ‍್ವಜ ಇಳಿಸಿದರು’ ಎಂದು ದೂರುತ್ತಾ, ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಅಬ್ಬರಿಸಿತು. ಆದರೆ ವಾಸ್ತವ ಏನಾಗಿತ್ತು ಎಂದರೆ, ಧ್ವಜ ಸ್ತಂಭ ಇದ್ದುದು ಸರಕಾರಿ ಜಮೀನಿನ ಮೇಲೆ. ಅದರಲ್ಲಿ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜ ಮಾತ್ರ ಹಾರಿಸಲು ಅನುಮತಿ ನೀಡಲಾಗಿತ್ತು. ಕಾಂಗ್ರೆಸ್ ವಿರೋಧಿ ಅಪಪ್ರಚಾರ ಟೆಲಿವಿಶನ್ ನಲ್ಲಿ ವಾರಕ್ಕೂ ಅಧಿಕ ಕಾಲ ನಡೆಯಿತು. ಆದರೆ, ಇದನ್ನು ಹೇಗೆ ಕೌಂಟರ್ ಮಾಡಬೇಕು ಎನ್ನುವುದೇ ಕರ್ನಾಟಕ ಕಾಂಗ್ರೆಸ್ ಗೆ ತಿಳಿಯಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಎರಡು. ಫೆಬ್ರವರಿಯಲ್ಲಿ, ಬಜೆಟ್ ನಂತರ, ಬಿಜೆಪಿ ಮತ್ತು ಮಾಧ್ಯಮಗಳು ಕಾಂಗ್ರೆಸ್ ಅನ್ನು ಮತ್ತೆ ಟಾರ್ಗೆಟ್ ಮಾಡಿದವು. ಹಿಂದೂ ದೇಗುಲಗಳಿಂದ ಹಣ ತೆಗೆದು ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಿಗೆ ಅದನ್ನು ಕಾಂಗ್ರೆಸ್ ಉಪಯೋಗಿಸುತ್ತಿದೆ ಎಂಬುದು ಅವರ ಆರೋಪವಾಗಿತ್ತು. ಇದು ಮೂರು ನಾಲ್ಕು ದಿನಗಳ ಕಾಲ ನಡೆಯಿತು. ಮತ್ತೆ ಈ ಸುಳ್ಳುಗಳನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಕಾಂಗ್ರೆಸ್ ಗೆ ಗೊತ್ತೇ ಆಗಲಿಲ್ಲ. ಸುಳ್ಳು ಸುದ್ದಿ ಹರಡಿದವರ ಮೇಲೆ ಎಫ್‌ಐಆರ್ ಕೂಡಾ ಹಾಕಲಿಲ್ಲ” ಎಂದಿದ್ದಾರೆ.

“ಮೂರು, ಮುಜರಾಯಿ (ಎಂಡೋಮೆಂಟ್) ಮಸೂದೆಯ ಬಳಿಕ, ಬಿಜೆಪಿ ಮತ್ತು ಮಾಧ‍್ಯಮಗಳು ಮತ್ತೊಂದು ಸುತ್ತಿನ ಸುಳ್ಳು ಸುದ್ದಿ ಹರಡ ಹೊರಟವು. ಹಿಂದೂ ದೇಗುಲಗಳ ಮೇಲೆ ಸಿದ್ದರಾಮಯ್ಯ ಸರಕಾರ 10% ಜಜಿಯಾ (ತೆರಿಗೆ) ಹಾಕಲಾರಂಭಿಸಿದೆ ಎಂಬುದು ಈ ಬಾರಿಯ ಆರೋಪ ಅವರದು. ಅಸಲಿಗೆ, ಈ ಕಾನೂನು ತಿದ್ದುಪಡಿ ಮೊದಲು ನಡೆದುದು ಯಡಿಯೂರಪ್ಪ ಸರಕಾರ ಇದ್ದಾಗ, 2011ರಲ್ಲಿ. ಸತ್ಯ ಸಂಗತಿಯೇನೆಂದರೆ, ಅಖಿಲ ಕರ್ನಾಟಕ ಅರ್ಚಕ ಸಂಘ ಈ ಮಸೂದೆಯನ್ನು ಬೆಂಬಲಿಸಿ ಪತ್ರಿಕಾಗೋಷ್ಠಿ ನಡೆಸಿ ಬೆಂಬಲಿಸಿದ್ದರು. ಸಣ್ಣ ದೇಗುಲಗಳಿಗೆ ಹಣದ ಕೊರತೆಯಿದೆ, ರಾಜ್ಯದಲ್ಲಿ 36,000 ಸಿ ಗ್ರೇಡ್ ದೇಗುಲಗಳ ಉದ್ಧಾರಕ್ಕೆ, ಆದಾಯದ ಆಧಾರದಲ್ಲಿ ಮಾಡಿರುವ ಕಾಂಗ್ರೆಸ್ ಸರಕಾರದ ನಿರ್ಧಾರವನ್ನು ಬೆಂಬಲಿಸುವಂತೆ ಅವರು ವಿಪಕ್ಷ ಬಿಜೆಪಿಯನ್ನುಆಗ್ರಹಿಸಿದ್ದರು. ಆದರೆ ಇಲ್ಲಿ ಕೂಡಾ ಕಾಂಗ್ರೆಸ್ ಹಿಂದೂ ವಿರೋಧಿ ಮತ್ತು ಮುಸ್ಲಿಂ ಪರ ಎಂಬ ಸುಳ್ಳು ಪ್ರೊಪಗಾಂಡಾದಲ್ಲಿ ಬಿಜೆಪಿ ಮತ್ತು ಮಾಧ‍್ಯಮಗಳು ಯಶಸ್ವಿಯಾದವು. ಕಾಂಗ್ರೆಸ್ ಗೆ ಅವರ ಪ್ರೊಪಗಾಂಡಾ ಕೌಂಟರ್ ಮಾಡಲು ಸಾಧ್ಯವಾಗಲೂ ಇಲ್ಲ, ಸುಳ್ಳು ಸುದ್ದಿ ಹರಡಿದವರು ಮತ್ತು ಅದನ್ನು ಮತ್ತೆ ಹಿಗ್ಗಿಸಿ ಹರಡಿದವರ ಮೇಲೆ ಯಾವುದೇ ಕ್ರಮ ಜರುಗಿಸಲೂ ಇಲ್ಲ” ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಈಗ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕಾಗಿ ಮೂವರು ಕಾಂಗ್ರೆಸ್ ಬೆಂಬಲಿಗರನ್ನು ಬಂಧಿಸಿದ ಬಳಿಕ ಸರಕಾರ ಒಬ್ಬ ಬಿಜೆಪಿ ಬೆಂಬಲಿಗನನ್ನು ಕೂಡ ಅಂಥದ್ದೇ ಘೋಷಣೆ ಕೂಗಿದ್ದಕ್ಕಾಗಿ ಬಂಧಿಸಿದೆ. ಆತ ಬಾಯಿ ತಪ್ಪಿ ಅಂತಹ ಘೋಷಣೆ ಕೂಗಿದ್ದು ಮಂಡ್ಯದಲ್ಲಿ, 2022 ರಲ್ಲಿ. ಆ ಪ್ರಕರಣದಲ್ಲಿ ಬಿಜೆಪಿ ಬೆಂಬಲಿಗ ‘ಮುರ್ದಾಬಾದ್’ ಎಂದು ಕೂಗುವ ಬದಲಿಗೆ ‘ಜಿಂದಾಬಾದ್’ ಎಂದು ಕೂಗಿದ್ದ ಎಂಬುದು ಸುಸ್ಪಷ್ಟ. ಬಿಜೆಪಿಯು ಸ್ಥಳೀಯ ಮತ್ತು ರಾಷ್ಟ್ರೀಯ ಮಾಧ್ಯಮದ ನೆರವಿನೊಂದಿಗೆ ಪ್ರೊಪಗಾಂಡಾ ಕದನವನ್ನು ಗೆಲ್ಲುತ್ತಿರುವುದು ಹೀಗೆ. ಆದರೆ ಅದನ್ನು ಹೇಗೆ ಕೌಂಟರ್ ಮಾಡಬೇಕು ಎನ್ನುವುದೇ ಕಾಂಗ್ರೆಸ್ ಗೆ ಗೊತ್ತಿಲ್ಲ!” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...