ಅನುಮಾನಗಳನ್ನು ಹುಟ್ಟುಹಾಕುವುದೇ ಕೆಲವರ ಕೆಲಸ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಹಾಗೆಯೇ ಯಾವುದೇ ತಪ್ಪುಗಳು ಆಗದಂತೆ ನೋಡಿಕೊಳ್ಳಲು ಚುನಾವಣಾ ಆಯೋಗದಲ್ಲಿ (ಇಸಿ) ವ್ಯವಸ್ಥೆಗಳು ಬಲವಾಗಿವೆ ಎಂದು ಪ್ರತಿಪಾದಿಸಿದರು.
ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣದಲ್ಲಿ ಭಾರೀ ವ್ಯತ್ಯಾಸವು ಅನುಮಾನಕ್ಕೆ ಕಾರಣವಾಗಿದೆ. ಮತದಾನ ನಡೆದ ದಿನ ತಿಳಿಸಿರುವ ಮತದಾನ ಪ್ರಮಾಣಕ್ಕೂ ಅಂತಿಮ ಮತದಾನ ಪ್ರಮಾಣದಲ್ಲಿ ಭಾರೀ ವ್ಯತ್ಯಯ ಕಂಡುಬಂದಿದೆ.
ಇದನ್ನು ಓದಿದ್ದೀರಾ? ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ಗೆ ‘ಝಡ್’ ವರ್ಗದ ಭದ್ರತೆ
ಸಾಮಾನ್ಯವಾಗಿ ಮತದಾನ ನಡೆದ ದಿನ ಚುನಾವಣಾ ಆಯೋಗ ನೀಡುವ ಮತದಾನ ಪ್ರಮಾಣದ ಲೆಕ್ಕಾಚಾರಕ್ಕೂ ಅಂತಿಮ ಮತದಾನ ಪ್ರಮಾಣವು ಶೇಕಡ 4ರಷ್ಟು ವ್ಯತ್ಯಾಸ ಇರುತ್ತದೆ. ಆದರೆ ಈ ಬಾರಿ ಮೊದಲೆರಡು ಹಂತಗಳ ಚುನಾವಣೆಯಲ್ಲಿ ಮತದಾನ ಪ್ರಮಾಣದಲ್ಲಿ ಶೇಕಡ 6-9ರಷ್ಟು ವ್ಯತ್ಯಾಸವಿದೆ. ಇಷ್ಟು ಮಾತ್ರವಲ್ಲದೆ ಚುನಾವಣಾ ಆಯೋಗ ಒಟ್ಟು ಮತದಾರರ ಸಂಖ್ಯೆ, ಮೊದಲಾದ ಮಾಹಿತಿ ಬಿಡುಗಡೆ ಮಾಡಿಲ್ಲ. ಇದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.
ಇದನ್ನು ಓದಿದ್ದೀರಾ? ಈಡೇರದ ಆಸೆಗಳಿಗೆ ನಮ್ಮನ್ನು ದೂಷಿಸುವುದು ಸರಿಯಲ್ಲ; ಇವಿಎಂ ಕುರಿತ ಪ್ರಶ್ನೆಗೆ ಚುನಾವಣಾ ಆಯುಕ್ತರ ಉತ್ತರ
ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, “ಅನುಮಾನಗಳನ್ನು ಹುಟ್ಟುಹಾಕುವುದೇ ಕೆಲವರ ಕೆಲಸವಾಗಿದೆ. ನಮ್ಮ ವ್ಯವಸ್ಥೆಯು ಪ್ರಬಲವಾಗಿದೆ, ಚುನಾವಣಾ ಆಯೋಗ ಇಂದಿನಿಂದ ಅಲ್ಲ, ಇದು ಕಳೆದ 70-72 ವರ್ಷಗಳಿಂದ ಕೆಲಸ ಮಾಡುತ್ತಿದೆ” ಎಂದು ಹೇಳಿದ್ದಾರೆ.
ತನ್ನ ವೆಬ್ಸೈಟ್ನಲ್ಲಿ ಮತಗಟ್ಟೆವಾರು ಮತದಾರರ ಅಂಕಿಅಂಶಗಳನ್ನು ಅಪ್ಲೋಡ್ ಮಾಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಎನ್ಜಿಒ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದ ಒಂದು ದಿನದ ನಂತರ ಚುನಾವಣಾ ಆಯುಕ್ತರು ಈ ಹೇಳಿಕೆಯನ್ನು ನೀಡಿದ್ದಾರೆ.





