ಭಾರತ | 2023ರಲ್ಲಿ 5 ಲಕ್ಷ ಜನರನ್ನು ಬಲವಂತವಾಗಿ ಮನೆಯಿಂದ ಹೊರ ದಬ್ಬಲಾಗಿದೆ: ವರದಿ

Date:

ದೇಶದಲ್ಲಿ ಕಳೆದ ವರ್ಷ (2023) ಸುಮಾರು 5 ಲಕ್ಷ ಜನರನ್ನು ಬಲವಂತವಾಗಿ ತಮ್ಮ ಮನೆಗಳಿಂದ ಹೊರಹಾಕಲಾಗಿದೆ. ಅವರ ಮನೆಗಳನ್ನು ಉರುಳಿಸಲಾಗಿದೆ ಎಂದು ಹೌಸಿಂಗ್ ಅಂಡ್ ಲ್ಯಾಂಡ್ ರೈಟ್ಸ್ ನೆಟ್‌ವರ್ಕ್ (ಎಚ್‌ಎಲ್‌ಆರ್‌ಎನ್‌) ವರದಿ ಹೇಳಿದೆ.

ಇತ್ತೀಚೆಗೆ ಎಚ್‌ಎಲ್‌ಆರ್‌ಎನ್‌, ‘ಭಾರತದಲ್ಲಿ ಬಲವಂತದ ಹೊರಹಾಕುವಿಕೆಗಳು: 2022 ಮತ್ತು 2023’ ಎಂಬ ಶೀರ್ಷಿಕೆಯಲ್ಲಿ ವರದಿಯನ್ನು ಪ್ರಕಟಿಸಿದೆ. ದೇಶದಲ್ಲಿ ಬಲವಂತವಾಗಿ ಹೊರದೂಡುತ್ತಿರುವ ಕೃತ್ಯಗಳ ಬಗ್ಗೆ ಗಮನ ಸೆಳೆದಿದೆ.

2022 ಮತ್ತು 2023ರಲ್ಲಿ ದೇಶಾದ್ಯಂತ ಬಲವಂತವಾಗಿ ಮನೆಗಳನ್ನು ಉರುಳಿಸುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ವಿಶೇಷವಾಗಿ, ಬಡವರು ಮತ್ತು ಅಂಚಿಗೆ ತಳ್ಳಲ್ಪಟ್ಟವರ ಮೇಲೆ ಇಂತಹ ದಮನಗಳು ಹೆಚ್ಚಾಗಿ ನಡೆದಿವೆ ಎಂಬುದನ್ನು ವರದಿ ಒತ್ತಿ ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2022-23ರಲ್ಲಿ 1.5 ಲಕ್ಷಕ್ಕೂ ಹೆಚ್ಚು ಮನೆಗಳನ್ನು ರಾಜ್ಯಗಳ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಪರಿಣಾಮವಾಗಿ 7.4 ಲಕ್ಷಕ್ಕೂ ಹೆಚ್ಚು ಜನರನ್ನು ಅವರ ಮನೆಗಳಿಂದ ಬಲವಂತವಾಗಿ ದಬ್ಬಲಾಗಿದೆ. 2023ರಲ್ಲಿಯೇ, ಕನಿಷ್ಠ 5,15,752 ಜನರು ತಮ್ಮ ಮನೆಗಳನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಈ ಸಂಖ್ಯೆಯು ಕಳೆದ ಏಳು ವರ್ಷಗಳಲ್ಲಿ ದಾಖಲಾದ ಪ್ರಕರಣಗಳಲ್ಲಿ ಅತ್ಯಧಿಕ ಸಂಖ್ಯೆಯಾಗಿದೆ.

2023ರಲ್ಲಿ ಬಹುತೇಕ ತೆರವು ಕಾರ್ಯಾಚರಣೆಗಳು (58.7%) ‘ಸ್ಲಂ’ ತೆರವು, ‘ಅತಿಕ್ರಮಣ’ ತೆರವು ಅಥವಾ ‘ನಗರದ ಸೌಂದರ್ಯೀಕರಣ’ ಯೋಜನೆಗಳ ನೆಪದಲ್ಲಿ ನಡೆದಿವೆ. ಅಲ್ಲದೆ, ಮೂಲಸೌಕರ್ಯ ಯೋಜನೆಗಳು (35%), ಪರಿಸರ ಯೋಜನೆಗಳು (4.7%), ಹಾಗೂ ವಿಪತ್ತು ನಿರ್ವಹಣೆಗಳಂತಹ (0.7%) ಕಾರ್ಯಾಚರಣೆಗಳ ಕಾರಣಕ್ಕೂ ಬಡ ಜನರು ತಮ್ಮ ಮನೆ-ಬದುಕು ಕಳೆದುಕೊಂಡಿದ್ದಾರೆ.

ಕಳೆದ ವರ್ಷ ದೆಹಲಿಯಲ್ಲಿ ಸರಿಸುಮಾರು 2.8 ಲಕ್ಷ ಜನರನ್ನು ತಮ್ಮ ಮನೆಗಳಿಂದ ಹೊರದಬ್ಬಲಾಗಿದ್ದು, ದೇಶದಲ್ಲಿಯೂ ಹೆಚ್ಚು ಜನರನ್ನು ಹೊರ ಹಾಕಿದ ನಗರವಾಗಿದೆ. 2022-23ರ ಎರಡು ವರ್ಷಗಳಲ್ಲಿ 2.9 ಲಕ್ಷಕ್ಕೂ ಹೆಚ್ಚು ಜನರನ್ನು ಹೊರಹಾಕಲಾಗಿದೆ. ಹೊರಹಾಕುವಲ್ಲಿ ನ್ಯಾಯಾಲಯಗಳ ಆದೇಶಗಳು ಮಹತ್ವ ಪಾತ್ರವಹಿಸಿವೆ.

ಹೊರಹಾಕಲ್ಪಟ್ಟವರಲ್ಲಿ ಹೆಚ್ಚಿನವರಿಗೆ ಪುನರ್ವಸತಿ ಸೌಲಭ್ಯಗಳು ದೊರೆತಿಲ್ಲ. ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಸರಿಯಾದ ಪ್ರಕ್ರಿಯೆಗಳನ್ನು ಅನುಸರಿಸುವಲ್ಲಿ ವಿಫಲರಾಗಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಕಾರಣವಾಗಿದೆ. ಇದರ ಪರಿಣಾಮವಾಗಿ, ಭಾರತದಾದ್ಯಂತ ಸುಮಾರು 17 ದಶಲಕ್ಷ (1.7 ಕೋಟಿ) ಜನರು ವಿವಿಧ ಕಾರಣಗಳಿಗಾಗಿ ಹೊರ ದಬ್ಬುವಿಕೆ ಮತ್ತು ಸ್ಥಳಾಂತರದ ಬೆದರಿಕೆಯಿಂದ ಬದುಕುತ್ತಿದ್ದಾರೆ ಎಂದು ವರದಿ ವಿವರಿಸಿದೆ.

ಈ ಸುದ್ದಿ ಓದಿದ್ದೀರಾ?: ಪೆಟ್ರೋಲ್ ಪಂಪ್‌ಗಳಲ್ಲಿ ‘ಮೋದಿ ಕಿ ಗ್ಯಾರಂಟಿ’ ಹೋರ್ಡಿಂಗ್ ಹಾಕಲು ಸೂಚನೆ!

ವರದಿಯು ಅಗತ್ಯ ಕ್ರಮದ ತುರ್ತು ಅಗತ್ಯತೆಯನ್ನು ಒತ್ತಿಹೇಳಿದೆ. ಎಲ್ಲ ರೀತಿಯಲ್ಲಿಯೂ ಹೊರ ದಬ್ಬುವ ಕಾರ್ಯಾಚರಣೆಗಳನ್ನು ನಿಷೇಧಿಸಬೇಕು ಎಂದು ಕರೆಕೊಟ್ಟಿದೆ. ಯಾವುದೇ ಹೊರ ದೂಡುವಿಕೆ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳುವ ಮೊದಲು ಸರಿಯಾದ ಪ್ರಕ್ರಿಯೆಯನ್ನು ಅನುಸರಿಬೇಕು. ಸಂತ್ರಸ್ತರ ಒಪ್ಪಿಗೆಯನ್ನು ಕಡ್ಡಾಯವಾಗಿ ಪಡೆಯಬೇಕು ಎಂಬುದನ್ನು ಒತ್ತಿಹೇಳಿದೆ. ಇದಲ್ಲದೆ, ಎಲ್ಲ ಸ್ಥಳಾಂತರಗೊಂಡ ಕುಟುಂಬಗಳಿಗೆ ಪುನರ್ವಸತಿ ಮತ್ತು ಪರ್ಯಾಯ ವಸತಿಗಳನ್ನು ಒದಗಿಸಬೇಕೆಂದು ಪ್ರತಿಪಾದಿಸಿದೆ.

ಹೆಚ್ಚುವರಿಯಾಗಿ, ನಗರ ಮತ್ತು ಗ್ರಾಮೀಣ ಸಮುದಾಯಗಳಿಗೆ ಸಾಕಷ್ಟು ವಸತಿ ಮತ್ತು ಭೂಮಿಯ ಹಕ್ಕನ್ನು ಎತ್ತಿಹಿಡಿಯುವ ಅಗತ್ಯವನ್ನು ವರದಿ ಒತ್ತಿಹೇಳಿದೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳಿಗೆ ಅನುಗುಣವಾಗಿ ಹಿಡುವಳಿಯ ಭದ್ರತೆಯನ್ನು ಒದಗಿಸುವ ಕ್ರಮಗಳ ಅನುಷ್ಠಾನಕ್ಕೆ ಆಗ್ರಹಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...