ಹಿರಿಯಣ್ಣನ ಚಾಳಿ | ದ.ರಾ ಬೇಂದ್ರೆ ಪಾರ್ಕ್‌ ಬೋರ್ಡ್‌ನಲ್ಲಿ ಬೇಂದ್ರೆಯೇ ಇಲ್ಲ- ಅಶೋಕ್‌ದೇ ಎಲ್ಲ

Date:

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರಕ್ಕೇರಿದ ಬಳಿಕ, ದೇಶದ ರಾಜಕಾರಣದಲ್ಲಿ ಫೋಟೋಶೂಟ್‌ ಖಯಾಲಿ ಹೆಚ್ಚಾಗಿದೆ. ಎಲ್ಲೆಡೆಯೂ ತಮ್ಮದೇ ಚಿತ್ರ ಇರಬೇಕು ಎಂಬುದನ್ನು ಹಲವಾರು ರಾಜಕಾರಣಿಗಳು ಮೋದಿ ಅವರನ್ನು ನೋಡಿ ಕಲಿಯುತ್ತಿದ್ದಾರೆ. ಜಾಹೀರಾತು, ಫ್ಲೆಕ್ಸ್‌, ಪ್ಲೆಕಾರ್ಡ್‌, ಕರಪತ್ರ, ಬ್ಯಾನರ್, ಬೋರ್ಡ್‌ಗಳಲ್ಲಿ ತಮ್ಮದೇ ಫೋಟೋಗಳು ಇರಬೇಕೆಂದು ಬಯಸುವ ರಾಜಕಾರಣಿಗಳ ಸಂಖ್ಯೆ ಹೆಚ್ಚುತ್ತಿದೆ. ಅದೇ ರೀತಿಯ ಫೋಟೋ ಗೀಳು ಕರ್ನಾಟಕ ವಿಧಾನಸಭೆಯ ವಿಪಕ್ಷ ನಾಯಕ ಆರ್‌ ಅಶೋಕ್ ಅವರಿಗೂ ಬಂದಿದೆ. ಅವರು ಕೂಡ ಫೋಟೋ ಪ್ರಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಆರ್‌ ಅಶೋಕ್ ಅವರು ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕ. ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ ಇಸ್ರೋ ಬಡಾವಣೆಯ ದ.ರಾ ಬೇಂದ್ರೆ ಪಾರ್ಕ್‌ನಲ್ಲಿ ಹೊಸದಾಗಿ ಬೋರ್ಡ್‌ ಒಂದನ್ನು ಹಾಕಿಸಿದ್ದಾರೆ. ಆ ಬೋರ್ಡ್‌ನಲ್ಲಿ ‘ದ.ರಾ ಬೇಂದ್ರೆ ಉದ್ಯಾನವನ’ ಎಂದು ಬರೆಯಲಾಗಿದೆ. ಆದರೆ, ಅದರಲ್ಲಿ ಬೇಂದ್ರೆ ಅವರು ಚಿತ್ರವೇ ಇಲ್ಲ. ಬದಲಾಗಿ, ಒಂದೆಡೆ ಬಿಬಿಎಂಪಿ ಲೋಗೋ ಇದ್ದರೆ, ಮತ್ತೊಂದೆಡೆ ಆರ್‌ ಅಶೋಕ್ ಅವರ ಚಿತ್ರವಿದೆ. ಹೀಗಾಗಿ, ಬೋರ್ಡ್‌ ನೋಡಿದವರು ‘ಬೇಂದ್ರೆ ಎಲ್ಲಿದ್ದಾರೆ’ ಎಂದು ಪ್ರಶ್ನಿಸುತ್ತಿದ್ದಾರೆ. ಆ ಬೋರ್ಡ್‌ಅನ್ನು ಫೋಟೋ ತೆಗೆದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ‘ಬೇಂದ್ರೆ ಎಲ್ಲಿದ್ದಾರೆ ಹುಡುಕಿ’ ಎಂದೆಲ್ಲ ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ.

ಆದಾಗ್ಯೂ, ಇದೊಂದು ಗಂಭೀರ ವಿಚಾರ. ಯಾವವೊಂದು ಸ್ಥಳ ಅಥವಾ ಕಟ್ಟಡಕ್ಕೆ ಯಾರ ಹೆಸರನ್ನು ಇಡಲಾಗಿರುತ್ತದೆಯೋ ಅವರ ಚಿತ್ರವೇ ಇಲ್ಲದೆ, ಶಾಸಕ, ಸಂಸದ ಅಥವಾ ಅದನ್ನು ಕಟ್ಟಿಸಿದವರ ಚಿತ್ರ ಹಾಕಿಕೊಳ್ಳುವುದು ಹೆಚ್ಚುತ್ತಿದೆ. ಇದೊಂದು ಮನೋರೋಗವಾಗಿಯೂ ಕಾಣಿಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದ.ರಾ ಬೇಂದ್ರೆ (ದತ್ತಾತ್ರೇಯ ರಾಮಚಂದ್ರ ಬೇಂದ್ರೆ) ಅವರು ಕನ್ನಡ ಸಾಹಿತ್ಯದ ದಿಗ್ಗಜ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ಮಾತ್ರವಲ್ಲ, ಕರ್ನಾಟಕದ ಸಾಂಸ್ಕೃತಿಕ ಗುರುತಿನ ಪ್ರಮುಖ ಸಂಕೇತವೂ ಆಗಿದ್ದಾರೆ. ಅವರ ಕವಿತೆಗಳು, ಕಾದಂಬರಿಗಳು ಹಾಗೂ ಚಿಂತನೆಗಳು ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಹಚ್ಚಳಿದಿವೆ. ಆದರೆ, ಅವರ ಹೆಸರಿನ ಉದ್ಯಾನವನವೊಂದರ ನಾಮಫಲಕದಲ್ಲಿ ಅವರ ಚಿತ್ರವೇ ಇಲ್ಲದಿರುವುದು ಮತ್ತು ಆರ್. ಅಶೋಕ್‌ ತಮ್ಮ ಫೋಟೋವನ್ನು ಮಾತ್ರ ಹಾಕಿಕೊಂಡಿರುವುದು ನಿಜಕ್ಕೂ ಬೇಂದ್ರೆಯವರಿಗೆ ಮಾಡಿದ ಅಪಮಾನ.

ಹೀಗಾಗಿ, ಕನ್ನಡ ಸಾಹಿತ್ಯಾಸಕ್ತರು, ಬುದ್ಧಿಜೀವಿಗಳು ಮತ್ತು ಸಾಮಾನ್ಯ ಜನರು ಆರ್ ಅಶೋಕ್ ನಡೆಯ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಬೇಂದ್ರೆಯವರ ಗೌರವಕ್ಕೆ ಧಕ್ಕೆ ತಂದ ಕೃತ್ಯವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ರಾಜಕೀಯ ಸ್ವಾರ್ಥದ ಕೃತ್ಯವೆಂದು ಟೀಕಿಸಿದ್ದಾರೆ.

ರಾಜಕಾರಣಿಗಳಿಗೆ ಸಾಂಸ್ಕೃತಿಕ ಲೋಕದ ಹೆಗ್ಗುರುತಾಗಿರುವ ಬೇಂದ್ರೆ ಅವರಂತಹವರ ಬಗ್ಗೆ ತಿಳಿವಳಿಕೆ ಇರಬೇಕು. ಸಾಂಸ್ಕೃತಿ ಚಿಹ್ನೆಗಳ ಕುರಿತ ಸೂಕ್ಷ್ಮತೆ ಇರಬೇಕು. ಆರ್ ಅಶೋಕ್ ನಡೆಯುವ ಅವರಲ್ಲಿ, ಸಾಂಸ್ಕೃತಿಕ ಸಂವೇದನೆಯ ಕೊರತೆ ಇದೆ ಎಂಬುದನ್ನು ಸೂಚಿಸುತ್ತದೆ. ತಮ್ಮ ರಾಜಕೀಯ ಲಾಭಕ್ಕಾಗಿ ಸಾಂಸ್ಕೃತಿಕ ಮೌಲ್ಯಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಲುಧಿಯಾನ ಉಪಚುನಾವಣೆ: ಎಎಪಿ ಗೆದ್ದರೆ ಅಚ್ಚರಿ ಇಲ್ಲ – ಸೋಲು ಮಾತ್ರ ದುರಂತ

ರಾಜಕಾರಣಿಗಳು ತಮ್ಮ ಫೋಟೋಗಳನ್ನು ಸಾರ್ವಜನಿಕ ಯೋಜನೆಗಳ ನಾಮಫಲಕಗಳಲ್ಲಿ ಹಾಕಿಕೊಂಡು, ತಮ್ಮ ರಾಜಕೀಯ ಗುರುತನ್ನು ಪ್ರದರ್ಶಸಿಲು ಯತ್ನಿಸುವುದು ಹೊಸತೇನಲ್ಲ. ತಾವು ತಮ್ಮ ಕ್ಷೇತ್ರದಲ್ಲಿ ಏನೆಲ್ಲ ಕೆಲಸ ಮಾಡಿದ್ದೇವೆ. ಮಾಡುತ್ತಿದ್ದೇವೆ ಎಂಬುದನ್ನು ದಿನನಿತ್ಯ ಜನರ ಗಮನಕ್ಕೆ ತರಲು ಎಲ್ಲೆಡೆ ತಮ್ಮ ಫೋಟೋಗಳನ್ನು ಹಾಕಿಕೊಳ್ಳುವುದು ರಾಜಕೀಯ ತಂತ್ರದ ಭಾಗವಾಗಿಹೋಗಿದೆ. ಆದರೆ, ತಮ್ಮ ಪ್ರಚಾರದ ಭರದಲ್ಲಿ ಆ ಬೋರ್ಟ್‌ ಅಥವಾ ಇನ್ನಾವುದೇ ಪ್ರದರ್ಶಕಗಳ ಉದ್ದೇಶವನ್ನು ಮರೆತುಬಿಡಬಾರದು. ತಮ್ಮ ಚಿತ್ರವನ್ನು ಮಾತ್ರವೇ ಹಾಕಿಕೊಳ್ಳುವಷ್ಟು ಪ್ರಚಾರದ ಗೀಳಿಗೆ ಬೀಳಬಾರದು.

ಆರ್. ಅಶೋಕ್‌ ಅವರು ತಮ್ಮ ರಾಜಕೀಯ ಸ್ವಾರ್ಥವನ್ನು ಮೀರಿ, ಒಬ್ಬ ಮಹಾನ್ ಸಾಹಿತಿ ಬಗ್ಗೆ ಗೌರವದಿಂದ ವರ್ತಿಸಬೇಕಿತ್ತು. ಬೋರ್ಡ್‌ನಲ್ಲಿ ಪ್ರಧಾನವಾಗಿ ಬೇಂದ್ರೆ ಅವರ ಚಿತ್ರವನ್ನೂ, ಬದಿಯಲ್ಲಿ ತಮ್ಮದೂ ಒಂದು ಸಣ್ಣ ಚಿತ್ರವನ್ನೂ ಹಾಕಿಕೊಳ್ಳಬಹುದಿತ್ತು,. ಆದರೆ, ಆರ್ ಅಶೋಕ್ ಅವರು ತಮ್ಮದೇ ಚಿತ್ರವನ್ನು ದೊಡ್ಡದಾಗಿ ಹಾಕಿಸಿ, ಬೇಂದ್ರ ಅವರ ಚಿತ್ರವನ್ನೇ ಕೈಬಿಟ್ಟಿದ್ದಾರೆ.

ಒಬ್ಬ ಜನಪ್ರತಿನಿಧಿಯಾಗಿ, ಆರ್ ಅಶೋಕ್ ಅವರು ಸಾಂಸ್ಕೃತಿಕ ಸಂಕೇತಗಳು ಮತ್ತು ಮೌಲ್ಯಗಳ ಗೌರವವನ್ನು ಕಾಪಾಡಬೇಕಿತ್ತು. ಆದರೆ, ಅವರು ತಮ್ಮ ವೈಯಕ್ತಿಕ ಗುರುತನ್ನು ಮಾತ್ರವೇ ತೋರಿಸಿಕೊಳ್ಳು ಆದ್ಯತೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಕ ವಿಚಾರಗಳ ಬಗ್ಗೆ ಕನ್ನಡಿಗರಿಗಿರುವ ಗೌರವವನ್ನು ಅರಿತುಕೊಳ್ಳದೆ ಬರೀ ರಾಜಕೀಯ ಲೆಕ್ಕಾಚಾರ ಹಾಕುವುದು ತಮಗೇ ಮುಳುವಾಗಿ ಪರಿಣಮಿಸಬಹುದು. ಅದನ್ನು ಆರ್ ಅಶೋಕ್ ಸೇರಿದಂತೆ ಎಲ್ಲ ರಾಜಕಾರಣಿಗಳು ಅರಿತುಕೊಳ್ಳಬೇಕು. ಆರ್ ಅಶೋಕ್ ವಿರುದ್ಧ ವ್ಯಕ್ತವಾಗುತ್ತಿರುವ ವಿಮರ್ಶೆ, ಟೀಕೆಗಳು ಉಳಿದ ರಾಜಕಾರಣಿಗಳಿಗೆ ಪಾಠವಾಗಬೇಕು. ಆರ್ ಅಶೋಕ್ ಅವರು ಸಾಹಿತ್ಯಾಸಕ್ತರ ಬಳಿ ಕ್ಷಮೆಯಾಚಿಸಿ, ಬೇಂದ್ರೆಯವರ ಚಿತ್ರವುಳ್ಳ ಹೊಸ ನಾಮಫಲಕವನ್ನು ಪಾರ್ಕ್‌ನಲ್ಲಿ ಅಳವಡಿಸಬೇಕು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...