ಮನರೇಗ ರದ್ದು ‘ಐತಿಹಾಸಿಕ ತಪ್ಪು’ – ಅಂತಾರಾಷ್ಟ್ರೀಯ ತಜ್ಞರ ಎಚ್ಚರಿಕೆ

Date:

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗ) ಯೋಜನೆಯನ್ನು ಕಳಚಿ ಬಿಸಾಡಿದ ಮೋದಿ ಸರ್ಕಾರದ ಕೃತ್ಯವು ಮುಂಬರುವ ದಿನಗಳಲ್ಲಿ ‘ಐತಿಹಾಸಿಕ ತಪ್ಪು’ ಎನಿಸಲಿದೆಯೆಂದು ಅಂತಾರಾಷ್ಟ್ರೀಯ ಖ್ಯಾತಿಯ ಆರ್ಥಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.

ಈ ಯೋಜನೆಯನ್ನು ತಕ್ಷಣವೇ ಪುನರ್ ಸ್ಥಾಪಿಸಿ ಮೂಲರೂಪದಲ್ಲಿ ಜಾರಿಗೊಳಿಸಬೇಕೆಂದೂ ಒತ್ತಾಯಪಡಿಸಿದ್ದಾರೆ. ಮೋದಿ ಸರ್ಕಾರಕ್ಕೆ ಈ ಕುರಿತು ಬರೆದಿರುವ ಬಹಿರಂಗ ಪತ್ರಕ್ಕೆ ಸಹಿ ಮಾಡಿರುವವರು- ನೊಬೆಲ್ ಪ್ರಶಸ್ತಿ ಪಡೆದ ವಿದ್ವಾಂಸ ಜೋಸೆಫ್.ಇ.ಸ್ಟಿಗ್ಲಿಟ್ಝ್, ಪಾವ್ಲಿನಾ ಆರ್.ಶೆರ್ನೇವ (ಅಧ್ಯಕ್ಷರು, ದಿ ಲೆವಿ ಎಕನಾಮಿಕ್ಸ್ ಇನ್ಸ್ಟಿಟ್ಯೂಟ್ ಅಮೆರಿಕಾ), ಪ್ರೊ.ಥಾಮಸ್ ಪಿಕೆಟಿ, ಪ್ಯಾರಿಸ್ ಸ್ಕೂಲ್ ಆಫ್ ಎಕನಾಮಿಕ್ಸ್, ಪ್ರೊ.ಇಸಬೆಲ್ ಫೆರ್ರೆರಾಸ್, ಯೂನಿವರ್ಸಿಟಿ ಆಫ್ ಲೂವೇನ್ (ಬೆಲ್ಜಿಯಂ), ಪ್ರೊ.ಡ್ಯಾರಿಕ್ ಹ್ಯಾಮಿಲ್ಟನ್, ನ್ಯೂ ಸ್ಕೂಲ್ ಆಫ್ ಸೋಶಿಯಲ್ ರಿಸರ್ಚ್, ಅಮೆರಿಕಾ, ರ್ಯಾಂಡಲ್ ರೇ, ಹಿರಿಯ ವಿದ್ವಾಂಸ, ದಿ ಲೆವಿ ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ಸ್, ಪ್ರೊ.ಜೇಮ್ಸ್ ಗಾಲ್ಬ್ರೇತ್, ದಿ ಯೂನಿವರ್ಸಿಟಿ ಆಫ್ ಟೆಕ್ಸಸ್, ಆಸ್ಟಿನ್, ಅಮೆರಿಕ.

ಇದನ್ನು ಓದಿದ್ದೀರಾ? ಮನರೇಗಾ ವೇತನ ಪರಿಷ್ಕರಣೆ | ದಿನಗೂಲಿಯಲ್ಲಿ ಹರಿಯಾಣ ಅಗ್ರಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶದಲ್ಲಿ ಕನಿಷ್ಠ ಕೂಲಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬೇಡಿಕೆಯ ಪ್ರಕಾರ ಉದ್ಯೋಗ ನೀಡುವ ಮನರೇಗ ಜಗತ್ತಿನ ಮಹತ್ವದ ಹಕ್ಕುಗಳಲ್ಲಿ ಒಂದು. ಆರ್ಥಿಕ ಘನತೆಯನ್ನು ಮೂಲಭೂತ ಹಕ್ಕೆಂದು ಪರಿಗಣಿಸಿರುವ ಯೋಜನೆಯಿದು. ಈ ಯೋಜನೆಯ ಸಕಾರಾತ್ಮಕ ಪರಿಣಾಮವನ್ನು ಸಮರ್ಥಿಸಲು ಅಂಕಿಅಂಶಗಳ ದತ್ತಾಂಶ ಲಭ್ಯವಿದೆ. ಕೇವಲ ಗುಂಡಿ ಅಗೆದು, ಗುಂಡಿ ತುಂಬುವ ಅನುತ್ಪಾದಕ ಯೋಜನೆಯಿದು ಎಂಬುದು ಮಿಥ್ಯಾಸಂಗತಿ. ಹಿಂದೆಂದೂ ಇಲ್ಲದಷ್ಟು ಗ್ರಾಮೀಣ ವೇತನವೃದ್ಧಿಯು ಈ ಯೋಜನೆಯಡಿ ಆಗಿದೆ ಎಂದು ಬಹಿರಂಗ ಪತ್ರವು ವಾದಿಸಿದೆ.

ಸತತವಾಗಿ ಕಡಿಮೆ ಹಣ ಹಂಚಿಕೆ ಮತ್ತು ಉದ್ಯೋಗಿಗಳ ಕೂಲಿ ಹಣ ಪಾವತಿಯಲ್ಲಿ ತೀವ್ರ ವಿಳಂಬದ ಕಾರಣ ಈ ಯೋಜನೆ ಸೊರಗಿದೆ. ಆದರೆ ಆರ್ಥಿಕ ಹೊಣೆಯನ್ನು ರಾಜ್ಯ ಸರ್ಕಾರಗಳ ಹೆಗಲಿಗೆ ವರ್ಗಾಯಿಸುವ ಉದ್ದೇಶದ ಹೊಸ ಮಸೂದೆಯು ಈ ಯೋಜನೆಯ ಅಸ್ತಿತ್ವವನ್ನೇ ಅಳಿಸಿ ಹಾಕಲಿದೆ. ಹಣಸಂಪನ್ಮೂಲವಿಲ್ಲದ ಬಡರಾಜ್ಯಗಳು ಅನಿವಾರ್ಯವಾಗಿ ಈ ಯೋಜನೆಯನ್ನು ಕೈಬಿಡಬೇಕಾಗುತ್ತದೆ ಎಂಬ ಅನುಮಾನವನ್ನು ಈ ಆರ್ಥಶಾಸ್ತ್ರಜ್ಞರು ಪ್ರಕಟಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಮನರೇಗ ಆರ್ಥಿಕ ನೆರವನ್ನು ನಿಲ್ಲಿಸಿರುವ ಕೇಂದ್ರ ಸರ್ಕಾರದ ನಡೆಯು, ಅಧಿಕಾರದ ರಾಜಕೀಯ ದುರುಪಯೋಗದ ನಿದರ್ಶನ ಎಂದು ಟೀಕಿಸಿದ್ದಾರೆ.

ಮನರೇಗ ಯೋಜನೆಯು ಬಡವರಿಗೆ ದುಡಿಮೆಯ ಅವಕಾಶ ನೀಡುವುದು ಮಾತ್ರವಲ್ಲದೆ, ಬಾವಿ, ರಸ್ತೆ, ಕೊಳಗಳನ್ನು ನಿರ್ಮಿಸಿ ಸ್ಥಳೀಯ ಹಣಕಾಸಿಗೆ ರಭಸ ನೀಡುತ್ತಿತ್ತು. ಈ ಯೋಜನೆಯನ್ನು ರದ್ದುಗೊಳಿಸಿರುವ ನಡೆಯು ಬಡತನ ನಿವಾರಣೆ, ಸಾಮಾಜಿಕ ನ್ಯಾಯ ಒದಗಿಸುವಿಕೆ ಹಾಗೂ ಪರಿಸರ ಕಾಳಜಿಯ ಖಾತ್ರಿಯನ್ನು ಕೈ ಬಿಟ್ಟಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...