ರಾಜಕೀಯ ಲೆಕ್ಕಾಚಾರ ಮತ್ತು ಅಪ್ಪ ಮಕ್ಕಳ ಪಕ್ಷ

Date:

ವಂಶಾಡಳಿತ ರಾಜಕಾರಣದ ಆಡಳಿತ ರಾಜರ ಕಾಲದಲ್ಲಿ ಹೇರುವಿಕೆಯಾಗಿತ್ತು. ಜನ ಮತ್ತೆ ಮತ್ತೆ ಆಯ್ಕೆ ಮಾಡಿದರೆ ಗೆದ್ದವನ ತಪ್ಪಲ್ಲ…

ರಾಜಕೀಯ ಲೆಕ್ಕಾಚಾರ ಅನ್ನುವುದನ್ನು ಕೇಳುತ್ತೇವೆ. ನನ್ನ ಅನುಭವದ ಪ್ರಕಾರ ವಿಜ್ಞಾನ , ಗಣಿತ, ಆಡಳಿತ ಹೀಗೆ ವಿವಿಧ ವಿಷಯದಲ್ಲಿ ಒಂದು ಲೆಕ್ಕಾಚಾರದ ಚೌಕಟ್ಟು ಇದೆ. ರಾಜಕೀಯ ಲೆಕ್ಕಾಚಾರ ಅಂದರೆ ಅದು ಯಾವುದೇ ಚೌಕಟ್ಟನಿಲ್ಲಿ ಇರುವುದಲ್ಲ. ಹಾಗಾಗಿ ಅದು ಲೆಕ್ಕಾಚಾರವೂ ಅಲ್ಲ. ಅದು ಯಾವ ಗೆರೆಯೂ ಇಲ್ಲದ ತೆರೆದ ಬಯಲಿನ ಆಟ ಅಷ್ಟೆ. ನೀತಿ ನಿಯಮವಿಲ್ಲ . ಹೇಗಾದರೂ ಆಡು ಗೆಲ್ಲಬೇಕು. ಅದಕ್ಕೆ ಜನ ಬೆಂಬಲವಿದ್ದರೆ ಮುಗಿಯಿತು.

ಬಿಜೆಪಿ ಸತತವಾಗಿ ತಾನು ಉಳಿದವರಿಗಿಂತ ಭಿನ್ನ, ನಾನು ಭ್ರಷ್ಟಾಚಾರ ರಹಿತ , ನಾನು ವಂಶಾಡಳಿತದ ವಿರುದ್ಧ ಎಂದು ಹೇಳಿಕೊಂಡೆ ಬಂದಿತು. ಜನ ನಂಬಿದ್ದರು ಕೂಡಾ. ರಾಜಕೀಯದಲ್ಲಿ ಅಥವಾ ಬದುಕಿನಲ್ಲಿ ಯಾವುದೇ ಸಂಪತ್ತು ಅಧಿಕಾರ ಇಲ್ಲದಾಗ ಮೌಲ್ಯಗಳು, ನೈತಿಕತೆಗಳು ಮಾತನಾಡುತ್ತದೆ. ಅದು ಅಧಿಕಾರ ಸಂಪತ್ತು ಇದ್ದಾಗ ಹೇಗಿರುತ್ತದೆ ಅನ್ನುವುದು ಮುಖ್ಯ. ಬಿಜೆಪಿ ಅಧಿಕಾರ ಸಿಗುವ ಮೊದಲು ಸ್ವಚ್ಛ , ಸುಂದರ. ಆದರೆ, ಒಂದೊಂದೇ ರಾಜ್ಯಗಳಲ್ಲಿ ಅಧಿಕಾರ ಸಿಕ್ಕಂತೆ ಅಲ್ಲಿ ಭ್ರಷ್ಟಾಚಾರ, ಅನೈತಿಕ ರಾಜಕಾರಣ ನಿಧಾನವಾಗಿ ಶಬ್ದ ಮಾಡತೊಡಗಿದ್ದು. ಈಗ ದೀರ್ಘ ಕಾಲ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷವು ನೈತಿಕತೆ, ಭ್ರಷ್ಟಾಚಾರ, ಆದರ್ಶ ಶಬ್ದಗಳ ಬಳಕೆ ಮಾಡಿದರೆ ಅವರ ಪಕ್ಷದ ಕಾರ್ಯಕರ್ತರು ಮತ್ತು ಜನಸಾಮಾನ್ಯರು ಗಹಗಹಿಸಿ ನಗುವ ಮಟ್ಟಕ್ಕೆ ಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಂಶಾಡಳಿತ ರಾಜಕಾರಣದ ಆಡಳಿತ ರಾಜರ ಕಾಲದಲ್ಲಿ ಹೇರುವಿಕೆಯಾಗಿತ್ತು. ಈಗ ಪ್ರಜಾಪ್ರಭುತ್ವ. ಜನರ ಆಯ್ಕೆಯಾಗುತ್ತದೆ. ಕಾಂಗ್ರೆಸ್‌‌ನ ವಿಷಯ ಬಂದಾಗ ನಾನು ಹೇಳುವುದು ಅದನ್ನೇ; ಜನ ಮತ್ತೆ ಮತ್ತೆ ಆಯ್ಕೆ ಮಾಡಿದರೆ ಗೆದ್ದವನ ತಪ್ಪಲ್ಲ. ನೆಹರೂ, ಇಂದಿರಾ ಗಾಂಧಿ, ರಾಜೀವ ಗಾಂಧಿ ಚುನಾವಣೆಯಲ್ಲಿ ಗೆದ್ದದ್ದು. ಈಗ ದೇಶದ ಬಹುತೇಕ ಕಡೆಗಳಲ್ಲಿ ನಾಯಕರ ಮಕ್ಕಳು, ಪ್ರಾದೇಶಿಕ ಪಕ್ಷದ ವಂಶಾವಡಳಿತಕ್ಕೂ ಜನ ಮತ ಕೊಡುತ್ತಿದ್ದಾರೆ. ನಾಳೆ ಯಡಿಯೂರಪ್ಪರ ನಂತರ ಅವರ ಮಗ, ನಂತರ ಅವರ ಮೊಮ್ಮಗನಿಗೆ ಜನ ಮತ ಕೊಟ್ಟದ್ದೇ ಆದರೆ ಯಾವ ಮೋದಿ, ಅಮಿತ್‌ ಶಾ, ಸಂಘ ಪರಿವಾರವೂ ಎನೂ ಮಾಡಲಾಗದು. ಪಕ್ಷ ಉಳಿಯಬೇಕಾ ಗೆಲ್ಲುವವರನ್ನು ನಿಲ್ಲಿಸಬೇಕು. ಹಾಗೇ ಸೈದ್ಧಾಂತಿಕವಾಗಿ ಕೂಡಾ ರಾಜಿಯಾಗುತ್ತದೆ. ಆಗಲೇ ಬೇಕಾಗುತ್ತದೆ.

ಒಬ್ಬ ನಾಯಕ 5 ಬಾರಿ ಹತ್ತು ಬಾರಿ ಒಂದು ಕ್ಷೇತ್ರದಲ್ಲಿ ಹಿಡಿತವಿರಿಸುವುದು ಜನರ ಬೆಂಬಲವೂ ಇರುವುದರಿಂದ. ಚುನಾವಣಾ ನೀತಿ ನಿಯಮಗಳಲ್ಲಿ ಬಿಜೆಪಿ ಯಾಕೆ ಆಸಕ್ತಿ ತೋರಿಸಲಿಲ್ಲ. ಕನಿಷ್ಠ ಚುನಾವಣಾ ಸುಧಾರಣೆಯ ಕುರಿತೂ ಸೊಲ್ಲೇ ಎತ್ತಲಿಲ್ಲ. ಯಾಕೆಂದರೆ ಅದಕ್ಕೆ ತನ್ನ ಅಧಿಕಾರ ಉಳಿಯಬೇಕು ಅಷ್ಟೆ. ಸುಧಾರಣೆ ಅಲ್ಲ.

ಇನ್ನು ಜನತಾದಳದ ಅಪ್ಪ ಮಕ್ಕಳ ಬಗ್ಗೆ, ಅವರಿಗೆ ತಮ್ಮ ಕುಟುಂಬದ ರಾಜಕಾರಣ ಮಾತ್ರ ಮುಖ್ಯ. ಅದು ಜಗಜ್ಜಾಹೀರು. ಕೆಲವು ಕ್ಷೇತ್ರದಲ್ಲಿ ಜನ ಜಾತಿ ರಾಜಕೀಯ ಕಾರಣಕ್ಕೆ ಅವರನ್ನು ಗೆಲ್ಲಿಸುತ್ತಾರೆ. ಇತ್ತೀಚೆಗೆ ಜನ ವಿರೋಧ ಬರುತ್ತಿದೆ. ಅದಕ್ಕೆ ಉಳಿಯಬೇಕಾದರೆ ಇವರಿಗೆ ಬಿಜೆಪಿ ಬೇಕು. ನಾಳೆ ಬೇಡ ಅಂದಾಗ ಬಿಡುತ್ತಾರೆ.

ಇದನ್ನೂ ಓದಿರಿ: ಒಳಮೀಸಲಾತಿ: ಮಾದಿಗರಿಗೆ ಮತ್ತೆ ಮಹಾವಂಚನೆ ಮಾಡುತ್ತಿರುವ ಮೋದಿ

ರಾಜಕೀಯದಲ್ಲಿ ಆದರ್ಶ ರಾಜಕಾರಣ, ನೈತಿಕ ರಾಜಕಾರಣ, ಮೌಲ್ಯಾಧಾರಿತ ರಾಜಕಾರಣದ ಬಿಜೆಪಿ ಭಾಷಣಗಳು ಅಧಿಕಾರ ಇಲ್ಲದ ದಿನಗಳಲ್ಲಿ ಕೇಳುವುದಕ್ಕೆ ಚಂದ ಇತ್ತು. ಈಗ ತೆರೆದುಕೊಳ್ಳುತ್ತಿರುವುದು ವಾಸ್ತವದ ಪರದೆ. ಇಲ್ಲಿ ಲೆಕ್ಕಾಚಾರ ಅಂದರೆ ಪ್ಲಸ್ ಮತ್ತು ಮೈನಸ್. ಯಾವತ್ತೂ ಪ್ಲಸ್ ಇರಬೇಕು ಅನ್ನುವುದಕ್ಕೆ ಎನು ಬೇಕಾದರೂ ಮಾಡಬೇಕು. ಅದು ಆಪರೇಷನ್ ಆದೀತು, ಸೈದ್ಧಾಂತಿಕ ರಾಜಿಯಾದೀತು, ಭ್ರಷ್ಟಾಚಾರಿಗಳಿಗೆ ಸ್ವಾಗತವಾದೀತು- ಪ್ಲಸ್ ಇರಬೇಕು. ಇದು ರಾಜಕಾರಣ.

ಕೊನೆಯ ಮಾತು. ಇನ್ನಾದರೂ ಬಿಜೆಪಿ ನಾಯಕರು, ಗುತ್ತಿಗೆ ಆಧಾರಿತ ಭಾಷಣಕಾರರಾದ ಸೂಲಿಬೆಲೆ ಮತ್ತು ಟೀಂ ನವರು, ಆರ್‌‌ಎಸ್‌ಎಸ್‌ ನಾಯಕರು ಉಳಿದ ರಾಜಕೀಯ ಪಕ್ಷದ ಬಗ್ಗೆ ಉರುಳಿಸುವ ಶಬ್ಧಗಳ ಬಗ್ಗೆ ಹುಷಾರಾಗಿದ್ದರೆ ಒಳ್ಳೆಯದು. ಇಲ್ಲವಾದರೆ ಸಾಮೂಹಿಕ ಜೋಕರ್‌‌ಗಳ ಸರ್ಕಸ್ ಕಂಪೆನಿಯಂತೆ ಜನ ನೋಡಿಯಾರು.

WhatsApp Image 2025 11 17 at 3.25.04 PM
ಎಂ ಜಿ ಹೆಗಡೆ, ಮಂಗಳೂರು
+ posts

ಲೇಖಕ, ಜನಪರ ಹೋರಾಟಗಾರ

ಪೋಸ್ಟ್ ಹಂಚಿಕೊಳ್ಳಿ:

ಎಂ ಜಿ ಹೆಗಡೆ, ಮಂಗಳೂರು
ಎಂ ಜಿ ಹೆಗಡೆ, ಮಂಗಳೂರು
ಲೇಖಕ, ಜನಪರ ಹೋರಾಟಗಾರ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

RSS, BJP ವಿರುದ್ಧ ಹೋರಾಡುವ ದೇಶದ ಏಕೈಕ ನಾಯಕ ರಾಹುಲ್‌ ಗಾಂಧಿ : RS MP ಕ್ರಿಸ್ಟೋಫರ್ ತಿಲಕ್

ಸೋನಿಯಾ ಗಾಂಧಿ ಅವರು ಕಂಡ ರಾಜಕೀಯದ ಪರಿಸ್ಥಿತಿಯೇ ಬೇರೆ, ರಾಹುಲ್‌ ಗಾಂಧಿ...

UAPA ದುರ್ಬಳಕೆ; ವಿಕಸಿತ ಭಾರತಕ್ಕೆ ಶೋಭೆ ತರಲ್ಲ: ಮೋಶಾ ಆಡಳಿತಕ್ಕೆ ಸುಪ್ರೀಂ ನ್ಯಾಯಮೂರ್ತಿ ತಪರಾಕಿ

"2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಮಾಡುವ ರಾಜಕೀಯ ಮುಖಂಡರ ಗುರಿಯಲ್ಲಿ...

ಕೇರಳ ಚುನಾವಣೆ | ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಮೇಲಿದೆ 242 ಕ್ರಿಮಿನಲ್ ಪ್ರಕರಣಗಳು

ಏಪ್ರಿಲ್ 9ರಂದು ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಅಭ್ಯರ್ಥಿಗಳು...

ಸರ್ಕಾರಿ ಅಧಿಕಾರಿಯ ಆತ್ಮಹತ್ಯೆ ಪ್ರಕರಣ: ಪಂಜಾಬ್ ಮಾಜಿ ಸಚಿವ ಲಾಲ್ಜಿತ್ ವಿರುದ್ಧ ಎಫ್‌ಐಆರ್

ಪಂಜಾಬ್ ರಾಜ್ಯ ಗೋದಾಮು ನಿಗಮದ (ಪಿಎಸ್‌ಡಬ್ಲ್ಯೂಸಿ) ಜಿಲ್ಲಾ ವ್ಯವಸ್ಥಾಪಕ ಗಗನ್‌ದೀಪ್ ಸಿಂಗ್...