ಭಾರತಕ್ಕೆ ಮುಸ್ಲಿಂ ಧರ್ಮ ಯಾವಾಗ ಬಂದಿತೋ, ಆಗಲೇ ಅದು ಭಾರತದ ಭಾಗವಾಗಿದೆ. ಭಾರತದಲ್ಲಿ ವಾಸಿಸುವ ಮುಸ್ಲಿಮರು ಕೂಡ ಈ ದೇಶದ ನಾಗರಿಕರು. ಇಸ್ಲಾಂ ಕಣ್ಮರೆಯಾಗುತ್ತಿದೆ ಎನ್ನುವವರು ಹಿಂದು ಚಿಂತನೆಯನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಆರ್ಎಸ್ಎಸ್ ಶತಮಾನೋತ್ಸವದ 3ನೇ ದಿನದ ಸಭೆಯಲ್ಲಿ ಅವರು ಮಾತನಾಡಿದರು. “ಇಲ್ಲಿ ವಾಸಿಸುತ್ತಿರುವ ಮುಸ್ಲಿಮರು ಕೂಡ ಭಾರತದ ನಾಗರಿಕರಾಗಿದ್ದಾರೆ. ಅವರಿಗೂ ಉದ್ಯೋಗ ಬೇಕು. ಮುಸ್ಲಿಮರಿಗೆ ಉದ್ಯೋಗ ಒದಗಿಸಲು ಬಯಸುವವರು, ಈ ದೇಶದಲ್ಲಿನ ಮುಸ್ಲಿಮರಿಗೆ ಉದ್ಯೋಗ ನೀಡಬೇಕು. ಹೊರಗಿನವರಿಗಲ್ಲ” ಎಂದಿದ್ದಾರೆ ಎಂದು livemint.com ವರದಿ ಮಾಡಿದೆ.
“ಅಕ್ರಮ ಒಳನುಳುವಿಕೆಯನ್ನು ತಡೆಯಬೇಕು. ಅದಕ್ಕಾಗಿ, ಸರ್ಕಾರ ಅಗತ್ಯ ಪ್ರಯತ್ನಗಳನ್ನು ಮಾಡುತ್ತಿದೆ” ಎಂದು ಹೇಳಿದ್ದಾರೆ.




