ಭೀಕರ ಸಾವುಗಳು: ‘ದೇವರ ಸಂದೇಶ’ ಎಂಬ ಮೋದಿ ವಿಕೃತಿ

Date:

‘ಧರ್ಮ ಎಂಬುದು ಒಂದು ಅಫೀಮು. ಅದು ಹೃದಯಹೀನ ಸಮಾಜದ ಹೃದಯ’ ಎಂದು ಎಡಪಂಥೀಯ ಹೋರಾಟಗಾರ, ರಷ್ಯಾ ಕ್ರಾಂತಿಯ ಪ್ರಮುಖ ನಾಯಕ, ವಾರ್ಕ್ಸ್‌ವಾದದ ನೇತಾರ ಕಾರ್ಲ್‌ ಮಾರ್ಕ್ಸ್‌ ಹೇಳಿದ್ದರು. ಅವರ ಮಾತು ಭಾರತದಲ್ಲಿ ಬಿಜೆಪಿ ಮತ್ತು ಮೋದಿ ರಾಜಕಾರಣಕ್ಕೆ ಕನ್ನಡಿ ಹಿಡಿದಿದೆ. ಆಗ್ಗಾಗ್ಗೆ, ಪ್ರಧಾನಿ ಮೋದಿ ಅವರ ಹೇಳಿಕೆ-ಧೋರಣೆಗಳನ್ನು ಗಮನಿಸಿದಾಗ ಮಾರ್ಕಸ್‌ ಅವರ ಈ ಹೇಳಿಕೆ ಕಣ್ಣಮುಂದೆ ಬರುತ್ತದೆ.

2016ರಲ್ಲಿ ಕೋಲ್ಕತ್ತಾದಲ್ಲಿ ಸೇತುವೆಯೊಂದು ಕುಸಿದು ಬಿದ್ದಿತ್ತು. ಆಗ, ಪ್ರಧಾನಿ ಮೋದಿ ಅವರು ಘಟನೆಯನ್ನು ‘ದೇವರ ಸಂದೇಶ’ ಎಂದಿದ್ದರು. ಈಗ, ಅಹಮದಾಬಾದ್‌ನಲ್ಲಿ ಸಂಭವಿಸಿರುವ ವಿಮಾನದುರಂತ ಸಮಯದಲ್ಲಿ ಮೋದಿ ಅವರ ‘ದೇವರ ಸಂದೇಶ’ ಹೇಳಿಕೆ ಮತ್ತು ಧರ್ಮದ ಕುರಿತಾದ ಮಾರ್ಕ್ಸ್‌ ಅವರ ಹೇಳಿಕೆಗಳು ನೆನಪಾಗುತ್ತಿವೆ.

ಅಂದಹಾಗೆ, 2016ರ ಮಾರ್ಚ್ 31 ರಂದು ಕೋಲ್ಕತ್ತಾದ ವಿವೇಕಾನಂದ ಮೇಲ್ಸೇತುವೆಯ ಒಂದು ಭಾಗ ಕುಸಿದುಬಿದ್ದಿತ್ತು. ಆ ದುರ್ಘಟನೆಯಲ್ಲಿ  26 ಜನರು ಸಾವನ್ನಪ್ಪಿದರು, ನೂರಾರು ಜನರು ಗಾಯಗೊಂಡಿದ್ದರು. ಈ ದುರಂತವು ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗುರಿಯಾಗಿತ್ತು. ಆಗಲೂ ಪ್ರಧಾನಿಯಾಗಿದ್ದ ಮೋದಿ ಅವರು ಘಟನೆ ಬಗ್ಗೆ ಪ್ರತಿಕ್ರಿಯಿಸಿ, “ಇದು ದೇವರ ಸಂದೇಶ. ತೃಣಮೂಲ ಕಾಂಗ್ರೆಸ್ (TMC) ಆಡಳಿತದಿಂದ ಬಂಗಾಳವನ್ನು ರಕ್ಷಿಸಲು ಜನರಿಗೆ ದೇವರು ನೀಡಿರುವ ಎಚ್ಚರಿಕೆ” ಎಂದು ಹೇಳಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೋದಿ ಅವರ ಈ ಹೇಳಿಕೆ ದೇಶಾದ್ಯಂತ ವಿವಾದವನ್ನು ಸೃಷ್ಟಿಸಿತ್ತು. ವಿರೋಧಕ್ಕೆ ಗುರಿಯಾಗಿತ್ತು. ಇಂತಹ ದುರಂತವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು, ದೇವರಿಗೆ ಸಂಬಂಧಿಸಿ ಮಾತನಾಡುವುದು ಆಡಳಿತದಲ್ಲಿರುವವರ ನೈತಿಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ದುರಂತಗಳು ಸಂಭವಿಸಿದಾಗ, ಜನರ ಜೀವ, ಜೀವನ ಹಾಗೂ ಕುಟುಂಬಗಳ ನಷ್ಟಕ್ಕೆ ಶೋಕ ವ್ಯಕ್ತಪಡಿಸಬೇಕು. ಒಗ್ಗಟ್ಟು, ಸಾಂತ್ವನ ಹಾಗೂ ಪರಿಹಾರ ಕ್ರಮಗಳ ಭರವಸೆ ನೀಡಬೇಕು. ಆದರೆ, ಅವುಗಳ ಬದಲಾಗಿ, ಘಟನೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುವುದು ಸಂವೇದನಾಶೀಲತೆಗೆ ಕನ್ನಡಿ ಹಿಡಿದಿತ್ತು. ಆಗ, ಮೋದಿಯವರ ಹೇಳಿಕೆಯನ್ನು ಖಂಡಿಸಿದ್ದ TMC ನಾಯಕ ಡೆರೆಕ್ ಒ’ಬ್ರಿಯನ್, “ಮೋದಿ ಅವರ ಹೇಳಿಕೆಯು ಪ್ರಧಾನಮಂತ್ರಿಯ ಸ್ಥಾನಕ್ಕೆ ಶೋಭೆಯಲ್ಲ” ಎಂದು ಟೀಕಿಸಿದ್ದರು.

ಈಗ, ಮೋದಿ ಅವರ ಆ ‘ದೇವರ ಸಂದೇಶ’ ಎಂಬ ಹೇಳಿಕೆ ಮತ್ತೆ ಮುನ್ನೆಲೆ ಬಂದಿದೆ. ಬಿಜೆಪಿಯೇ ಆಡಳಿತದಲ್ಲಿರುವ ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ 245+7 ಮಂದಿ ಮೃತಪಟ್ಟಿದ್ದಾರೆ. ಆ ಘಟನೆ ಮೋದಿ ಅವರು ಹೇಳಿಕೆಯನ್ನು ತಳುಕು ಹಾಕಿ ‘ದೇವರ ಸಂದೇಶ’ವೇ, ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯುವ ಎಚ್ಚರಿಕೆಯೇ ಎಂದು ಹಲವರು ಈಗ ಪ್ರಶ್ನಿಸುತ್ತಿದ್ದಾರೆ.

ಮೋದಿ ಅವರ ಹೇಳಿಕೆಯ ವರದಿಗಳ ಸ್ಕ್ರೀನ್‌ ಶಾಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನೆಟ್ಟಿಗರು, “ಮೋದಿ ಅವರ ಲಾಜಿಕ್ ಪ್ರಕಾರ, ಅಹಮದಾಬಾದ್‌ನಲ್ಲಿ ವಿಮಾನ ಪತನಗೊಂಡು 245 ಜನ ಸತ್ತಿದ್ದು, ಇದೇ ಗುಜರಾತ್‌ನಲ್ಲಿ ಮೋರ್ಬಿ ಸೇತುವೆ ಬಿದ್ದು, 135 ಜನರು ಮೃತಪಟ್ಟಿದ್ದು, ಕಳೆದ 11 ವರ್ಷಗಳಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನೂರಾರು ಜನರು ಸಾವನ್ನಪ್ಪಿದ್ದು,  ಗುಜರಾತ್‌ನಲ್ಲಿ ನಡೆದ ಕೋಮು ನರಮೇಧದಲ್ಲಿ ಹಲವಾರು ಜನ ಸತ್ತಿದ್ದು – ಯಾವ ದೇವರ ಸಂದೇಶ. ಈ ದೇಶದ ಯಾವ ಪ್ರಧಾನಿಯೂ ಇಷ್ಟು ವಿಕೃತ ಮಟ್ಟಕ್ಕೆ ಇಳಿದಿರಲಿಲ್ಲ. ಆದರೆ, ಮೋದಿ ಇಳಿದಿದ್ದಾರೆ. ಮನುಷ್ಯ ತನ್ನ ಸ್ವಾರ್ಥಕ್ಕೆ ಸೃಷ್ಟಿಸಿದ ದೇವರು-ಧರ್ಮವನ್ನು ಮೋದಿಯಷ್ಟು ಹೀನ ರಾಜಕಾರಣಕ್ಕೆ ಬಳಸಿಕೊಂಡವರು ಯಾರೂ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವರದಿ ಓದಿದ್ದೀರಾ?: ‘ಮೋದಿ ಶರಣಾಗಿದ್ದಾರೆ’ ಎಂಬ ರಾಹುಲ್ ಹೇಳಿಕೆಯು ಹಲವು ಪ್ರಶ್ನೆಗಳನ್ನು ಎತ್ತುತ್ತದೆ

2022ರಲ್ಲಿ ಗುಜರಾತ್‌ನ ಮೋರ್ಬಿಯಲ್ಲಿ ಮಚ್ಚು ನದಿಗೆ ಕಟ್ಟಲಾಗಿರುವ ಸೇತುವೆ ಕುಸಿದು ಬಿದ್ದು, 134 ಜನರು ಸಾವನ್ನಪ್ಪಿದ್ದರು. ಆಗ, ಟಿಎಂಸಿ ಮತ್ತು ಇತರ ವಿಪಕ್ಷಗಳು ಮೋದಿ ಅವರ ‘ದೇವರ ಸಂದೇಶ’ ಹೇಳಿಕೆಯನ್ನು ಬಳಸಿಕೊಂಡು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಘಟನೆಯು ‘ಮೋಸದ ಕೃತ್ಯ’ ಎಂದು ಟೀಕಿಸಿದ್ದವು. ಈಗ, ಅದೇ ಗುಜರಾತ್‌ನಲ್ಲಿ ವಿಮಾನದುರಂತ ನಡೆದಿದೆ. ವಿಮಾನ ತಾಂತ್ರಿಕ ಸಮಸ್ಯೆ ಬಗ್ಗೆ ತಿಳಿದಿದ್ದರೂ ಹಾರಾಟಕ್ಕೆ ಅನುಮತಿಸಲಾಗಿದೆ. ಇದು ಕೂಡ ‘ಮೋಸದ ಕೃತ್ಯ’ವೆಂದು ಹಲವರು ಹೇಳುತ್ತಿದ್ದಾರೆ. ಅಂತೆಯೇ, ಹಲವರು, ಇದು ಗುಜರಾತ್‌ಅನ್ನು ಬಿಜೆಪಿಯಿಂದ ರಕ್ಷಿಸಲು ‘ದೇವರ ಸಂದೇಶ’ವೇ ಎಂದು ಮೋದಿ ಮತ್ತು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ.

ಮೋದಿ ಅಂತಹ ಕೊಳಕು ರಾಜಕೀಯದ ಹೇಳಿಕೆ ನೀಡಿದರೆಂದು ಉಳಿದವರೂ ಅದನ್ನೇ ಮಾಡುವುದು ತಪ್ಪು. ದುರಂತಗಳು ಸಂಭವಿಸಿದಾಗ ಘಟನೆಗೆ ಆತಂಕ, ಶೋಕ ವ್ಯಕ್ತಪಡಿಸುವುದು ಆಡಳಿತ ನಡೆಸುವವರ ಪ್ರಾಥಮಿಕ ಕರ್ತವ್ಯ. ಜೀವಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಸಾಂತ್ವನ ಹೇಳುವುದು, ಪರಿಹಾರ ಒದಗಿಸುವುದು ಆದ್ಯತೆ ಕೆಲಸ. ಜೊತೆಗೆ, ಅಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಮೂಲ ಕರ್ತವ್ಯ. ಅದನ್ನು ಈ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಅರಿತುಕೊಳ್ಳಬೇಕು. ಉಳಿದವರೂ ಪಾಲಿಸಬೇಕು.

ಜೊತೆಗೆ, ದುರಂತವು ‘ದೇವರ ಸಂದೇಶ’ವೆಂದು ರಾಜಕೀಯಕ್ಕೆ ಬಳಸಿಕೊಳ್ಳದೆ, ಘಟನೆಗೆ ಸಂಬಂಧಿಸಿದ ಸಂಸ್ಥೆ, ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸರ್ಕಾರಗಳನ್ನು ಹೊಣೆಗಾರರನ್ನಾಗಿ ಮಾಡಿ, ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ದುರಂತಗಳ ವಿಚಾರದಲ್ಲಿ ಎಂದಿಗೂ ಚರ್ಚೆಯನ್ನು ವಿಚಲಿತಗೊಳಿಸಬಾರದು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...