ಮೋದಿ ಸೋತಿದ್ದಾರೆ – ಅವರ ಮುಂದಿನ ನಡೆ ಬಗ್ಗೆ ಆತಂಕವಿದೆ: ಗಣೇಶ್ ದೇವಿ

Date:

“ಮೋದಿ ಈಗಾಗಲೇ ಸೋತಿದ್ದಾರೆ, ಅವರ ಮಾನಸಿಕ ಸ್ಥಿತಿ ಗೊತ್ತಿರುವುದರಿಂದ, ಫಲಿತಾಂಶ ಘೋಷಣೆಯಾದ ನಂತರ ಅವರ ನಡೆಯ ಬಗ್ಗೆ ನಮಗೆ ಆತಂಕವಿದೆ. ರಾಷ್ಟ್ರಪತಿಗಳು ಕುದುರೆ ವ್ಯಾಪಾರಕ್ಕೆ ಅವಕಾಶ ಆಗುವಂತೆ ‘ಇಂಡಿಯಾ’ ಮೈತ್ರಿಕೂಟ ಹೊರತು ಪಡಿಸಿ ಬೇರೆ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ಕೊಡುವ ಸಾಧ್ಯವಿದೆ” ಎಂದು ಭಾಷಾ ಶಾಸ್ತ್ರಜ್ಞ ಎಂ ಗಣೇಶ್ ದೇವಿ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ‘ಜನರ ಇಚ್ಛೆಯೇ ಜನತಂತ್ರದ ಫಲಿತವಾಗಬೇಕು’ ಎಂಬ ಹೆಸರನಲ್ಲಿ ನಡೆದ ಉನ್ನತ ಮಟ್ಟದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. “ಅನಧಿಕೃತವಾಗಿ ತುರ್ತು ಪರಿಸ್ಥಿತಿ ಹೇರಿಕೆಯಾಗುವ ಸಾಧ್ಯತೆ ಇದೆ. ಫಲಿತಾಂಶ ಬಳಿಕ ರಾಷ್ಟ್ರಪತಿ 1 ತಿಂಗಳು ತುರ್ತುಪರಿಸ್ಥಿತಿ ಹೇರಬಹುದು.  ಅವರು ಬಿಜೆಪಿಯ ತಂತ್ರಗಳೊಂದಿಗೆ ಬಯಲಾಗಿಯೇ ಆಗುತ್ತಾರೆ. ನಾವು ತಾಳ್ಮೆ ವಹಿಸಬೇಕು. ಈಗಿನಿಂದ ಜುಲೈ ಮಧ್ಯದವರೆಗೆ ನಾವು ಬಹಳ ಎಚ್ಚರಿಕೆಯಿಂದಿರಬೇಕು” ಎಂದು ಕರೆಕೊಟ್ಟರು.

“ಅಧಿಕಾರ ವರ್ಗಾವಣೆಯ ವಿಚಾರದಲ್ಲಿ ಮೋದಿ ಈಗಾಗಲೇ ಸೋತಿದ್ದಾರೆ. ಇನ್ನುಮುಂದೆ ಅವರ ಮುಖ ನೋಡುವ ಭಾಷಣ ಕೇಳುವ ಅಗತ್ಯವಿಲ್ಲ. ಆದರೆ, ಮೋದಿ ವಿರುದ್ಧದ ಜಯವನ್ನು ಖಾತ್ರಿಪಡಿಸಿಕೊಳ್ಳಬೇಕಾಗಿದೆ. ನಾವು ಸಾರ್ವಜನಿಕ ಆಂದೋಲನ ಒಂದನ್ನು ನಡೆಸಬೇಕು. ನಾನು ಫ್ಯಾಸಿಸಂಅನ್ನು ಸೋಲಿಸಲು ಮತ ಚಲಾಯಿಸಿದ್ದೇನೆ ಎಂಬ ಅಭಿಯಾನ ಮಾಡಿದರೆ, ಕೆಲವು ದಿನಗಳಲ್ಲಿ ಸಾವಿರಾರು ‘ಮಿ ಟೂ’ ಹೇಳಿಕೆಗಳನ್ನು ಹೊರಡಿಸಬಹುದು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾರ್ಯಕ್ರಮದಲ್ಲಿ ಮಾತನಾಡಿದ ‘ಇಂಡಿಯಾ’ ಮೈತ್ರಿಕೂಟದ ಸಂಯೋಜಕ ಗುರುದೀಪ್ ಸಂಫಾಲ್, “ಲೋಕಸಭಾ ಚುನಾವಣೆ ಆರಂಭವಾದಾಗ ಅದು ಬೇರೆಯೇ ರೀತಿಯಲ್ಲಿ ಆರಂಭವಾಯಿತು. ಬಹಳ ಮಂದಿ ಇದು ಚುನಾವಣೆಯೇ ಅಲ್ಲ. ಮೋದಿ ಸರ್ಕಾರಕ್ಕೆ ಕೌಂಟರ್ ನರೇಟಿವ್ ಇಲ್ಲವೇ ಇಲ್ಲ ಎನ್ನುತ್ತಿದ್ದರು. ಈಗ ಎಲ್ಲರಿಗೂ ಗೊತ್ತಾಗಿದೆ – ಕೌಂಟರ್ ನರೇಟಿವ್ ಬೃಹತ್ತಾಗಿದೆ. ಮೋದಿ ಸರ್ಕಾರ ಆತಂಕದಲ್ಲಿದೆ” ಎಂದರು.

“ಈಗ ಇವಿಎಂ ಬೇಕಾ ಬೇಡವಾ, ವಿವಿಪ್ಯಾಟ್ ಹೇಗೆ ಎಣಿಸುವುದು ಇತ್ಯಾದಿ ಚರ್ಚೆಗೆ ಸಮಯವಿಲ್ಲ. ಈಗ ಆ ಹಂತ ದಾಟಿದೆ. ನಾವಣಾ ಆಯೋಗ ಸುಪ್ರೀಂ ಕೋರ್ಟ್ ಮುಂದೆ ನಾವು ಅಂಕಿ ಅಂಶ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಎಲ್ಲ ಬೂತುಗಳ 17ಸಿ  ಫಾರ್ಮ್‌ ಅಥವಾ ಅಂಕಿಅಂಶ ಪಡೆಯಲು 3,000ದಿಂದ 4,000 ಬೂತ್ ಏಜೆಂಟ್‌ಗಳು ಬೇಕಾಗಿದ್ದಾರೆ. ಈಗ ಸಿವಿಲ್ ಸೊಸೈಟಿ  ಅಭ್ಯರ್ಥಿಗಳ ಜೊತೆ ರಿಟರ್ನಿಂಗ್ ಆಫೀಸರ್‌ಗಳನ್ನು ಭೇಟಿಯಾಗಿ ಈ ಫಾರ್ಮ್ ಪಡೆಯಲು ಒತ್ತಡ ಹಾಕಬೇಕು. ಡೇಟಾ ಕೇಳಬೇಕು. ಸ್ಟ್ರಾಂಗ್‌ ರೂಮ್‌ಗಳಿಗೆ ಸ್ವತಃ ಅಭ್ಯರ್ಥಿ ಹೋಗಿ, ಪರಿಶೀಲನೆ ನಡೆಸಬೇಕು. ಇದಕ್ಕೆ ಸುಪೀಂ ಕೋರ್ಟ್ ಒಪ್ಪಿಗೆಯ ಆದೇಶವೂ ಇದೆ” ಎಂದರು.

“ಬಿಜೆಪಿಗೆ ಒಂದು ತಂತ್ರಗಾರಿಕೆಯಿದೆ, ಅವರು ಎಕ್ಸಿಟ್ ಪೋಲ್‌ಗಳ ಮೂಲಕ ನರೇಟಿವ್ ಕಟ್ಟುತ್ತಾರೆ. ಸ್ಥಳೀಯ ಮಾಧ್ಯಮಗಳ ಮೂಲಕ ಅದಕ್ಕೆ ಕೌಂಟರ್ ನರೇಟಿವ್ ಕೊಡುವ ಎಕ್ಸಿಟ್ ಪೋಲ್‌ಗಳನ್ನು ಕೊಡಬೇಕು. ಪೋಲಿಂಗ್ ಆಫೀಸರ್‌ಗಳ ಮೇಲೆ ನೈತಿಕ ಒತ್ತಡ ಹಾಕಬೇಕು. ಅವರ ಕರ್ತವ್ಯವನ್ನು ಅವರು ಮಾಡಲೇಬೇಕೆಂದ ಆಗ್ರಹ ಮುಂದಿಡಬೇಕು” ಎಂದು ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...