ದೇವರು, ದೇಶದ ಹೆಸರಲ್ಲಿ ಸಮಾಜಕ್ಕೆ ಸಮೂಹ ಸನ್ನಿ ಹಿಡಿದಿದೆ : ಪತ್ರಕರ್ತ ಹರ್ಷಕುಮಾರ್ ಕುಗ್ವೆ

Date:

“ಸಮೂಹ ಸನ್ನಿಯ ಕಾಲವಿದು. ದೇವರ ಹೆಸರಲ್ಲಿ, ದೇಶದ ಹೆಸರಲ್ಲಿ ಸಮಾಜಕ್ಕೆ ಸಮೂಹ ಸನ್ನಿ ಹಿಡಿದಿದೆ.
ಇಂತಹ ಸಂದರ್ಭದಲ್ಲಿ ಈ ಸಮಾವೇಶ ನಡೆಯುತ್ತಿದೆ. ಸಮೂಹ ಸನ್ನಿಗೆ ವಿರುದ್ಧವಾಗಿ, ಸಂವಿಧಾನ ಪ್ರಜ್ಞೆಯನ್ನು ಮೂಡಿಸಲು, ಸಮೂಹ ಪ್ರಜ್ಞೆಯನ್ನು ತುಂಬಲು ಈ ಕಾರ್ಯಕ್ರಮ ಅಗತ್ಯವಾಗಿದೆ” ಎಂದು ಪತ್ರಕರ್ತ ಹರ್ಷಕುಮಾರ್‌ ಕುಗ್ವೆ ಹೇಳಿದರು.

ರಾಜ್ಯ ಸರ್ಕಾರ ಆಯೋಜಿಸಿರುವ ಎರಡು ದಿನಗಳ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ, ಭಾರತದ ಸಂವಿಧಾನ ರಚನೆಯ ಅಮೃತ ಮಹೋತ್ಸವ ಸಮಾರಂಭದಲ್ಲಿ ʼಒಕ್ಕೂಟ ವ್ಯವಸ್ಥೆಯಲ್ಲಿನ ಅಂತರಗಳ ಸಮತೋಲನಾ ಆಯಾಮಗಳುʼ ಗೋಷ್ಠಿಯಲ್ಲಿ ಅವರು ಮಾತನಾಡಿದರು

ಫೆಡರಲ್ ಸಿಸ್ಟಮ್‌ಗೂ ಒಕ್ಕೂಟ ಎನ್ನುತ್ತೇವೆ, ಯೂನಿಯನ್ ಸಿಸ್ಟಮ್ ಎಂಬುದಕ್ಕೂ ಒಕ್ಕೂಟ ಎಂದು ಕರೆಯುತ್ತೇವೆ. ಆದರೆ, ಇದು ತಪ್ಪು ಪದಬಳಕೆ. ಇದಕ್ಕೆ ಪರ್ಯಾಯ ಪದ ಬಳಕೆ ಬಳಸಬೇಕು. ಇದನ್ನು ಸಂಯುಕ್ತ ವ್ಯವಸ್ಥೆ ಎಂದು ಕರೆಯಬಹುದೇನೋ ಎಂದು ಅವರು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಈ ದೇಶಭಕ್ತರು ಹೇಗೆ ಎಂದರೆ ದೊಡ್ಡ ದೊಡ್ಡ ಮಾತುಗಳನ್ನು ದೇಶದ ಬಗ್ಗೆ ಆಡುತ್ತಾರೆ. ಪಕ್ಕದಲ್ಲಿ ಕಷ್ಟದಲ್ಲಿದ್ದವನಿಗೆ ಇವರು ಕಣ್ಣೆತ್ತಿಯೂ ನೋಡಲ್ಲ ಎಂದಿದ್ದರು ಬಾಬಾ ಸಾಹೇಬರು. ಜಾತಿ ರಿಪಬ್ಲಿಕ್ ಮಾಡಿಕೊಂಡಾಗ ಒಂದು ರಾಷ್ಟ್ರವಾಗಲು ಸಾಧ್ಯವೇ? ನಾವು ಭಾವನಾತ್ಮಕವಾಗಿ ಒಂದಾಗಿರಲು ಸಾಧ್ಯವಿಲ್ಲ ಎಂಬುದು ಬಾಬಾ ಸಾಹೇಬರ ನಿಲುವು ಆಗಿತ್ತು. ಆದರೆ ಅದೇ ಬಾಬಾ ಸಾಹೇಬರು, ಯೂನಿಟರಿ ಸಿಸ್ಟಮ್ ಅನ್ನು ಸಂವಿಧಾನದಲ್ಲಿ ತರುತ್ತಾರೆ. ಒಂದು ಸಂವಿಧಾನದ ಅಡಿ ಇವರನ್ನು ಒಟ್ಟಿಗೆ ತರದಿದ್ದರೆ ಹರಿದು ಹಂಚಿಹೋಗುತ್ತಾರೆಂಬ ನಿಲುವು ಅವರದ್ದಾಗಿತ್ತು. ಅಂದಿನ ಪರಿಸ್ಥಿತಿ ಹಾಗೆ ಇತ್ತು” ಎಂದರು.

“2012ರಲ್ಲಿದ್ದ ಸೆಸ್, ಸರ್ಚಾರ್ಜ್ 10% ಆದರೆ, ಈಗ 19%ರಷ್ಟಿದೆ. ಸುಮಾರು 75ರಷ್ಟು ಉತ್ತರ ಭಾರತದ ರಾಜ್ಯಗಳಿಗೆ ಹೋಗಿದೆ. ವರ್ಟಿಕಲ್, ಹಾರಿಜಾಂಟಲ್ ಡೆವಲ್ಯೂಷನ್ ಎರಡಲ್ಲೂ ಅನ್ಯಾಯವಾಗಿದೆ. ಒಂದು ದೇಶ, ಒಂದು ಚುನಾವಣೆ, ಒಬ್ಬ ಮೋದಿ ಎಂಬಲ್ಲಿಗೆ ಈ ದೇಶ ಹೋಗುತ್ತಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

ಇಡೀ ರಾಜ್ಯಲ್ಲಿ ಇದು ಸಂಚಲನ ಮೂಡಿಸಿದೆ: ಮಾವಳ್ಳಿ ಶಂಕರ್‌
“ಈ ಕಾರ್ಯಕ್ರಮ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಸಂವಿಧಾನ ಅರಿವು ಯಾವ ಪ್ರಮಾಣದಲ್ಲಿದೆ ಎಂದು ನಾವು ಗಮನಿಸಿದಾಗ, ಬಾಬಾ ಸಾಹೇಬರು ಬರೆದಿದ್ದಾರೆ ಎಂಬ ಕಾರಣಕ್ಕೋ ಏನೋ ಸಂವಿಧಾನಕ್ಕೂ ಕಳಂಕವನ್ನು ಹಚ್ಚಿದ್ದಾರೆ” ಎಂದು ಸಾಮಾಜಿಕ ಚಿಂತಕ ಮಾವಳ್ಳಿ ಶಂಕರ್‌ ಹೇಳಿದರು.

ಸಂವಿಧಾನ ಎಸ್ಸಿ ಎಸ್ಟಿಗಳಿಗೆ ಸೇರಿದ್ದು ಎಂಬ ಮಾನಸಿಕ ರೋಗ ಮೇಲ್ಜಾತಿಗಳಲ್ಲಿ ಇದೆ. ಸಾಕ್ಷರತೆಯ ಪ್ರಮಾಣದಲ್ಲಿ ದೇಶ ಮುಂದಿದೆ. 80 ಪರ್ಸೆಂಟ್‌ವರೆಗೆ ನಾವು ಸಾಕ್ಷರತೆಯನ್ನು ಪಡೆದಿದ್ದೇವೆ. ಆದರೆ ಸಂವಿಧಾನದ ಸಾರಕ್ಷತೆಯನ್ನು ಪಡೆಯಬೇಕಿದೆ. ಸಂವಿಧಾನದ ಕುರಿತು ಇರುವ ಅನಕ್ಷರತೆಯನ್ನು ಹೋಗಲಾಡಿಸಬೇಕಿದೆ.

ಮಾವಳ್ಳಿ ೧

ಮೂನಾಲ್ಕು ವರ್ಷಗಳ ಹಿಂದೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು “ದೇಶ ಗಂಡಾಂತರದಲ್ಲಿದೆ” ಎಂದಿದ್ದರು. ದೇಶದ ಜನ ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಈಗಲೂ ಇಲ್ಲ. ಈ ಒಕ್ಕೂಟ ವ್ಯವಸ್ಥೆಯನ್ನು ಛಿದ್ರಗೊಳಿಸುವ ಶಕ್ತಿಗಳೇ ಬಲಗೊಳ್ಳುತ್ತಿದೆ” ಎಂದರು.

“ಅಲ್ಪಸಂಖ್ಯಾತ ಸಮುದಾಯಗಳು, ತಳ ಸಮುದಾಯಗಳು ತಮ್ಮ ಪಾಲುದಾರಿಕೆಯನ್ನು ಕೇಳುವಾಗ ಅದು ಕಮ್ಯುನಲಿಸಂ ಆಗುತ್ತದೆ. ಜಾತಿವಾದ ಆಗುತ್ತದೆ. ಮೇಲು ವರ್ಗಗಳು, ಮೇಲು ಜಾತಿಗಳು ಇಡೀ ಅಧಿಕಾರವನ್ನು ತಮ್ಮದಾಗಿಸಿಕೊಳ್ಳುವ ಸಂದರ್ಭದಲ್ಲಿ ಅದನ್ನು ರಾಷ್ಟ್ರೀಯವಾದ ಎಂದು ಕರೆಯುತ್ತಾರೆ ಎಂದು ಬಾಬಾ ಸಾಹೇಬರು ಹೇಳಿದ್ದರು. ನಮ್ಮ ದೇಶ ಪ್ರಜಾಪ್ರಭುತ್ವದ ತೊಟ್ಟಿಲು ಎನ್ನುತ್ತೇವೆ. ನಿಜಕ್ಕೂ ಈ ದೇಶ ಆ ದಿಕ್ಕಿನಲ್ಲಿ ಸಾಗುತ್ತಿದೆಯಾ” ಎಂದು ಅವರು ಪ್ರಶ್ನಿಸಿದರು.

ನಾವೀಗ ಸಂವಿಧಾನದ ಅವಕಾಶಗಳ ಮೂಲಕವೇ ಮಾತನಾಡಬೇಕಾಗುತ್ತದೆ. ನೀಟ್, ಎನ್ಇಪಿ ಬಂದಾಗ ಅದನ್ನು ವಿರೋಧಿಸಿದ ತಮಿಳುನಾಡು ನಡೆ ಮಾದರಿಯಾಗಬೇಕು. ಆ ಹಿನ್ನೆಲೆಯಲ್ಲಿ ಕೇಂದ್ರ ಈ ನಡವಳಿಕೆಗಳ ವಿರುದ್ಧ ವಿರೋಧಿಸಬೇಕು. ರಾಜ್ಯ ಸರ್ಕಾರಗಳಿಗಿರುವ ಹಕ್ಕುಗಳನ್ನು ಬಳಸಿಕೊಂಡೇ ಹೋರಾಟ ಮಾಡಬೇಕಿದೆ ಎಂದು ಹೇಳಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...