ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಅವ್ಯವಸ್ಥೆಗಳ ಪಟ್ಟಿ ಇಲ್ಲಿದೆ. ಇದನ್ನು ಸರಿಪಡಿಸದೆ, ಕೆಪಿಎಸ್ ಶಾಲೆಗಳತ್ತ ನೋಡುವುದು ಎಷ್ಟು ಸರಿ?
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಅಡಿಯಲ್ಲಿ ಏಕೋಪಾಧ್ಯಾಯ ಶಾಲೆಗಳು: 6,400
50 ಅಥವಾ 50ಕ್ಕಿಂತ ಕಡಿಮೆ ಇರುವ ಶಾಲೆಗಳ ಸಂಖ್ಯೆ: 23,342
ಸರ್ಕಾರಿ ಶಾಲೆಗಳು: 46,473
ಅಲ್ಲಿ ಮಕ್ಕಳದಾಖಲಾತಿ: 42,75,354
ಸರಾಸರಿ: ಪ್ರತಿ ಶಾಲೆಗೆ/92 ಮಕ್ಕಳು
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ: 43,133
ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ: 10,168
ಸರ್ಕಾರಿ ಶಾಲೆಗಳಲ್ಲಿನ ಅತಿಥಿ ಶಿಕ್ಷಕರ ಸಂಖ್ಯೆ: 40,000
2028-29ರಲ್ಲಿ ನಿವೃತ್ತಿ ಹೊಂದುತ್ತಿರುವ ಪ್ರಾಥಮಿಕ ಶಿಕ್ಷಕರ ಸಂಖ್ಯೆ: 34,807
2028-29ರಲ್ಲಿ ನಿವೃತ್ತಿ ಹೊಂದುತ್ತಿರುವ ಪ್ರೌಢಶಾಲಾ ಶಿಕ್ಷಕರ ಸಂಖ್ಯೆ: 4,128
(ಮೇಲಿನ ಮಾಹಿತಿ ಕೃಪೆ: ಶಿಕ್ಷಣ ಇಲಾಖೆ ಮತ್ತು ನಿರಂಜನಾರಾಧ್ಯ)
ಇದನ್ನು ಓದಿದ್ದೀರಾ?: ಶಿಕ್ಷಣದ ಜವಾಬ್ದಾರಿಯಿಂದ ಸರ್ಕಾರ ನಿಧಾನವಾಗಿ ನುಣುಚಿಕೊಳ್ಳುತ್ತಿದೆಯೇ?
ಇನ್ನು ರಾಜ್ಯ ಶಿಕ್ಷಣ ಇಲಾಖೆಯ ವೈಫಲ್ಯದ ಕಾರಣದಿಂದ…
- ಕಳೆದ ಮೂರು ದಶಕಗಳಿಂದ ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 500-1000 ಖಾಸಗಿ ಶಾಲೆ ತೆರೆಯಲು ಅನುಮತಿ ನೀಡಲಾಗಿದೆ.
- 50 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಶಿಕ್ಷಕರ ಹುದ್ದೆ ಖಾಲಿ ಇದ್ದರೂ ನೇಮಕಾತಿ ಮಾಡಿಕೊಳ್ಳುತ್ತಿಲ್ಲ.
- 1-5ರವರೆಗೆ: ತರಗತಿಗೆ ಒಬ್ಬ ಶಿಕ್ಷಕರು
- 6-10ರವರೆಗೆ: ವಿಷಯಕ್ಕೊಬ್ಬ ಶಿಕ್ಷಕರು ಅಗತ್ಯವಿದೆ. ಆದರೆ ಇದು ವಾಸ್ತವದಲ್ಲಿ ಜಾರಿಗೊಂಡಿಲ್ಲ
- ಬಹುತೇಕ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ, ಕನಿಷ್ಠ ಮೂಲಭೂತ ಸೌಕರ್ಯಗಳೂ ಇಲ್ಲದ ಸಾವಿರಾರು ಶಾಲೆಗಳಿವೆ
- ಆಧುನಿಕ, ಸುಸಜ್ಜಿತ ಗ್ರಂಥಾಲಯಗಳಿಲ್ಲ
- ಕಂಪ್ಯೂಟರ್ಗಳ ಲಭ್ಯತೆ ಇಲ್ಲ
- ಶಿಕ್ಷಕರಿಗೆ ಪಾಠಕ್ಕಿಂತ ಇತರೆ ಕೆಲಸಗಳ ಹೊರೆಯೇ ಹೆಚ್ಚಾಗಿದೆ.
- ಇರುವ ಶಿಕ್ಷಕರ ಪೈಕಿ ಕೆಲವರು ಬದ್ಧತೆಯಿಂದ ಕೆಲಸ ಮಾಡುತ್ತಿಲ್ಲ.
- ಇಂದಿಗೂ ಆಧುನಿಕ ಶಿಕ್ಷಣ ಮತ್ತು ವಂಚಿತ ಸಮುದಾಯಗಳ ಶಿಕ್ಷಣಕ್ಕೆ ಅಗತ್ಯವಾದ ವ್ಯಾಸಂಗಕ್ರಮ(ಪೆಡಗಾಜಿ)
ರೂಪಿಸಲು ವಿಫಲರಾಗಿದ್ದಾರೆ. - ಶಿಕ್ಷಕರ ತರಬೇತಿಗಾಗಿ ಇರುವ ‘ಡಯಟ್’ನ್ನು ಬಲಪಡಿಸದೆ ಅದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ, ಎನ್ಜಿಒಗಳಿಗೆ ಹೊರಗುತ್ತಿಗೆ ನೀಡುವುದು ಯಾವ ರೀತಿ ನೀತಿ?
- ಬಜೆಟ್ ವೆಚ್ಚದ ಶೇ.24ರಷ್ಟಿರಬೇಕಾದ ಸಾರ್ವಜನಿಕ ಬಂಡವಾಳ ಹೂಡಿಕೆ ಇಂದಿಗೂ ಶೇ.11ರ ಆಸುಪಾಸಿನಲ್ಲಿದೆ. ಇದರಿಂದ ಸರ್ಕಾರಿ ಶಾಲೆಗಳ ಸಬಲೀಕರಣ ಸಾಧ್ಯವೇ?
- ಇದರ ಬದಲು ಬಂಡವಾಳಶಾಹಿಗಳ ಮೇಲೆ ಅವಲಂಬಿತರಾಗುವುದು ಎಷ್ಟು ಸರಿ?
- ಸಿಎಸ್ಆರ್ ಫಂಡ್ ಮೇಲೆ ಅವಲಂಬಿತರಾಗುವುದು ನ್ಯಾಯವೇ?
- ಇಂತಹ ಪರಿಸ್ಥಿತಿಯಲ್ಲಿ ಗುಣಮಟ್ಟದ ಶಿಕ್ಷಣ ಕೊಡುವುದು ಹೇಗೆ?
- ಸರ್ಕಾರವು ಇದರ ಕುರಿತು ಮೊದಲು ಗಮನ ಹರಿಸಬೇಕಲ್ಲವೇ?
ಈಗ ಹೇಳಿ, ಇದಕ್ಕೆ ಕೆಪಿಎಸ್ ವ್ಯವಸ್ಥೆ ಪರಿಹಾರವೇ? ಬದಲಿಗೆ, ಸಮಗ್ರ ಶಿಕ್ಷಣ ನೀತಿಯ ಅಗತ್ಯವಿದೆಯಲ್ಲವೇ? ಥೋರಟ್ ಆಯೋಗದ ಎಸ್ಇಪಿ(ರಾಜ್ಯ ಶಿಕ್ಷಣ ನೀತಿ) ಶಿಫಾರಸ್ಸುಗಳ ಕತೆ ಏನು?

ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ




