ಲೋಕಸಭೆ ಚುನಾವಣೆಯ ಮತ ಎಣಿಕೆಯ ಒಂದು ದಿನಕ್ಕೂ ಮುನ್ನ (ಜೂನ್ 3) ದೇಶದ ಅಧಿಕಾರಿಗಳಿಗೆ ಬಹಿರಂಗ ಪತ್ರವನ್ನು ಬರೆದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು “ಸಂವಿಧಾನ ಪಾಲಿಸಿ ಭಯವಿಲ್ಲದೆ ದೇಶದ ಸೇವೆ ಮಾಡಿ” ಎಂದು ತಿಳಿಸಿದ್ದಾರೆ.
“ಅಧಿಕಾರಿಗಳು ಸಂವಿಧಾನಕ್ಕೆ ಬದ್ಧರಾಗಿರಿ, ಯಾರದೇ ಭಯ, ಒಲವು ಇಲ್ಲದೆ, ದುಷ್ಟಬುದ್ಧಿಯಿಲ್ಲದೆ ದೇಶ ಸೇವೆ ಮಾಡಬೇಕು. ಯಾವುದೇ ಅಸಾಂವಿಧಾನಿಕ ವಿಧಾನಗಳಿಗೆ ತಲೆಬಾಗಬೇಡಿ. ಮತ ಎಣಿಕೆಯ ದಿನದಂದು ಯಾರಿಗೂ ಹೆದರದೆ ಅರ್ಹತೆಯ ಆಧಾರದ ಮೇಲೆ ನಿಮ್ಮ ಕರ್ತವ್ಯಗಳನ್ನು ನಿರ್ವಹಿಸಿ” ಎಂದು ಒತ್ತಾಯ ಮಾಡಿದ್ದಾರೆ.
ಇದನ್ನು ಓದಿದ್ದೀರಾ? 295+ ಸ್ಥಾನಗಳಲ್ಲಿ ಗೆಲುವು ಖಚಿತ: ‘ಇಂಡಿಯಾ’ ಮೈತ್ರಿಕೂಟದ ಸಭೆಯ ಬಳಿಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ
ಲೋಕಸಭೆ ಚುನಾವಣೆಯ ಮತ ಎಣಿಕೆ ಇಂದು ನಡೆಯಲಿದೆ. ನಿನ್ನೆಯೇ ಮಲ್ಲಿಕಾರ್ಜುನ ಖರ್ಗೆ ಅವರು ಪತ್ರವನ್ನು ಬರೆದಿದು ಸಂವಿಧಾನ ಪಾಲಿಸಲು ಮನವಿ ಮಾಡಿದ್ದಾರೆ.
“ಭಾರತವು ನಿಜವಾದ ಪ್ರಜಾಸತ್ತಾತ್ಮಕ ಸ್ವರೂಪದಲ್ಲಿದೆ ಎಂಬ ಈ ಭರವಸೆಯಲ್ಲಿ, ನಾನು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಶುಭ ಹಾರೈಸುತ್ತೇನೆ. ನಮ್ಮ ಸಂವಿಧಾನದ ಶಾಶ್ವತ ಆದರ್ಶಗಳು ಕಳಂಕರಹಿತವಾಗಿ ಉಳಿಯಬೇಕೆಂದು ನಾವು ನಿರೀಕ್ಷಿಸುತ್ತೇವೆ” ಎಂದು ಹೇಳಿದ್ದಾರೆ.
An Appeal to all the Civil Servants and Officers
My dear esteemed members of bureaucracy, our civil servants & officers,
I am writing you in the capacity of the Leader of the Opposition (Rajya Sabha) and as President of the Indian National Congress. The elections for the 18th… pic.twitter.com/mr3CzYc6k1
— Mallikarjun Kharge (@kharge) June 3, 2024
ಹಾಗೆಯೇ ಈ ಚುನಾವಣೆಯನ್ನು ಸುಗಮವಾಗಿ ನಡೆಸುವುದರಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಭಾರತೀಯ ಚುನಾವಣಾ ಆಯೋಗ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ರಾಜ್ಯ ಪೊಲೀಸ್ ಪಡೆಗಳು, ಪೌರಕಾರ್ಮಿಕರು, ಜಿಲ್ಲಾಧಿಕಾರಿಗಳು, ಸ್ವಯಂಸೇವಕರು ಮತ್ತು ಇತರೆ ಅಧಿಕಾರಿಗಳಿಗೆ ಖರ್ಗೆ ಧನ್ಯವಾದ ಸಲ್ಲಿಸಿದರು.





