ಅಸ್ಸಾಂ ಬಿಜೆಪಿ ಸಚಿವ ಅಶೋಕ್ ಸಿಂಘಾಲ್ ಬಿಹಾರ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹೂಕೋಸುಗಳ ಚಿತ್ರವನ್ನು ಹಂಚಿಕೊಂಡಿದ್ದು, ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ‘ಗೋಬಿ ಕೃಷಿ’ ಚಿತ್ರ ಪೋಸ್ಟ್ ಮಾಡಿದ ಬಿಜೆಪಿ ಸಚಿವ ‘ಬಿಹಾರ ಗೋಬಿ ಕೃಷಿಯನ್ನು ಅನುಮೋದಿಸುತ್ತದೆ’ ಎಂದು ಹೇಳಿಕೊಂಡಿದ್ದಾರೆ.
ಈ ಪೋಸ್ಟ್ 1989ರ ಭಾಗಲ್ಪುರ ಕೋಮು ಗಲಭೆ, ಲೋಗೇನ್ ಹತ್ಯಾಕಾಂಡ ಎಂದು ಕರೆಯಲ್ಪಡುವ ಕುಖ್ಯಾತ ‘ಹೂಕೋಸು ಸಮಾಧಿ ಪ್ರಕರಣ’ವನ್ನು ಬಿಂಬಿಸುತ್ತದೆ ಎಂದು ಅನೇಕ ಎಕ್ಸ್ ಬಳಕೆದಾರರು ಹೇಳಿದ್ದಿ. ಸದ್ಯ ಸಚಿವರ ಟ್ವೀಟ್ ತೀವ್ರ ಟೀಕೆಗೆ, ವಿವಾದಕ್ಕೆ ಕಾರಣವಾಗಿದೆ.
ಇದನ್ನು ಓದಿದ್ದೀರಾ? ಬಿಹಾರ ಚುನಾವಣೆ | ನಿತೀಶ್ ಕುಮಾರ್ ಮತ್ತು ಬಿಜೆಪಿಯ ಸ್ವಯಂ ಸೋಲು
ಏನಿದು ‘ಹೂಕೋಸು ಸಮಾಧಿ ಪ್ರಕರಣ’?
1989ರ ಅಕ್ಟೋಬರ್ 24ರಂದು ಬಿಹಾರದ ಭಾಗಲ್ಪುರ ನಗರ ಮತ್ತು ಸುತ್ತಮುತ್ತಲಿನ 250 ಹಳ್ಳಿಗಳಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರ ಭುಗಿಲೆದ್ದಿದ್ದು, ಇದರಲ್ಲಿ ಸಾವಿರಾರು ಮಂದಿಯ ಹತ್ಯೆ ನಡೆದಿದೆ. ಸುಮಾರು 900 ಮುಸ್ಲಿಮರು ಸೇರಿದಂತೆ 1,000 ಕ್ಕೂ ಹೆಚ್ಚು ಜನರ ಹತ್ಯಾಕಾಂಡ ನಡೆದಿದ್ದು ಸುಮಾರು 50,000 ಜನರು ಸ್ಥಳಾಂತರಗೊಂಡಿದ್ದಾರೆ.
ಲೋಗೇನ್ ಗ್ರಾಮದಲ್ಲಿ, ಎಎಸ್ಐ ರಾಮಚಂದರ್ ಸಿಂಗ್ ನೇತೃತ್ವದ 4,000 ಜನರ ಗುಂಪೊಂದು 116 ಮುಸ್ಲಿಮರನ್ನು ಕೊಂದಿದ್ದು ಶವಗಳನ್ನು ಹೂತು ಅದರ ಮೇಲೆ ಹೂಕೋಸು ಮತ್ತು ಎಲೆಕೋಸು ಸಸಿಗಳನ್ನು ನೆಟ್ಟು ಮರೆಮಾಡಿತ್ತು. 2007ರಲ್ಲಿ, ಮಾಜಿ ಪೊಲೀಸ್ ಅಧಿಕಾರಿ ಸೇರಿದಂತೆ ಹದಿನಾಲ್ಕು ಜನರನ್ನು ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕೋರ್ಟ್ ಘೋಷಿಸಿದೆ. ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ.
“Gobi farming” refers to glorifying the mass killing of Muslims in Bhagalpur, Bihar, in 1989. A cauliflower farm was planted on the graves to hide evidence.
— Saket Gokhale MP (@SaketGokhale) November 15, 2025
This is Modi’s BJP Minister from Assam. Not some fringe element.
Clearly, @PMOIndia approves this. The world should know. https://t.co/y4faGndOrQ
ಈ ಘಟನೆ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಹೂಕೋಸುಗಳನ್ನು ಈ ದುರಂತ ಹತ್ಯಾಕಾಂಡದ ಪ್ರತೀಕವಾಗಿ ಬಳಸಲಾಗುತ್ತಿದೆ. ಇದೀಗ ಬಿಹಾರ ಚುನಾವಣೆ ಬೆನ್ನಲ್ಲೇ ಬಿಜೆಪಿ ಸಚಿವ ಹೂಕೋಸಿನ ಚಿತ್ರ ಪೋಸ್ಟ್ ಮಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗುತ್ತಿದೆ.
ಈ ಬಗ್ಗೆ ಟಿಎಂಸಿ ಸಂಸದ ಸಾಕೇತ್ ಗೋಖಲೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, “ಗೋಬಿ ಕೃಷಿ ಎಂದರೆ 1989ರಲ್ಲಿ ಬಿಹಾರದ ಭಾಗಲ್ಪುರದಲ್ಲಿ ಮುಸ್ಲಿಮರ ಸಾಮೂಹಿಕ ಹತ್ಯೆಯನ್ನು ವೈಭವೀಕರಿಸುವುದಾಗಿದೆ. ಸಾಕ್ಷ್ಯಗಳನ್ನು ಮರೆಮಾಡಲು ಸಮಾಧಿಗಳ ಮೇಲೆ ಹೂಕೋಸುಗಳನ್ನು ನಡೆಲಾಗಿತ್ತು. ಈ ಪೋಸ್ಟ್ ಮಾಡಿದವರು ಇದು ಮೋದಿಯ ಅಸ್ಸಾಂನ ಬಿಜೆಪಿ ಸಚಿವರು. ಇದು ಯಾವುದೋ ಒಂದು ಸಣ್ಣ ವಿಚಾರವಲ್ಲ” ಎಂದು ಹೇಳಿದ್ದಾರೆ.





