ಚಿಕ್ಕಮಗಳೂರು | ಪಂಚ ಗ್ಯಾರಂಟಿ ಯೋಜನೆ; ಫಲಾನುಭವಿಗಳ ಕಾರ್ಯಾಗಾರ ಯಶಸ್ವಿ 

Date:

ಚಿಕ್ಕಮಗಳೂರು ನಗರದ ಕುವೆಂಪು ಕಲಾ ಮಂದಿರದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆ ಕುರಿತು ಬೃಹತ್ ಸಮಾವೇಶ ಸೋಮವಾರ ನಡೆಯಿತು.

ಕಾರ್ಯಕ್ರಮಕ್ಕಿಂತ ಮೊದಲು ಆಜಾದ್ ಪಾರ್ಕ್‌ ವೃತ್ತದಿಂದ ಕುವೆಂಪು ಕಲಾಮಂದಿರದವರೆಗೆ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಆರಂಭಿಸಿ, ಕುವೆಂಪು ಕಲಾಮಂದಿರದ ಒಳಗೆ ಪ್ರವೇಶವಾಗುವ ಮೊದಲು ಧಾನ್ಯಾಗಳಿಂದ ಅದ್ಭುತವಾಗಿ ಶಾರದೆ ಪ್ರತಿಮೆಯನ್ನು ಕೂರಿಸಿದ್ದರು. ಕಾರ್ಯಕ್ರಮ ಪ್ರವೇಶಿಸುವ  ಬಾಗಿಲ ಬಳಿ ರಂಗೋಲಿ ಮೂಲಕ ಗ್ಯಾರಂಟಿ ಯೋಜನೆಗಳ ಚಿತ್ರೀಕರಣ, ವೇದಿಕೆಯ ಮುಂಭಾಗ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ಎಂಬ ಮಹಿಳೆಯ ಪ್ರತಿಮೆ, ರಾಷ್ಟ್ರಗೀತೆ ಮೂಲಕ ಕಾರ್ಯಕ್ರಮ ಶುರು ಮಾಡಿದ್ದು ಜನರ ಗಮನ ಸೆಳೆಯಿತು.

Screenshot 2026 02 24 07 47 59 57 99c04817c0de5652397fc8b56c3b3817

ಹಾಗೆಯೇ, ಪ್ರಸ್ತಾವಿಕವಾಗಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರು ಮಾತಾಡಿ ” ನಮ್ಮ ಜಿಲ್ಲೆಯಲ್ಲಿ ಇಲ್ಲಿಯವರೆಗೆ 3.84ಕೋಟಿ ಶಕ್ತಿ ಯೋಜನೆ, 3,54,165 ಮೀಟರುಗಳಲ್ಲಿ 2,22, 311ಮೀಟರ್ ಸಂಪೂರ್ಣ ಉಚಿತ ವಿದ್ಯುತ್ ನೀಡಿದೆ. ಜೊತೆಗೆ 217.91ಕೋಟಿ ಅನುದಾನ ಗ್ರಾಹಕರಿಗೆ ನಮ್ಮ ಸರ್ಕಾರ ನೀಡಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ 2,61,415 ಯಜಮಾನಿಯರಿಗೆ ತಿಂಗಳಿಗೆ 52,28 ಕೋಟಿ ನೀಡಲಾಗುತ್ತಿದ್ದು, ಅನ್ನಭಾಗ್ಯ ಯೋಜನೆಯಡಿ ಒಬ್ಬರಿಗೆ 10ಕೆಜಿ ಅಕ್ಕಿ, ಯುವನಿಧಿ ಯೋಜನೆಯಲ್ಲಿ ಇದುವರೆಗೂ 6ಕೋಟಿ ಸಹಾಯಧನ ಪಡೆಯುತ್ತಿದ್ದಾರೆ ಇದನ್ನೂ ಮಹಿಳೆಯ ಏಳಿಗೆಗೆ ತುಂಬ ಸಹಾಯ ಮಾಡುತ್ತಿದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾರ್ಯಕ್ರಮಕ್ಕೆ ಮುಖ್ಯ ಉಪನ್ಯಾಸಕರಾಗಿ ಡಾ. ವಾಸು ಎಚ್. ವಿ ಮಾತನಾಡಿ ” ಕರ್ನಾಟಕ ಸರ್ಕಾರ 5 ಯೋಜನೆಗಳು, ಹಾಗೂ ಮಹಿಳೆಯರಿಗೆ ಕೊಡುತ್ತಿರುವುದು  ಯೋಜನೆಗಳು ಯಾವುದೂ ಬಿಟ್ಟಿ ಭಾಗ್ಯವಲ್ಲ. ಮಹಿಳೆಯರ ಸಬಲೀಕರಣಕ್ಕೆ ಹಾಗೂ ಬಡತನದಲ್ಲಿರುವ ಅದೇಷ್ಟು ಕುಟುಂಬಗಳಿಗೆ ಈ ಯೋಜನೆಗಳಿಂದ ತುಂಬಾ ಸಹಾಯವಾಗುತ್ತಿದೆ. ಶಕ್ತಿ ಯೋಜನೆಯಿಂದ ಮಹಿಳೆಯರು ಕೆಲಸಕ್ಕೆ, ಪ್ರವಾಸಕ್ಕೆ, ದೇವಸ್ಥಾನಗಳಿಗೆ, ಕುಟುಂಬದ ಕೆಲಸಕ್ಕೆ ಉಪಯೋಗಿಸುತ್ತಿದ್ದಾರೆ. ಆರ್ಥಿಕ ಸ್ವಾವಲಂಬಿಯಾಗಿದ್ದಾರೆ. ಮನೆಯ ಯಜಮಾನರನ್ನೇ ಏನೇ ಬೇಕಿದ್ದರು ಕೇಳಬೇಕಿತ್ತು. ಅದು ಕಡಿಮೆಯಾಗಿದೆ. ಹಾಗೆಯೇ, ಸಣ್ಣದಾಗಿ ಸ್ವಂತ ಉದ್ದಿಮೆಗಳನ್ನು ಪ್ರಾರಂಭಿಸಿದ್ದಾರೆ. ಕೊಳ್ಳುವುದು, ಮಾರುವುದು, ವಸ್ತುಗಳನ್ನು ಪಡೆಯುವುದರಿಂದ ಸರ್ಕಾರಕ್ಕೆ ಲಾಭ ಆಗುತ್ತದೆ. ಎಲ್ಲಿಯೂ ದಿವಾಳಿ ಆಗುವುದಿಲ್ಲ, ಪ್ರತಿಯೊಂದು ಸರ್ಕಾರ ಸಾಲ ಮಾಡಿಯೇ ಸರ್ಕಾರ ನಡೆಸುವುದು. ಸಾಲ ಮಾಡದೇ ಯಾವ ಸರ್ಕಾರಗಳು ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ಇಲ್ಲ.ಸರ್ಕಾರ ಕೊಡುವಂತಹ ಹಣ ಪ್ರತಿದಿನ ಬಳಕೆಯಾಗುತ್ತದೆ. ಈ ಗ್ಯಾರಂಟಿಗಳು ಜಾರಿಯಾಗುವುದಿಲ್ಲ ಅಥವಾ ಚುನಾವಣೆಯ ನಂತರ ನಿಂತು ಹೋಗುತ್ತದೆ ಎಂಬ ಮಾತನ್ನು ಎಲ್ಲೆಡೆ ಹಬ್ಬಿಸಲಾಗಿತ್ತು. ಮುಂಬರುವ ಬಜೆಟ್ ನಲ್ಲಿ ಈ ಯೋಜನೆ ಮುಂದುವರೆಯುತ್ತದೆ ಎಂದು ತಿಳಿಸಿದರು. 

ನುಡಿದಂತೆ ನಡೆದಿದ್ದೇವೆ ಸಿದ್ರಾಮಯ್ಯ ಸರ್ಕಾರ, ಈ ಯೋಜನೆಗಳಿಂದ ರಾಜ್ಯದಲ್ಲಿ ಬಡಕುಟುಂಬದವರಿಗೆ ಹಾಗೂ ನಾಡಿನ ಜನತೆಗೆ ಬಹಳ ಒಳ್ಳೆಯದಾಗಿದೆ ಎಂದು ನಾವು ಹೇಳುತ್ತಿಲ್ಲ, ಸ್ವತಃ ಜನರೇ ಹೇಳಿರುವುದು” ಎಂದು ತರೀಕೆರೆ ಕ್ಷೇತ್ರ ಶಾಸಕ ಜಿ. ಎಚ್ ಶ್ರೀನಿವಾಸ್ ಮಾತಾಡಿದರು.

“ಡಾ. ವಾಸು ಎಚ್. ವಿ ಅವರು ತುಂಬ ಸುಲಭವಾಗಿ ಗ್ಯಾರಂಟಿ ಯೋಜನೆಗಳ ಕುರಿತು ನಮ್ಮೆಲರಿಗೂ ತಿಳಿಸಿ ಕೊಟ್ಟಿದ್ದಾರೆ. ನನಗೂ ಕೆಲವೊಂದು ಗೊತ್ತಿಲ್ಲದ ಮಾಹಿತಿಯನ್ನು ಇವರಿಂದ ಪಡೆಯಲಾಯಿತು.  ಈ 5 ಯೋಜನೆಗಳಿಂದ ನಮ್ಮ ಜಿಲ್ಲೆಯಲ್ಲಿ ಅದೆಷ್ಟೋ ಕುಟುಂಬವು ಬದುಕು ನಡೆಸುತ್ತಿದ್ದಾರೆ. ಎಲ್ಲೂ ಹಣವನ್ನು ದುರ್ಬಳಕೆ ಮಾಡದಂತೆ ನೇರವಾಗಿ ಗ್ರಾಹಕರ ಖಾತೆಗೆ ಸೇರುತ್ತದೆ. ಈ ಯೋಜನೆಯಿಂದ ಮಹಿಳೆಯರು ಸಬಲೀಕರಣವಾಗಬೇಕು” ಎಂದು ಮೂಡಿಗೆರೆ ಕ್ಷೇತ್ರ ಶಾಸಕಿ ನಯನ ಮೋಟಮ್ಮ ಮಾತಾಡಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಪುಷ್ಪ ಮಾತನಾಡಿ ” ಗಂಡಸರಿಗಿಂತ ಹೆಚ್ಚು ಕೆಲಸ ಮಹಿಳೆಯರು ಮಾಡುತ್ತಾರೆ. ಧೈರ್ಯದಿಂದ ನಾವು ಮಾತಾಡಬೇಕಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಶಸ್ವಿನಿಂದ ಕಾರ್ಯಕ್ರಮ ನೆರವೇರಿದೆ ಎಂದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಅಧ್ಯಕ್ಷರು ರೇವಣ್ಣನವರು “ಶೃಂಗೇರಿ ಮೂಲದ ಹೆಣ್ಣು ಮಗಳು ಶಕ್ತಿ ಯೋಜನೆ ಬಂದಿಲ್ಲವೆಂದು ತಿಳಿಸಿದರು. ಆದರೇ, 3ಯೋಜನೆ ಅವರಿಗೆ ದೊರಕುತ್ತಿದೆ. ಯೋಜನೆ ತಲುಪುತ್ತಿಲ್ಲವೆಂದರೆ ಯೋಜನೆ ಅನುಷ್ಠಾನಗೊಳಿಸಲು ನಾವು ಇರೋದು ಎಂದು ತಿಳಿಸಿದರು. 

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು |  ಕಾರ್ಮಿಕ ಮಹಿಳೆ ಬಲಿ ಪಡೆದ ಕಾಡಾನೆ ಸೆರೆ 

ಕಾರ್ಯಕ್ರಮದ ಅಂತಿಮದಲ್ಲಿ ನಾಡಗೀತೆಯ ಮೂಲಕ ಕೊನೆಗೊಳಿಸಲಾಯಿತು. ಈ ವೇಳೆ ಜಿಲ್ಲೆಯ ಎಲ್ಲಾ ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರು, ಸದಸ್ಯರು, ತಾಲೂಕುಗಳಿಂದ ನೆರದಿದ್ದ ಮಹಿಳೆಯರು, ಹೆಚ್. ಎಸ್ ಕೀರ್ತನಾ, ಮಂಜುನಾಥ್, ಯೋಗಾನಂದ್, ನಾಗೇಂದ್ರ, ಖಾಲಂದರ್ ಖಾನ್, ಶ್ರೀನಿವಾಸ್ ಆಲದಾರ್ತಿ, ಡಾ. ಅಂಶುಮಂತ್ ಭದ್ರಾ ಕಾಡಾ ಅಧ್ಯಕ್ಷ, ಹೆಚ್. ಪಿ ಮಂಜೇಗೌಡ, ಕ್ಯಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಇನ್ನಿತರರು ಭಾಗವಹಿಸಿದ್ದರು.

WhatsApp Image 2024 10 24 at 12.02.30
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...