ದಲಿತ ಚಳವಳಿಯ ಹಿರಿಯಣ್ಣ ಪ್ರೊ. ಬಿ ಕೃಷ್ಣಪ್ಪ

Date:

ಇಂದು (ಜೂನ್‌ 09) ದಲಿತ ಚಳವಳಿಯ ನಾಯಕ ಪ್ರೊ. ಬಿ ಕೃಷ್ಣಪ್ಪ ಅವರ ಜನ್ಮದಿನ. ರಾಜ್ಯದಲ್ಲಿ ದಲಿತ ಧ್ವನಿಗೂ ವೇದಿಕೆ ಬೇಕು, ಆ ಧ್ವನಿ ವಿಧಾನಸೌಧಕ್ಕೆ ಕೇಳಬೇಕೆಂದು ಶ್ರಮಿಸಿದವರು ಬಿ ಕೃಷ್ಣಪ್ಪ. ಅವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ

ಕರ್ನಾಟಕದ ದಲಿತ ಚಳವಳಿಯು ಹುಟ್ಟಿಗೆ ಕಾರಣರಾದವರಲ್ಲಿ ಮೊದಲಿಗರಾದ ಪ್ರೊ. ಬಿ ಕೃಷ್ಣಪ್ಪ ಇಡೀ ದೇಶದಲ್ಲೆ ವಿಶಿಷ್ಟವಾದ ದಲಿತ ಚಳವಳಿಯನ್ನು ಮುನ್ನಡೆಸಿದ ನಾಯಕ. ಕರ್ನಾಟಕದ ದಲಿತ ಚಳವಳಿ ಕೇವಲ ತಳಸಮುದಾಯಗಳ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳ ವಿರುದ್ಧದ ಹೋರಾಟಕ್ಕೆ ಅಷ್ಟೇ ಸೀಮಿತವಾಗದೆ ರಾಜ್ಯದ ಅನೇಕ ಕಡೆ ನಡೆಸಿದ ಭೂ ಹೋರಾಟಗಳಿಂದ ಸಾವಿರಾರು ಎಕರೆ ಭೂಮಿ ದಲಿತರಿಗೆ ಸಿಕ್ಕಿದೆ.

ಇವತ್ತಿಗೂ ಎಷ್ಟೊ ಹಳ್ಳಿಗಳಲ್ಲಿ ದಲಿತರು ಸತ್ತರೆ ಹೂಳುವುದಕ್ಕೆ ಅಂಗೈ ಅಗಲದ ಜಾಗವಿಲ್ಲದ ಪರಿಸ್ಥಿತಿ ಇರುವಾಗ ದಲಿತ ಚಳವಳಿ ಎಪ್ಪತ್ತು ಎಂಬತ್ತರ ದಶಕದಲ್ಲಿ ಭೂ ಹೋರಾಟಗಳನ್ನು ನಡೆಸಿ ಸಾವಿರಾರು ಎಕರೆ ಭೂಮಿಯನ್ನು ದಲಿತರಿಗೆ ಕೊಡಿಸಿತು. ಅಲ್ಲದೆ ‘ಭೂ ಪರಭಾರೆ ಕಾಯ್ದೆ’ ಜಾರಿಗೆ ಕಾರಣವಾಯಿತು. ಈ ಹೋರಾಟಗಳ ನೇತೃತ್ವ ಬಿ ಕೃಷ್ಣಪ್ಪ ಅವರದು.

ಚಂದ್ರಗುತ್ತಿ ಬೆತ್ತಲೆ ಸೇವೆಯ ನಿಷೇಧಕ್ಕಾಗಿ ಬಿಕೆ ರೂಪಿಸಿದ ಹೋರಾಟದ ಹಿಂದೆ ಸಾಂಪ್ರದಾಯಿಕ ಸಮಾಜವನ್ನು ಎದರು ಹಾಕಿಕೊಂಡು ನಡೆಸಿದ ಹೋರಾಟದ ಕುರಿತು ಅಧ್ಯಯನ ಮಾಡಿದರೆ ದಲಿತ ಚಳವಳಿಯ ಚಿಕಿತ್ಸಕ ಗುಣ ಅರ್ಥವಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದಲಿತ ಚಳವಳಿ ಎಡಪಂಥೀಯ ಚಿಂತನೆ ಮತ್ತು ಲೋಹಿಯಾ ಸಮಾಜವಾದದ ಪ್ರಭಾವದಿಂದ ಸಂಪೂರ್ಣವಾಗಿ ಬಿಡಿಸಿಕೊಳ್ಳಲು ಸಾಧ್ಯವಾಗದಿದ್ದರೂ ಬಿಕೆಯವರ ಕಾರಣಕ್ಕೆ ಅದಕ್ಕೆ ಅಂಬೇಡ್ಕರ್‌ವಾದಿ ದೃಷ್ಟಿಕೋನ ದಕ್ಕಿತ್ತು.

ಈ ಲೇಖನ ಓದಿದ್ದೀರಾ?: ಗ್ಯಾರಂಟಿ ಗಲಾಟೆಯಲ್ಲಿ ಕಾಣೆಯಾಯಿತು ಒಕ್ಕೂಟ ಸರ್ಕಾರ ಮಾಡುತ್ತಿರುವ ಅನ್ಯಾಯದ ಚರ್ಚೆ

ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅಂಬೇಡ್ಕರ್‌ವಾದಿ ನೋಟಕ್ರಮದಿಂದ ಗ್ರಹಿಸಿ ಬಿಕೆಯವರು ಎತ್ತಿದ ಗಂಭೀರ ಪ್ರಶ್ನೆಗಳು ಅವತ್ತಿಗಿಂತಲೂ ಇವತ್ತಿಗೆ ಹೆಚ್ಚು ಪ್ರಸ್ತುತವಾಗುತ್ತಿರುವುದು ಅವರ ಚಿಂತನೆಗೆ ಇರುವ ಮಹತ್ವವನ್ನು ತೋರಿಸುತ್ತದೆ.

ಬಿ.ಕೃಷ್ಣಪ್ಪನವರನ್ನು ನೆನಪು ಮಾಡಿಕೊಳ್ಳವುದರ ಜೊತೆಗೆ ಭೂ ಹೋರಾಟಗಳು ಮತ್ತು ಚಂದ್ರಗುತ್ತಿ ಪ್ರಕರಣದಂತಹ ಹೋರಾಟಗಳಿಗೆ ಬಿಕೆಯವರು ನೀಡಿದ ಕೊಡುಗೆ, ಸಾಹಿತ್ಯ ವಿಮರ್ಶೆಯ ಬರಹಗಳ ಮೂಲಕ ಎತ್ತಿದ ಪ್ರಶ್ನೆಗಳ ಅಧ್ಯಯನ ಮಾಡಬೇಕಿದೆ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...