ಚುನಾವಣಾ ಫಲಿತಾಂಶ | ಹುಸಿ ಸಮಾಧಾನಗಳು ಮರೆಸಬಾರದ ಕೆಲವು ಗಂಭೀರ ಪ್ರಶ್ನೆಗಳು

Date:


ಕರ್ನಾಟಕ, ಪಶ್ಚಿಮ ಬಂಗಾಳದ ಉಪಚುನಾವಣೆಗಳನ್ನು ಬಿಟ್ಟರೆ ಮಿಕ್ಕ ಎಲ್ಲ ಕಡೆ ಫ್ಯಾಶಿಸ್ಟ್ ಬಿಜೆಪಿ ಲೋಕಸಭಾ ಪೆಟ್ಟಿನಿಂದ ಪಾಠ ಕಲಿತು ಬಲವರ್ಧನೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಇಂತಹ ಸಮಯದಲ್ಲಿ, ಫ್ಯಾಶಿಷ್ಟರನ್ನು ಸೋಲಿಸಿ ಪ್ರಜತಂತ್ರವನ್ನು ಉಳಿಸಬಯಸುವ ಶಕ್ತಿಗಳು ಹುಸಿ ಸಮಾಧಾನಗಳಿಗೆ ಬಲಿಯಾಗದೆ ಕೆಲವು ಅಸಲಿ ಪ್ರಶ್ನೆಗಳಿಗೆ ಎದುರಾಗಬೇಕಿದೆ.

ಗೆದ್ದ ಮಹಾರಾಷ್ಟ್ರದಲ್ಲಿ ಬಿಜೆಪಿ ಓಟು ಹೆಚ್ಚಿದೆ. ಆದರೆ, ಸೋತ ಜಾರ್ಖಂಡಿನಲ್ಲಿ ಬಿಜೆಪಿ ಓಟು
ಕಡಿಮೆಯಾಗಿಲ್ಲ. ಅಂದರೆ, ಲೋಕಸಭೆಯಲ್ಲಿ ಬಿಜೆಪಿಯ ಸಂವಿಧಾನ ವೈರವನ್ನು ಅರ್ಥಮಾಡಿಕೊಂಡಿದ್ದ ತಳ ಸಮುದಾಯಗಳು ಮತ್ತೆ ಬಿಜೆಪಿ ಕಡೆ ಸರಿದಿವೆ. ಅದಕ್ಕೆ ಬಿಜೆಪಿಯ ಸಮಾರೋಪದಿಯ out reach ಎಷ್ಟು ಕಾರಣವೋ ಅಷ್ಟೇ ಮಟ್ಟಿಗೆ ಕಾಂಗ್ರೆಸ್‌ನ ಆತ್ಮಲೋಲುಪ, ಅಧಿಕಾರ ದಾಹಿ ಧೋರಣೆಗಳು ಕಾರಣ.

1990ರ ನಂತರ ಕೆಲವು ಅಪವಾದಗಳನ್ನು ಬಿಟ್ಟರೆ, ಎಲ್ಲ ಚುನಾವಣೆಗಳಲ್ಲೂ ಸೋತರೂ ಗೆದ್ದರೂ ನಿರಂತರವಾಗಿ ಬಿಜೆಪಿ ಓಟು ಶೇರು ಏರಿಕೆ ಆಗುತ್ತಲೇ ಇದೆ. ಹೀಗಾಗಿ ಅದು ಆಗಾಗ ಕೆಲವು ಚುನಾವಣಾ ಹಿನ್ನೆಡೆಯನ್ನು ಅನುಭವಿಸಿದರೂ ಅದು ತಾತ್ಕಾಲಿಕ ಹಿನ್ನಡೆ ಮಾತ್ರ ಆಗಿರುವುದನ್ನೇ ಇತಿಹಾಸ ಹೇಳುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅದಕೆ ಕಾರಣ ಸ್ಪಷ್ಟ; ಜನರನ್ನು ಒಡೆದಾಳುವ ಅದರ ದ್ವೇಷ ಸಿದ್ಧಾಂತ, ತಳ ಮಟ್ಟದ ಸಂಘಟನೆ, 365 ದಿನಗಳು ದ್ವೇಷ ರಾಜಕೀಯದಲ್ಲಿ ಜನರನ್ನು ತೊಡಗಿಸಿಕೊಳ್ಳುವ ಯೋಜನೆಗಳು, ಕೊನೆ ಕ್ಷಣದಲ್ಲಿ ಸರ್ಕಾರದಿಂದ ಒಂದಷ್ಟು ಫಲಾನುಭವಿ ಯೋಜನೆಗಳು…ಅದರ ನಡುವಿನಲ್ಲೂ ಸಂಭವಿಸುವ ತಪ್ಪುಗಳನ್ನು ವೇಗವಾಗಿ ತಿದ್ದುಕೊಳ್ಳುವ ವ್ಯವಸ್ಥೆ. ಹಣ ಬಲ, ಕಳೆದ ಹತ್ತು ವರ್ಷಗಳಿಂದ ಅಧಿಕಾರ ಬಲ..

ಹೀಗಾಗಿ, ಇದಕ್ಕೆ ಪರ್ಯಾಯವಾದ ಸಿದ್ಧಾಂತ, ಸಂಘಟನೆ, ಯೋಜನೆ, ನಿರಂತರ ಕಾರ್ಯಕ್ರಮಗಳಿಲ್ಲದ, ಗೆದ್ದಾಗ ಬೀಗುವ, ಸೋತಾಗ ಸೊರಗುವ, ಅಂತರಂಗದಲ್ಲಿ ಶತ್ರುಗಳ ತದ್ರೂಪಿಗಳಂತೆ ಇರುವ ಪಕ್ಷಗಳ ಗೆಲುವುಗಳು ತಾತ್ಕಾಲಿಕ, ಆಕಸ್ಮಿಕ.. ಎಂಬಂತಾಗಿದೆ.

ಇಂಥ ತದ್ರೂಪಿಗಳನ್ನು ಆಶ್ರಯಿಸಿ, ಅವಲಂಬಿಸಿ ಫ್ಯಾಶಿಷ್ಟರನ್ನು ಚುನಾವಣೆಯಲ್ಲಿ ನಿರ್ಣಯಕವಾಗಿ ಸೋಲಿಸಬಹುದೇ ಚುನಾವಣೆಯ ಮೂಲಕ ಅಧಿಕಾರಕ್ಕೆ ಬಂದ ಫ್ಯಾಶಿಷ್ಟರನ್ನು ಚುನಾವಣೆಯ ಮೂಲಕ ಹಿಮ್ಮೆಟ್ಟಿಸಲು ಆಗಿದೆಯೇ? ಕರ್ನಾಟಕದ ಉಪ ಚುನಾವಣೆಗಳಲ್ಲಿ ಬಿಜೆಪಿ ಸೋಲಿನ ಸಮಾಧಾನಗಳು ಅಸಲು ಪ್ರಶ್ನೆಗಳನ್ನು ಮರೆಸುವುದಕ್ಕೆ ಮುಂಚೆ ಕೇಳಬೇಕೆನಿಸಿತು.

ಪೋಸ್ಟ್ ಹಂಚಿಕೊಳ್ಳಿ:

ಶಿವಸುಂದರ್
ಶಿವಸುಂದರ್
ಚಿಂತಕ, ಬರಹಗಾರ. ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಹುಟ್ಟಿದ್ದು 1967 ಜನವರಿ 4ರಂದು. ಗೌರಿ ಲಂಕೇಶ್‌ ವಾರಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಇವರು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಚಾರ್ವಾಕ, ಖೈರ್ಲಾಂಜಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಸಮಕಾಲೀನ- ವಿಡಿಯೋ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...