ಸುಳ್ಳು ಹೇಳುತ್ತಾ ಪ್ರಧಾನಿ ಹುದ್ದೆಯ ಘನತೆಯನ್ನೇ ಮಣ್ಣು ಮಾಡಿದ ಮೋದಿ

Date:

ದೇಶದ ಪ್ರಧಾನಿ ಅಂದ್ರೆ ಅವರ ಮಾತು ಘನತೆ, ಗಾಂಭೀರ್ಯದಿಂದ ಕೂಡಿರಬೇಕು. ಆದ್ರೆ ಮೋದಿ ಮಾತ್ರ ಪ್ರಧಾನಿ ಘನತೆಗೆ ಕ್ಯಾರೆ ಎನ್ನದೇ ತನ್ನ ಸುಳ್ಳುಗಳನ್ನು ಬಿತ್ತುವ ಕೆಲಸ ಮಾಡ್ತಿದ್ದಾರೆ. ಮೋದಿಯವರು ಹೇಳಿದ ಸುಳ್ಳುಗಳ ಸರಣಿ ಇಲ್ಲಿದೆ.

ಇಂದು ಮಧ್ಯಪ್ರದೇಶದಲ್ಲಿ ಭಾಷಣ ಮಾಡುತ್ತಾ, “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಧರ್ಮಾಧಾರಿತ ಮೀಸಲಾತಿಯನ್ನು ಜಾರಿಗೆ ತರಲಿದೆ. ಕ್ರೀಡೆಯಲ್ಲೂ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಲು ಯೋಜಿಸುತ್ತಿದೆ. ಕಾಂಗ್ರೆಸ್‌ ಗೆದ್ದರೆ, ಭಾರತೀಯ ಕ್ರಿಕೆಟ್ ತಂಡದಲ್ಲಿ ಮುಸ್ಲಿಮರೇ ತುಂಬಿಕೊಳ್ಳುತ್ತಾರೆ” ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ತಮ್ಮ ದ್ವೇಷ ಭಾಷಣವನ್ನು ಮುಂದುವರೆಸಿದ್ದಾರೆ.

“ಅಲ್ಪಸಂಖ್ಯಾತರಿಗೆ ಕ್ರೀಡೆಯಲ್ಲಿಯೂ ಮೀಸಲಾತಿ ನೀಡುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ. ಇದರರ್ಥ ಧರ್ಮದ ಆಧಾರದ ಮೇಲೆ ಯಾರು ಕ್ರಿಕೆಟ್ ತಂಡದಲ್ಲಿ ಇರಬೇಕು ಮತ್ತು ಹೊರಗೆ ಇರಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಲ್ಪಸಂಖ್ಯಾತರು ಅಂದ್ರೆ ಕೇವಲ ಮುಸ್ಲಿಮರು ಮಾತ್ರ ಅಂತ ಒಂದಿಷ್ಟು ಮಂದಿ ಅಂದ್ಕೊಂಡಿದ್ದಾರೆ. ಆದ್ರೆ ಅಲ್ಪಸಂಖ್ಯಾತರ ಲಿಸ್ಟ್‌ನಲ್ಲಿ ಮುಸ್ಲಿಮರು ಮಾತ್ರವಲ್ಲ ಬೌದ್ಧರು, ಕ್ರಿಶ್ಚಿಯನ್ನರು, ಪಾರ್ಸಿಗಳು ಕೂಡ ಬರ್ತಾರೆ. ಆದ್ರೆ ಮೋದಿ ಮಾತ್ರ ಅಲ್ಪಸಂಖ್ಯಾತರು ಅಂದ್ರೆ ಮುಸ್ಲಿಂಮರು ಮಾತ್ರ ಅನ್ನೋ ರೀತಿ ಬಿಂಬಿಸ್ತಾ ಇದ್ದಾರೆ. ಇನ್ನೂ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಕ್ರಿಕೆಟ್‌ನಲ್ಲೂ ಮುಸ್ಲಿಮರೇ ತುಂಬಿ ಹೋಗ್ತಾರೆ ಅಂತ ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಹಾಗೂ ಭಾರತದ ಯುದ್ಧ ಯಾವ ಸರ್ಕಾರ ಇದ್ದಾಗ ಆಗಿದ್ದು ಅನ್ನೋದು ಮರೆತು ಹೋಗಿರಬಹುದು.

ಎರಡನೇ ಸುಳ್ಳು : “ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಇರುವ ಮೀಸಲಾತಿಗಳನ್ನು ‘ಕಿತ್ತುಕೊಳ್ಳಲು’ ಕಾಂಗ್ರೆಸ್ ಮತ್ತು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಯೋಜಿಸುತ್ತಿವೆ” ಎಂದು ಮೋದಿ ತಮ್ಮ ಸುಳ್ಳನ್ನು ಪುನರುಚ್ಚರಿಸಿದ್ದಾರೆ.

ಮೂರನೇ ಸುಳ್ಳು : ಕಾಂಗ್ರೆಸ್‌ ಪಕ್ಷ ಏನಾದ್ರೂ ಅಧಿಕಾರಕ್ಕೆ ಬಂದ್ರೆ ರಾಮಮಂದಿರಕ್ಕೆ ಬಾಬ್ರಿ ಬೀಗ ಹಾಕಿ ಬಿಡುತ್ತಾರೆ ಎಂದು ಹೇಳುವ ಮೂಲಕ ರಾಮಮಂದಿರದ ಹೆಸರಿನಲ್ಲಿಯೂ ಮುಸ್ಲಿಂ ದ್ವೇಷವನ್ನು ಪ್ರಚೋದಿಸಿ ಮತ ಕೇಳಲು ಮೋದಿ ಯತ್ನಿಸಿದ್ದಾರೆ.

ಕಾಂಗ್ರೆಸ್‌ ಪಕ್ಷ ಎಲ್ಲಿ ಹೇಳಿದೆ ರಾಮಂದಿರಕ್ಕೆ ಬೀಗ ಹಾಕ್ತೀವಿ ಅಂತ? ಇಂತಹ ಹಸಿ ಹಸಿ ಸುಳ್ಳನ್ನು ಹೇಳಿ ಅಧಿಕಾರಕ್ಕೆ ಬರೋ ಪರಿಸ್ಥಿತಿ ಈಗ ಮೋದಿಗೆ ಬಂದಿದೆ. ಈ ರೀತಿ ಹೇಳಿ, ಜನರನ್ನು ದಾರಿ ತಪ್ಪಿಸೋ ಕೆಲಸವನ್ನು ಮೋದಿ ಮಾಡ್ತಿದ್ದಾರೆ.

ನಾಲ್ಕನೇ ಸುಳ್ಳು: ಕಾಂಗ್ರೆಸ್‌ನವರು ಹೇಳ್ತಾರೆ, ನಾವೇನಾದ್ರೂ ಅಧಿಕಾರಕ್ಕೆ ಬಂದ್ರೆ ರದ್ದು ಮಾಡಿರೋ ಆರ್ಟಿಕಲ್‌ 370ಯನ್ನು ಮತ್ತೊಮ್ಮೆ ತರ್ತೀವಿ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ ರದ್ದು ಮಾಡಿರೋ ತ್ರಿವಳಿ ತಲಾಖ್‌ ಅನ್ನೂ ಕೂಡ ಕಾಂಗ್ರೆಸ್‌ ಪಕ್ಷ ವಾಪಸ್‌ ತರುತ್ತೆ, ಕಿಸಾನ್‌ ಸಮ್ಮಾನ ಮೂಲಕ ರೈತರಿಗೆ ಕೊಡ್ತಾ ಇರೋ ಹಣವನ್ನೂ ಕೂಡ ಕಾಂಗ್ರೆಸ್‌ ನಿಲ್ಲಿಸುತ್ತೆ. ಜನರಿಗೆ ಕೊಡ್ತಾ ಇರೋ ಉಚಿತ ಪಡಿತರವನ್ನೂ ರದ್ದು ಮಾಡೋದಾಗಿ ಕಾಂಗ್ರೆಸ್‌ ಹೇಳಿದೆ” ಅಂತ ಮೋದಿ ಸುಳ್ಳು ಭಾಷಣವನ್ನು ಸಾವಿರಾರು ಜನರ ಮುಂದೆ ಮಾಡಿದ್ದಾರೆ.

ಐದನೇ ಸುಳ್ಳು: “ಪ್ರತಿಪಕ್ಷಗಳು ಮುಸ್ಲಿಮರಿಗೆ ಸಂಪೂರ್ಣ ಮೀಸಲಾತಿ ನೀಡಲು ಯೋಜಿಸುತ್ತಿವೆ. ಕಾಂಗ್ರೆಸ್‌ನವರು ವೋಟ್‌ ಜಿಹಾದ್‌ ಕೇಳ್ತಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್‌ ಸರ್ಕಾರದ ಜನ 261 ಮುಂಬೈ ದಾಳಿಯ ಆತಂಕವಾದಿಗಳಿಗೆ ಕ್ಲಿನ್‌ ಚಿಟ್‌ ಕೊಟ್ಟಿದೆ, ಕಾಂಗ್ರೆಸ್‌ ಪಾಕಿಸ್ತಾನದೊಂದಿಗೆ ಏನೋ ಸಂಬಂಧ ಹೊಂದಿದೆ ” ಅಂತ ಮೋದಿ ಆರೋಪಿಸಿದ್ದಾರೆ.

ಆದ್ರೆ ಇದರ ರಿಯಾಲಿಟಿನೇ ಬೇರೆ ಇದೆ. ಇದೇ ಬಿಜೆಪಿ ವಾಷಿಂಗ್‌ ಮಷಿನ್‌ಗೆ ಸೇರಿದ 20ಕ್ಕೂ ಹೆಚ್ಚು ಭ್ರಷ್ಟ ನಾಯಕರಿಗೆ ಬಿಜೆಪಿ ಕ್ಲಿನ್‌ ಚಿಟ್‌ ಕೊಟ್ಟಿದೆ. ಇಡೀ ದೇಶದ ಜನರ ಮುಂದೆ ಮೋದಿ ಆಡಳಿತ ಹೇಗಿದೆ ಅನ್ನೋದನ್ನ ಒಂದಿಷ್ಟು ಪತ್ರಕರ್ತರು ಜನರ ಮುಂದೆ ತೆರೆದಿಟ್ಟರು. ಜನರ ದುಡ್ಡನ್ನ ನುಂಗಿ ನೀರು ಕುಡಿದ ಭ್ರಷ್ಟರನ್ನ ಮೋದಿ ಸಾಕಿ ಸಾಲಹುತ್ತಾ ಇದ್ದಾರೆ. ಕಾಂಗ್ರೆಸ್‌ ಪಾಕಿಸ್ತಾನದ ಜೊತೆ ಸಂಬಂಧ ಹೊಂದಿದೆ ಅನ್ನೋದಕ್ಕೆ ಮೋದಿ ಬಳಿ ಸಾಕ್ಷಿ ಆಧಾರಗಳು ಏನಿದೆ? ಅಲ್ಪಸಂಖ್ಯಾತರ ಪರ ಮಾತಾಡಿದ್ರೆ, ಅಲ್ಪಸಂಖ್ಯಾತರಿಗೆ ತೊಂದರೆ ಆದ್ರೆ ಅದನ್ನ ನಿಭಾಯಿಸಿದ್ರೆ, ಅವರು ಪಾಕಿಸ್ತಾನಿ ಅಂತ ಆಗುತ್ತಾ ? ಇನ್ನು ಇದೇ ಪುಲ್ವಾಮ ಗಡಿಯಲ್ಲಿ 300 ಕೆಜಿ ಆರ್‌ಡಿಎಕ್ಸ್‌ ಹೇಗೆ ಬಂತು ಅನ್ನೋ ಬಗ್ಗೆ ಮೋದಿ ಬಳಿ ಉತ್ತರ ಇಲ್ಲ.

ನಮಗೆ ಬೇಕಾದ ಪ್ರಧಾನಿ ಜನರ ಕಷ್ಟಗಳ ಬಗ್ಗೆ ಮಾತಾಡಬೇಕು. ಆ ಕಷ್ಟ ಕಡಿಮೆ ಮಾಡೋ ಯೋಜನೆಗಳ ಬಗ್ಗೆ ಮಾತಾಡಬೇಕು. ದೇಶವನ್ನ ಉದ್ಧಾರ ಮಾಡೋದರ ಬಗ್ಗೆ ಮಾತಾಡಬೇಕು. ಆದ್ರೆ ನಮಗೆ ಸಿಕ್ಕಿರೋ ಪ್ರಧಾನಿ ಮಾತ್ರ ಮಂಗಲಸೂತ್ರ, ಮುಸ್ಲೀಮರು, ಕಾಂಗ್ರೆಸ್‌ ಗೆದ್ರೆ, ಪಾಕಿಸ್ತಾನಕ್ಕೆ ಖುಷಿ ಆಗುತ್ತೆ ಅಂತ ಬೇಡದೇ ಇರೋ ವಿಷಯಗಳ ಬಗ್ಗೆಯೇ ಮಾತಾಡ್ತಾ ಇದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...