‘ಈ ದಿನ’ ವಿಶ್ಲೇಷಣೆ | ಮೋದಿತ್ವದ ಅಬ್ಬರಕ್ಕೆ ಲಗಾಮು ಹಾಕಿದ ಅಸಾಧಾರಣ ಜನಾದೇಶ

Date:

ಎನ್.ಡಿ.ಎ.ಗೆ ಬಹುಮತ ಸಿಕ್ಕಿದೆ. ಆದರೆ ಅದನ್ನು ಮೋದಿಯವರಿಗೆ ದೊರೆತ ಜನಾದೇಶ ಎಂದು ಭಾವಿಸುವಂತಿಲ್ಲ. ಬಿಜೆಪಿಗೆ ಸರಳ ಬಹುಮತವೂ ದಕ್ಕದೆ ಹೋದರೆ ಅದನ್ನು ನರೇಂದ್ರ ಮೋದಿಯವರ ನೈತಿಕ ಸೋಲು ಎಂದೇ ಕರೆಯಬೇಕಾಗುತ್ತದೆ. ಬಿಜೆಪಿಯ ಉತ್ತರಪ್ರದೇಶ ಭದ್ರಕೋಟೆಯಲ್ಲಿ ಭಾರೀ ಬಿರುಕು ಮೂಡಿದೆ.

 

ಮೋದಿತ್ವದ ಅಬ್ಬರಕ್ಕೆ ಲಗಾಮು ಹಾಕಿದ್ದಾರೆ ಭಾರತದ ಮತದಾರರು. ಮೋದಿಯವರು ಹತ್ತು ವರ್ಷಗಳ ಕಾಲ ಅಂಚಿಗೆ ನೂಕಿದ್ದ ಹೊಟ್ಟೆ ಬಟ್ಟೆಯ ಚಿಂತೆಯನ್ನು ಪುನಃ ಚುನಾವಣಾ ಚರ್ಚೆಗೆ ತಂದಿದ್ದಾರೆ. ತಾಯಿ ಗರ್ಭದಿಂದ ಜೈವಿಕವಾಗಿ ಜನಿಸುವುದೇ ಸ್ವಾಭಾವಿಕ, ಅಯೋನಿಜ ಎಂದು ಹೇಳಿಕೊಂಡು ಪರಮಾತ್ಮನಾಗುವುದು ಬೇಡ ಎಂದಿದ್ದಾರೆ. ವ್ಯಕ್ತಿಪೂಜೆ ಮತ್ತು ಕೋಮುವಾದಿ ರಾಜಕಾರಣಕ್ಕೆ ಅಸಮ್ಮತಿ ಸೂಚಿಸಿದ್ದಾರೆ.

ಸಂವಿಧಾನವನ್ನು ಬದಲಾಯಿಸಿ ಮೀಸಲಾತಿಗೆ ವಿಪತ್ತು ತರುವರೆಂಬ ಶಂಕೆಯು ಉತ್ತರಪ್ರದೇಶದ ದಲಿತರಿಂದ ಜಾಣತನದ ಮತದಾನ ಮಾಡಿಸಿರುವ ಸುಳಿವುಗಳಿವೆ. ನೆಲ ಮರೆತು ಆಕಾಶದಲ್ಲಿ ಹಾರಾಡುತ್ತಿದ್ದವರನ್ನು ಪುನಃ ನೆಲದ ನೆನಪು ಮಾಡಿಕೊಟ್ಟಿರುವುದು ಈ ಫಲಿತಾಂಶಗಳ ಅಗ್ಗಳಿಕೆ. ಗೆಲುವಿನ ಹೊಸ್ತಿಲಿನಲ್ಲಿ ನಿಲ್ಲಿಸಿ ಸರಳ ಬಹುಮತದ ಗೆಲುವನ್ನು ಕೂಡ ನಿರಾಕರಿಸಿ ಅತ್ತಲೂ ಇಲ್ಲ, ಇತ್ತಲೂ ಇಲ್ಲ ಎಂಬಂತೆ ತೂಗು ಹಾಕಿ ಮೋದಿಯವರನ್ನು ಮಿತ್ರಪಕ್ಷಗಳ ಮರ್ಜಿಗೆ ಒಪ್ಪಿಸಿರುವ ಅಸಾಧಾರಣ ಫಲಿತಾಂಶವಿದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎನ್.ಡಿ.ಎ.ಗೆ ಬಹುಮತ ಸಿಕ್ಕಿದೆ. ಆದರೆ ಅದನ್ನು ಮೋದಿಯವರಿಗೆ ದೊರೆತ ಜನಾದೇಶ ಎಂದು ಭಾವಿಸುವಂತಿಲ್ಲ. ಬಿಜೆಪಿಗೆ ಸರಳ ಬಹುಮತವೂ ದಕ್ಕದೆ ಹೋದರೆ ಅದನ್ನು ನರೇಂದ್ರ ಮೋದಿಯವರ ನೈತಿಕ ಸೋಲು ಎಂದೇ ಕರೆಯಬೇಕಾಗುತ್ತದೆ. ಬಿಜೆಪಿಯ ಉತ್ತರಪ್ರದೇಶ ಭದ್ರಕೋಟೆಯಲ್ಲಿ ಭಾರೀ ಬಿರುಕು ಮೂಡಿದೆ. ದೇಶಾದ್ಯಂತ ಬಿಜೆಪಿ ವೋಟುಗಳನ್ನು ಪ್ರಮಾಣ ತಗ್ಗಿದೆ. ಆದರೆ ಈ ಪ್ರಮಾಣ ಪ್ರತಿಪಕ್ಷಕ್ಕೆ ಸೀಟುಗಳಾಗಿ ಬದಲಾಗಿಲ್ಲ.

uttar pradesh 1

ಕಣ್ಸನ್ನೆಯೇ ಕಟ್ಟಾಜ್ಞೆಯೆಂಬಂತೆ ನಡು ಬಾಗಿಸುವವರ ಮುಂದೆ ಅಭಿಷಿಕ್ತ ಸಾಮ್ರಾಟನಂತೆ ಮೆರೆದ ಮೋದಿಯವರು ಮಿತ್ರಪಕ್ಷಗಳ ಮರ್ಜಿಯಲ್ಲಿ ಮತ್ತೆ ಪ್ರಧಾನಿಯಾಗಲು ಬಯಸುವರೇ? ಎನ್.ಡಿ.ಎ ಸ್ರಾಕರದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಬಿಜೆಪಿಯ ಮೇಲೆ ಮೋದಿ-ಶಾ ಅವರ ಉಕ್ಕಿನ ಹಿಡಿತ ಜಾರುವಂತೆ ತೋರುತ್ತಿದೆ. ಪಕ್ಷದ ಹಣೆಬರೆಹ ಬರೆಯುತ್ತಿದ್ದ ಈ ಜೋಡಿಯ ವಿರುದ್ಧ ಅತೃಪ್ತಿಯ ಅಪಸ್ವರಗಳು ಏಳುವುದು ಸ್ವಾಭಾವಿಕ. ಇಳಿಎಣಿಕೆ ಶುರುವಾದರೆ ಆಶ್ಚರ್ಯಪಡಬೇಕಿಲ್ಲ.

ಮೋದಿಯವರನ್ನು ಸುಳ್ಳು ಸುಳ್ಳೇ ಆಕಾಶಕ್ಕೆ ಏರಿಸಿದ್ದ ಮತಗಟ್ಟೆ ಸಮೀಕ್ಷೆಗಳು ಮಣ್ಣು ಮುಕ್ಕಿವೆ. ಹತ್ತು ವರ್ಷಗಳ ಬಿಡುವಿನ ನಂತರ ಸಮ್ಮಿಶ್ರ ಸರ್ಕಾರದ ದಿನಗಳು ವಾಪಸು ಬಂದಿವೆ. ಕಮಂಡಲದ ಮುಂದೆ ಸಂಪೂರ್ಣ ಸೋತು ಸೊರಗಿದ್ದ ಮಂಡಲ್ ತುಸುವಾದರೂ ಚೇತರಿಕೆ ಕಂಡಿದೆ. ಪ್ರಾದೇಶಿಕ ಪಕ್ಷಗಳ ರಾಜಕಾರಣವನ್ನು ಮುಗಿಸಿಬಿಡುವ ಹುನ್ನಾರಕ್ಕೆ ಭಾರೀ  ಹಿ ಉತ್ತರ ಪ್ರದೇಶದಲ್ಲಿ ‘ಪಿಛಡಾ ದಲಿತ್ ಅಲ್ಪಸಂಖ್ಯಾತ್’ (ಅಹಿಂದ) ಮತಗಳ ಮೇಲೆ ಕಣ್ಣಿರಿಸಿ ಅಖಿಲೇಶ್ ಯಾದವ್ ಅವರು ಕಾಂಗ್ರೆಸ್ ಜೊತೆಗೂಡಿ ಹೆಣೆದಿದ್ದ ಚುನಾವಣಾ ವ್ಯೂಹಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ.

ಚುನಾವಣೆಯಲ್ಲಿ ಪ್ರತಿಪಕ್ಷಗಳ ಕೈ ಕಾಲು ಕಟ್ಟಿ ಹಾಕದೆ ಸಮಾನ ಅವಕಾಶ ನೀಡಿದ್ದರೆ ಈ ಚುನಾವಣೆ ಫಲಿತಾಂಶಗಳು ಬೇರೆಯೇ ಆಗಿರುತ್ತಿದ್ದವು. ಎನ್.ಡಿ.ಎ. ಜಾಗದಲ್ಲಿ ಇಂಡಿಯಾ ಒಕ್ಕೂಟ ಇರಬಹುದಿತ್ತು, ಇಂಡಿಯಾ ಒಕ್ಕೂಟದ ಜಾಗಕ್ಕೆ ಎನ್.ಡಿ.ಎ.ಕುಸಿಯಬಹುದಿತ್ತು.

ದಟ್ಟವಾಗಿ ಕವಿಯಬಹುದಿದ್ದ ಸರ್ವಾಧಿಕಾರದ ಅಪಾಯದಿಂದ ದೇಶವನ್ನು ಪಾರು ಮಾಡಿದ್ದಾರೆ ಮತದಾರರು. ಪ್ರತಿಪಕ್ಷಗಳಿಗೆ ಬಲ ತುಂಬಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್.ಸಿ.ಪಿ.ಯ ಮನೆಮುರುಕರಾದ ಶಿಂಧೆ ಮತ್ತು ಅಜಿತ್ ಪವಾರ್ ಗೆ ಪಾಠ ಕಲಿಸಿದ್ದಾರೆ. ಈ ಅಪಹರಣದ ಸೂತ್ರಧಾರ ಬಿಜೆಪಿಯನ್ನೂ ಬಿಡದೆ ಶಿಕ್ಷಿಸಿದ್ದಾರೆ ಮಹಾರಾಷ್ಟ್ರದ ಮತದಾರರು. ನಕಲಿ ಶಿವಸೇನೆ ಮತ್ತು ನಕಲಿ ಎನ್.ಸಿ.ಪಿ. ಯಾವುದೆಂದು ತೋರಿಸಿಕೊಟ್ಟಿದ್ದಾರೆ. ಸದ್ಯದಲ್ಲೇ ಕದ ಬಡಿದಿರುವ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗಳು ಬಿಜೆಪಿ ಮತ್ತು ಮಿತ್ರಪಕ್ಷಗಳಿಗೆ ಕಡು ಕಠಿಣವಾಗಲಿವೆ ಎಂಬ ಭವಿಷ್ಯವನ್ನು ಫಲಿತಾಂಶಗಳು ನಿಚ್ಚಳವಾಗಿ ಹೇಳಿವೆ.

ಸರ್ವಾಧಿಕಾರ, ಭಯ ಭೀತಿ ಹುಟ್ಟಿಸುವ ರಾಜಕಾರಣ, ಪ್ರತಿಪಕ್ಷಗಳ ದಮನ, ಮೇರೆಯಿಲ್ಲದ ದುರಹಂಕಾರವನ್ನು ಮತದಾರರು ಒಪ್ಪಿಲ್ಲ. ಆಡಳಿತಯಂತ್ರ, ಗೋದಿ ಮೀಡಿಯಾ, ಸಾಂವಿಧಾನಿಕ ಸಂಸ್ಥೆಗಳು, ಹಣಬಲ, ಏಜೆನ್ಸಿಗಳನ್ನು ಬಗಲಿಗಿಟ್ಟುಕೊಂಡೂ ಬಹುಮತ ಪಡೆಯಲು ಬಹುಮತಕ್ಕೆ ತಿಣುಕಾಡಿದೆ ಬಿಜೆಪಿ.

ಒಡಿಶಾ ನವೀನ್ ಪಟ್ನಾಯಕ್ ಜೊತೆಯೇ ಉಳಿದಿದ್ದರೆ ಬಿಜೆಪಿಯ ಸಂಖ್ಯೆ ಮತ್ತಷ್ಟು ಕುಸಿಯುತ್ತಿತ್ತು. ಆಂಧ್ರದಲ್ಲಿ ಚಂದ್ರಬಾಬು ಜೊತೆ ಕೈ ಜೋಡಿಸದೆ ಹೋಗಿದ್ದರೆ ಎನ್.ಡಿ.ಎ. ಸಂಖ್ಯೆ 300 ಗಡಿಯನ್ನು ಸಮೀಪಿಸುತ್ತಿರಲಿಲ್ಲ.

ಟಿಎಂಸಿ

ದ್ರಾವಿಡ ನಾಡಿನ ತಮಿಳು ಮತದಾರರು ಮೋದಿಯವರ ಸೆಂಗೋಲ್ ಮತ್ತು ತಿರುಕ್ಕುರುಳ್ ನಾಟಕಕ್ಕೆ ಮಾರು ಹೋಗಿಲ್ಲ. ಬಿಜೆಪಿ ನಗಾರಿ ಬಾರಿಸಿ ಸಾರಿದ್ದ ಅಣ್ಣಾಮಲೈ ಎಂಬ ನೀರುಗುಳ್ಳೆಯನ್ನು ಒಡೆದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ತಾವು ಈಗಲೂ ಬಹುದೊಡ್ಡ ರಾಜಕೀಯ ಶಕ್ತಿ ಎಂದು ರುಜುವಾತು ಮಾಡಿ ಬಿಜೆಪಿಯನ್ನು ಕೆಡವಿದ್ದಾರೆ ಮಮತಾ ಬ್ಯಾನರ್ಜಿ.

ಚುನಾವಣೆಗೆ ಮುನ್ನ ನಾಲ್ಕು ನಿರ್ಣಾಯಕ ಮೈತ್ರಿಗಳನ್ನು ಮಾಡಿಕೊಳ್ಳದೆ ಹೋಗಿದ್ದರೆ ಬಿಜೆಪಿ ಮತ್ತಷ್ಟು ತಾಪತ್ರಯ ಎದುರಿಸಬೇಕಿತ್ತು. ಆಂಧ್ರದ ತೆಲುಗುದೇಶಂ ಪಾರ್ಟಿ, ಬಿಹಾರದ ಜೆ.ಡಿ.ಯು, ಮತ್ತು ಚಿರಾಗ್ ಪಾಸ್ವಾನ್ ಅವರ ಎಲ್.ಜೆ,ಪಿ ಕರ್ನಾಟಕದ ಜಾತ್ಯತೀತ ಜನತಾದಳ, ಪಶ್ಚಿಮೀ ಉತ್ತರಪ್ರದೇಶದ ಜಯಂತ್ ಚೌಧರಿ ನೇತೃತ್ವದ ಜಾಟ್ ಪಕ್ಷವಾದ ರಾಷ್ಟ್ರೀಯ ಲೋಕದಳದ ಜೊತೆಗಿನ ಮೈತ್ರಿಗಳು ಎನ್.ಡಿ.ಎ.ಗೆ ಬಹುಮತ ತಂದು ಕೊಟ್ಟಿವೆ.

2014ರ ಚುನಾವಣೆಯಲ್ಲಿ ಮತದಾರರನ್ನು ಸೂಜಿಗಲ್ಲಿನಂತೆ ಸೆಳೆದ ಘೋಷಣೆ ‘ಅಚ್ಛೇ ದಿನ್’. ಏರಿಕೆ ನಿರುದ್ಯೋಗದ ಸಮಸ್ಯೆಗಳ ಉರಿಯಲ್ಲಿ ಬೇಯುತ್ತಿರುವ ಜನಕೋಟಿಗೆ ಒಳ್ಳೆಯ ದಿನಗಳು ಇನ್ನೂ ಮರಳುಗಾಡಿನ ಮರೀಚಿಕೆ. ಬಡವರು-ಸಿರಿವಂತರ ನಡುವಣ ಭಾರೀ ಕಂದಕ ಭಾರತದಲ್ಲಿ ಹಿಗ್ಗುತ್ತಲೇ ನಡೆದಿದೆ. ಈ ಭೇದ ಭಾವ ಸಹಜ ಸ್ವಾಭಾವಿಕ, ಈ ತರತಮ ಇಲ್ಲದಿದ್ದರೆ ಹೇಗೆ ಎಂದು ವಾದಿಸಿದ ಮೋದಿಯವರು ಈ ದೇಶದ ದೀನ ದರಿದ್ರರ ಪರವಾಗಿರುವುದಾದರೂ ಹೇಗೆ?

ಉತ್ತರಪ್ರದೇಶದಲ್ಲಿ ಭಾರೀ ರಾಜಕೀಯ ಭೂಕಂಪ ಉಂಟಾಗಿದೆ. ಮೇಲ್ನೋಟಕ್ಕೆ ಕಾಣದ ಅಂತರ್ವಾಹಿನಿಯೊಂದು ಹರಿದಿದೆ. ಯಾರದೇ ಪರ ಅಥವಾ ವಿರುದ್ಧ ಅಲೆಯಿಲ್ಲದ ಈ ಚುನಾವಣೆಯಲ್ಲಿ ಅದೃಶ್ಯ ಮತದಾರರ ಶಕ್ತಿ ಸರ್ವಾಧಿಕಾರಕ್ಕೆ ಸೆಡ್ಡು ಹೊಡೆದಿದೆ.

ರಾಮಮಂದಿರ ರಾಜಕಾರಣದ ಕೇಂದ್ರಬಿಂದುವಾದ ಅಯೋಧ್ಯೆ- ಫೈಜಾಬಾದ್  ಕ್ಷೇತ್ರದ ಸೋಲು ಬಿಜೆಪಿಗೆ ಆಗಿರುವ ಬಹುದೊಡ್ಡ ಮುಖಭಂಗ. ರಾಮಮನೋಹರ ಲೋಹಿಯಾ ಮತ್ತು ಕವಿ ಕುಂವರ್ ನಾರಾಯಣ್ ಜನಿಸಿದ ನೆಲವಿದು. ದಲಿತರು ಗಣನೀಯ ಸಂಖ್ಯೆಯಲ್ಲಿರುವ ಕ್ಷೇತ್ರ ಅಯೋಧ್ಯೆ. ಇಲ್ಲಿ ಬಿಜೆಪಿ ಅಭ್ಯರ್ಥಿಯನ್ನು  ಸೋಲಿಸಿರುವ ಅವಧೇಶ್ ಪ್ರಸಾದ್ ಅವರು ಸಮಾಜವಾದಿ ಪಾರ್ಟಿಯ ಹಿರಿಯ ದಲಿತ ನಾಯಕ. ಸಮಾಜವಾದಿ ಪಾರ್ಟಿ ಹುಟ್ಟಿದಾಗಿನಿಂದ ಆ ಪಕ್ಷದ ಜೊತೆ ಇರುವವರು. ಮುಲಾಯಂ ಅವರ ಸಮಕಾಲೀನರು. ಫೈಜಾಬಾದ್ ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದವರು. ಈ ಕ್ಷೇತ್ರದ ಮಿಲ್ಕೀಪುರ ವಿಧಾನಸಭಾ ಕ್ಷೇತ್ರದಿಂದ ಒಂಬತ್ತು ಸಲ ಆರಿಸಿ ಬಂದಿರುವವರು. ಐದು ಸಲ ಕ್ಯಾಬಿನೆಟ್ ಮಂತ್ರಿ ಆಗಿದ್ದವರು. ಕಳೆದ ಎರಡೂ ಸಲ ಬಿಜೆಪಿಯ ಲಲ್ಲೂಸಿಂಗ್ ಅವರನ್ನು ಈ ಕ್ಷೇತ್ರ ಗೆಲ್ಲಿಸಿತ್ತು. ಈ ಸಲವೂ ಅವರನ್ನೇ ಹೂಡಿತ್ತು ಬಿಜೆಪಿ.

ದಿವಂಗತ ಪ್ರಧಾನಿ ಮತ್ತು ಸಮಾಜವಾದಿ ನಾಯಕ ಚಂದ್ರಶೇಖರ್ ಅವರ ಕ್ಷೇತ್ರ ಬಲಿಯಾ. ಅವರ ಮಗ ನೀರಜ್ ಶೇಖರ್ ಅವರು ಬಿಜೆಪಿ ಅಭ್ಯರ್ಥಿಯಾಗಿ ನಿಂತು ಸೋತಿದ್ದಾರೆ. ಸಮಾಜವಾದಿ ಪಾರ್ಟಿಯ ಸನಾತನ ಪಾಂಡೆ ಇಲ್ಲಿ ಗೆದ್ದಿದ್ದಾರೆ. ನೀರಜ್ ಸಮಾಜವಾದಿ ಪಾರ್ಟಿಯಲ್ಲಿದ್ದು ರಾಜ್ಯಸಭಾ ಸದಸ್ಯರಾಗಿದ್ದರು. 2019ರಲ್ಲಿ ರಾಜೀನಾಮೆ ನೀಡಿ ಬಿಜೆಪಿ ಸೇರಿದವರು.

ಮೋದಿಯವರು ಮೂರನೆಯ ಸಲ ಮಿತ್ರ ಪಕ್ಷಗಳ ಮರ್ಜಿ ಕಾದು ಪ್ರಧಾನಿಯಾಗಲು ಒಪ್ಪುವರೇ ಅಥವಾ ದೇಶ ಬೇರೊಬ್ಬ ಪ್ರಧಾನಿಯನ್ನು ಕಾಣುವುದೇ ಎಂದು ಕಾದು ನೋಡಬೇಕಿದೆ.

WhatsApp Image 2025 11 17 at 4.03.10 PM
ಡಿ ಉಮಾಪತಿ
+ posts

ಹಿರಿಯ ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...