ಮಂಡ್ಯ ಲೋಕಸಭಾ ಕ್ಷೇತ್ರ | ಯಾರ ಪಾಲಿಗೆ ಒಲಿಯಲಿದ್ದಾರೆ ಮಹಿಳಾ ಮತದಾರರು?

Date:

ಸಕ್ಕರೆಯ ನಾಡು ಅಕ್ಕರೆಯಿಂದ ಸಕ್ಕರೆ ಹಂಚುವ ಅನ್ನದಾತರ ನೆಲ ಮಂಡ್ಯ. ರಾಷ್ಟ್ರಕವಿ ಕುವೆಂಪುರವರ ‘ನೇಗಿಲ ಕುಲದಲಡಗಿದೆ ಧರ್ಮ’ ಎನ್ನುವಂತೆ ಕಾಯಕ ಯೋಗಿಗಳು. ಮಂಡ್ಯ ಲೋಕಸಭಾ ಕ್ಷೇತ್ರ ಬಹುತೇಕ ಕೃಷಿಕರಿಂದ ಕೂಡಿದೆ.

ಮಂಡ್ಯದ ಹೋರಾಟದ ದನಿ ಎಂದಿಗೂ ಗಟ್ಟಿ, ಹೋರಾಟಕ್ಕೆ ಮತ್ತೊಂದು ಹೆಸರು ಅಂದ್ರೆ, ಅದು ಮಂಡ್ಯ. ಕಾವೇರಿ ವಿಚಾರಕ್ಕೆ ಬಂದರೆ ಮಂಡ್ಯದಲ್ಲಿ ನಡೆಯುವ ಹೋರಾಟ ಇಂಡಿಯಾ ತಿರುಗಿ ನೋಡುವಂತೆ ಮಾಡಿವೆ.

ಮಂಡ್ಯದ ಇತಿಹಾಸ ನೋಡುವಾಗ ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನ್, ಕರಿಘಟ್ಟದ ನಿಮಿಷಾಂಬ, ಕೊಕ್ಕರೆ ಬೆಳ್ಳೂರು, ಮೇಲುಕೋಟೆ ಚೆಲುವ ನಾರಾಯಣ, ಶಿವಪುರದ ಸತ್ಯಾಗ್ರಹ ಸೌಧ ಪ್ರಮುಖ ಪ್ರವಾಸಿ ತಾಣಗಳು. ಅಲ್ಲದೆ, ಕೆ ಆರ್ ಎಸ್ ಅಣೆಕಟ್ಟು ಮಂಡ್ಯದ ರೈತರ ಜೀವಾಳ, ಕಾವೇರಿ ಅನ್ನದಾತರ ಬೆನ್ನೆಲುಬು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಂಡ್ಯ ಅಂದಾಗ ಬಿಎಂಶ್ರೀ, ಖ್ಯಾತ ಕಾದಂಬರಿಗಾರ್ತಿ ತ್ರಿವೇಣಿ, ಮೈಸೂರು ಮಲ್ಲಿಗೆ ಖ್ಯಾತಿಯ ಕೆ.ಎನ್. ನರಸಿಂಹಸ್ವಾಮಿ, ಪುತಿನ, ನಟ ಅಂಬರೀಷ್, ನಿತ್ಯ ಸಚಿವರೆಂದೆ ಖ್ಯಾತಿಯ ಶಂಕರೆ ಗೌಡ್ರು, ರೈತ ಹೋರಾಟಗಾರ ಜಿ. ಮಾದೇಗೌಡ್ರು ತಟ್ಟನೆ ನೆನಪಾಗುತ್ತಾರೆ.

ಮಂಡ್ಯ ಇದುವರೆಗೆ 21 ಜನ ಲೋಕಸಭಾ ಸದಸ್ಯರನ್ನು ಕಂಡಿದೆ.

1952, 1957, 1962, 1967ರಲ್ಲಿ ಎಂ.ಕೆ. ಶಿವನಂಜಪ್ಪ, ಕಾಂಗ್ರೆಸ್

1968 ಮತ್ತು 1971 ಎಸ್.ಎಂ.ಕೃಷ್ಣ , ಪ್ರಜಾ ಸಮಾಜವಾದಿ ಪಕ್ಷ

1972 ಮತ್ತು 1977 ಕೆ.ಚಿಕ್ಕಲಿಂಗಯ್ಯ, ಕಾಂಗ್ರೆಸ್

1980 ಎಸ್.ಎಂ. ಕೃಷ್ಣ, ಕಾಂಗ್ರೆಸ್

1984 ಕೆ.ವಿ. ಶಂಕರೆಗೌಡ, ಕಾಂಗ್ರೆಸ್

1989 ಮತ್ತು 1991 ಜಿ.ಮಾದೇಗೌಡ, ಕಾಂಗ್ರೆಸ್

1996 ಮತ್ತು 1998 ಕೃಷ್ಣ, ಜನತಾ ದಳ

1998, 1999 ಮತ್ತು 2004 ಅಂಬರೀಷ್, ಕಾಂಗ್ರೆಸ್

2009 ಚೆಲುವರಾಯ ಸ್ವಾಮಿ, ಜಾತ್ಯತೀತ ಜನತಾದಳ

2013 ರಮ್ಯಾ, ಕಾಂಗ್ರೆಸ್

2014 ಸಿ.ಎಸ್. ಪುಟ್ಟರಾಜು, ಜಾತ್ಯತೀತ ಜನತಾದಳ

2018 ಎಲ್.ಆರ್. ಶಿವರಾಮೆ ಗೌಡ, ಜಾತ್ಯತೀತ ಜನತಾದಳ

2019 ಸುಮಲತಾ, ಪಕ್ಷೇತರ

ಮಂಡ್ಯ ಲೋಕಸಭಾ ಕ್ಷೇತ್ರ ನೋಡುವುದಾದರೆ ಕಾಂಗ್ರೆಸ್ ಪಕ್ಷದ ಅಧಿಪತ್ಯ ಹೆಚ್ಚಿದೆ. ಗೆಲುವಿನ ನಾಗಾಲೋಟ ಒಂದು ಸಮಯದಲ್ಲಿ ತಡೆದಿದ್ದು ಜನತಾ ಪರಿವಾರ. ಬಳಿಕ ಜಾತ್ಯತೀತ ಜನತಾ ದಳ.

ಮಂಡ್ಯ ಲೋಕಸಭಾ ಕ್ಷೇತ್ರ ಒಟ್ಟು 17ಲಕ್ಷದ 59ಸಾವಿರದ 175 ಜನ ಮತದಾರರ ಹೊಂದಿದೆ. ಅದರಲ್ಲಿ 8 ಲಕ್ಷದ 67 ಸಾವಿರದ 652 ಪುರುಷ ಮತದಾರರು, 8 ಲಕ್ಷದ 91 ಸಾವಿರದ 355 ಮಹಿಳಾ ಮತದಾರರು, 168 ಲಿಂಗತ್ವ ಅಲ್ಪಸಂಖ್ಯಾತ ಮತದಾರರು. ಮಂಡ್ಯ ವಿಶೇಷ ಏನು ಅಂದ್ರೆ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದು ಮಹಿಳೆಯರ ಮತವೇ ನಿರ್ಣಾಯಕ.

ಕಳೆದ ಬಾರಿಯ ಚುನಾವಣೆ ಅನುಕಂಪದ ಮೇಲೆ ನಡೆಯಿತು. ಸುಮಲತಾ ಅಂಬರೀಷ್ ಪಕ್ಷೇತರರಾಗಿ ಸೆರಗು ಒಡ್ಡಿ ಸ್ವಾಭಿಮಾನದ ಮಾತುಗಳಿಂದ ಗೆದ್ದು ಬಂದರು.‌ ಆದರೆ, ಕ್ಷೇತ್ರದ ವಿಚಾರಕ್ಕೆ ಬಂದಾಗ ಜನಪರವಾದ ಯಾವುದೇ ಕೆಲಸಗಳು, ಕ್ಷೇತ್ರದ ಅಭಿವೃದ್ಧಿ, ಅಧಿಕಾರಿಗಳ ಜತೆಗಿನ ಸಭೆಗಳು ನಡೆಯಲೇ ಇಲ್ಲ. ಗೆದ್ದಿದ್ದು ಗೊತ್ತು ಕೆಲಸ ಮಾಡಿದ್ದು ಗೊತ್ತಿಲ್ಲ ಅನ್ನುವಂತೆ ಇದ್ದರು ಹಾಲಿ ಸಂಸದರು ಎನ್ನುತ್ತಾದ್ದಾರೆ ಮತದಾರರು.

ಕ್ಷೇತ್ರದ ಜನ ಹೇಳುವ ಪ್ರಕಾರ ಮತ ಕೇಳಲು ಬಂದಾಗ ನೋಡಿದ್ದು ಇದುವರೆಗೂ ನಾವು ನೋಡಲೇ ಇಲ್ಲ. ನಮ್ಮ ಕ್ಷೇತ್ರಕ್ಕೆ ಬರಲೇ ಇಲ್ಲ ಎನ್ನುತ್ತಾರೆ ಕೃಷ್ಣರಾಜ ನಗರದ ಜನ. ಮಂಡ್ಯ ಭಾಗದಲ್ಲಿ ಕೇಳಿದರೆ ಅವರಿಗೆ ಕಾರ್ಯಕ್ರಮ ಹೆಚ್ಚಾದವು ಹೊರತು ಜನ ಜೀವನ ಅಲ್ಲ, ಬಡವರ ಬದುಕು ಅಲ್ಲ ಅನ್ನುವ ಆಕ್ರೋಶ ಎಲ್ಲೆಡೆ ಕೇಳಿ ಬರುತ್ತಿದೆ.

WhatsApp Image 2023 09 02 at 8.42.26 PM
ಮೋಹನ್ ಜಿ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

UAPA ದುರ್ಬಳಕೆ; ವಿಕಸಿತ ಭಾರತಕ್ಕೆ ಶೋಭೆ ತರಲ್ಲ: ಮೋಶಾ ಆಡಳಿತಕ್ಕೆ ಸುಪ್ರೀಂ ನ್ಯಾಯಮೂರ್ತಿ ತಪರಾಕಿ

"2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಮಾಡುವ ರಾಜಕೀಯ ಮುಖಂಡರ ಗುರಿಯಲ್ಲಿ...

ಕೇರಳ ಚುನಾವಣೆ | ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಮೇಲಿದೆ 242 ಕ್ರಿಮಿನಲ್ ಪ್ರಕರಣಗಳು

ಏಪ್ರಿಲ್ 9ರಂದು ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಅಭ್ಯರ್ಥಿಗಳು...

ಸರ್ಕಾರಿ ಅಧಿಕಾರಿಯ ಆತ್ಮಹತ್ಯೆ ಪ್ರಕರಣ: ಪಂಜಾಬ್ ಮಾಜಿ ಸಚಿವ ಲಾಲ್ಜಿತ್ ವಿರುದ್ಧ ಎಫ್‌ಐಆರ್

ಪಂಜಾಬ್ ರಾಜ್ಯ ಗೋದಾಮು ನಿಗಮದ (ಪಿಎಸ್‌ಡಬ್ಲ್ಯೂಸಿ) ಜಿಲ್ಲಾ ವ್ಯವಸ್ಥಾಪಕ ಗಗನ್‌ದೀಪ್ ಸಿಂಗ್...

ಕೇರಳ | ಭಿನ್ನಮತೀಯರಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಆಗಲ್ಲ: ಸಿಪಿಐಎಂ

ಕೇರಳದಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್‌ಡಿಎಫ್, ಯುಡಿಎಫ್‌,...