ಮೋದಿಯ ಭ್ರಷ್ಟಾಚಾರ ಗ್ಯಾರಂಟಿ; ಬಿಜೆಪಿಯ ‘ವಾಷಿಂಗ್ ಮೆಷಿನ್’ ಹೇಗೆ ಕೆಲಸ ಮಾಡುತ್ತದೆ?

Date:

ಬಿಜೆಪಿಯ ‘ವಾಷಿಂಗ್ ಮೆಷಿನ್’ ಸುದ್ದಿ ಈಗ ಹೆಚ್ಚಾಗಿ ಕಾಣಿಸುತ್ತಿದೆ. ಈ ಹಿಂದೆ ಭ್ರಷ್ಟಾಚಾರ ಆರೋಪವನ್ನು ಹೊತ್ತಿದ್ದವರೆಲ್ಲ ಈಗ ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಅಥವಾ ಬಿಜೆಪಿ ಮಡಿಲು ಸೇರಿದ್ದಾರೆ. ಅಂತಹ ನಾಯಕರುಗಳಲ್ಲಿ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಕೂಡಾ ಒಬ್ಬರು.

2017ರಲ್ಲಿ ಸಿಬಿಐ ವಿಮಾನ ಗುತ್ತಿಗೆ ಹಗರಣಕ್ಕೆ ಸಂಬಂಧಿಸಿದಂತೆ ಒಂದು ಪ್ರಕರಣವನ್ನು ದಾಖಲಿಸಿತ್ತು. ಈ ಹಗರಣದಲ್ಲಿ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಭಾಗಿಯಾಗಿದ್ದರು ಎಂದು ಆರೋಪ ಮಾಡಲಾಗಿತ್ತು. ಆದರೆ ಈಗ ಶರದ್ ಪವಾರ್ ನೇತೃತ್ವದ ಎನ್‌ಸಿಪಿಯಿಂದ ಬೇರ್ಪಟ್ಟು ಬಿಜೆಪಿಯೊಂದಿಗೆ ಕೈಜೋಡಿಸಿದ ಬಳಿಕ ಪ್ರಫುಲ್ ಪಟೇಲ್ ಅವರ ಈ ಹಗರಣದ ಪ್ರಕರಣವನ್ನು ಸಿಬಿಐ ವಾಪಾಸ್ ಪಡೆದುಕೊಂಡಿದೆ.

ಇದನ್ನು ಓದಿದ್ದೀರಾ? ಬಿಜೆಪಿ ಒಂಥರಾ ವಾಷಿಂಗ್ ಮೆಷಿನ್‌ ಇದ್ದಂತೆ; ಭ್ರಷ್ಟರು ಇಲ್ಲಿ ಪವಿತ್ರರಾಗಬಹುದು: ಕಾಂಗ್ರೆಸ್‌ ಲೇವಡಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರಫುಲ್ ಪಟೇಲ್ ಅವರಿಗೆ ಭೂಗತ ಪಾತಕಿ, ಗ್ಯಾಂಗ್‌ಸ್ಟಾರ್, ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂನ ಬಲಗೈ ಬಂಟ ಎಂದೇ ಕರೆಯಲಾಗುವ, 1993 ರ ಮುಂಬೈ ಬಾಂಬ್ ದಾಳಿಯಲ್ಲಿ ಭಾಗಿಯಾಗಿದ್ದ ಇಕ್ಬಾಲ್ ಮಿರ್ಚಿಯ ಪತ್ನಿ ಜೊತೆ ನಂಟಿದೆ ಎಂದು ಬಿಜೆಪಿ ಹೇಳಿತ್ತು. ಆದರೆ ಬಿಜೆಪಿಯ ಈಗ ಬಿಜೆಪಿಯ ‘ವಾಷಿಂಗ್ ಮೆಷಿನ್’ ಪ್ರಫುಲ್ ಪಟೇಲ್‌ ಮೇಲಿದ್ದ ಭ್ರಷ್ಟಾಚಾರದ ಆರೋಪ, ಮುಂಬೈ ಬಾಂಬ್ ದಾಳಿಯ ಆರೋಪಿಗಳೊಂದಿಗಿರುವ ನಂಟನ್ನು ಕೂಡಾ ತೊಳೆದುಹಾಕಿರುವಂತಿದೆ!

ಕೆಲವು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಎನ್‌ಸಿಪಿ ಬಗ್ಗೆ ವಾಗ್ದಾಳಿ ನಡೆಸಿದ್ದರು. “ಎನ್‌ಸಿಪಿ ಮೇಲೆಯೂ ಸರಿಸುಮಾರು 74 ಕೋಟಿ ರೂಪಾಯಿಯ ಹಗರಣದ ಆರೋಪವಿದೆ. ಮಹಾರಾಷ್ಟ್ರ ಸ್ಟೇಟ್ ಕಾಪೋರೇಟಿವ್ ಬ್ಯಾಂಕ್ ಹಗರಣ, ಮಹಾರಾಷ್ಟ್ರ ಸಿಂಚಾಯಿ ಹಗರಣ, ಅಕ್ರಮ ಗಣಿಗಾರಿಕೆ ಹಗರಣ ಸೇರಿದಂತೆ ಇವರ ಹಗರಣಗಳ ಪಟ್ಟಿ ದೊಡ್ಡದಾಗಿದೆ. ಈ ಪಕ್ಷದ ಹಗರಣಗಳ ಮೀಟರ್‌ ಎಂದಿಗೂ ಕೆಳಗಿಳಿಯುವುದಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದರು.

ಇದನ್ನು ಓದಿದ್ದೀರಾ?  ನೋಟಿನ ರಾಶಿಯಲ್ಲಿ ಮಲಗಿದ ಅಸ್ಸಾಂ ಬಿಜೆಪಿ ಮಿತ್ರ ಪಕ್ಷದ ಮುಖಂಡ; ಫೋಟೋ ವೈರಲ್

ಹಾಗೆಯೇ “ಪ್ರಫುಲ್ ಪಟೇಲ್ ಹಾಗೂ ಇಕ್ಬಾಲ್ ಮಿರ್ಚಿಯ ಸಹಿ ಇರುವ ದಾಖಲೆಗಳನ್ನು ಇಡಿ ಹೊಂದಿದೆ” ಎಂದು ಪಿಯೂಷ್ ಗೋಯಲ್ ಹೇಳಿದ್ದರು. ಬಿಜೆಪಿಯು ಗ್ಯಾಂಗ್‌ಸ್ಟಾರ್‌ ಇಕ್ಬಾಲ್ ಮಿರ್ಚಿ ಜೊತೆ ಪ್ರಫುಲ್ ಪಟೇಲ್ ನಂಟನ್ನು ಒತ್ತಿ ಹೇಳಿತ್ತು. ಆದರೆ ಬಿಜೆಪಿಯ ವಾಷಿಂಗ್ ಮೆಷಿನ್ ಭ್ರಷ್ಟಾಚಾರವನ್ನು ತೊಳೆಯುವ ಜೊತೆ ಅಂಡರ್‌ವರ್ಲ್ಡ್‌ ಜೊತೆ ಇರುವ ಲಿಂಕ್ ಅನ್ನು ಕೂಡಾ ತೊಳೆದು ಹಾಕಿದೆಯೇ ಎಂಬ ಪ್ರಶ್ನೆ ಬರುತ್ತದೆ.

ಇನ್ನು ಪ್ರಫುಲ್ ಪಟೇಲ್‌ರ ಸಂಸ್ಥೆ ಮತ್ತು ಇಕ್ಬಾಲ್ ಮಿರ್ಚಿಯ ಪುತ್ರನ ನಡುವೆ ಸೀಜಯ್ ಹೌಸ್ ಪ್ರಾಪರ್ಟಿಗಾಗಿ ನಡೆದ ಕೋಟ್ಯಾಂತರ ರೂಪಾಯಿ ವಹಿವಾಟುಗಳ ದಾಖಲೆ ಇಡಿಗೆ ಲಭಿಸಿದೆ ಎಂದು ಈ ಹಿಂದೆ ವರದಿಯಾಗಿದೆ. ಆದರೆ ಈಗ ಸಿಬಿಐ ವಿಮಾನ ಹಗರಣದಲ್ಲಿ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ವಿರುದ್ಧದ ಪ್ರಕರಣವನ್ನು ವಾಪಾಸ್ ಪಡೆದಿದೆ. ಪ್ರಧಾನಿ ಮೋದಿ ಭಾಷಣ ಮಾಡುವಾಗ “ನಾನು ಭ್ರಷ್ಟಾಚಾರದ ವಿರುದ್ಧ ಗ್ಯಾರಂಟಿ” ಎಂದು ಹೇಳುತ್ತಾರೆ. ಈ ಎಲ್ಲ ವಿಚಾರವನ್ನು ತಿಳಿದಾಗ ಮೋದಿ ಭ್ರಷ್ಟಾಚಾರದ ವಿರುದ್ಧದ ಗ್ಯಾರಂಟಿ ಅನಿಸುತ್ತದೆಯೇ?

ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ | ವಿಶ್ವದಲ್ಲೇ ಅತೀ ದೊಡ್ಡ ಹಗರಣ ಎಂದ ನಿರ್ಮಲಾ ಸೀತಾರಾಮನ್ ಪತಿ!

ಪ್ರಫುಲ್ ಪಟೇಲ್ ಮಾತ್ರವಲ್ಲ ಇನ್ನೂ ಇದೆ ಪಟ್ಟಿ….

ಇನ್ನು ಅಶೋಕ್ ಚೌಹಾಣ್ ಮೇಲೆ ಆದರ್ಶ್ ಹೌಸಿಂಗ್ ಹಗರಣದ ಆರೋಪವನ್ನು ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯೇ ಈ ಆರೋಪವನ್ನು ಮಾಡಿದ್ದರು. ಆದರೆ ಈಗ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗಿದೆ. ಅವರು ರಾಜ್ಯ ಸಭೆ ಸದಸ್ಯರು ಕೂಡಾ ಆಗಿದ್ದಾರೆ. ಇನ್ನು ಅಜಿತ್‌ ಪವಾರ್ ಅವರನ್ನು ಬಿಜೆಪಿ ಜೈಲಿಗೆ ಕಳಿಸಲು ಬಯಸಿತ್ತು. ಆದರೆ ಈಗ ಅವರ ಜೊತೆಯೇ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದೆ. ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ಹೀಗೆ ನಾರಾಯಣ ರಾಣೆ ಸೇರಿದ್ದಂತೆ ಹಲವರ ಹೆಸರುಗಳು ಈ ಪಟ್ಟಿಯಲ್ಲಿ ಬರುತ್ತದೆ.

ವಾಷಿಂಗ್ ಮೆಷಿನ್

ಇತ್ತೀಚೆಗೆ ಚಿತ್ರವೊಂದು ವೈರಲ್ ಆಗಿದೆ. ಆ ಚಿತ್ರದಲ್ಲಿ ಅಸ್ಸಾಂನ ಬಿಜೆಪಿಯ ಮಿತ್ರ ಪಕ್ಷ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಮುಖಂಡ ಬೆಂಜಮಿನ್ ಬಸುಮತರಿ ಅರೆ ನಗ್ನವಾಗಿ 500 ರೂಪಾಯಿ ನೋಟುಗಳ ರಾಶಿ ನಡುವೆ ಮಲಗಿರುವುದನ್ನು ಕಾಣಬಹುದು. ಬೆಂಜಮಿನ್ ಉದಲಗುರಿ ಜಿಲ್ಲೆಯ ಭೈರಿಗುರಿ ಗ್ರಾಮದ ಕೌನ್ಸಿಲ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಮಿತ್ರ ಪಕ್ಷದ ಮುಖಂಡ ಬೆಂಜಮಿನ್ ಬಸುಮತರಿ ಅವರ ಮೇಲೆ ಪ್ರಧಾನ ಮಂತ್ರಿ ಆವಾಜ್ ಯೋಜನೆಯಲ್ಲಿ ಬಡವರಿಂದ ಹಣ ಪಡೆದುಕೊಂಡು ಭ್ರಷ್ಟಾಚಾರ ಮಾಡಿದ ಆರೋಪವಿದೆ. ಆದರೆ ಈ ಬಗ್ಗೆ ಪ್ರಧಾನಿ ಮೋದಿ ಮಾತನಾಡುವುದಿಲ್ಲ. ಇಡಿ, ಸಿಬಿಐ, ಐಟಿ ದಾಳಿಗಳು ಕೂಡಾ ನಡೆಯಲ್ಲ.

ಬೆಂಜಮಿನ್ ಬಸುಮತರಿ ಅವರು ಸ್ಥಳೀಯ ನಾಯಕ ಎಂದುಕೊಂಡರೂ ಪ್ರಫುಲ್ ಪಟೇಲ್ ಕತೆಯೇನು? 2017ರ ಪ್ರಕರಣವನ್ನು ಅವರು ಬಿಜೆಪಿಯೊಂದಿಗೆ ಸೇರಿದ ಬಳಿಕ ವಾಪಾಸ್ ಪಡೆದಿದ್ದು ಯಾಕೆ? ಅಂಡರ್‌ವರ್ಲ್ಡ್‌ ಡಾನ್ ಜೊತೆ ಇದ್ದ ನಂಟಿನ ವಿಚಾರವೇನು? ಎಂಬ ಪ್ರಶ್ನೆ ನಮ್ಮ ಮುಂದೆ  ಬರುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...