ದಾವಣಗೆರೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ)ಯ ಜಿಲ್ಲಾ ಘಟಕದಿಂದ ಭಾನುವಾರವಷ್ಟೇ ಅಗಲಿದ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಚಿರಶಾಂತಿ ಸಿಗಲೆಂದು ದಾವಣಗೆರೆ ಜಿಲ್ಲಾ ಘಟಕದಿಂದ ಡಾ. ಮೋದಿ ವೃತ್ತದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಭಾವಚಿತ್ರಕ್ಕೆ ಪೂಜಿಸಿ ಪುಷ್ಪ ನಮನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ “ಶಾಮನೂರು ಶಿವಶಂಕರಪ್ಪ ಮಧ್ಯಮ ವರ್ಗದ ಧ್ವನಿ” ಎಂದು ಕೆಲವೇ ಅಧ್ಯಕ್ಷ ರಾಮೇಗೌಡ ಬಣ್ಣಿಸಿದರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನಮನ ಸಲ್ಲಿಸಿ ಕರವೇ ಜಿಲ್ಲಾ ಅಧ್ಯಕ್ಷರಾದ ರಾಮೇಗೌಡ ಮಾತನಾಡಿ “ಮಧ್ಯಮ ವರ್ಗದ ಧ್ವನಿಯಾಗಿ ನಿಂತವರು ಶಾಮನೂರು ಶಿವಶಂಕರಪ್ಪನವರು. ದಾವಣಗೆರೆಗೆ ಶೈಕ್ಷಣಿಕವಾಗಿ ಜ್ಞಾನಕಾಶಿ ಎಂಬ ಬಿರುದು ಬರಲು ಶಿವಶಂಕರಪ್ಪ ಅವರೇ ಕಾರಣ. ಇಂಥಹ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿರುವುದು ದಾವಣಗೆರೆಗೆ ತುಂಬಲಾಗದ ನಷ್ಟ. ಪಾದಚಾರಿ ವ್ಯಾಪಾರಿಗಳಿಗೆ ವ್ಯವಸ್ಥಿತವಾಗಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಶಾಮನೂರು ಶಿವಶಂಕರಪ್ಪ ಅವರಿಗೆ ವಿನಂತಿಸಿದಾಗ ಕಳೆದ 20 ವರ್ಷಗಳಿಂದ ಒದಗಿಸಿ ಕೊಡದಿದ್ದನ್ನು, ಶಾಮನೂರು ಶಿವಶಂಕರಪ್ಪ ಅವರು ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ತಿಳಿಸಿ ಅವರ ಪರಿಶ್ರಮದಿಂದ ಪುಟ್ಬಾತ್ ವ್ಯಾಪಾರಿಗಳಿಗೆ ಸರ್ಕಾರದ ವತಿಯಿಂದ ಆಹಾರ ಘಟಕವನ್ನು ನಿರ್ಮಿಸಿ ಕೊಡುವಲ್ಲಿ ಶಿವಶಂಕರಪ್ಪ ಅವರ ಪಾತ್ರ ಬಹಳ ಪ್ರಮುಖವಾಗಿತ್ತು” ಎಂದು ಸ್ಮರಿಸಿದರು.

“ಎಷ್ಟೋ ಕಡು ಬಡವ ವಿದ್ಯಾರ್ಥಿಗಳಿಗೆ ಮತ್ತು ಪತ್ರಕರ್ತರ ಮಕ್ಕಳಿಗೆ ಸ್ಕಾಲರ್ಶಿಪ್ ಕೊಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವಂತ ಕೆಲಸ ಮತ್ತು ದಾವಣಗೆರೆ, ರಾಜ್ಯ, ಹೊರ ರಾಜ್ಯದ ದೇವಸ್ಥಾನಗಳಿಗೆ ಅಭಿವೃದ್ಧಿಗೆ ಹಣ ನೀಡಿರುವುದರ ಮೂಲಕ ಶಿವಶಂಕರಪ್ಪ ಅವರು ಕೊಡುಗೆ ದಾನಿಯಾಗಿದ್ದರು. ಜನತೆಗೆ ಕಣ್ಣ ಮುಂದೆ ಕಾಣುವಂತೆ ಶಿವಶಂಕರಪ್ಪ ಅವರು ಅಪಾರ ಕೊಡುಗೆ ನೀಡಿದ್ದಾರೆ. ಇಂಥ ಮಹಾನ್ ವ್ಯಕ್ತಿ ನಗರದಲ್ಲಿ ಮತ್ತೊಬ್ಬ ಹುಟ್ಟುವುದು ಸಾದ್ಯವಿಲ್ಲ” ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆಯಲ್ಲಿ ಕಾಂಗ್ರೆಸ್ ಎಂದರೆ ಶಾಮನೂರು ಎಂಬಂತಿದ್ದ ಶಾಮನೂರು ಶಿವಶಂಕರಪ್ಪ ನಿಧನ
ಇಂದು ಸಂಜೆ ಡಾ. ಮೋದಿ ವೃತ್ತದಲ್ಲಿರುವ ಕರವೇ ಫುಡ್ ಕೋರ್ಟ್ ನ ಎಲ್ಲಾ ಹೋಟೆಲುಗಳನ್ನು ಬಂದ್ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮಹಿಳಾ ಘಟಕ ಅಧ್ಯಕ್ಷೆ ಶ್ರೀಮತಿ ಬಸಮ್ಮ, ಮಂಜುಳಾ ಗಣೇಶ್, ಸಲ್ಮಾಭಾನು, ಸಾಕಮ್ಮ ಬಾಯಿ, ಮಂಜುಳಮ್ಮ, ಜಿಲ್ಲಾ ಉಪಾಧ್ಯಕ್ಷರಾದ ಮಂಜುಶ್ರೀ ಗೌಡ, ಗಿರೀಶ್ ಕುಮಾರ್, ಗೋಪಾಲ್ ದೇವರ ಮನೆ, ಓ ಮಹೇಶ್ವರಪ್ಪ, ಸುರೇಶ್, ಚಂದ್ರು, ತುಳಸಿರಾಮ್, ಬಸವರಾಜ್, ಸಂಜು, ನಾಗರಾಜ್, ಭಾಷಾ, ದಾದಾಪೀರ್, ಅಕ್ಷಯ್, ಕಾರ್ತಿ, ರಮೇಶ್, ಸಾಗರ್, ನಾಗರಾಜ್, ಕರಿಬಸಪ್ಪ , ಸಂಜು, ಮತ್ತಿತರರು ಉಪಸ್ಥಿತರಿದ್ದರು.





