ಹಾಸನ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಿದ್ದ ಜನತಾ ಸಮಾವೇಶದಲ್ಲಿ ನೂರಾರು ಜನರು ಸೇರಿ ಅದ್ದೂರಿಯಾಗಿ ರಜತ ಮಹೋತ್ಸವ ಶನಿವಾರ ನಡೆಯಿತು. ಭೂವನಹಳ್ಳಿಯಲ್ಲಿ ನಡೆಯುತ್ತಿರುವ ಜೆಡಿಎಸ್ ಜನತಾ ಸಮೇಶದಲ್ಲಿ ಮಾತನಾಡಿದ ಪ್ರಸ್ತಾವಿಕವಾಗಿ ಮಾತನಾಡಿದ ಅವರ ಹಾಸನ ಜಿಲ್ಲೆ ಅಭಿವೃದ್ಧಿ ಕಾಣುತ್ತಿರುವುದಕ್ಕೆ ಜೆಡಿಎಸ್ ಕಾರಣ, ಹಾಗೆಯೇ ಮುಂಬರುವ 2028ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ದ ಎಂದು ಸೂರಜ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಹಾಸನವಿಧಾನ ಸಭಾ ಕ್ಷೇತ್ರದದಲ್ಲಿ ಶಾಶ್ವತ ಅಭಿವೃದ್ಧಿ ಕೆಲಸ ಆಗಿರುವುದು ಜೆಡಿಎಸ್ ಸರ್ಕಾರದ ಅವಧಿಯಲ್ಲಿ, ಸರ್ಕಾರ ಇಂಜಿನಿಯರಿಂಗ್ ಕಾಲೇಜು, ಬಸ್ ನಿಲ್ದಾಣ, ಕೋರ್ಟ್, ಮಹಿಳಾ ಕಾಲೇಜುಗಳು, ಹಾಸ್ಟೆಲ್, ಸೇರಿದಂತೆ ಹಲವಾರು ಶಾಶ್ವತ ಅಭಿವೃದ್ಧಿ ಕಾಗಾಮರಿಗಳನ್ನು ಮಾಡಿದ್ದಾರೆ ಎಂದು ಸೂರಜ್ ರೇವಣ್ಣ ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಜೆಡಿಎಸ್ ಜನತಾ ಸಮಾವೇಶ: ಸೇರಿದ್ದ ಜನರ ಅಭಿಮಾನ ಕಂಡು ಆನಂದ ಬಾಷ್ಪ ಸುರಿಸಿದ ಸಚಿವ ಎಚ್.ಡಿ ಕುಮಾರಸ್ವಾಮಿ
ಈ ವೇಳೆ ಹೆಚ್ ಡಿ ರೇವಣ್ಣ, ಶಾಸಕರಾದ ಬಾಲಕೃಷ್ಣ, ಸ್ವರೂಪ್ ಪ್ರಕಾಶ್, ಎ ಮಂಜು, ಮಾಜಿ ಶಾಸಕ ಹೆಚ್ ಕೆ ಕುಮಾರಸ್ವಾಮಿ, ಸೂರಜ್ ರೇವಣ್ಣ, ಮೇಯರ್ ಗಿರೀಶ್ ಚನ್ನಾವೇರಪ್ಪ ಸೇರಿ ವಿವಿಧ ಜಿಲ್ಲೆಯ ಶಾಸಕರು ಜೆಡಿಎಸ್ ಮುಖಂಡರು, ನೂರಾರು ಜನರು ಭಾಗವಹಿಸಿದ್ದರು.





