ದೇವೇಗೌಡರ ಕುಟುಂಬದ ಕಿರುಕುಳಕ್ಕೆ ಅಧಿಕಾರಿಗಳು ಕುಗ್ಗಿ ಹೋಗಿದ್ದಾರೆ, ಪತ್ರಕರ್ತರು ಭಯದಲ್ಲಿದ್ದಾರೆ : ಆರ್.ಪಿ.ವೆಂಕಟೇಶ್ ಮೂರ್ತಿ

Date:

ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರ ಕುಟುಂಬದ ವಿರುದ್ಧವಾಗಿ ಹಾಸನದ ಯಾವುದೇ ಒಬ್ಬ ಪತ್ರಕರ್ತರು ಬರೆಯಲು ಧೈರ್ಯ ತೋರಲ್ಲ. ಅದು ಆ ಕುಟುಂಬದವರೇ ಪತ್ರಕರ್ತರನ್ನು ಹೆದರಿಸುತ್ತಾರೋ? ಅಥವಾ ಅವರೇ ಭಯ ಇಟ್ಟುಕೊಂಡಿದ್ದಾರೋ ಇಲ್ಲವೇ ಆ ಕುಟುಂಬದಿಂದ ಏನಾದ್ರೂ ನಿರೀಕ್ಷೆ ಮಾಡುತ್ತಾರೋ?

ಹೀಗೆ ಗಂಭೀರವಾಗಿ ಅನುಮಾನ ವ್ಯಕ್ತಪಡಿಸಿದವರು ಹಾಸನದ ಸಾಮಾಜಿಕ ಹೋರಾಟಗಾರ ಮತ್ತು ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶ್ ಮೂರ್ತಿ.

ಕರ್ನಾಟಕದ ಹೆಸರಿಗೆ ಮಸಿ ಬಳಿದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಸಂಗ್ರಹದ ಪೆನ್‌ ಡ್ರೈವ್‌ ಪ್ರಕರಣ ವಿಚಾರವಾಗಿ ಈ ದಿನ.ಕಾಮ್‌ ನಡೆಸಿದ ಸಂದರ್ಶನದಲ್ಲಿ ದೇವೇಗೌಡರ ಕುಟುಂಬ ಕಳಂಕಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎಚ್‌ ಡಿ ರೇವಣ್ಣ ಅವರು ಹಾಸನದಲ್ಲಿ ನಿಯಮಗಳನ್ನು ಬ್ರೇಕ್‌ ಮಾಡುವುದರಲ್ಲಿ ನಿಸ್ಸೀಮರು. ಮತ್ತು ಅದನ್ನು ಅವರು ಎಂಜಾಯ್‌ ಮಾಡುತ್ತಾರೆ. ಕೆಲವು ಬಾರಿ ಪತ್ರಕರ್ತರನ್ನೇ ಬಹಿಷ್ಕಾರ ಮಾಡುತ್ತಾರೆ. ಹಾಸನದಲ್ಲಿ ಯಾವುದೇ ರಾಜಕೀಯ ನಾಯಕರು ಪತ್ರಕರ್ತರ ಸಂಘದ ಕಚೇರಿಗೆ ಬಂದು ಸುದ್ದಿಗೋಷ್ಠಿ ನಡೆಸಿದ್ರೆ ರೇವಣ್ಣ ಈವರೆಗೂ ಇಲ್ಲಿ ಹೆಜ್ಜೆ ಇಟ್ಟಿಲ್ಲ. ಅವರು ಎಲ್ಲಿ ಸುದ್ದಿಗೋಷ್ಠಿ ಕರೆಯುತ್ತಾರೋ ಅಲ್ಲಿಗೆ ಪತ್ರಕರ್ತರು ಎದ್ನೋ ಬಿದ್ನೋ ಅಂತ ಓಡಿ ಹೋಗುತ್ತಾರೆ. ಈ ಮಟ್ಟಿಗೆ ಅವರ ಪಾಳೇಗಾರಿಕೆ ಇದೆ” ಎಂದು ವಿವರಿಸಿದ್ದಾರೆ.

ಪೆನ್‌ ಡ್ರೈವ್‌ ಪ್ರಕರಣ ನಾನು ಊಹಿಸಿದಂತೆ ಆಯಿತು!

“ಬಿಜೆಪಿ ನಾಯಕ ಮತ್ತು ವಕೀಲ ದೇವರಾಜೇಗೌಡ ಪ್ರಜ್ವಲ್‌ ರೇವಣ್ಣ ಬಗ್ಗೆ ಸುದ್ದಿಗೋಷ್ಠಿ ನಡೆಸಿ, ಅವನ ಹಗರಣಗಳ ಬಗ್ಗೆ, ಅಶ್ಲೀಲ ವಿಡಿಯೋ ಬಗ್ಗೆ ಗಮನ ಸೆಳೆದಿದ್ದು. ನಾನೂ ಅದೊಂದು ರಾಜಕೀಯ ಆರೋಪ ಅಂತ ಸುಮ್ಮನಾಗಿದ್ದೆ. ಆದರೆ ಚುನಾವಣೆಗೂ ನಾಲ್ಕು ದಿನ ಮುನ್ನ ನನ್ನ ಮೊಬೈಲ್‌ಗೆ ಪ್ರಜ್ವಲ್‌ನ ಕೆಲವು ವಿಡಿಯೋ ತುಣುಕುಗಳು ಬಂದವು. ನಾನು ನಿತ್ಯ ನೋಡುವ ಮಹಿಳೆಯರು ಅದರಲ್ಲಿ ಇದ್ದರು. ಆ ಬಗ್ಗೆ ಕೂಡಲೇ ಜಿಲ್ಲಾಧಿಕಾರಿ, ಎಸ್‌ಪಿ ಅವರಿಗೆ ಫೋನ್‌ ಮಾಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಂದು ಕೋರಿದೆ. ಮಹಿಳಾ ಎಸ್‌ಪಿ ಅವರ ಹತ್ತಿರ ಫೋನ್‌ನಲ್ಲಿ ಜಗಳ ಕೂಡ ಆಡಿದೆ. ಯಾರು ಆವಾಗ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನನ್ನ ಒಳ ಮನಸ್ಸು ಹೇಳುತ್ತಿತ್ತು. ಅವನು ವಿದೇಶಕ್ಕೆ ಪರಾರಿ ಆಗಬಹುದು ಎಂದು. ಅದು ಹಾಗೆಯೇ ಆಗಿತ್ತು” ಎಂದು ಹೇಳಿದ್ದಾರೆ.

“ಪ್ರಜ್ವಲ್‌ ಪ್ರಕರಣದಲ್ಲಿ ಹಾಸನ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ನನಗೆ ಆ ನಂತರ ರಾಜಕೀಯ ಆಟಕ್ಕೆ ಪೊಲೀಸರ ಬಳಕೆ ಆಗುತ್ತಿದೆ ಅಂತ ಅನ್ನಿಸಿದೆ. ಜಿಲ್ಲಾಧಿಕಾರಿಗಳಿಗೆ ಫೋನ್‌ ಮಾಡಿ ಕೂಡ ಹೇಳಿದೆ. ಮಹಿಳಾ ಆಧಿಕಾರಿಗಳೇ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕಾರ್ತಿಕ್‌ ಪ್ರಕರಣವನ್ನು ಸರಿಯಾಗಿ ಪರಿಗಣಿಸಿದ್ದರೆ ಅವತ್ತೆ ಪೆನ್‌ ಡ್ರೈವ್ ಪ್ರಕರಣ ಬೆಳಕಿಗೆ ಬರುತ್ತಿತ್ತು” ಎಂದು ಪ್ರಕರಣದ ನಿಧಾನಗತಿ ಬಗ್ಗೆ ಬೆಳಕು ಚೆಲ್ಲಿದ್ದಾರೆ.

WhatsApp Image 2024 05 20 at 17.52.37 0f751b64

ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಕಟ್ಟಡ ಅದು. ದೇವೇಗೌಡರು ಮಾಜಿ ಪ್ರಧಾನಿ ಎಂಬ ಕಾರಣಕ್ಕೆ ರೇವಣ್ಣ ಅವರು ದೇವೇಗೌಡರಿಗೆ ಕಟ್ಟಿಸಿಕೊಟ್ಟ ವಸತಿಗೃಹ ಅದು. ಇದೇ ವಸತಿಗೃಹಕ್ಕೆ ಪ್ರಜ್ವಲ್ ಹೆಣ್ಣು ಮಕ್ಕಳನ್ನು ಕರೆಯಿಸಿಕೊಳ್ಳುತ್ತಿದ್ದರು ಎಂಬುದು ಕೇಳಿ ನಿಜಕ್ಕೂ ಶಾಕ್‌ ಆದೆ.‌ ಎಷ್ಟು ದುಷ್ಟರು ಇವರು ಎಂಬುದು ಮತ್ತೆ ಮತ್ತೆ ಅರ್ಥವಾಗುತ್ತಿದೆ. ಹೀಗಾಗಿಯೇ ಹೇಳುವುದು ವಂಶಾಡಳಿತ ಪ್ರಜಾಪ್ರಭುತ್ವದ ಶತ್ರು ಅಂತಮ ಯಾವುದೇ ಅಂತಃಕರಣ ನ್ಯಾಯಾಧೀಶರು ಪ್ರಜ್ವಲ್‌ ವಿಡಿಯೋಗಳನ್ನು ನೋಡಿದ್ರೆ ಅವನಿಗೆ ಜೀವಾವಧಿ ಶಿಕ್ಷೆ ಕೊಡುತ್ತಾರೆ” ಎಂದು ಹೇಳಿದ್ದಾರೆ.

“ಈ ಹಿಂದೆ ಚುನಾವಣೆಯಲ್ಲಿ ಅಷ್ಟು ಸಕ್ರಿಯವಾಗಿ ನಾನು ಭಾಗಿಯಾಗಿರಲಿಲ್ಲ. ಪ್ರಜ್ವಲ್‌ ಪ್ರಕರಣ ಕೇಳಿದ ಮೇಲಂತೂ ದೇವೇಗೌಡರ ಕುಟುಂಬ ಉಪಟಳ ಹಾಸನದಲ್ಲಿ ಯಾಕೋ ಜಾಸ್ತಿ ಆಯ್ತು ಅನ್ನಿಸಿದೆ. ಹಾಲು ಒಕ್ಕೂಟ, ಡಿಸಿಸಿ ಬ್ಯಾಂಕ್‌ ಸಂಪೂರ್ಣ ಹಿಡಿತದಲ್ಲಿ ನಲುಗಿದೆ. ಇವರ ವಿರುದ್ಧ ನನ್ನ ಹೋರಾಟ ಇರಲಿದೆ. ಹಾಸನಕ್ಕೆ ಬರುವ ಪ್ರಾಮಾಣಿಕ ಅಧಿಕಾರಿಗಳನ್ನು ಹೆದರಿಸುತ್ತ ಬಂದಿದ್ದಾರೆ. ಡಿ ಸಿ ಪ್ರಿಯಾಂಕ್‌ ಮೇರಿ  ಅವರನ್ನು ಗೋಲಿಬಾರ್‌ ಆಗುತ್ತೆ ಅಂತ ಹೆದರಿಸಿದ್ದರು. ಸತ್ಯಭಾಮ ಅವರನ್ನೂ ಹೀಗೇ ಹೆದರಿಸಿದ್ದಾರೆ. ಮಾನಸಿಕವಾಗಿ ಇಲ್ಲಿಯ ಅಧಿಕಾರಿಗಳು ಕುಗ್ಗಿ ಹೋಗಿದ್ದಾರೆ” ಎಂದು ವಿಶ್ಲೇಷಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...