ಖಾಸಗಿ ಸಂಪತ್ತಿನ ಬಗ್ಗೆ ರಾಹುಲ್ ಮಾತನಾಡಿಲ್ಲ; ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ: ಸಿಎಂ ರೇವಂತ್ ರೆಡ್ಡಿ

Date:

ತೆಲಂಗಾಣದಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿ, ಅಧಿಕಾರ ಹಿಡಿದ ಕೆಲ ತಿಂಗಳುಗಳಲ್ಲೇ ಲೋಕಸಭಾ ಚುನಾವಣೆ ನಡೆಯುತ್ತಿದೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಪ್ರಚಾರವನ್ನು ಮುಖ್ಯಮಂತ್ರಿ ರೇವಂತ್ ರೆಡ್ಡಿ ಮುನ್ನಡೆಸುತ್ತಿದ್ದಾರೆ. ದಕ್ಷಿಣ ರಾಜ್ಯಗಳಲ್ಲಿ ತನ್ನ ಪ್ರಾಬಲ್ಯವನ್ನು ಮರಳಿ ಗಟ್ಟಿ ಮಾಡಿಕೊಳ್ಳಲು ಕಾಂಗ್ರೆಸ್‌ ಮುಂದಾಗಿದ್ದು, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಸ್ಥಳೀಯ ನಾಯಕರ ನೇತೃತ್ವದಲ್ಲಿ ಚುನವಣೆಯನ್ನು ಎದುರಿಸುತ್ತಿದೆ. ಆಂಧ್ರ, ಕೇರಳ, ತಮಿಳುನಾಡಿನಲ್ಲಿ ಮೈತ್ರಿ ಪಕ್ಷಗಳೊಂದು ಮುನ್ನಡೆಯುತ್ತಿದೆ.

ತೆಲಂಗಾಣದಲ್ಲಿ ಕಾಂಗ್ರೆಸ್‌ಅನ್ನು ಮುನ್ನಡೆಸುತ್ತಿರುವ ರೇವಂತ್ ರೆಡ್ಡಿ ಅವರನ್ನು ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌‘ ಸಂದರ್ಶನ ಮಾಡಿದೆ. ಅವರು ಜಾತಿ ಗಣತಿ, ಉತ್ತರ-ದಕ್ಷಿಣ ವಿಭಜನೆ, ಸಂಪತ್ತು ಮರುಹಂಚಿಕೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಪ್ರಶ್ನೆ: ನೀವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದೀರಿ. ಆ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ನೀವು ಹೇಗೆ ಯೋಜಿಸುತ್ತಿದ್ದೀರಿ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಉ: ದ್ವಿಮುಖ ತಂತ್ರವಿದೆ. ಒಂದು ನಮ್ಮ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು. ತೆಲಂಗಾಣ ಜನತೆಗೆ ಏನು ಭರವಸೆ ನೀಡಿದ್ದೇವೋ ಅದನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಆರು ಪ್ರಮುಖ ಗ್ಯಾರಂಟಿಗಳಲ್ಲಿ, ನಾವು ಐದು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ರಾಜ್ಯ ಚುನಾವಣೆಯಲ್ಲಿ ನಾವು ಕೆಸಿಆರ್ ಮತ್ತು ಅವರ ರಾಜಕೀಯವನ್ನು ಸೋಲಿಸಿದ್ದೇವೆ.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 10 ವರ್ಷಗಳ ಕಾಲ ಅಡಳಿತ ನಡೆಸಿದ್ದಾರೆ. ಆದರೆ, ಅವರು ಭರವಸೆಗಳನ್ನು ಈಡೇರಿಸಿಲ್ಲ. ಆಂಧ್ರಪ್ರದೇಶ ಮರುಸಂಘಟನೆ ಕಾಯ್ದೆ-2014ರ ಅಡಿಯಲ್ಲಿ ತೆಲಂಗಾಣದ ಅಭಿವೃದ್ಧಿಗಾಗಿ ಕೆಲವು ಭರವಸೆಗಳನ್ನು ಕೇಂದ್ರ ಸರ್ಕಾರ ನೀಡಿತ್ತು. ಆದರೆ, ಯಾವುದನ್ನೂ ಜಾರಿಗೆ ತಂದಿಲ್ಲ. ಕೇಂದ್ರ ಸರ್ಕಾರದ ನಿರ್ಣಯಗಳನ್ನು ಮೋದಿ ಎಂದಿಗೂ ಗೌರವಿಸಿಲ್ಲ. ಮೋದಿ ಅವರು ತೆಲಂಗಾಣ ವಿರೋಧಿಯಾಗಿದ್ದಾರೆ. ತೆಲಂಗಾಣ ರಚನೆ ಕಾರಣಕ್ಕೆ ಅವರು ಕಾಂಗ್ರೆಸ್ ಅನ್ನು ನಿಂದಿಸಿದ್ದಾರೆ. ತೆಲಂಗಾಣ ರಚನೆ ಮಸೂದೆಯನ್ನು ಅಂಗೀಕರಿಸಿದ್ದು ಕಾಂಗ್ರೆಸ್. ತೆಲಂಗಾಣ ರಚನೆಯನ್ನು ವಿರೋಧಿಸಿದ ಮೋದಿ, ಈಗ ಇಲ್ಲಿಗೆ ಬಂದು ಹೇಗೆ ಮತ ಹೇಳುತ್ತಾರೆ?

ಪ್ರಶ್ನೆ: ಈ ಚುನಾವಣೆಯಲ್ಲಿ ನೀವು ಯಾವುದರ ಗಮನಹರಿಸುತ್ತೀರಿ? ನೀವು ಬಿಜೆಪಿಯನ್ನು ಹಿಮ್ಮೆಟ್ಟಲು ಬಯಸುವಿರಾ ಅಥವಾ ನಿಮ್ಮ ಸ್ಥಾನವನ್ನು ಗಟ್ಟಿಗೊಳಿಸಲು ಬಯಸುವಿರಾ?

ಉ: ರಾಜ್ಯ ಚುನಾವಣೆಯಲ್ಲಿ ಕೆಸಿಆರ್ ವಿರುದ್ಧ ಕಾಂಗ್ರೆಸ್ ಹೋರಾಡಿದೆ. ರಾಷ್ಟ್ರೀಯ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ ಮತ್ತು ನರೇಂದ್ರ ಮೋದಿ ವಿರುದ್ಧ ಹೋರಾಟವಿದೆ. ಹಾಗಾಗಿ, ಮೋದಿ ಮತ್ತು ಬಿಜೆಪಿ ವಿರುದ್ಧ ನಾನು ಹೋರಾಡಬೇಕಾಗಿದೆ ಎಂಬುದು ಸ್ಪಷ್ಟವಾಗಿದೆ.

ಪ್ರಶ್ನೆ: ಉತ್ತರ-ದಕ್ಷಿಣ ವಿಭಜನೆಯ ಬಗ್ಗೆ ಮಾತುಗಳಿವೆ. ಎರಡೂ ಭಾಗಗಳಲ್ಲಿನ ಭಾಷಾ ವ್ಯತ್ಯಾಸಗಳನ್ನು ಹೊರತುಪಡಿಸಿ ಬೇರೆ ಸಮಸ್ಯೆಗಳಿವೆ ಎಂದು ನೀವು ಭಾವಿಸುತ್ತೀರಾ?

ಉ: ಖಂಡಿತವಾಗಿಯೂ ಹೌದು. ಸಂಸತ್ತಿನ ಚುನಾಯಿತ ಸದಸ್ಯನಾಗಿ ನಾನು ನರೇಂದ್ರ ಮೋದಿಯನ್ನು ಗಮನಿಸಿದ್ದೇನೆ. ಲೋಕಸಭೆಯಲ್ಲಿ ಗುಜರಾತ್ 26 ಪ್ರತಿನಿಧಿಗಳನ್ನು ಹೊಂದಿದೆ. ಆದರೆ, ಅವರು ತಮ್ಮ ಕ್ಯಾಬಿನೆಟ್‌ನಲ್ಲಿ 7 ಮಂದಿಗೆ ಮಂತ್ರಿ ಸ್ಥಾನ ನೀಡಿದ್ದಾರೆ. ಒಟ್ಟಾರೆಯಾಗಿ, ಆಂಧ್ರಪ್ರದೇಶ ಮತ್ತು ತೆಲಂಗಾಣ ಲೋಕಸಭೆಯಲ್ಲಿ 42 ಪ್ರತಿನಿಧಿಗಳನ್ನು ಹೊಂದಿದೆ. ಆದರೆ, ಈ ಎರಡೂ ರಾಜ್ಯಗಳು ಕೇಂದ್ರ ಸರ್ಕಾರದಲ್ಲಿ ಕೇವಲ ಒಬ್ಬ ಸಚಿವರನ್ನು ಮಾತ್ರ ಹೊಂದಿದೆ. ಭಾರತದಲ್ಲಿ ಹಿಂದಿಯ ನಂತರ ತೆಲುಗು ಎರಡನೇ ಅತಿದೊಡ್ಡ ಮಾತನಾಡುವ ಭಾಷೆಯಾಗಿದೆ. ಆದರೆ, ತೆಲುಗು ಕೇವಲ ಒಂದು ಪ್ರಾತಿನಿಧ್ಯವನ್ನು ಪಡೆದುಕೊಂಡಿದೆ ಅಷ್ಟೇ. ಅವರು ಉತ್ತರ ಪ್ರದೇಶಕ್ಕೆ 12 (ಸಚಿವರು) ನೀಡಿದ್ದಾರೆ, ರಾಜಸ್ಥಾನ ಮತ್ತು ಬಿಹಾರಕ್ಕೆ ಉತ್ತಮ ಪ್ರಾತಿನಿಧ್ಯವನ್ನು ನೀಡಿದ್ದಾರೆ – ಎಲ್ಲವೂ ಹಿಂದಿ ಮಾತನಾಡುವ ರಾಜ್ಯಗಳು.

ಬಜೆಟ್ ಹಂಚಿಕೆಯನ್ನೂ ನೋಡಿ. ಕೇಂದ್ರದ ಹಂಚಿಕೆಯ ಒಂದು ರೂಪಾಯಿಯಲ್ಲಿ, ನಾವು ಕೇವಲ 43 ಪೈಸೆಗಳನ್ನು ಪಡೆಯುತ್ತಿದ್ದರೆ, ಬಿಹಾರಕ್ಕೆ 7.05 ರೂ., ಉತ್ತರ ಪ್ರದೇಶಕ್ಕೆ 6 ರೂ. ನೀಡಲಾಗುತ್ತಿದೆ. ಇದೇನು ತಾರತಮ್ಯ ಅಲ್ಲವೇ? ಸಂಪನ್ಮೂಲ ವಿತರಣೆಯು ನ್ಯಾಯಯುತ ನಿಯಮಗಳ ಮೇಲಿಲ್ಲ ಎಂಬುದು ಸಷ್ಟ.

ಪ್ರಶ್ನೆ: ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲು ಹಿಂದುಳಿದ ವರ್ಗಗಳ ಕೋಟಾವನ್ನು ಕೈಬಿಡಲು ಕಾಂಗ್ರೆಸ್ ಬಯಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಜಾತಿ ಗಣತಿಯನ್ನು ಜನರಿಗೆ ವಿವರಿಸುವುದು ನಿಮಗೆ ಕಷ್ಟವೇ?

ಉ: ಸುಳ್ಳು ಮತ್ತು ಅಸತ್ಯವನ್ನು ಹೇಳುವುದರಲ್ಲಿ ಮೋದಿ ಡಾಕ್ಟರೇಟ್ ಪಡೆದಿದ್ದಾರೆ. ಜಾತಿ ಗಣತಿ ನಂತರ ನಾವು ಆಸ್ತಿ ಮೌಲ್ಯಮಾಪನಕ್ಕೆ ಹೋಗುತ್ತಿಲ್ಲ. ಇದು ಜನಸಂಖ್ಯೆಯ ಎಣಿಕೆ, ಸಂಪತ್ತು ಹಂಚಿಕೆ ಅಲ್ಲ. ನಮ್ಮ ಪಕ್ಷವು ಎಲ್ಲ ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದೆ – ಅದು ನಮ್ಮ ದಾಖಲೆಯಾಗಿದೆ. ನಮ್ಮ ಸರ್ಕಾರಗಳು ಎಸ್‌ಸಿ/ಎಸ್‌ಟಿ ಮೀಸಲಾತಿ ಮತ್ತು ಒಬಿಸಿಗಳಿಗೆ ಮೀಸಲಾತಿ ಕೋಟಾ ನೀಡಿವೆ. ಮಂಡಲ್ ಆಯೋಗದ ವರದಿಯು ಮೀಸಲಾತಿಯನ್ನು 52%ಗೆ ಸೀಮಿತಗೊಳಿಸಿ ಶಿಫಾರಸು ಮಾಡಿದ ನಂತರ ಮತ್ತು ಸಂಖ್ಯೆಗಳಿಲ್ಲದೆ ಮೀಸಲಾತಿಯನ್ನು ಹೇಗೆ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದ ನಂತರ, 50% ಮಿತಿಯೊಂದಿಗೆ ಮೀಸಲಾತಿಯನ್ನು ಹೊಂದಿಸಲಾಗಿದೆ. 50% ಮಿತಿಯನ್ನು ವಿಸ್ತರಿಸಬೇಕೆಂದರೆ, ಒಬಿಸಿ ಸಮುದಾಯಗಳು ಎಷ್ಟಿವೆ – ಎಷ್ಟು ಜನರಿದ್ದಾರೆ ಎಂಬುದನ್ನು ತಿಳಿಯಬೇಕು. ಅದಕ್ಕಾಗಿ, ನಾವು ಜನಗಣತಿಯನ್ನು ಮಾಡಲು ಬಯಸುತ್ತೇವೆ. ಜನಸಂಖ್ಯೆಯ ಆಧಾರದ ಮೇಲೆ ನಾವು ಮೀಸಲಾತಿ ನೀಡಲು ಬಯಸುತ್ತೇವೆ. ಜನಸಂಖ್ಯೆಗೆ ಆಧಾರವಾಗಿ ಸಮುದಾಯಗಳಿಗೆ ಹೆಚ್ಚಿನ ಹಣವನ್ನು ಮೀಸಲಿಡಲು ನಾವು ಬಯಸುತ್ತೇವೆ. – ಇದನ್ನೇ ನಾವು ಹೇಳಿದ್ದೆವು. ಆದರೆ, ಮೋದಿ ಅವರು ಮಂಗಳಸೂತ್ರ ಮತ್ತು ಎರಡನೇ ಮನೆಯನ್ನು ಕಿತ್ತುಕೊಳ್ಳುತ್ತೇವೆಂದು ಜನರನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ. ಜನರ ಮನೆಗಳನ್ನು ಕಸಿದುಕೊಳ್ಳಲು ಸಾಧ್ಯವೇ? 13 ವರ್ಷ ಮುಖ್ಯಮಂತ್ರಿ, 10 ವರ್ಷ ಪ್ರಧಾನಿಯಾಗಿದ್ದ ಮೋದಿ ಅವರಿಗೆ ಇಷ್ಟೂ ಅರ್ಥವಾಗಿಲ್ಲವೇ. ಅವರು ಸುಮ್ಮನೆ ಮಾತನಾಡುತ್ತಿದ್ದಾರೆ.

ಮೋದಿ ಅವರು ಜನರ ಹಣವನ್ನು ಕಾರ್ಪೊರೇಟ್‌ಗಳಿಗೆ ಕೊಡಲು ಬಯಸುತ್ತಿದ್ದಾರೆ. ಅವರು ಕ್ರೋನಿ ಬಂಡವಾಳಶಾಹಿಯನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ. ಬಿಜೆಪಿ ಕಾರ್ಪೊರೇಟ್ ರಾಜಕೀಯ ಪಕ್ಷವಾಗಿದ್ದು, ಕಾರ್ಪೊರೇಟ್‌ಗಳನ್ನು ರಕ್ಷಿಸುವುದು ಅವರ ಆಸಕ್ತಿಯಾಗಿದೆ.

ಪ್ರಶ್ನೆ: ಸಂಪತ್ತು ಮರುವಿಂಗಡಣೆ ಕುರಿತು ರಾಹುಲ್ ಗಾಂಧಿಯವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದೀರಿ. ನೀವು ಇದನ್ನು ಹೇಗೆ ವಿವರಿಸುತ್ತೀರಿ?

ಉ: ರಾಹುಲ್ ಗಾಂಧಿ ಹೇಳಿದ್ದಕ್ಕೂ ಖಾಸಗಿ ಸಂಪತ್ತು ಅಥವಾ ಆಸ್ತಿಗಳಿಗೂ ಯಾವುದೇ ಸಂಬಂಧವಿಲ್ಲ. ಅದರಲ್ಲಿ ಯಾವುದೇ ಗೊಂದಲವೂ ಇಲ್ಲ. ಆದರೆ, ಬಿಜೆಪಿಯವರು ನಮ್ಮ ಪಕ್ಷದ ಬಗ್ಗೆ ಮತದಾರರಲ್ಲಿ ಗೊಂದಲ ಮೂಡಿಸಲು ಯತ್ನಿಸುತ್ತಿದ್ದಾರೆ. ರಾಜ್ಯದ ಖಜಾನೆ, ಭಾರತ ಸರ್ಕಾರದ ಖಜಾನೆಗಳು ಖಾಸಗಿ ಸಂಪತ್ತಿಗಿಂತ ಭಿನ್ನವಾಗಿದೆ. ರಾಹುಲ್ ಗಾಂಧಿ ಸರ್ಕಾರದ ಸಂಪತ್ತಿನ ಬಗ್ಗೆ ಮಾತನಾಡುತ್ತಿದ್ದಾರೆ. ಸರ್ಕಾರದ ಸಂಪತ್ತನ್ನು ಹೆಚ್ಚು ಅಗತ್ಯವಿರುವವರು ಮತ್ತು ಅರ್ಹರಿಗೆ ವಿತರಿಸಲು ರಾಹುಲ್‌ ಬಯಸುತ್ತಾರೆ.  ಅದರೆ, ಈಗ ಬಿಜೆಪಿ ಆ ಸಂಪತ್ತನ್ನು ಕಾರ್ಪೊರೇಟ್‌ಗಳಿಗೆ ಮಾತ್ರ ಹಂಚುತ್ತಿದೆ. ಅದೇ ರಾಹುಲ್ ಗಾಂಧಿಗೂ ಬಿಜೆಪಿಗೂ ಇರುವ ವ್ಯತ್ಯಾಸ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸರ್ಕಾರಿ ಸಂಪತ್ತನ್ನು ಅದಾನಿ, ಅಂಬಾನಿ ಅಥವಾ ಮೋದಿಯವರ ಇತರ ಕಾರ್ಪೊರೇಟ್ ಸ್ನೇಹಿತರಿಗೆ ನೀಡುವುದಿಲ್ಲ ಎಂದು ಬಿಜೆಪಿ ಹೆದರುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅಡಿಯಲ್ಲಿ 16 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪಿಎಸ್‌ಯುಗಳು ಮತ್ತು ನವರತ್ನಗಳು ಕೇವಲ 6 ಲಕ್ಷ ಕೋಟಿ ರೂಪಾಯಿಗಳಿಗೆ ಕಾರ್ಪೊರೇಟ್‌ಗಳ ಪಾಲಾಗಿದೆ. ಮೋದಿ ಸರ್ಕಾರ ಕಾರ್ಪೊರೇಟ್‌ಗಳಿಗೆ ಅತಿ ಕಡಿಮೆ ಬೆಲೆ ಸರ್ಕಾರಿ ಸಂಪತ್ತನ್ನು ಮಾರಾಟ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದು ನಡೆಯುವುದಿಲ್ಲ. ‘ಅದಯಂ ಪೆಂಚು, ಪೆಡಲುಕು ಪಂಚು’ (ಸರ್ಕಾರದ ಆದಾಯವನ್ನು ಹೆಚ್ಚಿಸಿ ಮತ್ತು ಅರ್ಹ ಬಡವರಿಗೆ ಹಂಚುವುದು) – ಇದು ಕಾಂಗ್ರಸ್‌ನ ಉದ್ದೇಶವಾಗಿದೆ.

ಪ್ರಶ್ನೆ: ಹಿಂದುಳಿದವರಿಗೆ ಬಿಜೆಪಿ ಹಣ ನೀಡುವುದಿಲ್ಲ ಎಂದು ಏಕೆ ಆರೋಪ ಮಾಡುತ್ತೀರಿ?

ಉ: ಆರ್‌ಎಸ್‌ಎಸ್‌ನ ಅಂಗಸಂಸ್ಥೆಗಳಲ್ಲಿ ಬಿಜೆಪಿಯೂ ಒಂದು. ಮೀಸಲಾತಿ ವಿಚಾರದಲ್ಲಿ ಆರ್‌ಎಸ್‌ಎಸ್‌ ನಿಲುವು ಏನೆಂಬುದು ಎಲ್ಲರಿಗೂ ಗೊತ್ತು. ಬಿಜೆಪಿಯ ಮೂಲ ಸಿದ್ಧಾಂತ ಆರೆಸ್ಸೆಸ್ ಮಾತ್ರ. ಅವರಿಗೆ ಮೀಸಲಾತಿ ಬೇಕಾಗಿಲ್ಲ. ಯಾಕೆಂದರೆ, ಅವರು ಮನುಸ್ಮೃತಿ ಆಧಾರದಲ್ಲಿ ವರ್ಗಗಳನ್ನು ಜಾರಿಗೆ ಗೊಳಿಸಲು ಬಯಸುತ್ತಾರೆ.

ಪ್ರಶ್ನೆ: ತೆಲಂಗಾಣದಲ್ಲಿ ಬಿಆರ್‌ಎಸ್ ತನ್ನ ನೆಲೆ ಕಳೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಆ ಜಾಗವನ್ನು ಬಿಜೆಪಿ ಅತಿಕ್ರಮಿಸಲು ಯತ್ನಸುತ್ತಿದೆ. ಇದನ್ನು ನೀವು ಹೇಗೆ ಎದುರಿಸುತ್ತಿದ್ದೀರಿ?

ಉ: ಇದು ರಾಷ್ಟ್ರೀಯ ಚುನಾವಣೆಯಾಗಿದ್ದು, ಬಿಆರ್‌ಎಸ್‌ಗೆ ಇದರಲ್ಲಿ ಹೆಚ್ಚಿನ ಪಾಲು ಇಲ್ಲ. ಇದೀಗ ಜೈಲಿನಲ್ಲಿರುವ ಕೆಸಿಆರ್ ಪುತ್ರಿ ಕೆ ಕವಿತಾ ಅವರ ಬಿಡುಗಡೆಗಾಗಿ ಐದು ಸ್ಥಾನಗಳಲ್ಲಿ ಬಿಜೆಪಿ ಜತೆ ಬಿಆರ್‌ಎಸ್ ಚೌಕಾಸಿ ನಡೆಸಿದೆ. ಬಿಜೆಪಿಗೆ ಸಹಾಯ ಮಾಡಲು ಬಿಆರ್‌ಎಸ್ ಐದು ಸ್ಥಾನಗಳಲ್ಲಿ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆ ಕ್ಷೇತ್ರಗಳಲ್ಲೂ ಕೆಸಿಆರ್ ಪ್ರಚಾರ ನಡೆಸುತ್ತಿಲ್ಲ. ಕವಿತಾಗೆ ಜಾಮೀನು ಪಡೆಯಲು 17 ಸಂಸದೀಯ ಸ್ಥಾನಗಳ ಪೈಕಿ ಕೆಸಿಆರ್ ಐದು ಸ್ಥಾನಗಳಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಇದನ್ನು ಜನರಿಗೆ ವಿವರಿಸಬೇಕು. ತಾರತಮ್ಯ, ಉತ್ತರ-ದಕ್ಷಿಣ ವಿಭಜನೆ ಹಾಗೂ ಬಿಜೆಪಿ/ಮೋದಿಯ ತೆಲುಗು ವಿರೋಧಿ ನಿಲುವಿನ ಬಗ್ಗೆ ಜನರೊಂದಿಗೆ ನಾನು ಮಾತನಾಡುತ್ತೇನೆ. ನಾವು ಬಿಜೆಪಿ-ಬಿಆರ್‌ಎಸ್ ಮೈತ್ರಿ ಬಗ್ಗೆ ಮಾತನಾಡುತ್ತೇವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...