ಚಿಕ್ಕಮಗಳೂರು | ಜಿಲ್ಲಾ ಸಂಯೋಜಕ ಕೆ.ಎಂ ಗೋಪಾಲ್; ಹುದ್ದೆಯಿಂದ ಅಮಾನತು; ಬಿ.ಎಸ್.ಪಿ

Date:

ಬಿ.ಎಸ್.ಪಿ. ಜಿಲ್ಲಾ ಸಂಯೋಜಕರಾದ ಕೆ.ಎಂ ಗೋಪಾಲ್ ರವರನ್ನು ಪಕ್ಷದ ಪದಾಧಿಕಾರಿ ಹುದ್ದೆಯಿಂದ ಅಮಾನತು ಗೊಳಿಸಲಾಗಿದೆ ಎಂದು ಚಿಕ್ಕಮಗಳೂರು ನಗರದಲ್ಲಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಸೋಮವಾರ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.

ಬಹುಜನ ಸಮಾಜ ಪಕ್ಷದ ಜಿಲ್ಲಾ ಸಂಯೋಜಕರಾದ ಶೃಂಗೇರಿಯ ಕೆ.ಎಂ.ಗೋಪಾಲರನ್ನು ರಾಷ್ಟ್ರೀಯ ಸ್ವಯಂ ಸೇವಕಾ ಸಂಘದ ಪ್ರಾಯೋಜಿತ ಹಿಂದು ಸಮಾಜೋತ್ಸವ ಕಾರ್ಯಕ್ರಮದ ಶೃಂಗೇರಿ ತಾಲ್ಲೂಕು ಆಚರಣ ಸಮಿತಿ ಸದಸ್ಯರಾಗಿದ್ದು ಹಿಂದು ಸಮಾಜೋತ್ಸವದ ಸಭೆಗಳಲ್ಲಿ ಬಹಿರಂಗವಾಗಿ ಭಾಗವಹಿಸಿರುತ್ತಾರೆ. ಈ ಕುರಿತು ಕೆ.ಎಂ ಗೋಪಾಲ್ ಭಾಗವಹಿಸಿರುವುದು ತಪ್ಪಾಗಿರುವುದೆಂದು ಸಮಜಾಯಿಷಿ ನೀಡಿದ್ದು, ಆನಂತರವೂ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದರಿಂದ ಇಂತಹ ಚಟುವಟಿಕೆಯು ಇದು ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಸಿದ್ಧಾಂತಕ್ಕೆ ವಿರುದ್ಧವಾದ ನಡೆಯಾಗಿರುತ್ತದೆ. ಈ ಸಂಬಂಧ ಜ. 8ರಂದು ಪಕ್ಷದ ರಾಜ್ಯ ಕಛೇರಿಯಲ್ಲಿ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ರಾಜ್ಯಾಧ್ಯಕ್ಷರು ಮತ್ತು ಹಾಸನ ವಲಯ ಉಸ್ತುವಾರಿ ರಾಜ್ಯ ನಾಯಕರು ಸಮಕ್ಷಮದಲ್ಲಿ ನಮ್ಮ ಪಕ್ಷದ ಶೃಂಗೇರಿ ಭಾಗದ ಜಿಲ್ಲಾ ಸಂಯೋಜಕರಾದ ಕೆ. ಎಂ ಗೋಪಾಲ್, ಪಕ್ಷ ವಿರೋಧ ಚಟುವಟಿಕೆ ಎಂದು ಪರಿಗಣಿಸಿ ಪದಾಧಿಕಾರಿ ಹುದ್ದೆಯಿಂದ ಅಮಾನತು ಗೊಳಿಸಲಾಗಿದೆ. ಪಕ್ಷದ ಹೆಸರನ್ನು ಬಳಸಿ ಯಾವುದೇ ಚಟುವಟಿಕೆ, ಹೇಳಿಕೆ ನೀಡದಂತೆ ನಿರ್ಬಂಧಿಸಲಾಗಿದೆ ಎಂದು ಬಿ.ಎಸ್.ಪಿ ಜಿಲ್ಲಾಧ್ಯಕ್ಷ ಪಿ. ಪರಮೇಶ್ ತಿಳಿಸಿದರು.

ಇತಿಹಾಸದಿಂದ ಆರ್ ಎಸ್ ಎಸ್ ಕೋಮುದ್ವೇಷ, ಗಲಭೆ, ಜಾತಿವಾದವನ್ನು ಮುನ್ನೆಡೆಸುತ್ತಿದ್ದಾರೆ. ಶೇ. 85ರಷ್ಟು ಬಹು ಸಂಖ್ಯಾತ ಸನಾತನಾವಾದಿಗಳು, ಮಹಿಳೆಯರು ವಸೂಲು ತುಳಿಯಬಾರದು, ಯಾವ ಜಾತಿಯವರು ಒಂದೇ ಕೆಲಸಕ್ಕೆ ಸೀಮಿತವಾಗಿರಬೇಕು ಎಂಬ ಸಿದ್ದಾಂತ ಹೊಂದಿರುವವರು. ಸಂವಿಧಾನ ಬದಲಾಗಬೇಕು ಬೇರೆ ಸಂವಿಧಾನ ಬರೆದಿದ್ದೇವೆ ಅದನ್ನು ತೆರೆಗೆ ತರುತ್ತೇವೆ ಎಂಬ ಉದ್ದೇಶವೊಂದಿ ಸನಾತನ ಉಳಿವಿಗೆ ಹೊಸ ಕಾಯ್ದೆಗಳನ್ನು ಆರ್ ಎಸ್ ಎಸ್ ತಿದ್ದುತ್ತಿದ್ದಾರೆ. ಆದರೇ,  ಬಹುಜನ ಸಮಾಜ ಪಾರ್ಟಿ ಅಧಿಕಾರದಿಂದ ವಂಚಿತರಾದ ಅಧಿಕಾರ ಕೊಡಬೇಕು, ಕನ್ಯಾಕುಮಾರಿ ಇಂದ ಕಾಶ್ಮೀರಕ್ಕೆ ಎದೆ ಗುಂದದೆ ಹೋರಾಟ ಮಾಡಲಾಗಿದೆ. ಬಿಎಸ್ಪಿ ಪಕ್ಷವನ್ನ ಸ್ವತಃ ಜನರು ಹಾಗೂ ಕಾರ್ಯಕರ್ತರೇ ಕಟ್ಟಿ ಬೆಳೆಸುವ ಪಕ್ಷ ಎಂದರೆ ತಪ್ಪಾಗಲಾರದು. ಹಾಗೆಯೇ ಈ ಜಿಲ್ಲೆಯಲ್ಲಿ ಕೋಮುವಾದ ಬೆಳೆದಿರುವುದೇ ಶೃಂಗೇರಿ ಭಾಗದಲ್ಲಿ 31 ವರ್ಷದಿಂದ ಕೆ.ಎಂ ಗೋಪಾಲ್ ಅವರು ವಿಚಾರಗಳನ್ನು ಅಂಬೇಡ್ಕರ್ ತತ್ವ ಸಿದ್ಧಾಂತವನ್ನು ಹೊಂದಿದ್ದವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಯೋಜಿತ ಇಂದು ಸಮಾಜೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಿರುವುದು ನೋವಿನ ಸಂಗತಿಯಾಗಿದೆ. ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ ರಾಧಾಕೃಷ್ಣ ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?ಚಿಕ್ಕಮಗಳೂರು | ಮಹಿಳೆ ಸಾವು ಅನುಮಾನ ; ಪ್ರಕರಣ ದಾಖಲು

ಈ ವೇಳೆ ವಿಜಯ್ ಕುಮಾರ್, ಎಂ. ಬಾಬು, ಕೆ. ಎಂ ಗಂಗಾಧರ್ ಹಾಗೂ ಇನ್ನಿತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...