NSD ಹೊಸ ಶುಲ್ಕ: ಇದು ವಿದ್ಯಾದ್ರೋಹ, ಕಲಾದ್ರೋಹ, ದೇಶದ್ರೋಹದ ಕೆಲಸ

Date:

ನಮ್ಮ ಗಣರಾಜ್ಯವು ಯಾವ ಉದ್ದೇಶದಿಂದ ರಾಷ್ಟ್ರೀಯ ನಾಟಕಶಾಲೆಯನ್ನು ಹುಟ್ಟು ಹಾಕಿತೋ, ಯಾವ ಧ್ಯೇಯ ಮತ್ತು ಕಾರ್ಯಸೂಚಿಯನ್ನು ಅದರ ಮುಂದಿಟ್ಟಿತೋ ಆ ಎಲ್ಲವುದಕ್ಕೂ ಬಗೆದ ಮಹಾದ್ರೋಹ.

ಇಲ್ಲಿಯವರೆಗೆ ಎನ್ಎಸ್‍ಡಿ ಸಂಪೂರ್ಣ ಸಬ್ಸಿಡಿ ಆಧರಿಸಿ ರಂಗಭೂಮಿಯ ಪಾಠಗಳನ್ನು ಕಲಿಸುತ್ತ ಬಂದಿದೆ. ಈಗ ಹೊಸದಾಗಿ ಶುಲ್ಕ ವಿಧಿಸಿದೆ. ಈ ಬಗೆಯ ಯೋಜನೆ, ಈ ಬಗೆಯ ಶುಲ್ಕದ ವಿಧಿಯಿಂದ ರಂಗಭೂಮಿಯ ವಿದ್ಯಾಭ್ಯಾಸ ಪಡೆಯಲು ತೀರ ಬಡವರ ಮಕ್ಕಳಿಗೆ ಮಾತ್ರವಲ್ಲ, ಮಧ್ಯಮ ವರ್ಗ, ಕೆಳಮಧ್ಯಮ ವರ್ಗದವರಿಗೂ ಅವಕಾಶ ಇಲ್ಲವಾಗುತ್ತದೆ. 1978ರಲ್ಲಿ, ಅಂದಿನ ಕಾಲದ ದರಗಳಲ್ಲಿ ಈ ಥರದ ಶುಲ್ಕ ಇದ್ದಿದ್ದರೆ, ನಾನಾಗಲಿ, ನನ್ನ ಜೊತೆ ಅಂದು ಕಲಿತ ಸಹಪಾಠಿ ಗೆಳೆಯ-ಗೆಳತಿಯರಾಗಲಿ, ಕಳೆದ ಸುಮಾರು 70 ವರ್ಷಗಳಲ್ಲಿ ಆ ಶಾಲೆಯಿಂದ ಪದವಿ ಪಡೆದವರಲ್ಲಿಯ ಶೇಕಡಾ 99ರಷ್ಟು ಜನರಾಗಲಿ ಅಲ್ಲಿ ತರಬೇತಿ ಪಡೆಯಲು ಸಾಧ್ಯವೇ ಇರುತ್ತಿರಲಿಲ್ಲ.

WhatsApp Image 2025 09 16 at 14.17.54

ಇದನ್ನೂ ನೋಡಿ: https://nsd.gov.in/delhi/index.php/admission-notice-mumbai-2025/

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಷ್ಟೇಕೆ, ಈಗ ಈ ಶಾಲೆಯಲ್ಲಿ ಅಧಿಕಾರಸ್ಥಾನದಲ್ಲಿರುವವರು, ಅದನ್ನು ನಡೆಸುವ ಸಮಾಜ, ಅಂದರೆ ಎನ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಎಸ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಡಿ ಸೊಸೈಟಿ, ಸದಸ್ಯರಾಗಿರುವವರು, ಅದರ ಶೈಕ್ಷಣಿಕ ಸಮಿತಿ, ಅಂದರೆ ಅಕಾಡೆಮಿಕ್ ಕೌನ್ಸಿಲ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍, ಸದಸ್ಯರಾಗಿರುವವರು, ಈ ಶಾಲೆಯಲ್ಲಿ ಅಧ್ಯಾಪನ ಮಾಡುತ್ತಿರುವವರು, ಇವರೆಲ್ಲರೂ ಆ ಥರದ- ಸಮಾಜವಾದೀ ಎನ್ನಬಹುದಾದ- ಸವಲತ್ತು ಮತ್ತು ಹಕ್ಕಿನ ಪ್ರಯೋಜನ ಪಡೆದವರೇ. ತಮ್ಮಂತೆ ಇತರರೂ, ಇಂದಿನ ಮತ್ತು ಮುಂದಿನ ಪೀಳಿಗೆಯ ಮಕ್ಕಳೂ, ಎಂಬ ಪರಿವೆ, ಧರ್ಮಪ್ರಜ್ಞೆ ಇಲ್ಲವೇ, ಬೇಡವೇ ಇವರಿಗೆ?

ರಾಷ್ಟ್ರೀಯ ನಾಟಕಶಾಲೆ ಹಲವು ದಶಕಗಳಿಂದ ಅಧೋಗತಿಯ ಹಾದಿಹಿಡಿದಿದೆ. ಆ ಹಾದಿ, ಇದೀಗ ಇನ್ನಷ್ಟು ಆಳಕತ್ತಲೆಯ ಕೂಪಕ್ಕೆ ಬೀಳುತ್ತಿದೆ, ಅಷ್ಟೇ. ಮೋದಿ ಸರಕಾರ ಮತ್ತು ಶಾಲೆಯ ಆಡಳಿತವರ್ಗವು ಮುಂಬೈಯಲ್ಲಿ ಈ ಮಾದರಿಯ ‘ಛೂ’ ಬಿಟ್ಟು ಜನ ಹೇಗೆ ಪ್ರತಿಕ್ರಿಯಿಸಬಹುದು ಎಂದು ಪರೀಕ್ಷಿಸುತ್ತಿವೆ. ಇದೆಲ್ಲ ಹೀಗೇ ಆಗುತ್ತ ಸಾಗಿದರೆ, ಮುಂಬೈ ಕೇಂದ್ರದ ಈ ವ್ಯಾಪಾರೀ ಮಾದರಿಯನ್ನು ಎನ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಎಸ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಡಿಯ ಇತರ ಕೇಂದ್ರಗಳು ಅನುಸರಿಸುತ್ತವೆ. ಈ ಪರೀಕ್ಷೆಯಲ್ಲಿ ತಾವು ಗೆದ್ದೆವು ಎಂದು ಅವರಿಗೆ ಅನ್ನಿಸಿದರೆ, ಆ ಬಳಿಕ, ದೆಹಲಿಯಲ್ಲಿರುವ ದೊಡ್ಡ ಶಾಲೆ ಕೂಡ ಇಂಥದನ್ನೇ ದುಪ್ಪಟ್ಟೋ ಮುಪ್ಪಟ್ಟೋ ಬೆಳೆಸಿ ಜಾರಿಗೆ ತರುತ್ತದೆ, ಶಂಕೆ ಬೇಡ.

ಇದನ್ನು ಓದಿದ್ದೀರಾ?: ಮೋದಿ ಮಣಿಪುರ ಭೇಟಿ- ‘ಹಾವು ಸಾಯಲಿಲ್ಲ, ಕೋಲು ಮುರಿಯಲಿಲ್ಲ’!

ರಂಗಭೂಮಿ ಮತ್ತು ಪ್ರದರ್ಶನ ಕಲೆಗಳ ವಿದ್ಯಾಭ್ಯಾಸವು ಹಣವಂತರಿಗೆ, ‘ಮೇಲು’ ಜಾತಿ, ಬಲಿಷ್ಠ ಜಾತಿಗಳವರಿಗೆ ಮಾತ್ರ ಮೀಸಲಿರಬೇಕೇ?

ಇದು, ಇದು ಈ ಬಿಜೆಪಿ-ಸಂಘ ಪರಿವಾರ-ಕಾರ್ಪೊರೆಟ್ ವ್ಯಾಪಾರೀ ವ್ಯವಸ್ಥೆಯ ಅಮೃತಕಾಲದ ವಿಷಫಲ, ಅದರ ಸಬ್‍ ಕಾ ಸಾಥ್, ಸಬ್‍ ಕಾ ವಿಕಾಸ್ ಅನ್ನುವುದರ ಅಸಲಿ ಮುಖ.

ಇಂಥ ಯೋಚನೆ, ಯೋಜನೆಗಳನ್ನು ಖಂಡತುಂಡವಾಗಿ ಎದುರಿಸಿ, ಹೋರಾಡಿ, ಅಡಗಿಸಬೇಕು.

WhatsApp Image 2023 05 29 at 7.32.13 PM
ರಘುನಂದನ
+ posts

ಕವಿ, ನಾಟಕಕಾರ, ರಂಗನಿರ್ದೇಶಕ

ಪೋಸ್ಟ್ ಹಂಚಿಕೊಳ್ಳಿ:

ರಘುನಂದನ
ರಘುನಂದನ
ಕವಿ, ನಾಟಕಕಾರ, ರಂಗನಿರ್ದೇಶಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...