ಪ್ರಜ್ವಲ್ ಲೈಂಗಿಕ ಹಗರಣ | ದೇವೇಗೌಡರಿಗೆ ಐಟಿಯಿಂದ ಮಕ್ಕಳ ರಕ್ಷಣೆಯೇ ಮುಖ್ಯ ಆಯ್ತಾ?

Date:

ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣ ಬೆಳಕಿಗೆ ಬಂದ ಬಳಿಕ, ಹಾಸನದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು ಕಟ್ಟಿಕೊಂಡಿರುವ ‘ರಿಪಬ್ಲಿಕ್’ ಕುರಿತು ಈದಿನ.ಕಾಮ್ ನಾನಾ ಸುದ್ದಿಗಳನ್ನು ಬಿತ್ತರಿಸುತ್ತಿದೆ. ದೇವೇಗೌಡ ಕುಟುಂಬದ ಸರ್ವಾಧಿಕಾರವನ್ನು ಹತ್ತಿರದಿಂದ ಬಲ್ಲ ಹಲವಾರು ನಾಯಕರನ್ನು ಮಾತನಾಡಿಸಿದೆ. ಹಾಸನದಲ್ಲಿ ಸಕ್ರಿಯವಾಗಿರುವ ದಲಿತ ಮುಖಂಡ ಎಚ್‌.ಕೆ ಸಂದೇಶ್ ಅವರನ್ನು ನಮ್ಮ ತಂಡ ಸಂದರ್ಶನ ಮಾಡಿದ್ದು, ಅವರು ವಿವರಿಸಿದ ದೇವೇಗೌಡ ಮತ್ತು ರೇವಣ್ಣ ಕುಟುಂಬದ ಹಲವಾರು ವಿಚಾರಗಳು ಇಲ್ಲಿವೆ.

ಪ್ರಜ್ವಲ್ ರೇವಣ್ಣ ಎಸಗಿರುವ ಲೈಂಗಿಕ ಕೃತ್ಯಗಳು ದೇಶದಲ್ಲೇ ಬೃಹತ್ ಲೈಂಗಿಕ ಹಗರಣ. ಇಂಥದೊಂದು ಅನೈತಿಕ, ಅಶ್ಲೀಲ ಕೃತ್ಯ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಲವಾರು ಹೆಣ್ಣು ಮಕ್ಕಳ ಮೇಲೆ ಪ್ರಜ್ವಲ್ ಬಲವಂತದಿಂದ ಅತ್ಯಾಚಾರ ಮಾಡಿದ್ದಾನೆ. ರೇವಣ್ಣಗೆ ಜಾಮೀನು ಸಿಕ್ಕ ಮೇಲೆ ಸಾಕ್ಷ್ಯ  ನಾಶ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಅವರ ಸಹೋದರ, ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ. ಕುಮಾರಸ್ವಾಮಿ ಅವರು ಪೆನ್‌ಡ್ರೈವ್ ಹಂಚಿದವರ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಕೃತ್ಯ ಎಸಗಿದವರು ಯಾರು? ಅವರ ಅಣ್ಣನ ಮಗ. ಅದರ ಬಗ್ಗೆ ಕುಮಾರಸ್ವಾಮಿ ಮಾತನಾಡುವುದಿಲ್ಲ.

ದೇವೇಗೌಡರು ಒಂದು ತಿಂಗಳಿನಿಂದ ಮೌನವಾಗಿದ್ದು, ಈಗ ಮಾತನಾಡಿದ್ದಾರೆ. ತನ್ನ ಕುಟುಂಬದ ಬಗ್ಗೆ ಇಡೀ ದೇಶವೇ ಮಾತನಾಡುತ್ತಿದ್ದರೂ, ತಮ್ಮ ಮೊಮ್ಮಗನ್ನು ಕರೆಸುವ ಕೆಲಸಕ್ಕೆ ದೇವೇಗೌಡರು ಮುಂದಾಗಲಿಲ್ಲ. ಆರೋಪಿ ಪ್ರಜ್ವಲ್‌ನನ್ನು ಕರೆಸದಿದ್ದರೆ, ಅವರ ಪಕ್ಷಕ್ಕೆ-ಕುಟುಂಬದ ರಾಜಕಾರಣಕ್ಕೆ ಉಳಿಗಾಲವಿಲ್ಲ.

ಒಬ್ಬ ಮಾಜಿ ಪ್ರಧಾನಿಯಾಗಿ, ತಮಗಿರುವ ಗೌರವ, ಪ್ರಭಾವವನ್ನು ಬಳಸಿಕೊಂಡು ದೇಶದ ಗೃಹ ಸಚಿವ ಅಮಿತ್ ಶಾ ಜೊತೆ ಮಾತನಾಡಿ, ಆತನನ್ನು ಕರೆಸಬಹುದಿತ್ತು. ಆದರೆ, ಅವರು ತಮ್ಮ ಮೊಮ್ಮಗನನ್ನು ರಕ್ಷಿಸಿಕೊಳ್ಳಲು ಕಾನೂನು ತಜ್ಞರನ್ನು ಕೂರಿಸಿಕೊಂಡು ಯಾರು ಎಕ್ಸ್‌ಪರ್ಟ್‌ ಇದ್ದಾರೆ, ಕೋರ್ಟ್‌ನಲ್ಲಿ ಯಾರ ಬೆಂಚ್‌ಗೆ ಪ್ರಕರಣ ಹೋಗಬೇಕು ಎಂಬುದರ ಬಗ್ಗೆ ಚರ್ಚಿಸುತ್ತಿದ್ದಾರೆ. ಇದು ನಿಜಕ್ಕೂ ಅಕ್ಷ್ಯಮ್ಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಂತ್ರಸ್ತ ಮಹಿಳೆಯರ ಪರಿಸ್ಥಿತಿ ಬಗ್ಗೆ ದೇವೇಗೌಡ ಕುಟುಂಬ ಯೋಚಿಸಿದೆಯೇ? ಕೆಲವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೆಲವು ವಿವಾಹಗಳು ಮುರಿದುಬಿದ್ದಿವೆ. ಸಂತ್ರಸ್ತೆಯರು ಹೊರಗೆ ಬಾರದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿಯಾಗಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಜವಾಬ್ದಾರಿ ಏನಿತ್ತು. ಸಂತ್ರಸ್ತೆಯರ ಬಗ್ಗೆ ಇವರು ಮಾತನಾಡಿದ್ದಾರೆಯೇ? ಚಿಂತಿಸಿದ್ದಾರೆಯೇ? ಜನರು ಎಲ್ಲವನ್ನು ನೋಡುತ್ತಿದ್ದಾರೆ. ದೇವೇಗೌಡ, ಕುಮಾರಸ್ವಾಮಿ, ರೇವಣ್ಣ, ಭವಾನಿ ರೇವಣ್ಣ – ಅವರಾರು ಮುಂದೆ ರಾಜಕೀಯ ಮಾಡೋಕೆ ಸಾಧ್ಯವಿಲ್ಲ.

ರೇವಣ್ಣ ಕುಟುಂಬ – ಎಚ್‌ಡಿಕೆ ಕುಟುಂಬ

ಪ್ರಜ್ವಲ್‌ ಲೈಂಗಿಕ ಹಗರಣ ಬಯಲಾದಾಗ ರೇವಣ್ಣ ಕುಟುಂಬವೇ ಬೇರೆ – ನಮ್ಮ ಕುಟುಂಬವೇ ಬೇರೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಆದ್ರೆ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್‌ ಹೋದಾಗ ದೇವೇಗೌಡ, ರೇವಣ್ಣ, ಕುಮಾರಸ್ವಾಮಿ, ಪ್ರಜ್ವಲ್ ಎಲ್ಲರೂ ಒಟ್ಟಿಗೆ ಹೋಗಿದ್ದರು. ಈಗ, ಈಗ ನಮ್ಮ ಕುಟುಂಬಗಳೇ ಬೇರೆ ಎನ್ನುತ್ತಿದ್ದಾರೆ. ಇದೆಲ್ಲ ನಾಟಕಗಳು. ಇಂತಹ ನಾಟಕವನ್ನು ಬದಿಗಿಟ್ಟು, ಪ್ರಜ್ವಲ್‌ನನ್ನು ಎಡೆಮುರಿ ಕಟ್ಟಿ ಎಳೆತರಬೇಕು. ಪ್ರಜ್ವಲ್ ‘ಸಮಾಜಘಾತುಕ’ ಆತನನ್ನು ಎಳೆತರಬೇಕು. ಕುಮಾರಸ್ವಾಮಿ ತಮ್ಮ ಅಣ್ಣನ ಮಗನ ಕೃತ್ಯಗಳನ್ನು ಖಂಡಿಸಬೇಕು. ಆತನ ಕೃತ್ಯದ ಬಗ್ಗೆ ಅಸಹ್ಯವಿಲ್ಲದೆ, ಬಾಯಿಗೆ ಬಂದಂತೆ ಮಾತನಾಡುವುದು ಸಲ್ಲ.

ಮಕ್ಕಳು-ಮೊಮ್ಮಕ್ಕಳ ಭವಿಷ್ಯಕ್ಕಾಗಿ ಕೋಮುವಾದಿ ಪಕ್ಷದೊಂದಿಗೆ ಮೈತ್ರಿ

ದೇವೇಗೌಡರು ಜಾತ್ಯತೀತವಾಗಿ ಕೆಲಸ ಮಾಡಿದವರು. ಆದರೆ ಈಗ, ಮುಸ್ಲಿಂ, ದಲಿತರು, ಒಕ್ಕಲಿಗರನ್ನು ಬದಿಗೊತ್ತಿ, ಅವರು ಕೋಮುವಾದಿ ಪಕ್ಷದೊಂದಿಗೆ ರಾಜಿ ಮಾಡಿಕೊಂಡಿದ್ದಾರೆ. ಅವರು ಕೇವಲ, ತಮ್ಮ ರಾಜಕಾರಣವನ್ನು ಉಳಿಸಿಕೊಳ್ಳೋಕ್ಕಾಗಿ, ತಮ್ಮ ಮಕ್ಕಳು, ಮರಿಮಕ್ಕಳ ಭವಷ್ಯಕ್ಕಾಗಿ, ತಮ್ಮ ಆಸ್ತಿಯನ್ನು ಉಳಿಸಿಕೊಳ್ಳೋಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಕೋಮುವಾದಿ ಪಕ್ಷದ ಜೊತೆ ಕೈಜೋಡಿಸಿರುವ ದೇವೇಗೌಡರ ಕುಟುಂಬವನ್ನು ಸೋಲಿಸಬೇಕು. ಅವರ ರಾಜಕಾರಣವನ್ನ ಬಗ್ಗು ಬಡಿಯಬೇಕು.

ಹಾಸನದಲ್ಲಿ ವಿಧಾನಸಭಾ ಚುನಾವಣೆಗಳು ನಡೆದಾಗ 200 ಮುಸ್ಲಿಂ ಮತಗಳಿದ್ದರೆ, 198 ಮತಗಳು, 500 ಮತಗಳಿದ್ದ 425 ಮತಗಳು ಜೆಡಿಎಸ್‌ಗೆ ಬರುತ್ತಿದ್ದವು. ಜೆಡಿಎಸ್‌ ಮೇಲೆ ಜಿಲ್ಲೆಯ ಮುಸಲ್ಮಾರು ನಂಬಿಕೆ ಇಟ್ಟಿದ್ದರು. ಅದರೆ, ಅವರೆಲ್ಲರ ನಂಬಿಕೆಗೆ ದೇವೇಗೌಡರು ದ್ರೋಹ ಬಗೆದಿದ್ದಾರೆ.

ಅವರು, ಐಟಿ, ಇಡಿ ದಾಳಿಗೆ ಹೆದರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಮೋದಿ ಸರ್ಕಾರ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸುರೆನ್, ಬಿಆರ್‌ಎಸ್‌ ನಾಯಕಿ ಕೆ ಕವಿತಾ ಅವರನ್ನ ಬಂಧಿಸಿತು. ಅವರೆಲ್ಲರೂ ಧೈರ್ಯವಾಗಿ ಹೋರಾಟ ಮಾಡ್ತಿದ್ದಾರೆ. ಆದ್ರೆ, ದೇವೇಗೌಡರು ತಮ್ಮ ಕುಟುಂಬದ ರಕ್ಷಣೆಗಾಗಿ ಬಿಜೆಪಿ ಜೊತೆ ಹೋಗಿದ್ದಾರೆ.

ಮುಗ್ಧ ಮನಸ್ಸಿನ ರೇವಣ್ಣನ ಅಸಲಿ ವ್ಯಾಘ್ರ ಮುಖ

ರೇವಣ್ಣಗೆ ಎರಡು ಮುಖಗಳಿವೆ. ಒಂದು ವ್ಯಾಘ್ರನ ಮುಖ, ಮತ್ತೊಂದು ಹಸುವಿನ ಮುಖ. ಅವರ ಸಂಬಂಧಿಗಳು, ಅವರ ಒಡನಾಡಿಗಳು, ಬೇರೆ ರಾಜ್ಯಗಳಿಂದ ಬಂದ ದೊಡ್ಡ ಅಧಿಕಾರಿಗಳು, ಮುಖ್ಯಮಂತ್ರಿಗಳು ಇದ್ದಾಗ ಹಸುವಿನ ಮುಖವಿರುತ್ತದೆ. ಹಾಸನ ಜಿಲ್ಲೆಯೊಳಗೆ ವ್ಯಾಘ್ರನ ಮುಖವಿರುತ್ತದೆ. ಗುತ್ತಿಗೆದಾರರು, ಸ್ಥಳೀಯ ಅಧಿಕಾರಿಗಳ ಮುಂದೆ ದರ್ಪ, ಏಕವಚನದಲ್ಲಿ ಮಾತನಾಡುತ್ತಾರೆ. ಒಂದೇ ಯೋಜನೆಯನ್ನು ಬೇಕಾದಂತೆ ವಿಭಜಿಸಿ, ತಮ್ಮ ಆಪ್ತರಿಗೆ ವಿತರಿಸುತ್ತಾರೆ. ಎಲ್ಲ ಅಧಿಕಾರಿಗಳು ದಿನನಿತ್ಯ ಅವರ ಮನೆಗೆ ಹೋಗಿ ನಮಸ್ಕಾರ ಮಾಡಬೇಕು. ಇಲ್ಲದಿದ್ದರೆ, ಆ ಅಧಿಕಾರಿಗೆ ಹೊಳೆನರಸೀಪುರದಲ್ಲಿ ಜಾಗವಿರುವುದಿಲ್ಲ.

ಬೆಳಗ್ಗೆಯ ಸಮಯದಲ್ಲಿ ದಲಿತರು ಕಂಡರೆ, ಮತ್ತೆ ಮನೆಗೆ ಹೋಗಿ ಸ್ನಾನ ಮಾಡಿಬರುತ್ತಾರೆ ಎಂಬ ಆರೋಪ ಜಿಲ್ಲೆಯಾದ್ಯಂತ ಇದೆ. ಬೆಳಗ್ಗೆಯ ವೇಳೆ ದಲಿತರ ಮುಖ ನೋಡುವುದು ಅಪಶಕುನವೆಂದು ಅವರು ಭಾವಿಸುತ್ತಾರೆ. ಇದು ರೇವಣ್ಣನ ಅಸಲಿ ಮುಖ.

ಹಾಸನ ಹಾಲು ಒಕ್ಕೂಟದಲ್ಲಿ ರೇವಣ್ಣ ಅವರೇ 7ನೇ ಬಾರಿ ಅಧ್ಯಕ್ಷರಾಗಿದ್ದಾರೆ. ಜಿಲ್ಲೆಯಲ್ಲಿ ಬೇರೆ ಯಾರೂ ನಾಯಕರಿಲ್ಲವೇ? ಅವರಿಗೆ ಯಾಕೆ ಅವಕಾಶ ಮಾಡಿಕೊಡುವುದಿಲ್ಲ. ಎಲ್ಲವೂ ತಮ್ಮ ಕುಟುಂಬದ ಅಧೀನದಲ್ಲೇ ಇರಬೇಕು ಎಂಬ ಸ್ವಾರ್ಥ ಅವರ ಕುಟುಂಬದಲ್ಲಿದೆ. ಹಾಸನದಲ್ಲಿ ದೇವೇಗೌಡ ಕುಟುಂಬದ ರಾಜಕಾರಣ ಮುಗಿಯಿತು. ಇನ್ನು, ಅವರಿಗೆ ನೆಲೆ ಇಲ್ಲ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...