ಇತ್ತೀಚೆಗೆ ಬಿಡುಗಡೆಯಾದ ಎನ್ಸಿಆರ್ಬಿ ವರದಿಯು ದೇಶದಲ್ಲಿ ಆದಿವಾಸಿಗಳು ಮತ್ತು ದಲಿತರ ಮೇಲಿನ ಅಪರಾಧ ಪ್ರಕರಣಗಳಲ್ಲಿ ಏರಿಕೆಯಾಗಿದೆ ಎಂಬುದನ್ನು ಬಹಿರಂಗಪಡಿಸಿದೆ. ಇದೇ ವಿಚಾರವಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದು, ಆರ್ಎಸ್ಎಸ್-ಬಿಜೆಪಿಯನ್ನು ತರಾಟೆಗೆ ತೆದುಕೊಂಡಿದ್ದಾರೆ. ಮೋದಿ ಆಡಳಿತದಲ್ಲಿ ಬಿಜೆಪಿ-ಆರ್ಎಸ್ಎಸ್ ದೇಶದಲ್ಲಿ ಊಳಿಗಮಾನ್ಯ ಮನಸ್ಥಿತಿ ಬೆಳಸುತ್ತಿವೆ ಎಂದು ಆರೋಪಿಸಿದ್ದಾರೆ.
2013ರಿಂದ 2023ರವರೆಗಿನ ಎನ್ಸಿಆರ್ಬಿ ದತ್ತಾಂಶವನ್ನು ಉಲ್ಲೇಖಿಸಿರುವ ಖರ್ಗೆ, “ದಲಿತರ ಮೇಲಿನ ಅಪರಾಧಗಳು ಕಳೆದ 10 ವರ್ಷಗಳಲ್ಲಿ ಶೇ.46 ರಷ್ಟು ಹೆಚ್ಚಾಗಿದೆ. ಆದಿವಾಸಿಗಳ ಮೇಲಿನ ಅಪರಾಧಗಳ ಪ್ರಮಾಣವು ಶೇ.91 ರಷ್ಟು ಹೆಚ್ಚಾಗಿದೆ. ಅಂಚಿನಲ್ಲಿರುವ ಸಮುದಾಯಗಳ ವಿರುದ್ಧ ಹಿಂಸಾತ್ಮಕ ಮತ್ತು ತಾರತಮ್ಯದ ಕ್ರಮಗಳಲ್ಲಿ ವ್ಯಕ್ತವಾಗುವ ಊಳಿಗಮಾನ್ಯ ಮತ್ತು ಜಾತಿವಾದಿ ಮನಸ್ಥಿತಿಯನ್ನು ಬಿಜೆಪಿ ಬೆಳೆಸುತ್ತಿದೆ. ಸಮರ್ಥಿಸುತ್ತಿದೆ” ಎಂದು ಕಿಡಿಕಾರಿದ್ದಾರೆ.
“ದಲಿತ ಸಮುದಾಯಕ್ಕೆ ಸೇರಿದ ಭಾರತದ ಸಿಜೆಐ ಬಿ.ಆರ್ ಗವಾಯಿ ಅವರ ಮೇಲೆ ವಕೀಲನೊಬ್ಬ ದಾಳಿ ಮಾಡಿದ್ದಾನೆ. ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯಲ್ಲಿ ದಲಿತ ವ್ಯಕ್ತಿ ಹರಿಓಂ ವಾಲ್ಮೀಕಿಯ ಹತ್ಯೆ ನಡೆದಿದೆ. ಹರಿಯಾಣದ ದಲಿತ ಐಪಿಎಸ್ ಅಧಿಕಾರಿ ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಹಲವಾರು ತಾರತಮ್ಯ ಮತ್ತು ಹಿಂಸಾಚಾರಗಳು ಜಾತಿಗ್ರಸ್ಥ ಮನಸ್ಥಿತಿಯ ಕಾರಣಕ್ಕೆ ನಡೆದಿವೆ” ಎಂದು ಖರ್ಗೆ ಹೇಳಿದ್ದಾರೆ.
.@narendramodi जी,
— Mallikarjun Kharge (@kharge) October 10, 2025
NCRB रिपोर्ट के अनुसार, 2013 से 2023 के बीच —
🔺 दलितों के खिलाफ़ अपराधों में 46% की बढ़ोतरी हुई है
🔺 आदिवासियों के खिलाफ़ 91% अपराध बढ़ें हैं।
हरियाणा में IPS अधिकारी से जातिगत भेदभाव,
हरिओम वाल्मीकि की प्रताड़ना,
CJI पर हमला और उसको जायज़ ठहराने की… pic.twitter.com/3XKm8dCQCe
“ಇವು ಪ್ರತ್ಯೇಕ ಘಟನೆಗಳಲ್ಲ. ಇದು ಆರ್ಎಸ್ಎಸ್-ಬಿಜೆಪಿಯ ಊಳಿಗಮಾನ್ಯ ಮನಸ್ಥಿತಿಯ ಅಪಾಯಕಾರಿ ಅಭಿವ್ಯಕ್ತಿ. ಸಂವಿಧಾನ, ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ತತ್ವಗಳ ಮೇಲಿನ ನೇರ ದಾಳಿ. ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ಇತರ ತಳ ಸಮುದಾಯಗಳನ್ನು ದಮನಿಸುವುದೇ ಬಿಜೆಪಿಯ ಗುರಿಯಾಗಿದೆ. ಇದು, ಭಾರತದ ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯಾಗಿದೆ” ಎಂದಿದ್ದಾರೆ.




