ಅಪ್ಪಂದಿರಿಗಾಗಿ ಕ್ಷೇತ್ರ ತ್ಯಾಗ ಮಾಡಿದ ‘ದೊಡ್ಡವರ’ ಮಕ್ಕಳು

Date:

  • ವರುಣಾದಿಂದ ಸಿದ್ದರಾಮಯ್ಯ, ಟಿ.ನರಸೀಪುರದಿಂದ ಮಹದೇವಪ್ಪ
  • ಕ್ಷೇತ್ರ ತ್ಯಾಗ ಮಾಡಿದ ಮಕ್ಕಳಿಗೆ ಬಂಪರ್ ಆಫರ್ ಕೊಡುವುದೇ ಕಾಂಗ್ರೆಸ್


ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲಪಟ್ಟಿ ಬಿಡುಗಡೆಯಾಗಿದೆ. ಕುಟುಂಬ ರಾಜಕಾರಣದ ಪರಂಪರೆ ಮುಂದುವರೆಸುವಲ್ಲಿ ಕೆಲ ಅಪ್ಪ-ಮಕ್ಕಳ ಜೋಡಿ ಯಶಸ್ಸು ಕಂಡರೆ, ಅಪ್ಪಂದಿರಿಗಾಗಿ ಮಕ್ಕಳೇ ಕ್ಷೇತ್ರ ತ್ಯಾಗ ಮಾಡಿದ್ದೂ ಇದೆ.

ಅಪ್ಪ-ಮಕ್ಕಳ ಜೋಡಿಯಾಗಿ ದಾವಣಗೆರೆಯ ಶಾಮನೂರು ಶಿವಶಂಕರಪ್ಪ-ಮಲ್ಲಿಕಾರ್ಜುನ್, ಬೆಂಗಳೂರಿನ ಪ್ರಿಯಾಕೃಷ್ಣ- ಕೃಷ್ಣಪ್ಪ, ರಾಮಲಿಂಗಾರೆಡ್ಡಿ-ಸೌಮ್ಯಾರೆಡ್ಡಿ, ಕೋಲಾರದ ಕೆ ಎಚ್ ಮುನಿಯಪ್ಪ-ರೂಪಕಲಾ ಮತ್ತೊಮ್ಮೆ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ.

ಆದರೆ ಇದೇ ಪಟ್ಟಿಗೆ ಈ ಬಾರಿ ಹೊಸದಾಗಿ ಹೆಸರು ಸೇರಿಸಿಕೊಳ್ಳಲು ಹೊರಟಿದ್ದ ಮಾಜಿ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಅವರ ಮೊದಲ ಪ್ರಯತ್ನವೇ ವಿಫಲವಾಗಿದೆ. ಇವರ ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರೂ ಈಗ ಪರೋಕ್ಷವಾಗಿ ಜೊತೆಯಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಳೆಮೈಸೂರು ಭಾಗದ ಕಾಂಗ್ರೆಸ್ ಜೋಡಿಗಳೆಂದೇ ಖ್ಯಾತರಾಗಿದ್ದವರು ಸಿದ್ದರಾಮಯ್ಯ ಹಾಗೂ ಡಾ. ಎಚ್ ಸಿ ಮಹದೇವಪ್ಪ. ನಿವೃತ್ತಿಯ ಅಂಚಿನಲ್ಲಿರುವ ಇಬ್ಬರೂ ನಾಯಕರು ತಮ್ಮ ಬಳಿಕ ಮಕ್ಕಳ ಮೂಲಕ ತಮ್ಮ ರಾಜಕಾರಣವನ್ನು ಮುಂದುವರೆಸಲು ಚಿಂತನೆ ನಡೆಸಿದ್ದರು.

ಅದರ ಪರಿಣಾಮ ಕಳೆದ ಚುನಾವಣೆಯಲ್ಲೇ ಸಿದ್ದರಾಮಯ್ಯ ತಮ್ಮ ಅದೃಷ್ಟದ ವರುಣಾ ಕ್ಷೇತ್ರವನ್ನು ಮಗ ಯತೀಂದ್ರಗೆ ಬಿಟ್ಟು, ದೂರದ ಬದಾಮಿಯಲ್ಲಿ ತಾವು ನಿಂತು ಅಪ್ಪ-ಮಕ್ಕಳ ಜೋಡಿಗೆ ಕೊಡುಗೆ ನೀಡಿದ್ದರು.

ಇದೇ ಪ್ರಯತ್ನವನ್ನು ಮಾಜಿ ಸಚಿವ ಮಹದೇವಪ್ಪನವರೂ 2018ರ ಚುನಾವಣೆಯಲ್ಲಿ ಮಾಡ ಹೊರಟಿದ್ದರು. ಅಂದಿನ ಸನ್ನಿವೇಶ ಅದಕ್ಕೆ ವಿರುದ್ಧವಾಗಿ ಮಗನಿಗೆ ಕ್ಷೇತ್ರ ಕೊಡಿಸಲು ಹೋಗಿ ತಾವೂ ಸ್ಥಾನ ಕಳೆದುಕೊಂಡು ಅಸ್ತಿತ್ವಕ್ಕಾಗಿ ಹೋರಾಟ ಮಾಡಬೇಕಾದ ಸ್ಥಿತಿ ತಲುಪಿದ್ದರು.

ಹಾಲಿ ಚುನಾವಣೆಯಲ್ಲಿ ಹಿಂದಿನ ಪ್ರಯತ್ನದ ಭಾಗವಾಗಿ ಮಗನಿಗೆ ತಮ್ಮದೇ ಟಿ.ನರಸೀಪುರ ಕ್ಷೇತ್ರ ಬಿಟ್ಟುಕೊಟ್ಟು ತಾವು ನಂಜನಗೂಡು ಮೀಸಲು ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿದ್ದರು.

ಆದರೆ ಈ ಬಾರಿಯೂ ಅದೃಷ್ಟ ಕೈ ಹಿಡಿಯದೆ, ನಂಜನಗೂಡು ಕ್ಷೇತ್ರದ ಮತ್ತೋರ್ವ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅಕಾಲಿಕ ಸಾವು, ಮಹದೇವಪ್ಪರನ್ನು ಆ ಕ್ಷೇತ್ರದಿಂದ ಹಿಂದೆ ಸರಿಯುವಂತೆ ಮಾಡಿತು.

ಹೀಗಾಗಿ ಧ್ರುವನಾರಾಯಣ್ ಪುತ್ರ ದರ್ಶನ್ ಗೆ ಕ್ಷೇತ್ರ ತ್ಯಾಗ ಮಾಡಿದ ಮಹದೇವಪ್ಪ ಕ್ಷೇತ್ರವಿಲ್ಲದೆ ನಿಂತಿದ್ದರು. ಮತ್ತೊಂದೆಡೆ ಹೊಸ ಕ್ಷೇತ್ರ ಹುಡುಕಾಟದಲ್ಲಿದ್ದ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆಗೆ ನಿಂತರೂ ಅಲ್ಲಿನ ವಾತಾವರಣ ಪೂರಕವಲ್ಲ ಎನ್ನುವ ಕಾರಣದಿಂದ ಮತ್ತೊಂದು ಕ್ಷೇತ್ರದ ತಲಾಶೆಯಲ್ಲಿದ್ದರು.

ಈ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಹಳೆ ಮೈಸೂರಿನಲ್ಲಿ ಮರಳಿ ಪಕ್ಷದ ವರ್ಚಸ್ಸು ವೃದ್ಧಿಸಲು ನಿರ್ಧರಿಸಿದ್ದರಿಂದ ಇಬ್ಬರೂ ನಾಯಕರಿಗೆ ಸೂಚನೆ ನೀಡಿ ತಮ್ಮ ತಮ್ಮ ಹಿಂದಿನ ಕ್ಷೇತ್ರಗಳಲ್ಲೇ ಕಣಕ್ಕಿಳಿಯಲು ಸೂಚಿಸಿತು. ಆ ಪರಿಣಾಮ ಸಿದ್ದರಾಮಯ್ಯ ವರುಣಾದಿಂದ, ಮಹದೇವಪ್ಪ ಟಿ ನರಸೀಪುರದಿಂದ ಸ್ಪರ್ಧೆ ಮಾಡಲು ಟಿಕೆಟ್ ಘೋಷಿಸಲಾಯಿತು.

ಅಪ್ಪಂದಿರ ರೀ ಎಂಟ್ರಿ ಕಾರಣದಿಂದ ಸುನೀಲ್ ಬೋಸ್ ಹಾಗೂ ಯತೀಂದ್ರ ಸಿದ್ದರಾಮಯ್ಯ ಈ ಬಾರಿ ಕ್ಷೇತ್ರ ತ್ಯಾಗ ಮಾಡಿ, ಚುನಾವಣಾ ರಾಜಕಾರಣದಿಂದ ಸದ್ಯಕ್ಕೆ ದೂರ ನಿಂತಿದ್ದಾರೆ.

ಮುಂದೇನು ?
ಅಪ್ಪಂದಿರಿಗಾಗಿ ಕ್ಷೇತ್ರ ತ್ಯಾಗ ಮಾಡಿರುವ ಯತೀಂದ್ರ ಹಾಗೂ ಸುನಿಲ್ ಬೋಸ್ ಇಬ್ಬರ ವಿಚಾರದಲ್ಲಿ ಈಗ ಮುಂದೇನು ಎನ್ನುವ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಇತ್ತ ರಾಜಕೀಯ ಲೆಕ್ಕಾಚಾರಗಳ ಪ್ರಕಾರ ಅವರ ಮುಂದಿನ ಸಾಧ್ಯತೆಗಳು ಹೀಗಿವೆ.

ಎರಡು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ನಿಲ್ಲುವ ಯೋಚನೆ ಮಾಡಿದ್ದಾರೆ. ಹೀಗೆ ಎರಡೂ ಕ್ಷೇತ್ರಗಳಲ್ಲಿ ಅವರು ಗೆಲುವು ಕಂಡರೆ, ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಮಗನಿಗೆ ಆ ಕ್ಷೇತ್ರ ಬಿಟ್ಟುಕೊಡುವುದು. ಉಪ ಚುನಾವಣೆ ಮಾಡಿ ಗೆಲ್ಲಿಸಿಕೊಳ್ಳುವುದು.

ಒಂದು ವೇಳೆ ಒಂದು ಗೆದ್ದು ಒಂದು ಸೋತರೆ,ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಿಂದ ಯತೀಂದ್ರರನ್ನು ಅಭ್ಯರ್ಥಿಯನ್ನಾಗಿಸುವುದು.

ಇನ್ನು ಸುನಿಲ್ ಬೋಸ್ ವಿಚಾರಕ್ಕೆ ಬಂದರೆ, ಮಹದೇವಪ್ಪ ಕ್ಷೇತ್ರದಲ್ಲಿ ಗೆಲ್ಲುವುದರ ಜೊತೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸುನೀಲ್ ಗೆ ವಿಧಾನಪರಿಷತ್ ಸದಸ್ಯ ಸ್ಥಾನ ಕೊಡಿಸುವುದು. ಅಥವಾ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸ್ಪರ್ಧಾಳುವನ್ನಾಗಿಸುವುದು.

ಹೀಗೆ ಕ್ಷೇತ್ರಬಿಟ್ಟ ಮಕ್ಕಳಿಬ್ಬರ ಭವಿಷ್ಯಕ್ಕೆ ಹಿರಿಯರು ಲೆಕ್ಕಾಚಾರ ಮಾಡಿಕೊಂಡು ತಾವು ಈ ಬಾರಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಮಕ್ಕಳ ಜೊತೆಗೆ ಹಳೆ ಜೋಡಿಗೆ ಮೈಸೂರು ಭಾಗದಲ್ಲಿ ತಮ್ಮ ವರ್ಚಸ್ಸು ಬಳಸಿ ಪಕ್ಷವನ್ನು ಬಲಪಡಿಸಿ ಅಧಿಕಾರಕ್ಕೆ ತರುವ ಹೊಣೆಯೂ ಇದೆ. ಇವೆರಡನ್ನೂ ಇಬ್ಬರೂ ನಾಯಕರು ಹೇಗೆ ನಿರ್ವಹಿಸುತ್ತಾರೆ ಎನ್ನುವುದೇ ಮುಂದಿರುವ ಕುತೂಹಲ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...