ಚುನಾವಣಾ ಬಾಂಡ್ | ತನಿಖಾ ಸಂಸ್ಥೆಗಳ ದಾಳಿ ಬಳಿಕ ದೇಣಿಗೆ ನೀಡಿದ ಔಷಧ-ಆರೋಗ್ಯ ಸಂಸ್ಥೆಗಳಿವು

Date:

ಎಸ್‌ಬಿಐ ಒದಗಿಸಿದ ಮತ್ತು ಚುನಾವಣಾ ಆಯೋಗ ಪ್ರಕಟಿಸಿದ ಚುನಾವಣಾ ಬಾಂಡ್‌ಗಳ ವಿವರಗಳಲ್ಲಿ ಸಾಕಷ್ಟು ವಿಚಾರಗಳು ಬಯಲಾಗುತ್ತಿವೆ. ಆರೋಗ್ಯ ಮತ್ತು ಔಷಧೀಯ ವಲಯದಿಂದಲೂ ನೂರಾರು ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಲಾಗಿದೆ ಎಂಬುದು ಗಮನಾರ್ಹ. ಅದರಲ್ಲೂ ಕೆಲವು ಔಷಧ ಮತ್ತು ಆರೋಗ್ಯ ಸಂಸ್ಥೆಗಳು ತಮ್ಮ ವಿರುದ್ಧ ತನಿಖಾ ಸಂಸ್ಥೆಗಳು ದಾಳಿ ನಡೆದ ಬಳಿಕ, ಬಾಂಡ್‌ಗಳನ್ನು ಖರೀದಿಸಿವೆ ಮತ್ತು ರಾಜಕೀಯ ಪಕ್ಷಗಳಿಗೆ ನೀಡಿವೆ.

ಆರೋಗ್ಯ ವಲಯದಲ್ಲಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಪಟ್ಟಿಯಲ್ಲಿ ‘ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ಯು ಮೊದಲ ಸ್ಥಾನದಲ್ಲಿದೆ. ಈ ಸಂಸ್ಥೆ, ತಲಾ 1 ಕೋಟಿ ರೂ. ಮೌಲ್ಯದ 162 ಬಾಂಡ್‌ಗಳನ್ನು ಖರೀದಿಸಿದೆ. ಡಾ. ರೆಡ್ಡೀಸ್ ಲ್ಯಾಬೊರೇಟರೀಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದು, ತಲಾ 1 ಕೋಟಿ ರೂ.ಗಳ 80 ಬಾಂಡ್‌ಗಳನ್ನು ಖರೀದಿಸಿ, ಪಕ್ಷಗಳಿಗೆ ನೀಡಿದೆ.

ಇತರ ಗಮನಾರ್ಹ ಕಂಪನಿಗಳು ಸಿಪ್ಲಾ, ಸನ್ ಅಂಡ್‌ ಭಾರತ್ ಬಯೋಟೆಕ್ ಸೇರಿವೆ. ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಅಂತಹ 15 ಕಂಪನಿಗಳ ಕ್ಯುರೇಟೆಡ್ ಪಟ್ಟಿ ಇಲ್ಲಿದೆ. ಇವುಗಳಲ್ಲಿ ಹಲವಾರು ಕಂಪನಿಗಳು ತನಿಖಾ ಸಂಸ್ಥೆಗಳಿಂದ ದಾಳಿಗಳು ಮತ್ತು ತನಿಖೆಗಳನ್ನು ಎದುರಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಯಶೋದಾ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್
162 ಬಾಂಡ್‌ಗಳ ಮೂಲಕ ಒಟ್ಟು 162 ಕೋಟಿ ರೂ. ದೇಣಿಗೆ ನೀಡಿದೆ. ಈ ಕಾರ್ಪೊರೇಟ್ ಆಸ್ಪತ್ರೆಯ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು 2020ರ ಡಿಸೆಂಬರ್‌ನಲ್ಲಿ ದಾಳಿ ನಡೆಸಿದ್ದರು.

ಡಾ.ರೆಡ್ಡಿ ಲ್ಯಾಬೋರೇಟರೀಸ್ ಲಿ
80 ಬಾಂಡ್‌ಗಳ ಮೂಲಕ ಒಟ್ಟು 80 ಕೋಟಿ ರೂ. ದೇಣಿಗೆ ನೀಡಿದೆ. ಈ ಸಂಸ್ಥೆಯ 2023ರ ನವೆಂಬರ್‌ನಲ್ಲಿ

ತೆರಿಗೆ ವಂಚನೆ ಆರೋಪದ ಮೇಲೆ ಐಟಿ ಅಧಿಕಾರಿಗಳ ದಾಳಿಗೆ ಒಳಗಾಗಿತ್ತು. ಡಾ ರೆಡ್ಡೀಸ್ ಲ್ಯಾಬೋರೇಟರೀಸ್‌ನ ಡಾ. ಕೆ ನಾಗೇಂದ್ರ ರೆಡ್ಡಿ ಮೇಲೆ ಮೇಲೆ ದಾಳಿ ನಡೆದಿತ್ತು.

ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್
ಈ ಸಂಸ್ಥೆಯು 91 ಬಾಂಡ್‌ಗಳ ಮೂಲಕ ಒಟ್ಟು 77.5 ಕೋಟಿ ರೂ. ದೇಣಿಗೆ ನೀಡಿದೆ.

ನ್ಯಾಟ್ಕೊ ಫಾರ್ಮಾ ಲಿಮಿಟೆಡ್
76 ಬಾಂಡ್‌ಗಳು – ಒಟ್ಟು 69.25 ಕೋಟಿ ರೂ. ದೇಣಿಗೆ.

ಹೆಟೆರೊ ಗ್ರೂಪ್ಸ್‌
ಹೆಟೆರೋ ಗ್ರೂಪ್ಸ್‌ನಲ್ಲಿ ಹೆಟೆರೋ ಡ್ರಗ್ಸ್ ಲಿಮಿಟೆಡ್, ಹೆಟೆರೊ ಲ್ಯಾಬ್ಸ್ ಲಿಮಿಟೆಡ್, ಹೆಟೆರೊ ಬಯೋಫಾರ್ಮಾ ಲಿಮಿಟೆಡ್ ಸಂಸ್ಥೆಗಳಿವೆ.

ಈ ಗ್ರೂಪ್‌ 60 ಬಾಂಡ್‌ಗಳ ಮೂಲಕ ಒಟ್ಟು 60 ಕೋಟಿ ರೂ. ದೇಣಿಗೆ ನೀಡಿದೆ.

ಈ ಸಂಸ್ಥೆಯ ಮೇಲೆ ಐಟಿ ದಾಳಿ ನಡೆಸಿತ್ತು. ಆಗ, 550 ಕೋಟಿ ರೂ. ಲೆಕ್ಕಕ್ಕೆ ಸಿಗದ ಆದಾಯ ಪತ್ತೆಯಾಗಿದೆ.

ದಿವಿ ಎಸ್ ಲ್ಯಾಬೋರೇಟರೀಸ್ ಲಿಮಿಟೆಡ್
ಸಂಸ್ಥೆಯು 55 ಬಾಂಡ್‌ಗಳ ಮೂಲಕ ಒಟ್ಟು 55 ಕೋಟಿ ರೂ. ದೇಣಿಗೆ ನೀಡಿದೆ.

ಹೈದರಾಬಾದ್ ಮೂಲದ ದಿವಿ ಎಸ್ ಲ್ಯಾಬೊರೇಟರಿ ಮೇಲೆ 2019ರ ಫೆಬ್ರವರಿಯಲ್ಲಿ ಐಟಿ ದಾಳಿ ನಡೆದಿತ್ತು.

ಅರಬಿಂದೋ ಫಾರ್ಮಾ ಲಿಮಿಟೆಡ್
70 ಬಾಂಡ್‌ಗಳು – ಒಟ್ಟು 52 ಕೋಟಿ ರೂ. ದೇಣಿಗೆ

ಜಾರಿ ನಿರ್ದೇಶನಾಲಯವು 2022ರ ನವೆಂಬರ್‌ನಲ್ಲಿ ಅರಬಿಂದೋ ಫಾರ್ಮಾದ ನಿರ್ದೇಶಕ ಶರತ್ ರೆಡ್ಡಿಯನ್ನು ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಬಂಧಿಸಿದೆ.

ಸಿಪ್ಲಾ ಲಿಮಿಟೆಡ್
41 ಬಾಂಡ್‌ಗಳು – ಒಟ್ಟು 39.2 ಕೋಟಿ ರೂ. ದೇಣಿಗೆ

ಎಂಎಸ್‌ಎನ್‌ ಫಾರ್ಮಾಚೆಮ್, ಎಂಎಸ್‌ಎನ್‌ ಲ್ಯಾಬೋರೇಟರೀಸ್, ಎಂಎಸ್‌ಎನ್‌ ಆಗರ್ಗಾನಿಕ್ಸ್‌ ಪ್ರೈ. ಲಿ.
38 ಬಾಂಡ್‌ಗಳು – ಒಟ್ಟು 38 ಕೋಟಿ ರೂ. ದೇಣಿಗೆ

ಆದಾಯ ತೆರಿಗೆ ಇಲಾಖೆಯು 2021ರಲ್ಲಿ ಎಂಎಸ್‌ಎನ್ ಫಾರ್ಮಾ ಮತ್ತು ಅದರ ಕಚೇರಿಗಳ ಮೇಲೆ ದಾಳಿ ನಡೆಸಿತ್ತು.

ಸನ್ ಫಾರ್ಮಾ ಲ್ಯಾಬೊರೇಟರೀಸ್ ಲಿಮಿಟೆಡ್
36 ಬಾಂಡ್‌ಗಳು ಒಟ್ಟು 31.5 ಕೋಟಿ ರೂ. ದೇಣಿಗೆ

ಮ್ಯಾನ್‌ಕೈಂಡ್ ಫಾರ್ಮಾ ಲಿಮಿಟೆಡ್
30 ಬಾಂಡ್‌ಗಳು – ಒಟ್ಟು 24.6 ಕೋಟಿ ರೂ. ದೇಣಿಗೆ

ತೆರಿಗೆ ವಂಚನೆ ಆರೋಪದ ಮೇಲೆ ಮೇ 11 ರಂದು ಆದಾಯ ತೆರಿಗೆ ಇಲಾಖೆ ಮ್ಯಾನ್‌ಕೈಂಡ್ ಫಾರ್ಮಾದ ಮೇಲೆ ದಾಳಿ ನಡೆಸಿತ್ತು.

ಇಂಟಾಸ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್
20 ಬಾಂಡ್‌ಗಳು – ಒಟ್ಟು 20 ಕೋಟಿ ರೂ. ದೇಣಿಗೆ

ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್
10 ಬಾಂಡ್‌ಗಳು – ಒಟ್ಟು 10 ಕೋಟಿ ರೂ. ದೇಣಿಗೆ

ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್
21 ಬಾಂಡ್‌ಗಳು – ಒಟ್ಟು 9.75 ಕೋಟಿ ರೂ. ದೇಣಿಗೆ

ಕಿರಣ್ ಮಜುಂದಾರ್ ಶಾ
6 ಬಾಂಡ್‌ಗಳು ಒಟ್ಟು 6 ಕೋಟಿ ರೂ. ದೇಣಿಗೆ

ಅಂಕಿಅಂಶಗಳ ಪ್ರಕಾರ, ಮೇಲೆ ಹೆಸರಿಸಲಾದ ಎಲ್ಲ ಕಂಪನಿಗಳು ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಒಟ್ಟು ಮೌಲ್ಯವು 900 ಕೋಟಿ ರೂ. ಆಗಿದೆ.

ಈ ವರದಿ ಓದಿದ್ದೀರಾ?: ಚುನಾವಣಾ ಬಾಂಡ್ | ಔಷಧ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ 7 ಕಂಪನಿಗಳು ಬಾಂಡ್‌ ಖರೀದಿಸಿವೆ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...