ಉನ್ನಾಂವ್ ಅತ್ಯಾಚಾರ ಪ್ರಕರಣ: ಬಹಿರಂಗ ಪತ್ರ ಬರೆದ ಬಿಜೆಪಿ ನಾಯಕ ಕುಲದೀಪ್ ಸೆಂಗರ್ ಪುತ್ರಿ

Date:

ಮಾಜಿ ಬಿಜೆಪಿ ಶಾಸಕ ಮತ್ತು ಉನ್ನಾಂವ್ ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್ ಸಿಂಗ್ ಸೆಂಗರ್ ಅವರ ಪುತ್ರಿ ಇಶಿತಾ ಸೆಂಗರ್ ಸೋಮವಾರ ಬಹಿರಂಗ ಪತ್ರ ಬರೆದಿದ್ದಾರೆ. “ದಣಿದಿದ್ದೇನೆ, ಭಯಭೀತಳಾಗಿದ್ದೇನೆ ಮತ್ತು ನಿಧಾನವಾಗಿ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದೇನೆ” ಎಂದು ಹೇಳಿದ್ದಾರೆ.

2017ರ ಉನ್ನಾಂವ್ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ಗೆ ದೆಹಲಿ ಹೈಕೋರ್ಟ್ ಡಿಸೆಂಬರ್ 23ರಂದು ಜಾಮೀನು ನೀಡಿದೆ. ಹಾಗೆಯೇ ನ್ಯಾಯಮೂರ್ತಿಗಳಾದ ಸುಬ್ರಮೋನಿಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರ ಪೀಠವು, ಕುಲದೀಪ್ ಶಿಕ್ಷೆಯ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯ ಸಮಯದಲ್ಲಿ ಆತನಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನೂ ಅಮಾನತುಗೊಳಿಸಿತ್ತು.

ಇದನ್ನು ಓದಿದ್ದೀರಾ? ಉನ್ನಾಂವ್ ಅತ್ಯಾಚಾರ ಪ್ರಕರಣ: ಬಿಜೆಪಿ ನಾಯಕ ಕುಲದೀಪ್‌ ಜೀವಾವಧಿ ಶಿಕ್ಷೆ ಅಮಾನತು ಆದೇಶಕ್ಕೆ ಸುಪ್ರೀಂ ತಡೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದರೆ ಸಿಬಿಐ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸುಪ್ರೀಂ ಸಿಬಿಐ ಅರ್ಜಿಯನ್ನು ಪುರಸ್ಕರಿಸಿ, ಹೈಕೋರ್ಟ್ ತೀರ್ಪಿಗೆ ತಡೆ ನೀಡಿದೆ. ಈ ತೀರ್ಪಿನ ಬೆನ್ನಲ್ಲೇ ಸೆಂಗರ್ ಪುತ್ರಿ ಇಶಿತಾ ಸೆಂಗರ್ ಎಕ್ಸ್‌ನಲ್ಲಿ ಬಹಿರಂಗ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.

ಇಶಿತಾ ಸೆಂಗರ್‌ ಪೋಸ್ಟ್‌ನಲ್ಲಿ ಏನಿದೆ?

“ನಾನು ದಣಿದಿದ್ದು, ಭಯಭೀತಳಾಗಿದ್ದೇನೆ ಮತ್ತು ನಿಧಾನವಾಗಿ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದೇನೆ. ಆದರೆ ಇನ್ನೂ ಭರವಸೆಯನ್ನು ಹೊಂದಿರುವ ಮಗಳಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ. ಏಕೆಂದರೆ ಬೇರೆಲ್ಲಿಯೂ ಹೋಗಲು ನನಗೆ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

“ಎಂಟು ವರ್ಷಗಳಿಂದ, ನನ್ನ ಕುಟುಂಬ ಮತ್ತು ನಾನು ಕಾಯುತ್ತಿದ್ದೆವು. ಸದ್ದಿಲ್ಲದೆ, ತಾಳ್ಮೆಯಿಂದ ಕಾಯುತ್ತಿದ್ದೇವೆ. ನಾವು ಎಲ್ಲವನ್ನೂ ‘ಸರಿಯಾದ ರೀತಿಯಲ್ಲಿ’ ಮಾಡಿದರೆ ಸತ್ಯವು ಅಂತಿಮವಾಗಿ ತಾನೇ ಮಾತನಾಡುತ್ತದೆ ಎಂದು ನಂಬಿಕೊಳ್ಳುತ್ತಾ ಕಾಯುತ್ತಿದ್ದೇವೆ. ನಾವು ಕಾನೂನನ್ನು ನಂಬಿದ್ದೇವೆ. ನಾವು ಸಂವಿಧಾನವನ್ನು ನಂಬಿದ್ದೇವೆ. ಈ ದೇಶದಲ್ಲಿ ನ್ಯಾಯವು ಹ್ಯಾಶ್‌ಟ್ಯಾಗ್‌ಗಳು ಅಥವಾ ಸಾರ್ವಜನಿಕ ಕೋಪವನ್ನು ಅವಲಂಬಿಸಿಲ್ಲ ಎಂದು ನಾವು ನಂಬಿದ್ದೇವೆ” ಎಂದಿದ್ದಾರೆ.

“ಇಂದು ನಂಬಿಕೆ ಇಲ್ಲದಾಗುತ್ತಿರುವುದರಿಂದ ನಾನು ಇದನ್ನು ಬರೆಯುತ್ತಿದ್ದೇನೆ. ನನ್ನ ಮಾತುಗಳು ಕೇಳುವ ಮೊದಲೇ, ನನ್ನ ಗುರುತು ‘ಬಿಜೆಪಿ ಶಾಸಕನ ಮಗಳು’ ಎಂಬ ಲೇಬಲ್‌ಗೆ ಇಳಿದಿದೆ. ನನ್ನಲ್ಲಿ ಮಾನವೀಯತೆಯನ್ನು ಅಳಿಸಿಹಾಕಿರುವಂತೆ ನೋಡಲಾಗುತ್ತದೆ. ಈ ಒಂದು ಲೇಬಲ್ ನನ್ನನ್ನು ನ್ಯಾಯ, ಘನತೆ ಅಥವಾ ಮಾತನಾಡುವ ಹಕ್ಕಿಗೆ ಅನರ್ಹಳನ್ನಾಗಿ ಮಾಡುತ್ತದೆ. ನನ್ನನ್ನು ಎಂದಿಗೂ ಭೇಟಿಯಾಗದ, ಒಂದೇ ಒಂದು ದಾಖಲೆಯನ್ನು ಓದದ, ಒಂದೇ ಒಂದು ನ್ಯಾಯಾಲಯದ ದಾಖಲೆಯನ್ನು ನೋಡದ ಜನರು, ನನ್ನ ಜೀವನಕ್ಕೆ ಯಾವುದೇ ಮೌಲ್ಯವಿಲ್ಲ ಎಂದು ನಿರ್ಧರಿಸಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಈ ವರ್ಷಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಹಲವು ಬಾರಿ ನನ್ನನ್ನು ಅತ್ಯಾಚಾರ ಮಾಡಬೇಕು, ಕೊಲ್ಲಬೇಕು ಅಥವಾ ಶಿಕ್ಷಿಸಬೇಕು ಎಂದು ಹಲವು ಮಂದಿ ಹೇಳಿದ್ದಾರೆ. ಈ ದ್ವೇಷ ಅಮೂರ್ತವಲ್ಲ. ಇದು ದೈನಂದಿನ. ಇದು ನಿರಂತರ. ನೀವು ಬದುಕಲು ಅರ್ಹರಲ್ಲ ಎಂದು ಅನೇಕ ಜನರು ನಿರ್ಧರಿಸಿದ್ದಾರೆ ಎಂದು ನಿಮಗೆ ತಿಳಿದಾಗ ನೀವು ಕುಸಿಯುತ್ತೀರಿ” ಎಂದು ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

“ನಾವು ಶಕ್ತಿಶಾಲಿಗಳಾಗಿದ್ದರಿಂದ ಅಲ್ಲ, ಸಂಸ್ಥೆಗಳ ಮೇಲೆ ನಂಬಿಕೆ ಇಟ್ಟಿದ್ದರಿಂದ ನಾವು ಮೌನವಾಗಿರುವ ನಿರ್ಧಾರವನ್ನು ಆರಿಸಿಕೊಂಡಿದ್ದೇವೆ. ನಾವು ಪ್ರತಿಭಟನೆಗಳನ್ನು ನಡೆಸಲಿಲ್ಲ. ನಾವು ಟಿವಿ ಚರ್ಚೆಗಳಲ್ಲಿ ಕೂಗಾಡಲಿಲ್ಲ. ಪ್ರತಿಕೃತಿಗಳನ್ನು ಸುಟ್ಟುಹಾಕಲಿಲ್ಲ ಅಥವಾ ಟ್ರೆಂಡ್ ಹ್ಯಾಶ್‌ಟ್ಯಾಗ್‌ಗಳನ್ನು ಸೃಷ್ಟಿಸಲಿಲ್ಲ. ಸತ್ಯವನ್ನು ತೋರಿಸುವ ಅಗತ್ಯವಿಲ್ಲ ಎಂದು ನಾವು ನಂಬಿದ್ದರಿಂದ ನಾವು ಕಾಯುತ್ತಿದ್ದೆವು. ಆದರೆ ಈ ಮೌನ ನಮಗೆ ಕೊಟ್ಟಿದ್ದು ಏನು” ಎಂದು ಪ್ರಶ್ನಿಸಿದ್ದಾರೆ.

“ನಮ್ಮ ಘನತೆಯನ್ನು ಕಸಿದುಕೊಳ್ಳಲಾಗಿದೆ. ಎಂಟು ವರ್ಷಗಳಿಂದ ನಮ್ಮನ್ನು ಪ್ರತಿದಿನ ನಿಂದಿಸಲಾಗಿದೆ, ಅಪಹಾಸ್ಯ ಮಾಡಲಾಗಿದೆ ಮತ್ತು ಅಮಾನವೀಯವಾಗಿ ಕಾಣಲಾಗಿದೆ. ನಾವು ಆರ್ಥಿಕವಾಗಿ, ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ನೊಂದಿದ್ದೇವೆ. ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಓಡುತ್ತಿದ್ದೇವೆ, ಪತ್ರಗಳನ್ನು ಬರೆಯುತ್ತಿದ್ದೇವೆ, ಕರೆಗಳನ್ನು ಮಾಡುತ್ತಿದ್ದೇವೆ, ನಮ್ಮ ಮಾತನ್ನೂ ಕೇಳುವಂತೆ ಬೇಡಿಕೊಳ್ಳುತ್ತಿದ್ದೇವೆ. ನಾವು ತಟ್ಟದ ಬಾಗಿಲು ಇಲ್ಲ. ನಾವು ಸಂಪರ್ಕಿಸದ ಯಾವುದೇ ಅಧಿಕಾರವಿಲ್ಲ. ನಾವು ಬರೆಯದ ಯಾವುದೇ ಮಾಧ್ಯಮ ಸಂಸ್ಥೆ ಇಲ್ಲ” ಎಂದು ತಿಳಿಸಿದ್ದಾರೆ.

“ಆದರೆ ಯಾರೂ ಕೇಳಲಿಲ್ಲ. ಸತ್ಯ ದುರ್ಬಲವಾಗಿದೆ ಎಂದಲ್ಲ. ಪುರಾವೆಗಳ ಕೊರತೆಯಿದ್ದ ಕಾರಣದಿಂದಾಗಿ ಅಲ್ಲ. ನಮ್ಮ ಸತ್ಯವು ಅನಾನುಕೂಲಕರವಾಗಿದ್ದ ಕಾರಣ ಯಾರೂ ನಮ್ಮ ಮಾತು ಕೇಳಲಿಲ್ಲ. ಜನರು ನಮ್ಮನ್ನು ‘ಶಕ್ತಿಶಾಲಿ’ ಎಂದು ಕರೆಯುತ್ತಾರೆ. ಎಂಟು ವರ್ಷಗಳ ಕಾಲ ಒಂದು ಕುಟುಂಬವನ್ನು ಮೌನವಾಗಿಸುವುದು ಯಾವ ರೀತಿಯ ಶಕ್ತಿ ಎಂದು ನಾನು ನಿಮ್ಮನ್ನು ಕೇಳುತ್ತೇನೆ? ನಿಮ್ಮ ಅಸ್ತಿತ್ವವನ್ನು ಒಪ್ಪಿಕೊಳ್ಳಲು ಸಹ ಇಷ್ಟವಿಲ್ಲದಿರುವಂತೆ ತೋರುವ ವ್ಯವಸ್ಥೆಯನ್ನು ನಂಬುತ್ತಾ ಮೌನವಾಗಿ ಕುಳಿತಿರುವಾಗ ನಿಮ್ಮ ಹೆಸರನ್ನು ಪ್ರತಿದಿನ ಮಣ್ಣು ಮಾಡುವುದನ್ನು ನೋಡಿಯೂ ಸುಮ್ಮನಿರುವುದು ಯಾವ ರೀತಿಯ ಶಕ್ತಿ” ಎಂದು ಪ್ರಶ್ನಿಸಿದ್ದಾರೆ.

“ಇಂದು ನನ್ನನ್ನು ಹೆದರಿಸುವುದು ಅನ್ಯಾಯವಲ್ಲ, ಅದು ಭಯ. ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ಭಯ. ನ್ಯಾಯಾಧೀಶರು, ಪತ್ರಕರ್ತರು, ಸಂಸ್ಥೆಗಳು ಮತ್ತು ಸಾಮಾನ್ಯ ನಾಗರಿಕರೆಲ್ಲರೂ ಮೌನಕ್ಕೆ ಒತ್ತಡ ಹೇರುವಷ್ಟು ಗಟ್ಟಿಯಾದ ಭಯ. ಯಾರೂ ನಮ್ಮೊಂದಿಗೆ ನಿಲ್ಲಲು ಧೈರ್ಯ ಮಾಡಬಾರದು, ಯಾರೂ ನಮ್ಮ ಮಾತನ್ನು ಕೇಳಲು ಧೈರ್ಯ ಮಾಡಬಾರದು ಮತ್ತು ‘ಸತ್ಯವನ್ನು ನೋಡೋಣ’ ಎಂದು ಹೇಳಲು ಯಾರೂ ಧೈರ್ಯ ಮಾಡಬಾರದು ಎಂಬ ಕಾರಣಕ್ಕೆ ಸೃಷ್ಟಿಸಲಾದ ಭಯ” ಎಂದಿದ್ದಾರೆ.

ಇದನ್ನು ಓದಿದ್ದೀರಾ? ಉನ್ನಾಂವ್ ಅತ್ಯಾಚಾರ ಕಾಂಡ: ಕುಲದೀಪ್ ಸೆಂಗರ್ ಶಿಕ್ಷೆ ಅಮಾನತಿಗೆ ತಡೆ ಕೋರಿ ಸುಪ್ರೀಂಗೆ ಅರ್ಜಿ

“ಇವೆಲ್ಲವೂ ನನ್ನನ್ನು ಆಳವಾಗಿ ಬೆಚ್ಚಿಬೀಳಿಸಿದೆ. ಆಕ್ರೋಶ ಮತ್ತು ತಪ್ಪು ಮಾಹಿತಿಯಿಂದ ಸತ್ಯವನ್ನು ಅಷ್ಟು ಸುಲಭವಾಗಿ ಮುಚ್ಚಿಹಾಕಲು ಸಾಧ್ಯವಿಲ್ಲ. ನನ್ನಂತಹ ವ್ಯಕ್ತಿ ಎಲ್ಲಿಗೆ ಹೋಗುವುದು? ಒತ್ತಡ ಮತ್ತು ಸಾರ್ವಜನಿಕ ಉನ್ಮಾದವು ಪುರಾವೆಗಳು ಮತ್ತು ನ್ಯಾಯ ಪ್ರಕ್ರಿಯೆಯನ್ನು ಮರೆಮಾಚಲು ಪ್ರಾರಂಭಿಸಿದರೆ, ಸಾಮಾನ್ಯ ನಾಗರಿಕನಿಗೆ ನಿಜವಾಗಿಯೂ ಯಾವ ರಕ್ಷಣೆ ಇದೆ” ಎಂದು ಕೇಳಿದ್ದಾರೆ.

“ನಾನು ಯಾರನ್ನೂ ಬೆದರಿಸಲು ಈ ಪತ್ರವನ್ನು ಬರೆಯುತ್ತಿಲ್ಲ. ನಾನು ಸಹಾನುಭೂತಿ ಪಡೆಯಲು ಈ ಪತ್ರವನ್ನು ಬರೆಯುತ್ತಿಲ್ಲ. ನಾನು ಭಯಭೀತಳಾಗಿರುವುದರಿಂದ ಮತ್ತು ಎಲ್ಲೋ ಯಾರೋ ಕಾಳಜಿ ವಹಿಸಬಹುದು ಎಂದು ಇನ್ನೂ ನಂಬುವುದರಿಂದ ನಾನು ಬರೆಯುತ್ತಿದ್ದೇನೆ. ನಾವು ಕರುಣೆಯನ್ನು ಕೇಳುತ್ತಿಲ್ಲ. ನಾವು ಯಾರೆಂಬುದರ ಕಾರಣದಿಂದಾಗಿ ನಾವು ರಕ್ಷಣೆಯನ್ನು ಕೇಳುತ್ತಿಲ್ಲ. ನಾವು ನ್ಯಾಯವನ್ನು ಕೇಳುತ್ತಿದ್ದೇವೆ ಏಕೆಂದರೆ ನಾವು ಮನುಷ್ಯರು. ದಯವಿಟ್ಟು ಕಾನೂನು ಭಯವಿಲ್ಲದೆ ಮಾತನಾಡಲಿ. ದಯವಿಟ್ಟು ಒತ್ತಡವಿಲ್ಲದೆ ಸಾಕ್ಷ್ಯವನ್ನು ಪರೀಕ್ಷಿಸಲಿ. ಸತ್ಯವು ಜನಪ್ರಿಯವಾಗಿಲ್ಲದಿದ್ದರೂ ಸಹ ದಯವಿಟ್ಟು ಅದನ್ನು ಸತ್ಯವೆಂದು ಪರಿಗಣಿಸಿ. ನಾನು ಈ ದೇಶವನ್ನು ಇನ್ನೂ ನಂಬುವ ಮಗಳು. ದಯವಿಟ್ಟು ಆ ನಂಬಿಕೆಗಾಗಿ ನಾನು ವಿಷಾದಿಸುವಂತೆ ಮಾಡಬೇಡಿ” ಎಂದೂ ಹೇಳಿದ್ದಾರೆ.

ಸದ್ಯ ಇಶಿತಾ ಬಹಿರಂಗಪತ್ರ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಸೆಂಗರ್ ಮಾಡಿದ ತಪ್ಪಿಗೆ ಇಡೀ ಕುಟುಂಬ ಶಿಕ್ಷೆ ಅನುಭವಿಸುವಂತಾಗಿದೆ ಎಂದು ಕೆಲ ನೆಟ್ಟಿಗರು ಹೇಳಿದರೆ, ಇನ್ನೂ ಕೆಲ ನೆಟ್ಟಿಗರು ಏನೇ ಆದರೂ ಓರ್ವ ಪುರುಷ ಮಾಡಿದ ಕೃತ್ಯದಿಂದಾಗಿ ಬಳಲುವುದು ಮಹಿಳೆಯರು. ಒಂದೆಡೆ ಸೆಂಗರ್‌ನಿಂದ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಇನ್ನೊಂದೆಡೆ ಸೆಂಗರ್‌ನ ಪುತ್ರಿ, ಪತ್ನಿ ಮತ್ತು ಕುಟುಂಬದ ಮಹಿಳೆಯರು ಎಂದು ಹೇಳಿದ್ದಾರೆ.

ಇವೆಲ್ಲವುದರ ನಡುವೆ ಇಶಿತಾ ಈ ಹಿಂದಿನ ಪೋಸ್ಟ್‌ಗಳು ಕೂಡಾ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಹಿಂದೆ ಇಶಿತಾ ತಮ್ಮ ತಂದೆ ನಿರಪರಾಧಿ, ಸಂತ್ರಸ್ತೆಯ ಕಟ್ಟು ಕಥೆ ಎಂಬರ್ಥದಲ್ಲಿ ಹಲವು ಪೋಸ್ಟ್‌ಗಳನ್ನು ಮಾಡಿದ್ದರು ಮತ್ತು ಪೋಸ್ಟ್‌ಗಳನ್ನು ರೀಪೋಸ್ಟ್ ಮಾಡಿದ್ದರು. ಈ ನಿಟ್ಟಿನಲ್ಲಿ “ನೀವೂ ಮಹಿಳೆ, ಆದ್ದರಿಂದ ಸಂತ್ರಸ್ತೆಯ ಪರವಾಗಿಯೇ ನಿಲ್ಲಬಹುದು ಎಂಬ ಭರವಸೆ ನಮ್ಮದು” ಎಂಬ ಕಾಮೆಂಟ್‌ಗಳನ್ನೂ ನೆಟ್ಟಿಗರು ಮಾಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...