ದರ್ಶನ್‌ನ ಸ್ತ್ರೀ ವಿರೋಧಿ, ಕೊಲ್ಲುವ ಮನಸ್ಥಿತಿಗೆ ಬಲಪಂಥೀಯ ಸಿದ್ದಾಂತ ಕಾರಣ! ಆತನ ಸೈದ್ದಾಂತಿಕ ಗುರು ಯಾರು ಗೊತ್ತೇ?

Date:

ದರ್ಶನ್‌ನ ನಟನಾ ಗುರು ಅಡ್ಡಂಡ ಕಾರ್ಯಪ್ಪ ದರ್ಶನ್‌ಗಿಂತಲೂ ಕೆಳಮಟ್ಟದ ಆಲೋಚನೆ ಹೊಂದಿರುವವರು. ದರ್ಶನ್ ಮತ್ತು ಅಡ್ಡಂಡ ಕಾರ್ಯಪ್ಪರನ್ನು ತೂಗಿದರೆ ಒಳ್ಳೆಯತನದಲ್ಲಿ ಗುರುವಿಗಿಂತ ದರ್ಶನ್ ಒಂದು ಹಿಡಿಯಷ್ಟಾದರೂ ಹೆಚ್ಚಿಗೆ ತೂಗುತ್ತಾರೆ. ಅಂತಹ ನೀಚಾತಿ ನೀಚ ರಂಗಕರ್ಮಿ ಯಾರಿಗಾದರೂ ಗುರುವಾದರೆ ದರ್ಶನ್‌ನಂತಹ ಶಿಷ್ಯರೇ ಹುಟ್ಟುತ್ತಾರೆ.

ಭಜರಂಗದಳದ ಜಿಲ್ಲಾ ಪ್ರಮುಖ್ ಮಟ್ಟದ ನಾಯಕ ರೇಣುಕಾಸ್ವಾಮಿಯನ್ನು ಕೊಂದ ನಟ ದರ್ಶನ್ ನಡವಳಿಕೆ ಈಗ ಎಲ್ಲೆಡೆ ಚರ್ಚೆ ಆಗ್ತಿದೆ. ರೇಣುಕಾಸ್ವಾಮಿಯ ಕೊಲೆಯೊಂದೇ ಚರ್ಚೆಯ ವಿಷಯವಲ್ಲದೇ, ಈ ಹಿಂದೆ ದರ್ಶನ್ ತನ್ನ ಪತ್ನಿ, ಜನಸಾಮಾನ್ಯರು, ಮಹಿಳೆಯರ ಬಗ್ಗೆ ನೀಡಿದ ಹೇಳಿಕೆ, ನಡವಳಿಕೆಗಳು ಈಗ ಚರ್ಚೆಗೆ ಒಳಪಡುತ್ತಿದೆ. ದರ್ಶನ್ ಯಾಕೆ ಹೀಗಾದರು? ಅವರ ಈ ಕ್ರೂರ ನಡವಳಿಕೆಗಳಿಗೆ ಕಾರಣರಾರು ಎಂಬ ಚರ್ಚೆ ನಡೆಯುತ್ತಿದೆ.

ದರ್ಶನ್ ತನ್ನ ಪತ್ನಿ ವಿಜಯಲಕ್ಷ್ಮಿಗೆ ಹೊಡೆದಾಗ “ನನ್ನ ಪತ್ನಿಗೆ ಹೊಡೆಯದೇ ಪಕ್ಕದ ಮನೆಯವನ ಪತ್ನಿಗೆ ಹೊಡೆಯೋಕೆ ಆಗುತ್ತಾ? ನಾನೇನು ನಿಮ್ಮ ಪತ್ನಿಗೆ ಹೊಡೆದಿದ್ನಾ?” ಎಂದು ಪ್ರಶ್ನಿಸಿದ್ದರು. ಸಾವಿರಾರು ಜನರಿದ್ದ ಸಭೆಯಲ್ಲಿ “ನನ್ನಂತಹ ಡ್ಯಾಶ್ ಡ್ಯಾಶ್ ಜನ ಇನ್ನೊಬ್ಬ ಇಲ್ಲ. ಗೊತ್ತಿರ್ಲಿ” ಅಂತ ದರ್ಶನ್ ಅಸಹ್ಯವಾಗಿ ಬೆದರಿಕೆ ಒಡ್ಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪವಿತ್ರಾ ಗೌಡ ಮತ್ತು ದರ್ಶನ್ ಬಗ್ಗೆ ವಿವಾದ ಎದ್ದಾಗ, “ಇವತ್ತೊಬ್ಳು ಬರ್ತಾಳೆ, ನಾಳೆ ಒಬ್ಳು ಎದ್ದು ಹೋಗ್ತಿರ್ತಾಳೆ. ಹೋಗಲೇ ನಿ*ಮ್ಮನ್… ಅದಕ್ಕೆಲ್ಲಾ ಯಾರು ತಲೆಕೆಡಿಸ್ಕೋತಾರೆ” ಎಂದು ಬಹಿರಂಗ ಸಭೆಯಲ್ಲಿ ಹೇಳಿ ಚಪ್ಪಾಳೆ ಶಿಳ್ಳೆ ಗಿಟ್ಟಿಸಿಕೊಂಡಿದ್ದರು.

ಇದೆಲ್ಲದರ ಮುಂದುವರೆದ ಬೆಳವಣಿಗೆಯೇ ಬ್ಯಾಡ್ ಕಮೆಂಟ್ ಮಾಡಿದ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿ ತಾನೇ ಶೆಡ್‌ನಲ್ಲಿ ಅಕ್ರಮ ಬಂಧನದಲ್ಲಿ ಇರಿಸಿಕೊಂಡು, ಹೀನಾಯವಾಗಿ ಹಿಂಸಿಸಿ ಸಾವಿನ ‘ಶಿಕ್ಷೆ’ಯನ್ನು ದರ್ಶನ್ ನೀಡಿದರು. ಬಹುಶಃ ಪತ್ನಿಗೆ ಹೊಡೆದಿದ್ದನ್ನು ಸಮರ್ಥಿಸಿದ್ದ ದರ್ಶನ್, ಜೈಲಿನಿಂದ ಹೊರಬಂದು ಕೊಲೆಯನ್ನೂ ಸಮರ್ಥಿಸಬಹುದು.

ಒಬ್ಬ ರಂಗಕರ್ಮಿ ಎಂದರೆ ದಿನಕಳೆದಂತೆ ಸಾಮಾಜಿಕ ಚಿಂತಕನಾಗುತ್ತಾ ಹೋಗುತ್ತಾನೆ. ಆದರೆ ಈ ನಟ ದರ್ಶನ್ ಯಾಕೆ ಹೀಗಾದ ಎನ್ನುವುದಕ್ಕೆ ಉತ್ತರ ಸ್ಪಷ್ಟವಿದೆ. ಸಹಜವಾಗಿ ನಟರು, ರಂಗ ಕಲಾವಿದರು ಎಂದರೆ ಲಿಂಗಸೂಕ್ಷ್ಮತೆ, ಜಾತ್ಯತೀತತೆ ಮತ್ತು ವಿಶಾಲ ಮನೋಭಾವವನ್ನು ತಕ್ಕಮಟ್ಟಿಗಾದರೂ ಹೊಂದಿರುತ್ತಾರೆ. ಆದರೆ ದುರದೃಷ್ಟವಶಾತ್ ದರ್ಶನ್ ಇಂತಹ ಮನೋಭಾವ ಬೆಳೆಸುವ ಗುರು, ರಂಗಶಾಲೆಯಿಂದ ವಂಚಿತರಾದರು.‌ ಬದಲಾಗಿ ಸ್ತ್ರೀ ವಿರೋಧಿ, ಸಮಾನತೆಯ ವಿರೋಧಿ ಅಡ್ಡಂಡ ಕಾರ್ಯಪ್ಪನೆಂಬ ಮನುವಾದಿ ಗುರು ದರ್ಶನ್‌ ಗೆ ಸಿಕ್ಕರು. ದರ್ಶನ್‌ಗೆ ಮೊದಲು ಬಣ್ಣ ಹಚ್ಚಿದ್ದು, ನಟನೆ ಕಲಿಸಿದ್ದೇ ಈ ಅಡ್ಡಂಡ ಕಾರ್ಯಪ್ಪ. ಆದ್ದರಿಂದಲೇ ದರ್ಶನ್ ಉಳಿದ ನಟರಂತೆ ಲಿಂಗಸೂಕ್ಷ್ಮತೆ, ಜಾತ್ಯತೀತತೆ, ವಿಶಾಲ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯವಾಗಲಿಲ್ಲ.

ದರ್ಶನ್ ಗುರು ಅಡ್ಡಂಡ ಕಾರ್ಯಪ್ಪ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಂಗಾಯಣದ ಅಧ್ಯಕ್ಷರಾಗಿದ್ದರು. ಟಿಪ್ಪು ನಿಜಕನಸುಗಳು ಎಂಬ ಟಿಪ್ಪು ವಿರೋಧಿ, ಮುಸ್ಲಿಂ ವಿರೋಧಿ ನಾಟಕ ಪ್ರದರ್ಶಿಸಿ ಸಮಾಜವನ್ನು ಹಿಂದೂ ಮುಸ್ಲಿಂ ಎಂದು ಒಡೆದವರು. ರಾಜ್ಯದ ಪ್ರತಿಷ್ಠಿತ ರಂಗಾಯಣದ ಅಧ್ಯಕ್ಷರಾಗಿದ್ದಷ್ಟೂ ದಿನ ಸಮಾನತೆಯ ವಿರೋಧಿಯಾಗಿ ಕೆಲಸ ಮಾಡಿದವರು.

ದರ್ಶನ್‌ನ ನಟನಾ ಗುರು ಅಡ್ಡಂಡ ಕಾರ್ಯಪ್ಪ ದರ್ಶನ್‌ಗಿಂತಲೂ ಕೆಳಮಟ್ಟದ ಆಲೋಚನೆ ಹೊಂದಿರುವವರು. ದರ್ಶನ್ ಮತ್ತು ಅಡ್ಡಂಡ ಕಾರ್ಯಪ್ಪರನ್ನು ತೂಗಿದರೆ ಒಳ್ಳೆಯತನದಲ್ಲಿ ಗುರುವಿಗಿಂತ ದರ್ಶನ್ ಒಂದು ಹಿಡಿಯಷ್ಟಾದರೂ ಹೆಚ್ಚಿಗೆ ತೂಗುತ್ತಾರೆ. ಅಂತಹ ನೀಚಾತಿ ನೀಚ ರಂಗಕರ್ಮಿ ಯಾರಿಗಾದರೂ ಗುರುವಾದರೆ ದರ್ಶನ್‌ನಂತಹ ಶಿಷ್ಯರೇ ಹುಟ್ಟುತ್ತಾರೆ.

darshanpavitra

ತಮ್ಮ ಶಿಷ್ಯ ದರ್ಶನ್ ಪ್ರಕರಣದ ಬಗ್ಗೆ ಏನ್ ಹೇಳ್ತೀರಿ ಎಂದು ಮಾಧ್ಯಮದವರು ಅಡ್ಡಂಡ ಕಾರ್ಯಪ್ಪನವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಅಡ್ಡಂಡ ಕಾರ್ಯಪ್ಪ ಕೊಟ್ಟ ಉತ್ತರ ಕೇಳಿದರೆ ಅದಕ್ಕಿಂತ ದರ್ಶನ್ ಕೈಲಿ ಒದೆ ತಿಂದು ಸಾಯೋದೇ ಮೇಲು ಅನ್ನಿಸದೇ ಇರದು.

“ಹೆಣ್ಣು ಮತ್ತು ಹೆಂಡದ ನಶೆ ದರ್ಶನ್‌ಗೆ ಈ ಸ್ಥಿತಿ ತಂದಿಟ್ಟಿದೆ. ಪವಿತ್ರಾಗೌಡ ಆತನ ಪಾಲಿಗೆ ಶನಿ ಆಗಿದ್ದಾಳೆ. ಅವನ ನಡವಳಿಕೆಗಳು ತೀರಾ ಕೆಟ್ಟಿದ್ದವು. ಹೆಂಡ ಮತ್ತು ಹೆಣ್ಣು ಅವನನ್ನು ಪ್ರಪಾತಕ್ಕೆ ತಳ್ಳಿದೆ. ಹೆಂಡ ಮತ್ತು ಹೆಣ್ಣು ಎರಡೂ ಕೂಡ ಒಬ್ಬ ಮನುಷ್ಯನನ್ನು ಹಾಳು ಮಾಡುತ್ತದೆ. ಅದೇ ರೀತಿ ಇದೇ ಅವನನ್ನು ಹಾಳು ಮಾಡಿದೆ. ತನ್ನ ತಪ್ಪನ್ನು ಅವನು ಒಪ್ಪಿಕೊಳ್ಳಬೇಕು” ಎಂದು ದರ್ಶನ್ ಗೆ ನಟನೆ ಕಲಿಸಿದ ಮೊದಲ ಗುರು ಅಡ್ಡಂಡ ಕಾರ್ಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಅಡ್ಡಂಡ ಕಾರ್ಯಪ್ಪ ಎಂಬ ಬಲಪಂಥೀಯ ಬುದ್ದಿಜೀವಿಗೆ ಹೆಣ್ಣು ಮತ್ತು ಹೆಂಡ ಎರಡೂ ಒಂದೇ. ಎರಡರ ಸಹವಾಸವೂ ಪ್ರಪಾತಕ್ಕೆ ತಳ್ಳುತ್ತದೆಯಂತೆ. ಅಡ್ಡಂಡ 2024ನೇ ಇಸವಿಯಲ್ಲಿ ಬದುಕುತ್ತಿದ್ದರೂ ಇನ್ನೂ ಸ್ತ್ರೀ ಸಮಾನತೆಯ ಮನಸ್ಥಿತಿಯೇ ಬಂದಿಲ್ಲ ಎಂದರೆ ಅದೆಂತಹ ಗುರು ದರ್ಶನ್ ಸಿಕ್ಕಿದರು. ಇಂತಹ ಗುರುವಿನ ಶಿಷ್ಯರು ಪತ್ನಿಗೆ ಹೊಡೆದು ಸಮರ್ಥಿಸದೇ ಇನ್ನೇನು ಮಾಡ್ತಾರೆ?

ಪವಿತ್ರಾ ಗೌಡ ಮತ್ತು ದರ್ಶನ್ ಸಂಬಂಧ ಮೂರನೆಯವರಿಗೆ ಸಂಬಂಧಿಸಿದ ವಿಷಯವಲ್ಲ. ಆದರೆ ಪವಿತ್ರಾ ಗೌಡ ದರ್ಶನ್ ಪಾಲಿನ ಶನಿ ಎನ್ನುವುದು ಅಡ್ಡಂಡ ಕಾರ್ಯಪ್ಪನ ಸ್ತ್ರೀ ವಿರೋಧಿ ನೀಚ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ರಾಮಾಯಣ, ಮಹಾಭಾರತದಿಂದ ಹಿಡಿದು ದರ್ಶನ್ ವರೆಗೆ ಅವಾಂತರಗಳಿಗೆಲ್ಲಾ ಮಹಿಳೆಯೇ ಕಾರಣ ಎಂಬ ಮನುವಾದಿ ಮನಸ್ಥಿತಿಯೇ ಅಡ್ಡಂಡ ಕಾರ್ಯಪ್ಪನಿಂದ ಈ ಹೇಳಿಕೆ ಕೊಡಿಸಿದೆ. ಇಂತಹ ಗುರುವಿಗೆ ತಕ್ಕದಾದ ಶಿಷ್ಯ ದರ್ಶನ್ ರೂಪುಗೊಂಡಿದ್ದಾರೆ.

ಸ್ತ್ರೀ ವಿರೋಧಿ, ಕೊಲೆಯ ಮನಸ್ಥಿತಿ ದರ್ಶನ್ ಬಂದಿರುವುದೇ ಇಂತಹ ಗುರುಗಳಿಂದ! ಬಲಪಂಥೀಯ ಮನುವಾದಿ ಸಿದ್ದಾಂತವೇ ಸ್ತ್ರೀ ವಿರೋಧಿಯಾಗಿರುವಂಥದ್ದು. ಆದ್ದರಿಂದಲೇ ರೇಣುಕಾಸ್ವಾಮಿ ಎಂಬ ಭಜರಂಗದಳದ ನಾಯಕ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಫೋಟೋ ಮತ್ತು ಕಮೆಂಟ್ ಮಾಡುತ್ತಾರೆ ! ಒಂದು ಕಡೆ ತನ್ನ ಮಿದುಳು ತುಂಬಿರೋ ಸ್ತ್ರೀ ವಿರೋಧಿ ಗುರು ಅಡ್ಡಂಡ, ಇನ್ನೊಂದೆಡೆ ಸ್ತ್ರೀ ವಿರೋಧಿ ರೇಣುಕಾಸ್ವಾಮಿಯಂತವರ ಮಧ್ಯೆ ದರ್ಶನ್ ಎಂಬ ನಟ ಸ್ತ್ರೀಯರ ವಿಚಾರದಲ್ಲಿ ಕ್ರೂರಿಯೂ ಹಂತಕನೂ ಆಗಿ ರೂಪುಗೊಂಡ.

ಇದನ್ನು ಓದಿದ್ದೀರಾ? ನೀಟ್ ಬದಲು ರಾಜ್ಯಗಳೇ ಪ್ರವೇಶ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಅವಕಾಶ ನೀಡಲಿ: ಡಿ ಕೆ ಶಿವಕುಮಾರ್

ಹಾಗಾಗಿ, ದರ್ಶನ್ ಅವನತಿಗೆ ಅವರ ಅಭಿಮಾನಿಗಳೋ, ಪವಿತ್ರಾ ಗೌಡರೋ ಕಾರಣರಲ್ಲ. ಬದಲಾಗಿ‌ ಅಡ್ಡಂಡ ಕಾರ್ಯಪ್ಪರಂತಹ ಮನುವಾದಿ ರಂಗ ಗುರುಗಳೇ ದರ್ಶನ್‌ನ ಇಂದಿನ ಈ ಸ್ಥಿತಿಗೆ ಕಾರಣ.

Naveen suringe
ನವೀನ್‌ ಸೂರಿಂಜೆ
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ನವೀನ್‌ ಸೂರಿಂಜೆ
ನವೀನ್‌ ಸೂರಿಂಜೆ
ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

UAPA ದುರ್ಬಳಕೆ; ವಿಕಸಿತ ಭಾರತಕ್ಕೆ ಶೋಭೆ ತರಲ್ಲ: ಮೋಶಾ ಆಡಳಿತಕ್ಕೆ ಸುಪ್ರೀಂ ನ್ಯಾಯಮೂರ್ತಿ ತಪರಾಕಿ

"2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಮಾಡುವ ರಾಜಕೀಯ ಮುಖಂಡರ ಗುರಿಯಲ್ಲಿ...

ಕೇರಳ ಚುನಾವಣೆ | ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಮೇಲಿದೆ 242 ಕ್ರಿಮಿನಲ್ ಪ್ರಕರಣಗಳು

ಏಪ್ರಿಲ್ 9ರಂದು ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಅಭ್ಯರ್ಥಿಗಳು...

ಸರ್ಕಾರಿ ಅಧಿಕಾರಿಯ ಆತ್ಮಹತ್ಯೆ ಪ್ರಕರಣ: ಪಂಜಾಬ್ ಮಾಜಿ ಸಚಿವ ಲಾಲ್ಜಿತ್ ವಿರುದ್ಧ ಎಫ್‌ಐಆರ್

ಪಂಜಾಬ್ ರಾಜ್ಯ ಗೋದಾಮು ನಿಗಮದ (ಪಿಎಸ್‌ಡಬ್ಲ್ಯೂಸಿ) ಜಿಲ್ಲಾ ವ್ಯವಸ್ಥಾಪಕ ಗಗನ್‌ದೀಪ್ ಸಿಂಗ್...

ಕೇರಳ | ಭಿನ್ನಮತೀಯರಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಆಗಲ್ಲ: ಸಿಪಿಐಎಂ

ಕೇರಳದಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್‌ಡಿಎಫ್, ಯುಡಿಎಫ್‌,...