ರಾಜ್ಯದ ವಿಧಾನಮಂಡಲದ ಮುಂಗಾರು ಅಧಿವೇಶನವು ಆಗಸ್ಟ್ 11ರಿಂದ ಆರಂಭವಾಗಲಿದ್ದು ಈ ಬಗ್ಗೆ ರಾಜ್ಯ ಸರ್ಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಜಿ.ಶ್ರೀಧರ್ ಅಧಿಸೂಚನೆ ಹೊರಡಿಸಿದ್ದಾರೆ. ಇನ್ನು ಸಂಸತ್ತಿನ ಮುಂಗಾರು ಅಧಿವೇಶನ ಇದೇ ಜುಲೈ 21ರಿಂದ ಆರಂಭವಾಗಲಿದೆ.
ವಿಧಾನಮಂಡಲದ ಮುಂಗಾರು ಅಧಿವೇಶನವು ಆಗಸ್ಟ್ 11ರಿಂದ ಆಗಸ್ಟ್ 22ರವರೆಗೆ ನಡೆಯಲಿದೆ. 12 ದಿನಗಳಲ್ಲಿ ಎಂಟು ದಿನ ಮಾತ್ರ ಅಧಿವೇಶನ ನಡೆಯಲಿದೆ. ಮೊದಲ ದಿನ(ಆಗಸ್ಟ್ 11) ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ.
ಇದನ್ನು ಓದಿದ್ದೀರಾ? ಮುಂಗಾರು ಅಧಿವೇಶನ | ಸಾವಿರಕ್ಕೂ ಅಧಿಕ ಪರವಾನಗಿ ಹೊಂದಿರುವ ಸರ್ವೇಯರ್ ಹುದ್ದೆ ಭರ್ತಿ: ಸಚಿವ ಕೃಷ್ಣ ಬೈರೇಗೌಡ
ಆಗಸ್ಟ್ 11ರಿಂದ ಮೂರು ದಿನ ಸರ್ಕಾರಿ ಕಾರ್ಯಕಲಾಪಗಳು ನಡೆಯಲಿದ್ದು, ಆಗಸ್ಟ್ 14ರಂದು ಖಾಸಗಿ ಕಾರ್ಯಕಲಾಪವೂ ನಡೆಯಲಿದೆ. 15ರಂದು ಸಾರ್ವತ್ರಿಕ ರಜೆಯಿದ್ದು, ಆ.16ರಂದು ಎರಡನೇ ಶನಿವಾರದ ಕಾರಣ ಅಂದೂ ಕಾರ್ಯಕಲಾಪಗಳು ನಡೆಯುವುದಿಲ್ಲ. ಮತ್ತೆ ಭಾನುವಾರ ರಜೆ ಇರಲಿದೆ. ಉಳಿದಂತೆ ಆ.22ರವರೆಗೆ ಕಲಾಪ ನಡೆಯಲಿದೆ. ಆ.21ರಂದು ಖಾಸಗಿ ಕಲಾಪ ಇರಲಿದೆ.





