ಹಾಸನ ಜಿಲ್ಲೆ ಬೇಲೂರು ತಾಲೂಕಿನ ಪುರಸಭೆ ಆವರಣದಲ್ಲಿ ಅಧ್ಯಕ್ಷೆ ಉಷಾ ಸತೀಶ್ ಅಧ್ಯಕ್ಷತೆಯಲ್ಲಿ, ಸ್ಥಳೀಯ ಶಾಸಕ ಎಚ್.ಕೆ.ಸುರೇಶ್ ಅವರ ನೇತೃತ್ವದಲ್ಲಿ ಮಂಗಳವಾರ ಸಭೆ ಏರ್ಪಡಿಸಲಾಗಿತ್ತು.
ಪಟ್ಟಣ ಅಭಿವೃದ್ಧಿಗೆ 23 ವಾಡ್ 9ಗಳ ಸದಸ್ಯರ ಸಂಪೂರ್ಣ ಬೆಂಬಲವಿದ್ದರೆ ಮಾತ್ರ ಪಟ್ಟಣ ಅಭಿವೃದ್ಧಿಯಾಗುತ್ತದೆ. ಬಿಕ್ಕೋಡು ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯಲ್ಲಿ ಎರಡು ಬದಿಯಲ್ಲಿ 28 ಅಡಿಗಳಿಗೆ ಒಂದು ಇಂಚು ಕಡಿಮೆ ಇದರೂ ಪುನಃ ಕಿತ್ತು ಹೊಸದಾಗಿ ನಿರ್ಮಾಣ ಮಾಡಿಸುತ್ತೇನೆ. ಸ್ಥಳದಲ್ಲಿದ್ದ ಲೋಕೋಪಯೋಗಿ ಸಹಾಯಕ ಇಂಜಿನಿಯರ್ಗೆ ಸೂಚನೆ ನೀಡಿ ಸ್ಥಳದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಯಾಗದಂತೆ ಸಮಸ್ಯೆ ಬಗೆಹರಿಸಬೇಕು ತಿಳಿಸಿದರು. ಅಭಿವೃದ್ಧಿ ಮಾಡುವುದಕ್ಕೆ ನಾನು ಯಾವುದೇ ತಾರತಮ್ಮ ಮಾಡಿಲ್ಲ. ಎಲ್ಲ ಸದಸ್ಯರ ಅನುಮತಿಯಂತೆ 7.5 ಬಜೆಟ್, ಪೂರ್ವಭಾವಿ ಸಭೆಯಲ್ಲಿ ಸಂಘ ಸಂಸ್ಥೆಯ ಮುಖಂಡರು ಮತ್ತು ಸಾರ್ವಜನಿಕರು ನೀಡಿದ ಸಲಹೆ ಮೇರೆಗೆ ಪುರಸಭೆಗೆ ಬರುವ ಅನುದಾನ ನೋಡಿ ಕೊಂಡು 23 ವಾರ್ಡ್ಗಳಲ್ಲಿ ಪ್ರಾಮಾಣಿಕ ಅಭಿವೃದ್ಧಿಪಡಿಸುತ್ತೇನೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅತಿ ಮುಖ್ಯ ಎಂದು ಬಿಜೆಪಿ ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಶಾಲಾ ಮೈದಾನ; ಯುವಕನ ಮೃತ ದೇಹ ಪತ್ತೆ
ಈ ವೇಳೆ ಸುರೇಶ್, ಬಿ ಗಿರೀಶ್, ಬಿ ಬಿ ಶಿವರಾಜ್, ಶಾಂತರಾಜು, ಅರ್ಜುನ್, ರವಿ ಹಾಗೂ ಪೂರ್ವಭಾವಿ ಸಭೆಗೆ ಸಾರ್ವಜನಿಕರು, ಅಧಿಕಾರಿಗಳು ಉಪಸ್ಥಿತರಿದ್ದರು.





