ಮುಖ್ಯಸ್ಥರಾಗಿ ಮೊಹಮ್ಮದ್ ಯೂನುಸ್; ಬದಲಾಗುವುದೇ ಬಾಂಗ್ಲಾದೇಶ?

Date:

ಮೀಸಲಾತಿ ಹೋರಾಟ, ಭ್ರಷ್ಟಾಚಾರ, ನಿರಂಕುಶಾಧಿಕಾರ, ಅಭಿವೃದ್ಧಿಯ ಕಡೆಗಣನೆ ಹೀಗೆ ಹತ್ತಾರು ಕಾರಣಗಳಿಂದ ಸತತ 15 ವರ್ಷ ಕಾಲ ಸುದೀರ್ಘವಾಗಿ ಪ್ರಧಾನಿಯಾಗಿ ಆಡಳಿತ ನಡೆಸಿದ್ದ ಶೇಖ್‌ ಹಸೀನಾ ಅವರು ದೇಶಬಿಟ್ಟು ಓಡಿಹೋಗಿದ್ದಾರೆ. ಬಡವರಿಗಾಗಿಯೇ ಕಿರು ಸಾಲ ಯೋಜನೆಗಳ ಮೂಲಕ ದೇಶ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಗಳಿಸಿದ್ದ ನೊಬೆಲ್‌ ಪ್ರಶಸ್ತಿ ವಿಜೇತ ಮೊಹಮ್ಮದ್‌ ಯೂನುಸ್ ಅಧಿಕಾರ ವಹಿಸಿಕೊಳ್ಳುತ್ತಿರುವಂತೆ ದೇಶ ಸುಖಾಂತ್ಯಕ್ಕೆ ಹೊರಳಲಿದೆ ಎಂದು ತೋರಬಹುದು. ಸಜ್ಜನ ವ್ಯಕ್ತಿಯೊಬ್ಬರು ಆಡಳಿತದ ಚುಕ್ಕಾಣಿ ಹಿಡಿದರೆ ರಾಜಕೀಯ ಹಿಂಸಾಚಾರಗಳು ಕೊನೆಗೊಂಡು ಎಲ್ಲವೂ ಸುಖಮಯವಾಗಬಹುದು ಎಂದು ಮೇಲ್ನೋಟಕ್ಕೆ ತೋರಬಹುದು. ಆದರೆ ಬಾಂಗ್ಲಾದೇಶದ ರಾಜಕೀಯ ಇತಿಹಾಸವನ್ನು ಬಲ್ಲವರಿಗೆ ಇದು ಮುಗಿಯದ ಸಮಸ್ಯೆ ಎಂದು ತಿಳಿಯದಿರದು.

ಮೊಹಮ್ಮದ್‌ ಯೂನುಸ್ ಅವರು 1970 ಹಾಗೂ 80ರ ದಶಕದಲ್ಲಿ ‘ಸಣ್ಣ ಸಾಲ’ಗಳ ಯೋಜನೆಯ ಮೂಲಕ ಬಾಂಗ್ಲಾದ ಬಡವರ ಅಗತ್ಯಗಳನ್ನು ಪೂರೈಸಿದರು. ಯೂನುಸ್ ಅವರ ಗ್ರಾಮೀಣ ಬ್ಯಾಂಕ್‌ ಯೋಜನೆಯು ಆರ್ಥಿಕವಾಗಿ ಹಿಂದುಳಿದಿದ್ದ ಲಕ್ಷಾಂತರ ಕೃಷಿಕರು, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿತು. ದೇಶವು ಸುಧಾರಣೆ ಕಾಣುವುದರ ಜೊತೆ ಮೊಹಮ್ಮದ್ ಯೂನುಸ್ ಅವರ ಗ್ರಾಮೀಣ ಬ್ಯಾಂಕ್‌ ಸಾಧನೆಗೆ 2006ರಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಕೂಡ ಒಲಿದು ಬಂತು. ರಾಷ್ಟ್ರದ ಜನರನ್ನು ಆರ್ಥಿಕ ಸ್ವಾವಲಂಬಿಗಳಾಗಿಸಲು ಜೀವವನ್ನು ಸವೆಸಿದ ಕಳಂಕರಹಿತ ವ್ಯಕ್ತಿಯಾಗಿರುವ ಯೂನುಸ್‌ ಅವರಿಗೆ ಸಮಸ್ಯೆಗಳು ತಪ್ಪಲಿಲ್ಲ. ಈಗ ಸೇನೆಯ ರಕ್ಷಣೆಯೊಂದಿಗೆ ನಿರಾಳವಾಗಿ ಅಧಿಕಾರ ನಡೆಸಬಹುದು ಎಂದು ಸ್ವತಃ ಅವರೂ ಕೂಡ ಅಂದುಕೊಂಡಿಲ್ಲ. ತೊಂದರೆಗಳು ಕಟ್ಟಿಟ್ಟಬುತ್ತಿ ಎಂದು 83 ವರ್ಷ ದಾಟಿರುವ ಯೂನುಸ್ ಅವರಿಗೂ ತಿಳಿದಿದೆ.

ಬಾಂಗ್ಲಾದೇಶದ ರಕ್ತಸಿಕ್ತ ಇತಿಹಾಸವನ್ನು ನೋಡಿದವರು ಯೂನುಸ್. 1970ರಿಂದ ಪಾಕಿಸ್ತಾನದಿಂದ ಪ್ರತ್ಯೇಕ ರಾಷ್ಟ್ರವಾದ ನಂತರ ಹಲವು ಪ್ರಜಾಪ್ರಭುತ್ವ ಸರ್ಕಾರಗಳನ್ನು ಅಲ್ಲಿನ ಸೇನೆ ಕೆಡವಿದೆ ಎಂಬ ಅರಿವು ಅವರಿಗಿದೆ. ಬಾಂಗ್ಲಾದೇಶದ ಸಂಸ್ಥಾಪಕ ಮುಜೀಬ್ ಉರ್ ರೆಹಮಾನ್ ಅವರನ್ನೇ ಸೇನೆಯು ಕೊಂದು ಹಾಕಿತ್ತು. ನೂರಾರು ನಾಯಕರು ಕೂಡ ಸೇನೆಯಿಂದ ಹತರಾಗಿದ್ದಾರೆ. ಬಾಂಗ್ಲಾದಲ್ಲಿ ಹಸೀನಾ ಸರ್ಕಾರ ಕಿತ್ತೊಗೆಯಲು ವಿದ್ಯಾರ್ಥಿಗಳ ಸಂಘಟನೆ ಮೇಲುಗೈ ಸಾಧಿಸಿರಬಹುದು. ಅವರು ನಮ್ಮ ಬೆಂಬಲಕ್ಕಿರುತ್ತಾರೆ, ಸೇನೆ ತಮ್ಮನ್ನು ಅಧಿಕಾರದಿಂದ ಕೆಡವಿದರೆ ದೇಶದ ವಿದ್ಯಾರ್ಥಿಗಳು ನಮಗೆ ಸಹಾಯ ಮಾಡುತ್ತಾರೆ ಎಂದು ಮುಂದಾಲೋಚನೆ ಖಂಡಿತಾ ಅವರಿಗಿರುವುದಿಲ್ಲ. ತಮ್ಮ ಆಡಳಿತವೇನಿದ್ದರೂ ಬಂದೂಕಿನ ನಳಿಕೆಯಡಿಯಲ್ಲೇ ಎಂಬುದು ಅವರಿಗೂ ಗೊತ್ತು. ಹೆಸರಿಗಷ್ಟೆ ಪ್ರಜಾಪ್ರಭುತ್ವವಿರಿಸಿ ಎಲ್ಲವು ಪರೋಕ್ಷವಾಗಿ ತಮ್ಮ ನಿಯಂತ್ರಣದಲ್ಲಿರಬೇಕೆಂದು ಬಾಂಗ್ಲಾ ಸೇನಾಧಿಕಾರಿಗಳು ಸದಾ ಬಯಸುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ವ್ಯಕ್ತಿ ವಿಶೇಷ | ಬಾಂಗ್ಲಾದ ಬಡವರ ಬ್ಯಾಂಕರ್ ಯೂನುಸ್, ದಿಕ್ಕೆಟ್ಟ ದೇಶಕ್ಕೂ ದಿಕ್ಕಾಗುವರೇ?

ಶೇಖ್‌ ಹಸೀನಾ ಸರ್ಕಾರ ಬೀಳಲು ಮೀಸಲಾತಿ ಹಾಗೂ ಪ್ರಧಾನಿಯ ರಾಜೀನಾಮೆ ಕಾರಣವಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದರ ಹಿಂದೆ ಚೀನಾ ಹಾಗೂ ಪಾಕಿಸ್ತಾನದ ಬೇಹುಗಾರಿಕೆ ಕೆಲಸ ಮಾಡಿದೆ ಎಂಬ ಅನುಮಾನದ ವಾಸನೆ ಕೂಡ ಈಗ ಬಡಿಯುತ್ತಿದೆ. ಹಸೀನಾ ಸರ್ಕಾರ ಪತನಕ್ಕೆ ಕಾರಣವಾದ ಪ್ರತಿಭಟನೆ, ಹಿಂಸಾಚಾರದಲ್ಲಿ ಪಾಕ್‌, ಚೀನಾ ಪರ ಒಲವು ಉಳ್ಳವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ಹೇಳಲಾಗುತ್ತಿದೆ. ಹಾಗಾಗಿ, ಇವೆರೆಡು ರಾಷ್ಟ್ರಗಳು ಸರ್ಕಾರ ಉರುಳಿಸಲು ಶಕ್ತಿಮೀರಿ ಶ್ರಮಿಸಿವೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಬಾಂಗ್ಲಾದಲ್ಲಿ ಶೇಖ್‌ ಹಸೀನಾರ ಅವಾಮಿ ಲೀಗ್ ಬಿಟ್ಟು ಇತರ ಪಕ್ಷಗಳಾದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ), ಜಮಾತ್– ಇ–ಇಸ್ಲಾಮಿ ಪಾಕಿಸ್ತಾನದತ್ತ ಒಲವು ಹೊಂದಿವೆ. ಪಾಕಿಸ್ತಾನ ಮತ್ತು ಚೀನಾ ಸಂಬಂಧ ಅತ್ಯುತ್ತಮವಾಗಿರುವುದರಿಂದ ಬಾಂಗ್ಲಾದೇಶದ ಆಡಳಿತದ ಮೇಲೆ ಈ ಎರಡೂ ರಾಷ್ಟ್ರಗಳು ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಈ ಹಿಂದೆ ಜೈಲಿಗೆ ಕಳಿಸಿದ್ದ ಶೇಖ್‌ ಹಸೀನಾ ಹಾಗೂ ಆಕೆಯ ಪಕ್ಷದ ಕಾರ್ಯಕರ್ತರು ಯೂನುಸ್‌ ಅವರ ಮೇಲೆ ಕತ್ತಿ ಮಸೆಯುತ್ತಲೇ ಇರುತ್ತಾರೆ. ಪ್ರಜಾಪ್ರಭುತ್ವ ಸ್ಥಾಪನೆಯಾದ ನಂತರ ತಾವು ಯಾವಾಗ ಬೇಕಾದರೂ ದೇಶಕ್ಕೆ ಮರಳಿಬರಬಹುದು ಎಂಬ ಸುಳಿವನ್ನು ಹಸೀನಾ ಹಾಗೂ ಅವರ ಪುತ್ರ ಬಹಿರಂಗವಾಗಿ ತಿಳಿಸಿದ್ದಾರೆ. ಇವೆಲ್ಲ ಕಾರಣಗಳಿಂದ ಮೊಹಮ್ಮದ್ ಯೂನುಸ್ ಯಾವಾಗ ಬೇಕಾದರೂ ಅಧಿಕಾರದ ಕುರ್ಚಿಯಿಂದ ಕೆಳಗಿಳಿಯಬಹುದು. ಆದರೆ ಕುರ್ಚಿಯಿಂದ ಕೆಳಗಿಳಿಯುವ ಮುನ್ನ ದೇಶದ ಹಲವು ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿ ಅವರ ಹೆಗಲ ಮೇಲಿದೆ. ಹಣದುಬ್ಬರ, ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಬಡತನ, ಹಿಂದುಳಿದ ಅಭಿವೃದ್ಧಿ ಸೇರಿ ನೂರಾರು ಸಮಸ್ಯೆಗಳನ್ನು ನಿವಾರಿಸಬೇಕಿದೆ. ಸೇನೆ ಹಾಗೂ ಹಸ್ತಕ್ಷೇಪ ನಡೆಸುವ ನೆರೆರಾಷ್ಟ್ರಗಳ ಮರ್ಜಿಗೆ ಸಿಗದೆ ದೇಶವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದು ಸವಾಲಿನ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಹಿಂಸಾಚಾರ ಕೊನೆಗೊಳಿಸಿ, ಎಲ್ಲ ಸಮಸ್ಯೆಗಳನ್ನು ನಿಭಾಯಿಸಿ, ದೇಶದಲ್ಲಿ ಶಾಂತಿ ನೆಲಸಿ ಲಕ್ಷಾಂತರ ಅಮಾಯಕ ಜನರು ನೆಮ್ಮದಿಯ ಬದುಕಿನತ್ತ; ಪ್ರಜಾಪ್ರಭುತ್ವ ಸರ್ಕಾರ ಶಾಶ್ವತವಾಗಿ ಸಾಕಾರಗೊಳ್ಳುವತ್ತ ಮೊಹಮ್ಮದ್ ಯೂನುಸ್ ಮನಸ್ಸು ಮಾಡಬೇಕಿದೆ.  

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

RSS, BJP ವಿರುದ್ಧ ಹೋರಾಡುವ ದೇಶದ ಏಕೈಕ ನಾಯಕ ರಾಹುಲ್‌ ಗಾಂಧಿ : RS MP ಕ್ರಿಸ್ಟೋಫರ್ ತಿಲಕ್

ಸೋನಿಯಾ ಗಾಂಧಿ ಅವರು ಕಂಡ ರಾಜಕೀಯದ ಪರಿಸ್ಥಿತಿಯೇ ಬೇರೆ, ರಾಹುಲ್‌ ಗಾಂಧಿ...

ಅಮೆರಿಕ ವಿಮಾನ ನಿಲ್ದಾಣ: ಏರ್ ಕೆನಡಾ ವಿಮಾನಕ್ಕೆ ಅಪ್ಪಳಿಸಿದ ಟ್ರಕ್

ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಜನನಿಬಿಡ ಲಾ ಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಏರ್ ಕೆನಡಾ...

UAPA ದುರ್ಬಳಕೆ; ವಿಕಸಿತ ಭಾರತಕ್ಕೆ ಶೋಭೆ ತರಲ್ಲ: ಮೋಶಾ ಆಡಳಿತಕ್ಕೆ ಸುಪ್ರೀಂ ನ್ಯಾಯಮೂರ್ತಿ ತಪರಾಕಿ

"2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಮಾಡುವ ರಾಜಕೀಯ ಮುಖಂಡರ ಗುರಿಯಲ್ಲಿ...