ಪ್ರಜ್ವಲ್ ಪ್ರಕರಣ | ʼನಿಷ್ಪಕ್ಷಪಾತ ತನಿಖೆ‌ ಆಗಲಿ, ನಾವೆಲ್ಲ ನಿಮ್ಮೊಂದಿಗಿದ್ದೇವೆʼ ಎಂದು ಹೇಳುವ ಅಗತ್ಯವಿದೆ

Date:

“ಯಾವುದೇ ಪೂರ್ವಗ್ರಹವಿಲ್ಲದೆ ನಿಷ್ಪಕ್ಷಪಾತ ತನಿಖೆ‌ ಆಗಲಿ… ನಾವೆಲ್ಲ ನಿಮ್ಮೊಂದಿಗೆ ಇರುತ್ತೇವೆ” ಎಂದು ಸರ್ಕಾರ ಮತ್ತು ಸರ್ಕಾರದಲ್ಲಿರುವ ಅಧಿಕಾರಸ್ಥರು, ವಿರೋಧ ಪಕ್ಷದ ನಾಯಕರು, ಜನಪರ ರಾಜಕಾರಣಿಗಳು, ನಿಷ್ಠುರ ಪತ್ರಕರ್ತರು, ನಿವೃತ್ತ ನ್ಯಾಯಮೂರ್ತಿಗಳು, ನಿವೃತ್ತ IAS, IPS ಅಧಿಕಾರಿಗಳು, ಮಿಲಿಟರಿ ಅಧಿಕಾರಿಗಳು, ಬುದ್ಧಿಜೀವಿಗಳು ಮತ್ತು ಬದ್ಧತೆಯಿರುವ ಹೋರಾಟಗಾರರು ಗಟ್ಟಿಯಾಗಿ ಹೇಳಬೇಕಿದೆ.

“ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದಂತಹ ಗಂಭೀರ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ತನಿಖೆಗೆ ಅಸಹಕಾರ ತೋರುತಿದ್ದಾರೆ”, “ಹೊರಗೆ ಬಂದ ಕೂಡಲೇ ನೋಡಿಕೊಳ್ಳುವುದಾಗಿ” ತನಿಖಾಧಿಕಾರಿಗಳನ್ನು ಬೆದರಿಸುತಿದ್ದಾರೆಂದು ಇಂದು ‘ಪ್ರಜಾವಾಣಿ’ ವರದಿ ಮಾಡಿದೆ. ಅದೇ ರೀತಿ ಭವಾನಿ ರೇವಣ್ಣ ತನಿಖಾಧಿಕಾರಿಗಳನ್ನು ಏಳು ಗಂಟೆಗಳ ಕಾಲ ಹೊಳೆನರಸೀಪುರದ ಮನೆ ಮುಂದೆ ಕಾಯಿಸಿದ್ದಾರೆ ಎಂಬುದೂ ಸುದ್ದಿಯಾಗಿದೆ.

ಜಗತ್ತಿನ ಅತಿದೊಡ್ಡ ಲೈಂಗಿಕ ಪ್ರಕರಣಗಳ ಸಾಲಿಗೆ ಸೇರಬಹುದಾದ ಈ ಪ್ರಕರಣದಲ್ಲಿ ಆರೋಪಿಯಾಗಿರುವವರು ಈ ದೇಶದ ಪ್ರದಾನಮಂತ್ರಿ ಮತ್ತು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಅತ್ಯಂತ ಪ್ರತಿಷ್ಠಿತ ಹಾಗೂ ರಾಜ್ಯಾಧಿಕಾರದ ಅತ್ಯುನ್ನತ ಸ್ಥಾನದಲ್ಲಿರುವ ಕುಟುಂಬದ ಸದಸ್ಯರು. ಅದರಲ್ಲೂ ಈಗ ರಾಷ್ಟ್ರಾಧಿಕಾರ ಹೊಂದಿರುವ ಅತ್ಯಂತ ಪ್ರಭಾವಿ ಸರ್ಕಾರ ಮತ್ತು ಪ್ರಭಾವಿ ಪಕ್ಷದೊಂದಿಗೆ ಶಾಮೀಲಾಗಿರುವ ಕುಟುಂಬ. ಅಂತೆಯೇ ರಾಜ್ಯ ರಾಜಕಾರಣದ ಅತ್ಯಂತ ದೊಡ್ಡ ಮತ್ತು ಪ್ರಭಾವಿ ಸಮುದಾಯಕ್ಕೆ ಸೇರಿದ ಕುಟುಂಬ. ಕಳೆದ ನಾಲ್ಕು ದಶಕಗಳಿಂದ ಅನೇಕ IAS, IPS ಅಧಿಕಾರಿಗಳ ವರ್ಗಾವಣೆ, ಬಡ್ತಿ, ಆಯಕಟ್ಟಿನ ಜಾಗಗಳಿಗೆ ಹಾಕಿದ ಮತ್ತು ಎದುರಾಡಿದವರನ್ನು ಕಸದ ಬುಟ್ಟಿಗೆ ಎಸೆದಂತೆ ಎಸೆದ ಕುಟುಂಬವಿದು.

ಈಗಿನ ಎಸ್.ಐ.ಟಿ. ಅಧಿಕಾರಿಗಳಿಗೆ ಇದೆಲ್ಲ ಗೊತ್ತಿಲ್ಲದ ವಿಷಯವಲ್ಲ. ಅವರು ಮನಸ್ಸು ಮಾಡಿದರೆ ಈ ಪ್ರಕರಣದ ನಂತರ ಅವರು ಹೇಗೆ ನಮ್ಮನ್ನು ಫುಟ್ಬಾಲ್ ಆಡಬಲ್ಲರು ಎಂಬುದೂ ಗೊತ್ತಿಲ್ಲದಿಲ್ಲ. ಹೀಗಿರುವಾಗ ಪ್ರಜ್ವಲ್, ರೇವಣ್ಣ, ಭವಾನಿಯರಿಗೆ ಇಂತವರ ಮೇಲೆ ಹೇಗೆ‌ ಅಧಿಕಾರ ಚಲಾಯಿಸಬೇಕು ಎಂಬುದು ಗೊತ್ತಿದೆ. ಈ ಸಂದರ್ಭದಲ್ಲಿ ಹೇಗೆ ಇವರನ್ನು ಹೆದರಿಸಬಹುದು ಎಂಬುದೂ ಗೊತ್ತಿದೆ. ಇವರ ಹಿಂದೆ ದೇವೇಗೌಡರಂತ ದೇವೇಗೌಡರು, ಮೋದಿಯಂತಹ ಮೋದಿಯವರು, ಕುಮಾರಣ್ಣನಂತಹ ಕುಮಾರಣ್ಣನವರೂ ಹಿಮಾಲಯದಂತೆ ನಿಂತಿದ್ದಾರೆ ಎಂಬುದೂ ಗೊತ್ತಿದೆ. ಇವರ ಅಧಿಕಾರಾವಧಿಯಲ್ಲಿ ಇವರ ಪ್ರಭಾವದಿಂದ ಅದೆಷ್ಟು ಜನ ಇವರ ಆಪ್ತರು ನ್ಯಾಯಮೂರ್ತಿಗಳಾಗಿಲ್ಲ? ಅದೆಷ್ಟು ಮಂದಿ ಹಿರಿಯ ಶ್ರೇಣಿಯ IAS, IPS ಗಳು ಇಂದಿಗೂ ಇವರ ಮನೆ ಬಾಗಿಲು ಕಾಯುತ್ತಿಲ್ಲ. ಇವರಿಗೆ ಮುಗಿಬಿದ್ದು ಇವರ ಈ ‘ಕಷ್ಟಕಾಲದಲ್ಲಿ’ ಇವರಿಗೆ ಕಾನೂನು ಸಲಹೆ ನೀಡುತ್ತಿಲ್ಲ. ಈಗ ತನಿಖೆ ಮಾಡುತ್ತಿರುವ ಅಧಿಕಾರಿಗಳ ಮೇಲೆ ಅದೆಷ್ಟು ಒತ್ತಡ ಹಾಕುತ್ತಿಲ್ಲ ಎಂಬ ಪರಿಕಲ್ಪನೆ ನಮ್ಮ‌ ಮುಗ್ದ ಜನಸಾಮಾನ್ಯರಿಗೆ ಇರಲಾರದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಯಾರು ಅಧಿಕಾರಕ್ಕೆ? ಬೇರೆಯೇ ಭವಿಷ್ಯ ಹೇಳುತ್ತಿವೆ ಗ್ರೌಂಡ್‌ನಲ್ಲಿ ಕೆಲಸ ಮಾಡಿರುವ ನಾಗರಿಕ ಸಂಘಟನೆಗಳು

ಆಂಧ್ರದ ಗ್ಯಾಂಗ್ ರೇಪ್‌ನಲ್ಲಿ ಸಿಕ್ಕಿಬಿದ್ದ ಅತ್ಯಂತ ಕಡುಬಡವರು, ದಿಕ್ಕಿಲ್ಲದವರು, ಕನಿಷ್ಠ ಅಪರಾಧದ ಸುಳಿವೂ ಇಲ್ಲದ ಆಪಾದಿತರನ್ನು ಹಿಡಿದು ಪ್ರಾಥಮಿಕ ವಿಚಾರಣೆಯೂ ಇಲ್ಲದೆ ಎನ್ಕೌಂಟರ್ ಮಾಡಿ ಮುಗಿಸಿದ “ಹೀರೋಯಿಕ್” ಪ್ರಕರಣವನ್ನು ಒಮ್ಮೆ ಈ ಪ್ರಕರಣದೊಂದಿಗೆ ಇಟ್ಟು ನೋಡಿ. ಈ ದೇಶದ ಪೋಲಿಸ್ ಮತ್ತು ಕಾನೂನಿನ ತನಿಖಾ ವ್ಯವಸ್ಥೆಯ ತಾರತಮ್ಯದ ಸತ್ಯದರ್ಶನವಾಗುತ್ತದೆ.

ಇಲ್ಲಿ ಈ ‘ಹೈ ವೋಲ್ಟೇಜ್’ ಪ್ರಕರಣದ ಹಿನ್ನೆಲೆ ಮತ್ತು ಆಗಬಹುದಾದ ಪರಿಣಾಮಗಳ ಬಗ್ಗೆ ನಿಮ್ಮ ಗಮನ ಸೆಳೆದಿದ್ದೇನೆ ಅಷ್ಟೇ. ಆದರೆ ತನಿಖೆ ಮಾಡುತ್ತಿರುವವರ ಬಗ್ಗೆ ನಾವು ಅನಗತ್ಯವಾಗಿ ಅನುಮಾನ ಪಡುವುದು ಬೇಡ. ಅವರ ಬಗ್ಗೆ ಅಪಾರ ವಿಶ್ವಾಸ ಇಡೋಣ. ಆದರೆ ಈ ಸನ್ನಿವೇಶದಲ್ಲಿ ಕೆಲವೇ ಜವರಿಗೆ ಅತ್ಯಂತ ಬಲಿಷ್ಠವಾದ ನೈತಿಕ ಬೆಂಬಲ ನೀಡಬೇಕಾದ ಅವಶ್ಯಕತೆಯಿದೆ. ಆ ಬೆಂಬಲವನ್ನು ನಮ್ಮಂತಹ ಜನಸಾಮಾನ್ಯರು ಕೊಟ್ಟರೆ ಸಾಲದು. “ಯಾವುದೇ ಪೂರ್ವಗ್ರಹವಿಲ್ಲದೆ ನಿಷ್ಪಕ್ಷಪಾತ ತನಿಖೆ‌ ಆಗಲಿ… ನಾವೆಲ್ಲ ನಿಮ್ಮೊಂದಿಗೆ ಇರುತ್ತೇವೆ” ಎಂದು ಸರ್ಕಾರ ಮತ್ತು ಸರ್ಕಾರದಲ್ಲಿರುವ ಅಧಿಕಾರಸ್ಥರು, ವಿರೋಧ ಪಕ್ಷದ ನಾಯಕರು, ಜನಪರ ರಾಜಕಾರಣಿಗಳು, ನಿಷ್ಠುರ ಪತ್ರಕರ್ತರು, ನಿವೃತ್ತ ನ್ಯಾಯಮೂರ್ತಿಗಳು, ನಿವೃತ್ತ IAS, IPS ಅಧಿಕಾರಿಗಳು, ಮಿಲಿಟರಿ ಅಧಿಕಾರಿಗಳು, ಬುದ್ಧಿಜೀವಿಗಳು ಮತ್ತು ಬದ್ಧತೆಯಿರುವ ಹೋರಾಟಗಾರರು ಗಟ್ಟಿಯಾಗಿ ಹೇಳಬೇಕಿದೆ.
ಅಧಿಕಾರ ರಾಜಕಾರಣದ ಲೈಂಗಿಕ ಅಪರಾಧಿ ಇತಿಹಾಸದಲ್ಲಿ ದಾಖಲಾಗುವ ಈ ಪ್ರಕರಣದಲ್ಲಿ ನಾವೆಷ್ಟು ನೈತಿಕ ಜವಾಬ್ದಾರಿಯಿಂದ ವರ್ತಿಸಿದೆವು ಎಂಬುದನ್ನೂ ಇತಿಹಾಸ ಮರೆಯುವದಿಲ್ಲ.

-ಸಿ.ಎಸ್.ದ್ವಾರಕಾನಾಥ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...