‘ಮೊಹಮ್ಮದ್ ದೀಪಕ್’ ಜಿಮ್ ಸದಸ್ಯತ್ವ 15ಕ್ಕೆ ಇಳಿಕೆ: ಕೋಮು ಸೌಹಾರ್ದತೆಯ ಬೆಲೆ ಬಲು ದುಬಾರಿ!

Date:

ಬಜರಂಗದಳ ಸದಸ್ಯರಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದ ಸುಮಾರು 70 ವರ್ಷದ ಮುಸ್ಲಿಂ ವ್ಯಕ್ತಿಯ ಪರವಾಗಿ ನಿಂತು, ತನ್ನ ಹೆಸರು ‘ಮೊಹಮ್ಮದ್ ದೀಪಕ್’ ಎಂದು ಹೇಳಿಕೊಂಡ ಜಿಮ್ ಟ್ರೇನರ್‌ ದೀಪಕ್ ಕುಮಾರ್‌ಗೆ ಕೋಮು ಸೌಹಾರ್ದತೆಯ ಬೆಲೆ ಬಲು ದುಬಾರಿಯಾಗಿದೆ! ಈ ಬೆಳವಣಿಗೆ ಬಳಿಕ ದೀಪಕ್ ಅನೇಕ ಜಿಮ್ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಈ ಹಿಂದೆ 150 ಆಗಿದ್ದ ಜಿಮ್ ಸದಸ್ಯರ ಸಂಖ್ಯೆ ಈಗ 15ಕ್ಕೆ ಬಂದು ಇಳಿದಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದ, ದೀಪಕ್ ಕೋಮು ಸೌಹಾರ್ದತೆಯನ್ನು ಎತ್ತಿಹಿಡಿದಿದ್ದ ಘಟನೆ ನಡೆದಿದ್ದು ಜನವರಿ 26ರಂದು. ಉತ್ತರಾಖಂಡದ ಪೌರಿ ಜಿಲ್ಲೆಯ ಕೋಟ್ದ್ವಾರ ಪಟ್ಟಣದಲ್ಲಿ ಮುಸ್ಲಿಂ ವ್ಯಾಪಾರಿ ವಕೀಲ್ ಅಹ್ಮದ್ ಅವರ ಅಂಗಡಿಯ ಹೆಸರು ಬದಲಾಯಿಸುವಂತೆ ಬಜರಂಗದಳ ಸದಸ್ಯರು ಒತ್ತಡ ಹೇರಿದ್ದರು. ಮುಸ್ಲಿಂ ವ್ಯಕ್ತಿ ಬಾಬಾ ಕಲೆಕ್ಷನ್ ಎಂಬ ಬಟ್ಟೆ ಅಂಗಡಿಯನ್ನು ಹೊಂದಿದ್ದು, 30 ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದಾರೆ. ಆದರೆ ಬಜರಂಗದಳದವರು ‘ಬಾಬಾ’ ಎಂಬ ಪದವನ್ನು ಫಲಕದಿಂದ ತೆಗೆದುಹಾಕುವಂತೆ ಒತ್ತಡ ಹೇರಿದ್ದರು. ಈ ವೇಳೆ ಹಿಂದೂ ಯುವಕ 38 ವರ್ಷದ ದೀಪಕ್ ಆ ವೃದ್ಧ ವ್ಯಕ್ತಿ ಪರವಾಗಿ ನಿಂತಿದ್ದರು.

ಇದನ್ನು ಓದಿದ್ದೀರಾ? ‘ಮೊಹಮ್ಮದ್ ದೀಪಕ್ ಕುಮಾರ್’ -ಮುಸ್ಲಿಂ ವ್ಯಾಪಾರಿಯನ್ನು ಬೆಂಬಲಿಸಿದ್ದಕ್ಕೆ ಯುವಕನ ವಿರುದ್ಧ ಸಂಘಪರಿವಾರ ಪ್ರತಿಭಟನೆ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜಿಮ್ ತರಬೇತುದಾರರಾಗಿ ಕಾರ್ಯನಿರ್ವಹಿಸುವ ದೀಪಕ್ ಕುಮಾರ್ ಕಶ್ಯಪ್ ಸಂಘಪರಿವಾರದವರು ನಿನ್ನ ಹೆಸರೇನು ಎಂದು ಕೇಳಿದಾಗ ದೀಪಕ್, “ಮೊಹಮ್ಮದ್ ದೀಪಕ್ ಕುಮಾರ್” ಎಂದು ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅದಾದ ಬಳಿಕ ಬಜರಂಗದಳದ ಹಲವಾರು ಸದಸ್ಯರು ದೀಪಕ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ದಾಳಿಯ ಹೊಂಚೂ ಹಾಕಿದ್ದರು. ಈ ವೇಳೆ ಪೊಲೀಸರು ಅವರನ್ನು ತಡೆದಿದ್ದರು.

ಇವಿಷ್ಟು ನಡೆಯುತ್ತಿದ್ದಂತೆ ಪಟ್ಟಣವೇ ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ಕೋಮು ಸೌಹಾರ್ದತೆಯ ಪರವಾಗಿ ನಿಲ್ಲುವವರದ್ದು ಒಂದು ಗುಂಪು ಮತ್ತು ಬಿಜೆಪಿಯ ಕೋಮುದ್ವೇಷ ತಂತ್ರಕ್ಕೆ ಬಲಿಯಾದವರದ್ದು ಇನ್ನೊಂದು ಗುಂಪು. ದೀಪಕ್‌ಗೆ ಯತೇಚ್ಚವಾಗಿ ಬೆಂಬಲವೇನೋ ವ್ಯಕ್ತವಾಗಿದೆ. ಆದರೆ ಅವರ ದುಡಿಮೆಗೆ ತೊಡಕು ಉಂಟಾಗಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ದೀಪಕ್, “ಪಟ್ಟಣದ ಅರ್ಧದಷ್ಟು ಜನರು ನನ್ನನ್ನು ಬೆಂಬಲಿಸುತ್ತಾರೆ. ಆದರೆ ನೀವು ಒಳ್ಳೆಯ ಕಾರ್ಯಗಳನ್ನು ಮಾಡಿದಾಗ ಜನರು ಚಪ್ಪಾಳೆ ತಟ್ಟುವುದಿಲ್ಲ. ಪ್ರಾಮಾಣಿಕತೆಗೆ ಬೆಲೆ ತೆರಬೇಕಾಗುತ್ತದೆ” ಎಂದು ಹೇಳುತ್ತಾರೆ.

“ಈಗ ನನ್ನ ಸದಸ್ಯರ ಸಂಖ್ಯೆ 150ರಿಂದ 15ಕ್ಕೆ ಇಳಿದಿದೆ. ಜನರು ಭಯಭೀತರಾಗಿದ್ದಾರೆ. ನನಗೆ ಅದು ಅರ್ಥವಾಗುತ್ತದೆ. ನನ್ನ ಜಿಮ್‌ ಇರುವ ಕಟ್ಟಡಕ್ಕೆ ನಾನು 40 ಸಾವಿರ ರೂಪಾಯಿ ಬಾಡಿಗೆ ನೀಡಬೇಕು. ನಮ್ಮ ಕುಟುಂಬಕ್ಕೆ ಇದೊಂದೇ ಆದಾಯ. ನಾನು ಇತ್ತೀಚೆಗೆ ಮನೆ ಕಟ್ಟಿಸಿದ್ದೇನೆ. ಅದಕ್ಕಾಗಿ ಮಾಸಿಕವಾಗಿ 16 ಸಾವಿರ ರೂಪಾಯಿ ಸಾಲ ಮರುಪಾವತಿ ಮಾಡಬೇಕು. ಆದರೆ ಈಗ ಜಿಮ್‌ನ ಸದಸ್ಯರ ಸಂಖ್ಯೆ ಕಡಿಮೆಯಾಗಿದೆ. ನೀವು ಸದಸ್ಯರನ್ನು ಕಳೆದುಕೊಂಡರೆ, ಮರಳಿ ಪಡೆಯುವುದು ಕಷ್ಟ” ಎಂದು ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ? ನಿಜವಾದ ದೇಶಭಕ್ತ ‘ಮೊಹಮ್ಮದ್ ದೀಪಕ್’!

ಈ ಎಲ್ಲಾ ಬೆಳವಣಿಗೆ ನಡುವೆ ರಾಜ್ಯಸಭೆಯಲ್ಲಿ ಸಿಪಿಐ(ಎಂ)ನ ನಾಯಕ, ಸಂಸತ್ ಸದಸ್ಯ ಜಾನ್ ಬ್ರಿಟ್ಟಾಸ್, ಬಾಬಾ ಡ್ರೆಸ್‌ನ ಮಾಲೀಕ ವಕೀಲ್ ಅಹ್ಮದ್ ಮತ್ತು ಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಟ್ವೀಮ್ ಮಾಡಿದ್ದು, “ಜಿಮ್ ಈಗ ಕೋಮುವಾದಿಗಳ ಬೆದರಿಕೆಯಿಂದಾಗಿ ನಿರ್ಜನವಾಗಿದ್ದರಿಂದ ಜಿಮ್‌ಗೆ ಭೇಟಿ ನೀಡಿ ಸದಸ್ಯತ್ವವನ್ನು ಪಡೆಯಲಾಗಿದೆ” ಎಂದು ಹೇಳಿದ್ದಾರೆ.

ಇನ್ನು ಗಲಭೆಕೋರರನ್ನು ರಕ್ಷಿಸಿರುವ ಕೋಟ್‌ದ್ವಾರ ಪೊಲೀಸ್ ಠಾಣೆ ಪೊಲೀಸರು ದೀಪಕ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಈ ಕ್ರಮದ ವಿರುದ್ಧವೂ ಬ್ರಿಟ್ಟಾಸ್ ತಮ್ಮ ಬಲವಾದ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಫ್ಯಾಸಿಸ್ಟ್ ಗೂಂಡಾಗಳ ವಿರುದ್ಧ ನಿರ್ಭಯವಾಗಿ ನಿಲುವು ತೆಗೆದುಕೊಂಡಿದ್ದಕ್ಕಾಗಿ ಮೊಹಮ್ಮದ್ ದೀಪಕ್‌ ಅವರನ್ನು ಅಭಿನಂದಿಸಿದ್ದಾರೆ. “ಅವರಂತಹ ಜನರು ದೇಶದ ನಿಜವಾದ ಭರವಸೆ ಮತ್ತು ಶಕ್ತಿ” ಎಂದೂ ಪೋಸ್ಟ್ ಮಾಡಿದ್ದಾರೆ. ಈ ನಡುವೆ ಪೊಲೀಸರು ಕುಮಾರ್‌ಗೆ ರಕ್ಷಣೆ ಒದಗಿಸಿದ್ದಾರೆ ಮತ್ತು ಪಟ್ಟಣದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲೇನೋ ದೀಪಕ್‌ಗೆ ಬೆಂಬಲ ವ್ಯಕ್ತವಾಗಿದೆ. ಆದರೆ ದೀಪಕ್ ದುಡಿಮೆಗೆ ಕತ್ತರಿ ಬಿದ್ದಿದೆ. ಜಾನ್ ಬ್ರಿಟ್ಟಾಸ್ ಜಿಮ್ ಸದಸ್ಯತ್ವ ಪಡೆದಿರುವುದಾಗಿ ಹೇಳುತ್ತಿರುವಂತೆ ನೆಟ್ಟಿಗರೊಬ್ಬರು, “ನನಗೂ ಜಿಮ್ ಸದಸ್ಯತ್ವ ಪಡೆಯಬೇಕು ಅಥವಾ ಜಿಮ್‌ಗಾಗಿ ದೇಣಿಗೆ ನೀಡಬೇಕು, ದೀಪಕ್ ಅವರನ್ನು ಹೇಗೆ ಸಂಪರ್ಕಿಸುವುದು” ಎಂದು ಕೇಳಿದ್ದಾರೆ. ಇನ್ನೂ ಕೆಲವರು ದೇಣಿಗೆ ನೀಡಲು ಬಯಸುವುದಾಗಿ ಕಾಮೆಂಟ್ ಮಾಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...