ಮಧ್ಯಪ್ರದೇಶ ಸತ್ನಾದಲ್ಲಿ ಬಿಜೆಪಿ ಸಂಸದ ಗಣೇಶ್ ಸಿಂಗ್ ಸಾರ್ವಜನಿಕವಾಗಿ ಪುರಸಭೆಯ ಕ್ರೇನ್ ಆಪರೇಟರ್ ಕೆನ್ನೆಗೆ ಬಾರಿಸಿದ್ದು ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಸತ್ನಾದ ಏಕತಾ ಓಟ ನಡೆಸಲಾಗಿದ್ದು ಈ ವೇಳೆ ನಡೆದಿದೆ.
ಸಂಸದರು ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಲು ಹೈಡ್ರಾಲಿಕ್ ಕ್ರೇನ್ನಲ್ಲಿದ್ದರು. ಕ್ರೇನ್ನಿಂದ ಇಳಿಯುವಾಗ ಯಂತ್ರ ಕಂಪಿಸಿದೆ. ಕೆಲವು ಸೆಕೆಂಡುಗಳ ಕಾಲ ಗಣೇಶ್ ಸಿಂಗ್ ಕ್ರೇನ್ನಲ್ಲೇ ಸಿಲುಕಿದರು. ಇದರಿಂದಾಗಿ ಕೋಪಗೊಂಡ ಬಿಜೆಪಿ ಸಂಸದರು ಬಿಜೆಪಿ ಕಾರ್ಯಕರ್ತರು, ಅಧಿಕಾರಿಗಳು ಮತ್ತು ದಾರಿಹೋಕರ ಮುಂದೆಯೇ ಪುರಸಭೆಯ ಉದ್ಯೋಗಿ, ಕ್ರೇನ್ ಆಪರೇಟರ್ ಗಣೇಶ್ ಕುಶ್ವಾಹ ಕೆನ್ನೆಗೆ ಬಾರಿಸಿದ್ದಾರೆ.
ಇದನ್ನು ಓದಿದ್ದೀರಾ? ವಿಮಾನ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿ ಕೆನ್ನೆಗೆ ಬಾರಿಸಿದ ಸ್ಪೈಸ್ಜೆಟ್ ಮಹಿಳಾ ಸಿಬ್ಬಂದಿ
ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ಸಂಸದರನ್ನು ಟೀಕಿಸಲಾಗುತ್ತಿದೆ. ವಿಡಿಯೋದಲ್ಲಿ ಸಂಸದರು ಕ್ರೇನ್ನಿಂದ ಇಳಿಯುವಾಗ ಆಪರೇಟರ್ ಅನ್ನು ಕರೆದು ಕೆನ್ನೆಗೆ ಬಾರಿಸಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಪುರಸಭೆಯ ಉದ್ಯೋಗಿಗಳು, “ಆಪರೇಟರ್ ತನ್ನ ಕೆಲಸವನ್ನು ಮಾತ್ರ ಮಾಡುತ್ತಿದ್ದರು. ಆದರೆ ಸಣ್ಣ ತಾಂತ್ರಿಕ ದೋಷ ಉಂಟಾಗಿದೆ. ಆದರೆ ಸಂಸದರ ತಾಳ್ಮೆ ಕಳೆದುಕೊಂಡರು” ಎಂದು ಹೇಳಿದ್ದಾರೆ.
When a lawmaker slaps a crane operator for a mechanical fault.
— Vishnukant Tiwari (@vishnukant_7) October 31, 2025
Satna MP Ganesh Singh first boarded the crane, wanted to garland Mr Ambedkar's statue, get himself snapped and captured in the video.
The crane he boarded encountered a mechanical fault, so for that Mr Ganesh… pic.twitter.com/uHWIwsCQ0t
ಇದಾದ ಸ್ವಲ್ಪ ಸಮಯದ ನಂತರ, ಸಂಸದರ ಬೆಂಬಲಿಗರು ನೀತಾ ಸೋನಿ ಸಾಮಾಜಿಕ ಮಾಧ್ಯಮದಲ್ಲಿ ಈ ಹಲ್ಲೆಯನ್ನು ಸಮರ್ಥಿಸಿಕೊಂಡಿದ್ದಾರೆ. “ಸಂಸದರು ಕ್ರೇನ್ ಆಪರೇಟರ್ ಕೆನ್ನೆಗೆ ಬಾರಿಸಿದರು. ಅವರ ಕೈಕಾಲು ಮುರಿಯಬೇಕಿತ್ತು. ಸಂಸದರು ಆ ಎತ್ತರದಿಂದ ಕೆಳಕ್ಕೆ ಬಿದ್ದಿದ್ದರೆ, ಯಾರು ಜವಾಬ್ದಾರರು” ಎಂದು ಪ್ರಶ್ನಿಸಿದ್ದಾರೆ.
ಈ ಪೋಸ್ಟ್ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಈ ಕೃತ್ಯವನ್ನು ಖಂಡಿಸಿದ್ದು, “ದುರಹಂಕಾರ ಮತ್ತು ಅಧಿಕಾರದ ಅಮಲಿನ ಪ್ರದರ್ಶನ” ಎಂದು ಹೇಳಿದೆ. ಕಾಂಗ್ರೆಸ್ ವಕ್ತಾರ ಅಭಿನವ್ ಬರೌಲಿಯಾ, “ಇದು ಬಿಜೆಪಿಯ ನಿಜವಾದ ಮುಖ. ಬಿಜೆಪಿ ನಾಯಕರು ಸರ್ಕಾರಿ ಕೆಲಸಗಾರರನ್ನು, ಜನರನ್ನು ತಮ್ಮ ಆಳುಗಳಂತೆ ನೋಡುತ್ತಾರೆ” ಎಂದು ಟೀಕಿಸಿದ್ದಾರೆ.
ಸದ್ಯ ಏಕತೆ ಮತ್ತು ಗೌರವವನ್ನು ಉತ್ತೇಜಿಸಲು ಆಯೋಜಿಸಲಾಗಿದ್ದ ಸರ್ಕಾರದ ಕಾರ್ಯಕ್ರಮದಲ್ಲೇ ನಡೆದ ಹಲ್ಲೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸಂಸದರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆಯೇ ಮತ್ತು ಕ್ರೇನ್ ಆಪರೇಟರ್ ದೂರು ನೀಡುತ್ತಾರೆಯೇ ಅಥವಾ ನೀಡಿದ್ದಾರೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ.





