ಮೋದಿ ಬರ್ತಡೇ ಸಂಭ್ರಮಕ್ಕೆ ಗುಜರಾತ್ ಬಲಿ; ಶಾಸಕ ಜಿಗ್ನೇಶ್ ಮೆವಾನಿ ಆರೋಪ

Date:

ಪ್ರಧಾನಿ ಮೋದಿ ಹುಟ್ಟು ಹಬ್ಬ ಆಚರಣೆಗಾಗಿ ಸರ್ದಾರ್ ಸರೋವರದಿಂದ (ಅಣೆಕಟ್ಟು) ನರ್ಮದಾ ನದಿಗೆ ಮುಂದಾಲೋಚನೆ ಇಲ್ಲದೆ ಗುಜರಾತ್ ಮುಖ್ಯಮಂತ್ರಿ ನೀರು ಹರಿಸಲು ಆದೇಶಿಸಿದ್ದರಿಂದ ರಾಜ್ಯದ ಜನರು ಪ್ರವಾಹಕ್ಕೆ ತುತ್ತಾಗಿದ್ದಾರೆ ಎಂದು ಗುಜರಾತ್‌ನ ಶಾಸಕ ಜಿಗ್ನೇಶ್ ಮೆವಾನಿ ಆರೋಪಿಸಿದ್ದಾರೆ.

ಸೆಪ್ಟೆಂಬರ್‌ 17ರಂದು ಮೋದಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಅಂದೇ ಸರ್ದಾರ್‌ ಸರೋವರದ ಎಲ್ಲ ಪ್ರವಾಹ ಗೇಟ್‌ಗಳನ್ನು ತೆರೆದು, ಒಂದೇ ಬಾರಿಗೆ 18 ಲಕ್ಷ ಕ್ಯೂಸೆಕ್ಸ್‌ ನೀರನ್ನು ನರ್ಮದಾ ನದಿಗೆ ಹರಿಸಲಾಗಿದೆ. ಇದರಿಂದ ಪ್ರವಾಹ ಉಂಟಾಗಿದೆ. ಮಾತ್ರವಲ್ಲ, ಅಂದಿನವರೆಗೂ ನದಿಗೆ ನೀರು ಹರಿಸದ ಪರಿಣಾಮ ಜಲಾಶಯದ ಹಿನ್ನೀರಿನ ಬಳಿಯಿದ್ದ 10,000 ಮನೆಗಳು ಜಲಾವೃತವಾಗಿವೆ. ಮೋದಿ ಅವರ ಹುಟ್ಟು ಹಬ್ಬ ಆಚರಿಸಲು ಗುಜರಾತ್ ಮುಖ್ಯಮಂತ್ರಿ ಜನರ ಬದುಕನ್ನು ಹಾಳುಗೆಡವಿದ್ದಾರೆ ಎಂದು ಜಿಗ್ನೇಶ್ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಜಿಗ್ನೇಶ್, “ಮಧ್ಯಪ್ರದೇಶದ ಇಂದಿರಾಸಾಗರ ಅಣೆಕಟ್ಟೆಯಲ್ಲಿ ನರ್ಮದಾ ನದಿಗೆ 9.45 ಲಕ್ಷ ಕ್ಯೂಸೆಕ್ಸ್‌ ನೀರು ಬಿಡುಗಡೆ ಮಾಡಲಾಗಿತ್ತು. ಇದರಿಂದಾಗಿ ಕಳೆವು ದಿನಗಳ ಹಿಂದೆಯೇ ಸರ್ದಾರ್ ಸರೋವರ ಗರಿಷ್ಠ ಮಟ್ಟಕ್ಕೆ ತುಂಬಿತ್ತು. ಆಗಲೇ, ನದಿಗೆ ನೀರು ಹರಿಸುವಂತೆ ಸೌರಾಷ್ಟ್ರ, ಉತ್ತರ ಗುಜರಾತ್ ಮತ್ತು ಕಚ್‌ನ ಜನರು ಒತ್ತಾಯಿಸಿದ್ದರು. ಆದರೂ, ಆಗ ನದಿಗೆ ನೀರು ಹರಿಸದೆ, ಸೆ.17ರವರೆಗೂ ಕಾದಿದ್ದು, ಮೋದಿ ಹುಟ್ಟು ಹಬ್ಬದಂದು ಏಕಾಏಕಿ ಎಲ್ಲ ಗೇಟ್‌ಗಳನ್ನು ತೆಗೆದಿದ್ದಾರೆ” ಎಂದು ಪೋಸ್ಟ್‌ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ?: ತಮಿಳುನಾಡು | ‘ಬಿಜೆಪಿ ಜೊತೆಗಿನ ಮೈತ್ರಿ ಮುರಿದಿದ್ದೇವೆ’ ಎಂದು ಘೋಷಿಸಿದ ಎಐಎಡಿಎಂಕೆ

“ಬುದ್ದಿಯಿಲ್ಲದೆ ಒಂದೇ ಬಾರಿಗೆ 18 ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ಗುಜರಾತ್‌ನ ಭರೂಚ್, ವಡೋದರಾ ಮತ್ತು ನರ್ಮದಾ ಜಿಲ್ಲೆಗಳು ಜಲಾವೃತವಾಗಿವೆ. ಮನೆಗಳು, ವಸತಿ ಗೃಹಗಳಿಗೆ ನೀರು ನುಗ್ಗಿದೆ. ಸಾವಿರಾರು ಜನರು ಅಸಹಾಯಕರಾಗಿದ್ದಾರೆ. ನೂರಾರು ಮನೆಗಳು ನಾಶವಾಗಿವೆ. ಕೆಲವರು ತಮ್ಮ ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಗಳ ಛಾವಣಿ ಮೇಲೆ ನಿಂತು ಬದುಕುಳಿದಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಈಗಾಗಲೇ ರೆಡ್ ಅಲರ್ಟ್ ಘೋಷಿಸಿದ್ದರಿಂದ ಮತ್ತು ಅಣೆಕಟ್ಟಿನಲ್ಲಿ ಹೆಚ್ಚಿನ ನೀರು ಇದ್ದುದ್ದರಿಂದ ಕೆಲವು ದಿನಗಳ ಹಿಂದೆಯೇ ಹಂತಹಂತವಾಗಿ ನೀರನ್ನು ಸುಲಭವಾಗಿ ಹರಿಸಬಹುದಿತ್ತು. ಆದರೆ, ಮೋದಿ ಹುಟ್ಟುಹಬ್ಬದ ಆಚರಣೆಗಾಗಿ ನೀರು ಹರಿಸುವುದನ್ನು ತಡೆಯಲಾಗಿತ್ತು. ಇದು ಸರಿಯೇ” ಎಂದು ಜಿಗ್ನೇಶ್ ಪ್ರಶ್ನಿಸಿದ್ದಾರೆ.

“ನೀರು ಬಿಡಲು ಪ್ರಧಾನಿಯವರ ಹುಟ್ಟುಹಬ್ಬಕ್ಕೆ ಕಾಯುತ್ತಿದ್ದರು. ಆದ್ದರಿಂದ, ಇದು ನೈಸರ್ಗಿಕ ಪ್ರವಾಹವಲ್ಲ. ಮೋದಿ ಹುಟ್ಟು ಹಬ್ಬ ಆಚರಣೆಯ ಮಾನವ ನಿರ್ಮಿತ ವಿಪತ್ತು. ಇದು ಅವಮಾನಕರ ಮತ್ತು ಅಸಹ್ಯಕರ ಸ್ಥಿತಿ!” ಎಂದು ಜಿಗ್ನೇಶ್ ಕಿಡಿಕಾರಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...