ಬಿಹಾರ ಫಲಿತಾಂಶ ಮತದಾನಕ್ಕೂ ಮುನ್ನವೇ ನಿರ್ಧಾರವಾಗಿತ್ತಾ? ವರದಿ ಹೇಳುವುದೇನು?

Date:

ಬಿಹಾರ ಚುನಾವಣೆಯಲ್ಲಿ ಮತದಾನ ಪ್ರಮಾಣದ ದಿಢೀರ್ ಏರಿಕೆ, ಚುನಾವಣಾ ಕಾರ್ಯಗಳಲ್ಲಿ ಜೀವಿಕಾ ದೀದಿಯರ ಬಳಕೆ, ಎಸ್‌ಐಆರ್ ಪ್ರಕ್ರಿಯೆ, ಬಿಎಲ್‌ಒಗಳ ಮೇಲಿನ ಒತ್ತಡ, ಎನ್‌ಡಿಎ ಅಭ್ಯರ್ಥಿಗಳ ಗೆಲುವಿನ ಅಂತರಗಳನ್ನು ವರದಿಯೊಂದು ವಿಶ್ಲೇಷಿಸಿದೆ. ಈ ಎಲ್ಲ ಕಾರಣಗಳಿಂದಾಗಿ, ಬಿಹಾರ ಚುನಾವಣೆಯ ಫಲಿತಾಂಶವು ಮತ ಎಣಿಕೆಗೂ ಮೊದಲೇ ನಿರ್ಧಾರಿತವಾಗಿತ್ತಾ ಎಂಬ ಪ್ರಶ್ನೆಗೆ ಮತ್ತಷ್ಟು ಪುಷ್ಟಿ ನೀಡಿದೆ.

ಮಾಜಿ ಐಎಎಸ್ ಅಧಿಕಾರಿ ಎಂ.ಜಿ. ದೇವಸಹಾಯಂ, ಕಂಪ್ಯೂಟರ್ ವಿಜ್ಞಾನಿ ಪ್ರೊ. ಹರೀಶ್ ಕರ್ಣಿಕ್ ಹಾಗೂ ಡಾ. ಪ್ಯಾರಾ ಲಾಲ್ ಗರ್ಗ್ ಅವರನ್ನು ಒಳಗೊಂಡ ತಜ್ಞರಿರುವ ‘ವೋಟ್ ಫಾರ್ ಡೆಮಾಕ್ರಸಿ’ (VFD) ಸಂಸ್ಥೆಯು ‘ದಿ ಬಿಹಾರ ವರ್ಡಿಕ್ಟ್-2025’ ಹೆಸರಿನಲ್ಲಿ ವರದಿ ಬಿಡುಗಡೆ ಮಾಡಿದೆ. ಬಿಹಾರ ಚುನಾವಣೆಗೆ ಸಂಬಂಧಿಸಿದಂತೆ ಗಂಭೀರ ವಿಚಾರಗಳು ಮತ್ತು ದೋಷಗಳನ್ನು ಮುನ್ನೆಲೆಗೆ ತಂದಿದೆ.

ಬಿಹಾರದಲ್ಲಿ ಮತದಾನದ ಅಂಕಿಅಂಶಗಳು ಏಕಾಏಕಿ ಏರಿಕೆಯಾಗಿವೆ ಎಂಬುದನ್ನು ಗಮನಿಸಿರುವ ವರದಿಯು, ಈ ಏರಿಕೆಯನ್ನು ‘ಮಿಡ್‌ನೈಟ್‌ ಹೈಕ್’ ಎಂದು ಕರೆದಿದೆ. ಮತದಾನ ಮುಗಿದ ಬಳಿಕ, ಶೇಕಡಾವಾರು ಮತದಾನ ಪ್ರಮಾಣ ಬದಲಾಗುವುದು ಸಹಜ. ಆದರೆ, ಬಿಹಾರದಲ್ಲಿ ಮತದಾನ ಮುಗಿದು, ಫಲಿತಾಂಶದ ಹಿಂದಿನ ದಿನ, ನವೆಂಬರ್ 12ರಂದು ಮತದಾನದ ಪ್ರಮಾಣವನ್ನು ಚುನಾವಣಾ ಆಯೋಗ ಏಕಾಏಕಿ ಏರಿಕೆ ಮಾಡಿದೆ. ಮೊದಲ ಹಂತದ ಮತದಾನದ ಪ್ರಮಾಣವು 64.46% ರಿಂದ 65.08%ಗೆ ಏರಿದ್ದರೆ, ಎರಡನೇ ಹಂತದ ಮತದಾನದ ಮೂಲ ಪ್ರಮಾಣವು 68.76% ಇದ್ದದ್ದು, ಸುಮಾರು 4%ರಷ್ಟು ಎಚ್ಚಾಗಿದೆ. ಒಟ್ಟು 1,34,145 ಮತಗಳನ್ನು ಕೃತಕವಾಗಿ ಸೇರಿಸಲಾಗಿದೆ ಎಂದು ವರದಿ ಆಪಾದಿಸಿದೆ. ಈ ಕೃತಕವಾಗಿ ಸೇರ್ಪಡೆಗೊಂಡ ಮತಗಳು ಸುಮಾರು 20 ಕ್ಷೇತ್ರಗಳ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ ಎಂದು ವರದಿ ವಿಶ್ಲೇಷಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜೊತೆಗೆ, ಸಣ್ಣ ಅಂತರದ ಗೆಲುವು ಮತ್ತು ಅಂಚೆ ಮತಗಳ ಎಣಿಕೆಯನ್ನೂ ವರದಿ ವಿಶ್ಲೇಷಿಸಿದೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು, ಅದರಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆದ್ದಿರುವ ಅನೇಕ ಕ್ಷೇತ್ರಗಳಲ್ಲಿ ಗೆಲುವಿನ ಅಂತರವು ತೀರಾ ಕಡಿಮೆಯಿದೆ. ಬಿಜೆಪಿ ಗೆದ್ದಿರುವ 14 ಮತತು ಜೆಡಿಯು ಗೆದ್ದಿರುವ 5 ಕ್ಷೇತ್ರಗಳು ಸೇರಿದಂತೆ ಒಟ್ಟು 21 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವು 15 ಮತಗಳಿಗಿಂತ ಕಡಿಮೆ ಅಂತರದಲ್ಲಿ ಗೆದ್ದಿದ್ದಾರೆ. ಅದರಲ್ಲೂ, ಕುರ್ಹಾನಿ ಮತ್ತು ರಾಜ್ಗೀರ್ ರೀತಿಯ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಒಂದೇ ಸಂಖ್ಯೆಯ ಮತಗಳನ್ನು ಪಡೆದು ಗೆದ್ದಿದ್ದಾರೆ ಎಂಬುದನ್ನು ವರದಿ ಬಹಿರಂಗಪಡಿಸಿದೆ.

ಈ ಲೇಖನ ಓದಿದ್ದೀರಾ?: ಸಾಮಾಜಿಕ ಬಹಿಷ್ಕಾರ ಹಾಕಿದ್ರೆ ಕಂಬಿ ಎಣಿಸೋದು ಪಕ್ಕಾ!

ಇನ್ನು, ಸುಮಾರು 1.8 ಲಕ್ಷ ‘ಜೀವಿಕಾ ದೀದಿ’ಯರನ್ನು ಚುನಾವಣಾ ಕೆಲಸಗಳಿಗೆ ಸ್ವಯಂಸೇವಕರನ್ನಾಗಿ ನೇಮಿಸಿಕೊಳ್ಳಲಾಗಿತ್ತು. ಆದರೆ, ಮತದಾನಕ್ಕೂ ಕೆಲವೇ ದಿನಗಳ ಮುನ್ನ ಅವರೆಲ್ಲರಿಗೂ ಸರ್ಕಾರದ ಹಲವು ಯೋಜನೆಗಳ ಅಡಿಯಲ್ಲಿ ಹಣ ನೀಡಲಾಗಿತ್ತು. ಸರ್ಕಾರದಿಂದ ಆರ್ಥಿಕ ಲಾಭ ಪಡೆದವನ್ನು ಚುನಾವಣಾ ಕೆಲಸಕ್ಕೆ ಬಳಸಿರುವ ಬಗ್ಗೆ ವರದಿ ಕಳವಳ ವ್ಯಕ್ತಪಡಿಸಿದೆ.ಚುನಾವಣಾ ನಿಷ್ಪಕ್ಷತೆಯನ್ನು ಕಾಪಾಡಬೇಕಾದ ಚುನಾವಣಾ ಆಯೋಗವು ಆಡಳಿತಾರೂಢ ಮೈತ್ರಿಕೂಟದ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡಿದೆಯೇ ಎಂಬ ಸಂದೇಹವನ್ನು ಹೆಚ್ಚಿಸಿದೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗಾಗಿ (ಎಸ್‌ಐಆರ್) ಬಿಎಲ್ಒಗಳ ಮೇಲೆ ಒತ್ತಡ ಹೇರಲಾಗಿದೆ. 2025ರ ಜೂನ್ 24ರಂದು ಎಸ್‌ಐಆರ್ ಘೋಷಿಸಿದ ಆಯೋಗವು, ಆಗಸ್ಟ್‌ 1ರಂದು ಕರಡು ಪಟ್ಟಿ ಬಿಡುಗಡೆ ಮಾಡಿತು. ಈ ತ್ವರಿತ ಕೆಲಸಕ್ಕಾಗಿ ಬಿಎಲ್‌ಒಗಳಾಗಿ ನಿಯೋಜಿತರಾಗಿದ್ದ ಶಿಕ್ಷಕರ ಮೇಲೆ ಹೆಚ್ಚಿನ ಒತ್ತಡವಿತ್ತು. ಅಲ್ಲದೆ, ಎಸ್‌ಐಆರ್ ಘೋಷಣೆಯಾದ ಬಿಹಾರದಲ್ಲಿ 7.89 ಕೋಟಿ ಮತದಾರರಿದ್ದರು. ಆದರೆ, ಆಗಸ್ಟ್ 1ರಂದು ಕರಡು ಪಟ್ಟಿಯಲ್ಲಿ ಬಿಡುಗಡೆಯಾದಾಗ 7.24 ಕೋಟಿ ಮತದಾರರಿಗೆ ಕುಸಿದಿತ್ತು. ಕೇವಲ 37 ದಿನಗಳಲ್ಲಿ 65.69 ಲಕ್ಷ ಮತದಾರರನ್ನು ಪಟ್ಟಿಯಿಂದ ಆಯೋಗವು ಹೊರಹಾಕಿತು. ಅವರಲ್ಲಿ ಬಹುಸಂಖ್ಯಾತರು ಮುಸ್ಲಿಮರು, ದಲಿತರು ಹಾಗೂ ವಲಸೆ ಕಾರ್ಮಿಕರೇ ಇದ್ದಾರೆ ಎಂದು ವರದಿ ವಿವರಿಸಿದೆ.

ಚುನಾವಣಾ ಆಯೋಗ ‘ವಿದೇಶಿಯರನ್ನು’ ಪತ್ತೆ ಹಚ್ಚುವ ನೆಪದಲ್ಲಿ ಎಸ್‌ಐಆರ್ ನಡೆಸಿತು. ಆದರೆ, ಒಬ್ಬನೇ ಒಬ್ಬ ವಿದೇಶಿಗನನ್ನು ಪತ್ತೆ ಹಚ್ಚಲಿಲ್ಲ. ಆದರೆ, ದೇಶದ ಬಡವರು ಮತ್ತು ಹಿಂದುಳಿದವರನ್ನು ಹೊರಹಾಕಿತು. ಲಕ್ಷಾಂತರ ಭಾರತೀಯರ ಮತದಾನದ ಹಕ್ಕನ್ನು ಕಸಿದುಕೊಂಡಿತು. ಇದರಲ್ಲಿ, ಸ್ಪಷ್ಟವಾಗಿ ಸಾಂವಿಧಾನಿಕ ಉಲ್ಲಂಘನೆಯಾಗಿದೆ. ಆಧಾರ್ ಅಥವಾ ಇತರ ದಾಖಲೆಗಳಿಲ್ಲ ಎಂಬ ಹೆಸರಿನಲ್ಲಿ ಮತದಾನದ ಹಕ್ಕನ್ನೇ ಕಸಿದುಕೊಳ್ಳುವುದು ಸಂವಿಧಾನ ಬಾಹಿರವೆಂದು ವರದಿ ಪ್ರತಿಪಾದಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...