ಲೋಕಸಭೆ ಚುನಾವಣೆ ಫಲಿತಾಂಶ ಭಾರತದ ಜನತೆಯ ಗೆಲುವು, ಇದು ಪ್ರಧಾನಿ ನರೇಂದ್ರ ಮೋದಿಯವರ ಅಹಂಕಾರದ ಸೋಲು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ಲೋಕಸಭೆ ಚುನಾವಣೆಯು ತಮ್ಮ ಹೆಸರಲ್ಲಿ ಬಿಜೆಪಿಗೆ ಮತ ಕೇಳಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜನಾದೇಶವಾಗಿದೆ. ಇದು ಅವರ ನೈತಿಕ ಮತ್ತು ರಾಜಕೀಯ ಸೋಲು” ಎಂದಿದ್ದಾರೆ.
LIVE: Special press briefing by Congress President Shri @kharge and Shri @RahulGandhi at AICC HQ | Lok Sabha Election Results 2024 https://t.co/LdXvZERpJW
— Congress (@INCIndia) June 4, 2024
ಬಿಜೆಪಿ ಕಾಂಗ್ರೆಸ್ ಖಾತೆಯನ್ನು ಸೀಝ್ ಮಾಡಿತು. ಏಜೆನ್ಸಿಗಳನ್ನು ಬಳಿಸಿತು. ಆದರೆ ಸಂವಿಧಾನದ ಉಳಿವಾಗಿದೆ ಎಂದು ಹೇಳಿದ ಖರ್ಗೆ ಅಧಿಕ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು.
ಇದನ್ನು ಓದಿದ್ದೀರಾ? ಅಮೇಥಿಯಲ್ಲಿ ಮುರಿದ ಸ್ಮೃತಿ ಇರಾನಿಯ ಅಹಂಕಾರ; ಎರಡೂ ಕಡೆ ಗೆದ್ದ ರಾಹುಲ್
ಜೊತೆಗೆ ಇಂಡಿಯಾ ಕೂಟಕ್ಕೂ ಧನ್ಯವಾದ ತಿಳಿಸಿದ ಖರ್ಗೆ, ಸಂವಿಧಾನ ಉಳಿವಿಗಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಈ ಲೋಕಸಭೆ ಚುನಾವಣೆ ಬರೀ ಒಂದು ಪಕ್ಷದ ವಿರುದ್ಧ ನಡೆಸಿದ ಸ್ಪರ್ಧೆಯಲ್ಲ, ಬಿಜೆಪಿ, ಹಿಂದೂಸ್ತಾನದ ಸಂಸ್ಥೆಗಳು, ಸಿಬಿಐ, ಇಡಿ ವಿರುದ್ಧದ ಹೋರಾಟವಾಗಿದೆ. ಯಾಕೆಂದರೆ ಈ ಸಂಸ್ಥೆಗಳನ್ನು ಅಮಿತ್ ಶಾ, ನರೇಂದ್ರ ಮೋದಿಯವರು ಹಿಡಿತದಲ್ಲಿರಿಸಿದ್ದಾರೆ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ರಾಯಬರೇಲಿಯಲ್ಲಿ ರಾಹುಲ್ ಗಾಂಧಿಗೆ ಗೆಲುವು, ವಯನಾಡಿನಲ್ಲಿ ಭಾರಿ ಮುನ್ನಡೆ
ಇನ್ನು ಇಂಡಿಯಾ ಒಕ್ಕೂಟ ವಿಪಕ್ಷವಾಗಿರುತ್ತದೆಯೇ ಅಥವಾ ಸರ್ಕಾರ ರಚಿಸುವ ಪ್ರಯತ್ನ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ನಾವು ನಮ್ಮ ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳೊಂದಿಗೆ ನಾಳೆ ಸಭೆ ನಡೆಸುತ್ತೇವೆ. ಈ ಪ್ರಶ್ನೆಗಳನ್ನು ಅಲ್ಲಿಯೇ ಎತ್ತಲಾಗುವುದು ಮತ್ತು ಅದಾದ ಬಳಿಕ ಉತ್ತರಿಸಲಾಗುವುದು. ನಾವು ಮಿತ್ರ ಪಕ್ಷಕ್ಕೆ ಗೌರವ ನೀಡುತ್ತೇವೆ, ಅವರೊಂದಿಗೆ ಚರ್ಚಿಸದೆ ಯಾವುದೇ ಹೇಳಿಕೆಯನ್ನು ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.





