ಬಿಜೆಪಿಗರ ಬೆವರಿಳಿಸಿದ ಶತಾಬ್ದಿ ರಾಯ್ | ದೇವರನ್ನೇ ಕರೆತಂದ ಮೋದಿ, ಕಳ್ಳರನ್ನು-ಕಪ್ಪುಹಣವನ್ನು ಕರೆತರಲಾಗಲಿಲ್ಲವಲ್ಲ?

Date:

  • ಮೋದಿಜೀ ರಾಮನನ್ನು ಕರೆತಂದರು, ಚಿಕ್ಕ ಮನುಷ್ಯ ಇಷ್ಟೊಂದು ಶಕ್ತಿವಂತನೇ?
  • ಒಂದು ಚಿಕ್ಕ ಕೆಲಸ… ಕಪ್ಪುಹಣವನ್ನು ದೇಶಕ್ಕೆ ವಾಪಸ್ ತರಲಾಗಲಿಲ್ಲವಲ್ಲ?

ಇತ್ತೀಚೆಗೆ, ಲೋಕಸಭೆ ಒಂದು ಸ್ವಾರಸ್ಯಕರ ಚರ್ಚೆಗೆ ವೇದಿಕೆಯಾಗಿತ್ತು. ಅರ್ಥಪೂರ್ಣ ಮಾತುಗಳಿಗೆ ಸಾಕ್ಷಿಯಾಗಿತ್ತು. ನಿಜನುಡಿಗಳು ಸಂಸದರ ಕಣ್ಣು ತೆರೆಸಿತ್ತು. ಸತ್ಯ ಮಾತಾಡಲು ಪ್ರೇರೇಪಿಸಿತ್ತು. ಪ್ರಶಂಸೆಗೆ ಪಾತ್ರವಾಗಿತ್ತು. ಇದು ಕಳೆದ ಫೆಬ್ರವರಿಯಲ್ಲಿ ನಡೆದ ಚರ್ಚೆಯಾದರೂ, ವಿಡಿಯೋ ಈಗ ವೈರಲ್ ಆಗುತ್ತಿದೆ. ಆಡಿರುವ ಮಾತುಗಳು ಸತ್ಯವನ್ನೇ ಹೇಳುತ್ತಿರುವುದರಿಂದ, ಈಗಲೂ ಕೇಳುವಂತಿವೆ. ದೇಶವಾಸಿಗಳ ಕಣ್ಣು ತೆರೆಸುತ್ತಿವೆ.

ಪಶ್ಚಿಮ ಬಂಗಾಳದ ಬಿರ್ಭುಮ್ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದ ತೃಣಮೂಲ್ ಕಾಂಗ್ರೆಸ್ ಸಂಸದೆ ಶತಾಬ್ದಿ ರಾಯ್, ಮೊದಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರತ್ತ ತಿರುಗಿ ಕೈ ಮುಗಿದರು. ಎಲ್ಲರಿಗೂ ಆಶ್ಚರ್ಯ. ಆದರೂ ಆಕೆಯ ಮಾತುಗಳನ್ನು ಕೇಳುವ ಸಲುವಾಗಿ, ಸುಮ್ಮನಿದ್ದರು. ನಂತರ ಶುರುವಾಯಿತು ಶತಾಬ್ದಿ ರಾಯ್ ರ ಬತ್ತಳಿಕೆಯಲ್ಲಿದ್ದ ಬಾಣಗಳ ಪ್ರಯೋಗ. ಆಕೆಯ ದಿಟ್ಟ ಸ್ಪಷ್ಟ ನುಡಿಗಳು ನೇರವಾಗಿ ಪ್ರಧಾನಿ ಮೋದಿಯನ್ನೇ ಕೇಂದ್ರೀಕರಿಸಿದ್ದವು.

”ದೇಶದ ಮೂಲೆ ಮೂಲೆಯಲ್ಲಿ ರಾಮ-ಸೀತಾ ಉದ್ಗಾರ ಕೇಳಿಬರುತ್ತಿದೆ. ಇಡೀ ದೇಶವೇ ರಾಮರಾಜ್ಯವಾಗಿದೆ. ಬಿಜೆಪಿಗರು ದೊಡ್ಡ ಧ್ವನಿಯಲ್ಲಿ ಕೂಗಿ ಕೂಗಿ ಹೇಳುತ್ತಿದ್ದಾರೆ… ಮೋದಿಜೀ ರಾಮನನ್ನು ಕರೆತಂದರು, ಭಗವಂತನನ್ನು ಭೂಮಿಗೆ ಕರೆತಂದರು… ಬಹಳ ಒಳ್ಳೆಯ ಕೆಲಸ. ಮೆಚ್ಚಬೇಕಾದ್ದೆ. ಒಬ್ಬ ಚಿಕ್ಕ ಮನುಷ್ಯ ಇಷ್ಟೊಂದು ಶಕ್ತಿವಂತನೇ? ಚಿಕ್ಕ ಮನುಷ್ಯ ಭಗವಂತನನ್ನೇ ಭೂಮಿಗೆ ಕರೆತರುವಷ್ಟು ಶಕ್ತಿವಂತನೇ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

”ನೇಷನ್ ವಾಂಟ್ಸ್ ಟು ನೋ- ದೇಶಕ್ಕೆ ಗೊತ್ತಾಗಬೇಕಿದೆ- ಒಬ್ಬ ಚಿಕ್ಕ ಮನುಷ್ಯ ಭಗವಂತನನ್ನೇ ಭೂಮಿಗೆ ಕರೆತರುವಷ್ಟು ಶಕ್ತಿವಂತನಾಗಿದ್ದರೆ, ಒಬ್ಬ ನೀರವ್ ಮೋದಿಯನ್ನು ಕರೆತರಲಾಗಲಿಲ್ಲವೇ? ಒಬ್ಬ ಮೆಹುಲ್ ಚೊಕ್ಸಿಯನ್ನು ಕರೆತರಲಾಗಲಿಲ್ಲವೇ? ಒಬ್ಬ ವಿಜಯ್ ಮಲ್ಯನನ್ನು ಕರೆತರಲಾಗಲಿಲ್ಲವೇ? ಚಿಕ್ಕ ಮನುಷ್ಯ ಶ್ರೀರಾಮಚಂದ್ರನನ್ನೇ ಕರೆತರುವಷ್ಟು ಶಕ್ತಿವಂತ, ಒಂದು ಚಿಕ್ಕ ಕೆಲಸ… ಕಪ್ಪುಹಣವನ್ನು ದೇಶಕ್ಕೆ ವಾಪಸ್ ತರಲಾಗಲಿಲ್ಲವಲ್ಲ?”

ದೇವರನ್ನೇ ಕರೆತಂದವರಿಗೆ ಮನುಷ್ಯರನ್ನು ಕರೆತರಲಾಗಲಿಲ್ಲವಲ್ಲ? ಕಪ್ಪು ಹಣವನ್ನು ವಾಪಸ್ ತರಲಾಗಲಿಲ್ಲವಲ್ಲ ಎಂದ ಶತಾಬ್ದಿ ರಾಯ್, ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಬಾಣಗಳಂತೆ ಪ್ರಯೋಗಿಸಿ ಮೋದಿ ಮತ್ತವರ ಪರಿವಾರವನ್ನು ಪಲ್ಟಿ ಹೊಡಿಸಿಬಿಟ್ಟರು. ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಇದನ್ನು ಓದಿದ್ದೀರಾ?: ಮಹಾ ಡಿಸಿಎಂ ಅಜಿತ್ ಪವಾರ್‌ಗೆ ಲಾಟರಿ; ತೆರಿಗೆ ಇಲಾಖೆ ಜಪ್ತಿ ಮಾಡಿದ್ದ 1,000 ಕೋಟಿ ರೂ. ಆಸ್ತಿ ವಾಪಸ್!

ಆಕೆಯ ಕಟುಸತ್ಯದ ಮಾತುಗಳಿಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉಗುಳು ನುಂಗುತ್ತಿದ್ದರು, ತುಟಿಬಿಚ್ಚದೆ ಕೂತಿದ್ದರು. ಇಡೀ ಸದನ ಆಕೆಯ ಕೆಂಡದುಂಡೆಯಂತಹ ಮಾತುಗಳನ್ನು ಕೇಳಿಸಿಕೊಳ್ಳುತ್ತಿತ್ತು. ವಿರೋಧ ಪಕ್ಷಗಳ ಸಂಸದರು ಮೇಜು ಕುಟ್ಟಿ ಪ್ರೋತ್ಸಾಹಿಸುತ್ತಿದ್ದರು. ಮಹಿಳೆಯರು ಹೆಮ್ಮೆಯಿಂದ ಬೀಗುತ್ತಿದ್ದರು.

ಶತಾಬ್ದಿ ರಾಯ್ ಅವರ ಈ ಮಾತುಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಕ್ಷಾಂತರ ಜನ ನೋಡಿ, ಮೆಚ್ಚುಗೆ ಸೂಚಿಸಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ವೈರಲ್ ಮಾಡುತ್ತಿದ್ದಾರೆ.

ಇದು ಡಿಜಿಟಲ್ ಜಗತ್ತು. ಮೋದಿ ಮತ್ತು ಪರಿವಾರದ ಆಟವನ್ನು ಹತ್ತು ವರ್ಷಗಳ ಕಾಲ ಸಹಿಸಿದ ದೇಶ, ಈಗ ತಿರುಗಿ ಕೊಡುತ್ತಿದೆ. ಕಳ್ಳರನ್ನು, ಕಪ್ಪು ಹಣವನ್ನು ವಾಪಸ್ ತರದಿದ್ದರೂ, ಸತ್ಯದ ಕಿಡಿನುಡಿಗಳನ್ನು ವಾಪಸ್ ತೆಗೆದುಕೊಳ್ಳಲೇಬೇಕಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...