ಕರ್ನೂಲ್ ಜಿಲ್ಲೆಯಲ್ಲಿ ಟಿಡಿಪಿ ಬೆಂಬಲಿಗನ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಜಿಲ್ಲೆಯ ವೆಲ್ದುರ್ತಿ ಮಂಡಲದಲ್ಲಿ ಭಾನುವಾರ ಸಂಜೆ ಗೌರಿನಾಥ್ ಚೌಧರಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೆಲ್ದುರ್ತಿ ಮಂಡಲದ ಬೊಮ್ಮಿರೆಡ್ಡಿಪಲ್ಲಿ ಗ್ರಾಮದಲ್ಲಿ ನಡೆದ ವಾಗ್ವಾದದ ವೇಳೆ ಮಾತಿಗೆ ಮಾತು ಬೆಳೆದು ಚೌಧರಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಪತ್ತಿಕೊಂಡ ಉಪವಿಭಾಗದ ಪೊಲೀಸ್ ಅಧಿಕಾರಿ ಶ್ರೀನಿವಾಸ್ ರೆಡ್ಡಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮೋದಿ ಮೊದಲ ಸಮ್ಮಿಶ್ರ ಸರ್ಕಾರ | ಪ್ರಮುಖ ಖಾತೆಗಳಿಗೆ ಜೆಡಿಯು-ಟಿಡಿಪಿ ಪಟ್ಟು: ರೈಲ್ವೆಗಾಗಿ ಹಗ್ಗಜಗ್ಗಾಟ!
ಚೌಧರಿ ಅವರ ಹತ್ಯೆಯ ಹಿಂದೆ ವೈಎಸ್ಆರ್ಸಿಪಿ ಕೈವಾಡವಿದೆ ಎಂದು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಆರೋಪಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ಟಿಡಿಪಿ ಪಕ್ಷ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
“ಸೋತ ನಂತರವೂ ವೈಎಸ್ ಜಗನ್ ರಕ್ತಸಿಕ್ತ ಇತಿಹಾಸ ಬರೆಯುವುದನ್ನು ಮುಂದುವರೆಸಿದ್ದಾರೆ. ಕರ್ನೂಲ್ ಜಿಲ್ಲೆಯ ವೆಲ್ದುರ್ತಿ ಮಂಡಲದ ಬೊಮ್ಮಿರೆಡ್ಡಿಪಲ್ಲಿಯ ಟಿಡಿಪಿ ನಾಯಕ ಗೌರಿನಾಥ್ ಚೌಧರಿ ಅವರನ್ನು ಕೊಲೆ ಮಾಡಲಾಗಿದೆ” ಎಂದು ಲೋಕೇಶ್ ಎಕ್ಸ್ನಲ್ಲಿ ತೆಲುಗು ಭಾಷೆಯಲ್ಲಿ ಪೋಸ್ಟ್ ಮಾಡಿದ್ದಾರೆ.
వైఎస్ జగన్ ఓడిపోయినా రక్త చరిత్ర రాస్తూనే ఉన్నాడు. కర్నూలు జిల్లా వెల్దుర్తి మండలం బొమ్మిరెడ్డిపల్లెకి చెందిన టిడిపి నేత గౌరీనాథ్ చౌదరిని దారుణంగా హత్య చేయించారు. వైసీపీ ఫ్యాక్షన్ పాలన వద్దని జనం ఛీకొట్టినా, బాబాయ్ని చంపినట్టే జనాన్ని చంపుతూ ఉన్నాడు జగన్ రెడ్డి. హత్యా… pic.twitter.com/NHhJCzmNV1
— Lokesh Nara (@naralokesh) June 10, 2024
ಅಪರಾಧಿಗಳನ್ನು ಬಿಡುವುದಿಲ್ಲ ಎಂದು ಭರವಸೆ ನೀಡಿದ ಲೋಕೇಶ್, ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲಾಗುವುದು ಎಂದು ಹೇಳಿದರು.
ಈ ನಡುವೆ ವೈಎಸ್ಆರ್ಸಿಪಿ ತನ್ನ ಎಕ್ಸ್ ಪೋಸ್ಟ್ನಲ್ಲಿ ಪಕ್ಷದ ಬೆಂಬಲಿಗರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ವೀಡಿಯೊವನ್ನು ಪೋಸ್ಟ್ ಮಾಡಿದೆ. ಹಾಗೆಯೇ ಕ್ಷಮೆಯಾಚಿಸಲು ಒತ್ತಾಯಿಸಲಾಗಿದೆ.
ಇದನ್ನು ಓದಿದ್ದೀರಾ? ದಾವಣಗೆರೆ | ಪ್ರಧಾನಿಯಾಗಿ ನಮೋ ಮುಂದುವರಿಕೆ; ಬೆಂಬಲ ತಿರಸ್ಕರಿಸಲು ಟಿಡಿಪಿ, ಜೆಡಿಯುಗೆ ಮನವಿ
ಅರೆಬೆತ್ತಲೆ ವ್ಯಕ್ತಿಯೊಬ್ಬರು ಗದ್ಗದಿತರಾಗಿ ಕ್ಷಮೆಯಾಚಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
“ಆಂಧ್ರಪ್ರದೇಶದ ಮಂಗಳಗಿರಿಯ ಹೃದಯ ವಿದ್ರಾವಕ ದೃಶ್ಯವಿದು. ಟಿಡಿಪಿ ನಾಯಕರು ತಮ್ಮ ವಿರುದ್ಧ ದನಿ ಎತ್ತುವ ರಾಜ್ಯದ ದಲಿತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅವರು ಅಕ್ಷರಶಃ ದಲಿತರ ಜೀವಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಲೋಕೇಶ್ ಅವರಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಒತ್ತಾಯಿಸುತ್ತಿದ್ದಾರೆ” ಎಂದು ವೈಎಸ್ಆರ್ಸಿಪಿ ಪೋಸ್ಟ್ನಲ್ಲಿ ಹೇಳಿದೆ.
ಇಷ್ಟು ಮಾತ್ರವಲ್ಲದೆ “ಇದು ನೀವು ರಾಜ್ಯದಲ್ಲಿ ತರುವುದಾಗಿ ಭರವಸೆ ನೀಡಿದ್ದ ಅಭಿವೃದ್ಧಿಯೇ” ಎಂದು ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ಸಿಪಿ ಪ್ರಧಾನಿ ನರೇಂದ್ರ ಮೋದಿ, ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಪ್ರಶ್ನಿಸಿದೆ.




