ಡೇಂಜರ್ ಜಾಹೀರಾತು | ಅಕ್ಷರಶಃ ಇದು ಬಿಜೆಪಿಯ ಅಪಾಯಕಾರಿತನವನ್ನು ಪ್ರತಿನಿಧಿಸುತ್ತಿದೆ, ಎಚ್ಚರಿಕೆ!

Date:

ಕಾಂಗ್ರೆಸ್‌ಗೆ ವಿರುದ್ದವಾಗಿ ಇಂದು ಬಿಜೆಪಿ ಪ್ರಾಯೋಜಿಸಿರುವ ಜಾಹೀರಾತಿನಲ್ಲಿ ಯಾವುದೇ ಅಭಿವೃದ್ಧಿ ಮತ್ತು ರಾಜ್ಯಕ್ಕೆ ಬೇಕಾದ ಸವಲತ್ತುಗಳ ಆಶ್ವಾಸನೆಗಳಿಲ್ಲ. ಬದಲಿಗೆ ಮುಸ್ಲಿಂ ದ್ವೇಷವೇ ಮೈವೆತ್ತಿ ನಿಂತಿದೆ. ಒಂಬತ್ತು ಪ್ರಶ್ನೆಗಳಿರುವ ಈ ಜಾಹೀರಾತಿನಲ್ಲಿ ಐದು ಪ್ರಶ್ನೆಗಳು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿದ್ದರೆ ಉಳಿದವು ತಮ್ಮದೇ ಪಕ್ಷದ ವೈಫಲ್ಯಗಳನ್ನು ಮುಚ್ಚಿಹಾಕುವ ಕಳ್ಳಪ್ರಶ್ನೆಗಳಾಗಿವೆ.

1. ದಲಿತ ಕಲ್ಯಾಣದ ಬಗ್ಗೆ ಮಾತಾಡುವ ಅರ್ಹತೆಯೇ ಬಿಜೆಪಿಗೆ ಇಲ್ಲ. ಮೀಸಲಾತಿ ಬಗ್ಗೆ ಅತ್ಯಂತ ನೀಚ ಅಭಿಪ್ರಾಯ ಹರಡಿದವರು ಬಿಜೆಪಿ ಮತ್ತು ಸಂಘ ಪರಿವಾರಗಳೇ ಆಗಿವೆ.

ಅದು ಅಲ್ಲದೇ ಈ ಬಾರಿ 400ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆದ್ದರೆ ಸಂವಿಧಾನವನ್ನೇ ಬದಲು ಮಾಡುವ ಘೋಷಣೆಗಳನ್ನು ಬಿಜೆಪಿಗರು ಈಗಾಗಲೇ ಮಾಡಿದ್ದಾರೆ. ಇಂತಹವರು ದಲಿತ ಕಲ್ಯಾಣದ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ.

2. ಕುಕ್ಕರ್ ಬಾಂಬ್ ಸ್ಫೋಟವೋ ಮತ್ತೊಂದೋ ಮಾಡುವ ಎಲ್ಲರೂ ಅಪರಾಧಿಗಳೇ, ಅದಕ್ಕೆ ತಕ್ಕ ಶಿಕ್ಷೆ ಆಗಲೇಬೇಕು. ಆದರೆ ಮಂಗಳೂರು ಬಾಂಬ್ ಸ್ಪೋಟ ಮಾಡಲು ಯತ್ನಿಸಿದ ಆದಿತ್ಯ ರಾವ್ ಕಥೆಯನ್ನು ಮರೆತು ಇದನ್ನ ಮಾತ್ರ ನೆನೆಪಿಸಿಕೊಳುವುದು ಯಾಕೆ? ಅದೇ ಮಂಗಳೂರಿನಲ್ಲಿ ಬಿಜೆಪಿಯ RTI ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಕೇಸು ಯಾಕೆ ನೆನೆಪಾಗುವುದಿಲ್ಲ? (ಇದರ ಪ್ರಮುಖ ಆರೋಪಿ ಯುವ ಬ್ರಿಗೇಡ್ ರಾಜ್ಯಾಧ್ಯಕ್ಷನಾಗಿದ್ದನಲ್ಲವೇ?)

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

3. ಗಲಭೆಕೋರರನ್ನು ಓಲೈಸುವುದು ಯಾರು? ನೀವೇ ಅಲ್ಲವೇ? ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ಹಾಕುವ ಹೇಳಿಕೆ ಕೊಟ್ಟವರು ಯಾರು? ಕೋಮುಗಲಭೆಗಳನ್ನು ಸೃಷ್ಟಿಸಲು ಸದಾ ಪಣ ತೊಟ್ಟು ನಿಂತಿರುವವರು ಯಾರು? ಕನ್ನಡಿಯ ಮುಂದೆ ನಿಂತು ಬಿಜೆಪಿ ಮಾತನಾಡಿಕೊಂಡಂತಿದೆ.

4. ಕನ್ನಡಿಗರ ಪಾಲಿನ ಕಾವೇರಿ ನೀರನ್ನು ಉಳಿಸಿಕೊಳ್ಳಲು ಬಿಜೆಪಿ ಸರ್ಕಾರ ಇದ್ದಾಗ ತೆಗೆದುಕೊಂಡ ಕ್ರಮಗಳೇನು? ತಾವು ಕೂಡ ಹರಿಯಲು ಬಿಟ್ಟಿದ್ದಿರಲ್ಲ! ಒಕ್ಕೂಟದಲ್ಲಿ ಇದ್ದದ್ದು ಮೋದಿ ಸರ್ಕಾರ ಮತ್ತು ನದಿ ಪ್ರಾಧಿಕಾರ ಬರುವುದು ಅವರ ಅಧೀನದಲ್ಲಿ. ನೀವೇ ಹೇಳಿ ನಿಲ್ಲಿಸಬಹುದಿತ್ತಲ್ಲ. ಯಾಕೆ ಮಾಡಲಿಲ್ಲ? ಆಷಾಢಭೂತಿತನವಲ್ಲವೇ?

5. ವಿಧಾನಸೌಧದಲಿ ಘೋಷಣೆ ಕೂಗಿದ್ದು ಸಾಬೀತು ಆದಾಗ ಅವರ ಮೇಲೆ ಮೊಕದ್ದಮೆ ಹೂಡಲಾಗಿದೆ. ಆದರೆ ಬಿಜೆಪಿ- ಸಂಘ ಪರಿವಾರದವರು ರಾಯಚೂರಿನಲ್ಲಿ ಪಾಕಿಸ್ತಾನ ಬಾವುಟ ಹಾರಿಸಿ ಸಿಕ್ಕಿಕೊಂಡಿದ್ದರಲ್ಲ ಅದು ಯಾಕೆ ಮರೆತುಹೋಯಿತು. ಕರ್ನಾಟಕ, ಇಂಡಿಯಾಕ್ಕಿಂತ ನಿಮಗೆ ಪಾಕಿಸ್ತಾನದ ಪ್ರೇಮವೇ ಜಾಸ್ತಿಯಲ್ಲ ಯಾಕೆ?

6. ಹೋಟೆಲ್ ಇರಲಿ… ಕಾಶ್ಮೀರದ ಪುಲ್ವಾಮಾದ ಮಿಲಿಟರಿ ಕ್ಯಾಂಪಸ್‌ಗೆ 350 ಕೆಜಿ RDX ಹೇಗೆ ಹೋಯಿತು ಮತ್ತು ಅದು ಸ್ಫೋಟಗೊಂಡು ಸೈನಿಕರು ಸತ್ತರಲ್ಲ? ಅದರ ತನಿಖೆ ಎನಾಯಿತು? ಅದು ಮೋದಿ ಸರ್ಕಾರದ ಇದ್ದಾಗಲೇ ಅಲ್ಲವೇ? ಸೈನಿಕರು, ನಾಗರಿಕರು ಹಲವಾರು ಸ್ಫೋಟಗಳಿಗೆ, ಹಿಂಸಾಚಾರಗಳಿಗೆ ತುತ್ತಾಗಿದ್ದಾರೆ..(ದೆಹಲಿ-ಮಣಿಪುರ ಇತ್ಯಾದಿ) ಅವು ಮರೆತುಹೋದುವೇ?

7. ಲವ್ ಜಿಹಾದ್ ಆಗಿರುವ ಕೇಸುಗಳು ಎಷ್ಟು? ಅದಕ್ಕೆ ಪುರಾವೆಗಳು ಇದ್ದಲ್ಲಿ ನ್ಯಾಯಾಲಯದಲ್ಲಿ ಸಾಬೀತು ಮಾಡಬಹುದಿತ್ತಲ್ಲ. ಯಾಕೆ ಬಿಜೆಪಿ ಮಾಡದೇ ಕಾಲಹರಣ ಮಾಡಿತು. ಕೊಲೆಗಳು ನಡೆಯಲಿ ಎಂದು ಕಾದು ಕೂತಿತ್ತೆ? ಹೆಣದ ರಾಜಕೀಯ ಬಿಜೆಪಿಗೆ ಬಲು ಪ್ರಿಯ. ಆದರೆ ಅಸಲಿಗೆ ಬಿಜೆಪಿಯು ಮಾಡಿದ “ಲವ್ ಜಿಹಾದ್ / ಹೆಣದ ರಾಜಕೀಯಗಳು” ಯಾವುದೇ ಪುರಾವೇ ಇಲ್ಲದೇ ಮಕಾಡೆ ಬಿದ್ದಿವೆ.

8. ನಕ್ಸಲ್ ಹೋರಾಟ ಕರ್ನಾಟಕದಲ್ಲಿ ಈಗ ಎಲ್ಲಿದೆ ಸ್ವಾಮಿ? ಶೇ.99ರಷ್ಟು ಬಿದ್ದುಹೋಗಿದೆ. ಅದರ ಸುಳಿವೇ ಇಲ್ಲ. ಅದಿದ್ದರೆ ನಿಮ್ಮ ಜಾಹೀರಾತು ಮತ್ತು ಪ್ರೊಪಗಾಂಡದಲ್ಲಷ್ಟೇ ಜೀವಂತವಾಗಿದೆ! ಕನ್ನಡನಾಡಿನಲ್ಲಿ ಬಿಜೆಪಿ ಗೂಂಡಾಗಿರಿ ಹುಟ್ಟಿದೆ. ಅದರ ಬಗ್ಗೆ ಮಾತಾಡಿ.

9. ಪ್ರಪಂಚದ ಅತಿದೊಡ್ಡ ‘ದನದ ಮಾಂಸ’ ಮಾರಾಟಗಾರಿಕೆಯ ದೇಶವಾಗಿ ಇಂಡಿಯಾ ರೂಪುಗೊಂಡಿದೆ. ಮೋದಿ ಸರ್ಕಾರದ ಅವಧಿಯಲ್ಲಿ ದನದ ಮಾಂಸ ರಫ್ತು ಮಾಡುವ ರಾಷ್ಟ್ರಗಳಲ್ಲಿ ನಂಬರ್ ಒನ್ ರಾಷ್ಟ್ರವಾಗಿ ಹೊರಹೊಮ್ಮಿದೆ.

ಈ ದನದ ಮಾಂಸ ರಫ್ತು ಮಾಡುವ ಕಂಪನಿಗಳು ಹಿಂದೂ ಮತ್ತು ಜೈನರ ಮಾಲೀಕತ್ವದಲ್ಲಿದೆ ಮತ್ತು ಅವು ಬಿಜೆಪಿಯ ಚುನಾವಣಾ ಬಾಂಡುಗಳನ್ನು ಕೋಟಿಗಟ್ಟಲೆ ಹಣ ನೀಡಿ ಕೊಂಡುಕೊಂಡಿವೆ ಯಾಕೆ?

ಇಂತಹ ಕಂಪನಿಗಳೇ ತಾನೇ ಕಸಾಯಿಖಾನೆಗಳನ್ನು ಹುಟ್ಟುಹಾಕುವುದು, ಬೆಳೆಸುವುದು. ಅತ್ತ ಕಂಪನಿಯು ನಿಮ್ಮ ಕಡೆಯವರದ್ದು ಇತ್ತ ಗೋ ಕಾರ್ಯಕರ್ತರು ನಿಮ್ಮ ಕಡೆಯವರು. ಈ ಡಬಲ್ ಗೇಮ್ ಸಮಾಚಾರ ಏನು?

ಸರಿ. ಅಕ್ರಮ ಕಸಾಯಿಖಾನೆ ಮತ್ತು ಸಾಗಣೆಗೆ ಕಾನೂನು ಇವೆಯಲ್ಲ? ನೀವು ನಿಮ್ಮ ಕಾರ್ಯಕರ್ತರು ಇದುವರೆಗೂ ಎಷ್ಟು ಕೇಸು ದಾಖಲಿಸಿದ್ದೀರಿ? ಅವುಗಳಲ್ಲಿ ಎಷ್ಟು ನ್ಯಾಯಾಲಯದಲ್ಲಿ ಶಿಕ್ಷೆಗೆ ಒಳಗಾಗಿವೆ ತಿಳಿಸಬೇಕಲ್ಲವೇ? ಬರೀ ಗೋವಿನ ಹೆಸರಿನ ಗೂಂಡಾಗಿರಿ ಮಾಡಿದರೆ ಆದೀತೇ?

ಬಿಜೆಪಿಯ ಈ ಜಾಹೀರಾತು ಅದರ ಬಣ್ಣವನ್ನೇ ಬಯಲು ಮಾಡುತ್ತಿದೆಯೇ ಹೊರತು ರಾಜ್ಯದ ನಾಗರಿಕರಿಗೆ ಬೇಕಾದ ಮೂಲಭೂತ ಅಗತ್ಯಗಳು, ಆರೋಗ್ಯ, ಶಿಕ್ಷಣ, ಕೃಷಿ, ಮಾರುಕಟ್ಟೆ, ಉದ್ಯೋಗ, ಆರ್ಥಿಕತೆಗಳನ್ನು ಕುರಿತ ಭರವಸೆ ಮತ್ತು ಆಶ್ವಾಸನೆಗಳನ್ನು ನೀಡುತ್ತಿಲ್ಲ, ಅಂದರೆ ಬಿಜೆಪಿಯು ಆಡಳಿತ ನಡೆಸಲು ಯೋಗ್ಯವಾಗಿಲ್ಲ.

ಎಚ್ಚರಿಕೆ: ಬಿಜೆಪಿ ವಿಷಕಾರಿ ಮತ್ತು ಸೋಂಕುಕಾರಿ!

-ರಾಜೇಂದ್ರ ಪ್ರಸಾದ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...