ತಿರುವನಂತಪುರಂ ಬಿಜೆಪಿ ಪಾಲಾದದ್ದು ಹೇಗೆ?

Date:

ಕೇರಳದ ರಾಜಧಾನಿ ತಿರುವನಂತಪುರಂ ಕಾರ್ಪೋರೇಷನ್ ನ್ನು ಗೆದ್ದು ದಾಖಲೆ ಸ್ಥಾಪಿಸಿದೆ ಬಿಜೆಪಿ. ಸತತ 45 ವರ್ಷಗಳ ಎಡರಂಗದ ಆಳ್ವಿಕೆಯನ್ನು ಅಂತ್ಯಗೊಳಿಸಿದೆ. ಈ ಗೆಲುವು ಆಕಸ್ಮಿಕ ಅಲ್ಲ.

101 ವಾರ್ಡುಗಳ ಪೈಕಿ ಬಿಜೆಪಿ ನೇತೃತ್ವದ ಎನ್.ಡಿ.ಎ. 50 ವಾರ್ಡುಗಳನ್ನು ಗೆದ್ದುಕೊಂಡಿದೆ. ಎಡರಂಗಕ್ಕೆ 29 ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ 19 ವಾರ್ಡುಗಳಲ್ಲಿ ಗೆಲುವು ದಕ್ಕಿದೆ. ಎರಡು ಸೀಟುಗಳು ಪಕ್ಷೇತರರ ಪಾಲಾಗಿವೆ. ಹುರಿಯಾಳುವಿನ ನಿಧನದ ಕಾರಣ ಒಂದು ವಾರ್ಡಿನ ಚುನಾವಣೆ ಮುಂದೆ ಹೋಗಿದೆ.

ತಿರುವನಂತಪುರಂ ಜಿಲ್ಲೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಕಳೆದ ನಲವತ್ತು ವರ್ಷಗಳಿಂದ ಸತತ ಶ್ರಮ ಹಾಕುತ್ತ ಬಂದಿದೆ. ಹಿಂದುತ್ವ ಮತಗಳನ್ನು ಸಂಪಾದಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಜಧಾನಿಯಲ್ಲಿ ಆರೆಸ್ಸೆಸ್ ಬಲವಾದ ಜಾಲವನ್ನು ಹೆಣೆದಿದೆ. ಕಾಳಕೂಟಂ, ನೆಮೋಮ್ ಹಾಗೂ ಓಲ್ಡ್ ಫೋರ್ಟ್ ಪ್ರದೇಶಗಳು ಆರೆಸ್ಸೆಸ್ ಭದ್ರಕೋಟೆಗಳೇ ಆಗಿ ಪರಿಣಮಿಸಿವೆ.

2009ರ ಲೋಕಸಭಾ ಚುನಾವಣೆಗಳು ನಡೆದಾಗಿನಿಂದ ಬಿಜೆಪಿ ಬೆಂಬಲ ಗಗನಕ್ಕೆ ಜಿಗಿದಿದೆ. 2014ರಲ್ಲಿ ಶೇ.11ರಷ್ಟು ಮತಗಳನ್ನು ಹೊಂದಿದ್ದ ಕೇಸರಿ ಪಕ್ಷ 2009ರಲ್ಲಿ ಈ ಪ್ರಮಾಣವನ್ನು ಶೇ.32ಕ್ಕೆ ಹೆಚ್ಚಿಸಿಕೊಂಡಿತು. 2016ರಲ್ಲಿ ಕೇರಳದಿಂದ ಆಯ್ಕೆಯಾದ ಮೊದಲ ಶಾಸಕರೆನಿಸಿದರು ಓ.ರಾಜಗೋಪಾಲ್. ಸ್ಥಳೀಯ ಸಂಸ್ಥೆಗಳಲ್ಲೂ ಇದೇ ಯಶಸ್ಸು ಕಂಡಿದೆ. 2010ರಲ್ಲಿ ಬಿಜೆಪಿಯ ಆರು ಮಂದಿ ಕೌನ್ಸಿಲರ್ ಗಳಿದ್ದರು. ಈ ಸಂಖ್ಯೆ 2015ರ ಹೊತ್ತಿಗೆ 35 ಮುಟ್ಟಿತು. ಅಧಿಕೃತ ಪ್ರತಿಪಕ್ಷ ಎನಿಸಿಕೊಂಡಿತು.

ತಿರುವನಂತಪುರಂ ಶೇ.60ರಷ್ಟು ಹಿಂದು ಮತಗಳನ್ನು (ಬಹುತೇಕ ನಾಯರ್ ಮತ್ತು ಎಳವಾ -ಈಡಿಗ) ಹೊಂದಿದೆ. ಸರ್ಕಾರಿ ನೌಕರರೇ ಹೆಚ್ಚಾಗಿರುವ ತಿರುವನಂತಪುರದಲ್ಲಿ ಮಧ್ಯಮವರ್ಗವೇ ನಿರ್ಣಾಯಕ. ಈ ವರ್ಗ ಬಿಜೆಪಿಯತ್ತ ಒಲವು ಹೊಂದಿದೆ.

ರಾಜ್ಯ ಬಿಜೆಪಿಯು ಅಭಿವೃದ್ಧಿ ರಾಜಕಾರಣದ ಪ್ರಚಾರವನ್ನೂ, ಈವರೆಗೆ ಮೇಯರ್ ಆಗಿದ್ದ ಸಿಪಿಐಎಂ ನ ಆರ್ಯ ರಾಜೇಂದ್ರನ್ ಭ್ರಷ್ಟರು ಎಂಬ ಅಪಪ್ರಚಾರವನ್ನೂ ಯಶಸ್ವಿಯಾಗಿ ನಡೆಸಿತು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...