ರಾಹುಲ್ ಗಾಂಧಿ ಅನರ್ಹತೆ | ನರೇಂದ್ರ ಮೋದಿ ಒಬ್ಬ ಹೇಡಿ: ಪ್ರಿಯಾಂಕ ವಾದ್ರಾ ಕಿಡಿ

Date:

  • ನಾವು ಪರಿವಾರವಾದಿಗಳಾದರೆ, ರಾಮ ಯಾರು?
  • ನನ್ನ ಅಣ್ಣನ ಪದವಿಗಳನ್ನೂ ಬಿಜೆಪಿ ನೋಡಿಲ್ಲ

ನಮ್ಮ ದೇಶದ ಪ್ರಧಾನಿ ಮಂತ್ರಿ, ನರೇಂದ್ರ ಮೋದಿ ಒಬ್ಬ ಹೇಡಿ. ಹೌದು, ಹೀಗೆ ಹೇಳಿದ್ದಕ್ಕಾಗಿ ಕೇಸ್ ಹಾಕಿಸಿ, ನನ್ನನ್ನೂ ಜೈಲಿನಲ್ಲಿರಿಸಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸವಾಲು ಹಾಕಿದ್ದಾರೆ.

“ನೆನಪಿಡಿ, ನಮ್ಮ ದೇಶದ ಬಹಳ ಹಿಂದಿನ ಪರಂಪರೆ, ಹಿಂದೂ ಧರ್ಮದ ಹಳೇ ಪರಂಪರೆಯೆಂದರೆ, ಅಹಂಕಾರಿ ರಾಜರಿಗೆ ಜನರೇ ಉತ್ತರ ಕೊಡುತ್ತಾರೆ. ಅಂತಹವರನ್ನು ಸೋಲಿಸುವ ಸಂಪ್ರದಾಯವಿದೆ” ಎಂದು ಅವರು ಕಿಡಿ ಕಾರಿದ್ದಾರೆ.

ರಾಹುಲ್ ಗಾಂಧಿ ಅವರ ಸಂಸದ ಸ್ಥಾನದ ಅನರ್ಹತೆ ವಿರೋಧಿಸಿ ಕಾಂಗ್ರೆಸ್, ದೆಹಲಿಯ ರಾಜ್‌ಘಾಟ್‌ನಲ್ಲಿ ಬೃಹತ್ ಸಂಕಲ್ಪ ಸತ್ಯಾಗ್ರಹ ಆಯೋಜಿಸಿದೆ. ಕಾಂಗ್ರೆಸ್‌ನ ಅಹೋರಾತ್ರಿ ಸತ್ಯಾಗ್ರಹದಲ್ಲಿ ಮಾತನಾಡಿರುವ ಪ್ರಿಯಾಂಕಾ, ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ನನ್ನ ಹುತಾತ್ಮ ತಂದೆಯನ್ನು ನೀವು ಲೋಕಸಭೆಯಲ್ಲಿ ಅವಮಾನ ಮಾಡಿದ್ದಿರಿ. ಅವರ ಪುತ್ರನನ್ನು ಮೀರ್ ಜಾಫರ್ ಎಂದು ಕರೆದಿರಿ. ನಿಮ್ಮ ಪಕ್ಷದ ಮುಖ್ಯಮಂತ್ರಿಯೊಬ್ಬ, ‘ರಾಹುಲ್ ಗಾಂಧಿಗೆ ಇವತ್ತಿಗೂ ತನ್ನ ತಂದೆ ಯಾರೆಂದು ಗೊತ್ತಿಲ್ಲ’ ಎನ್ನುವ ಮೂಲಕ ನನ್ನ ತಾಯಿಗೆ ಅವಮಾನಿಸಿದರು” ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

“ಗಾಂಧಿ ಪರಿವಾರ ನೆಹರು ಅವರ ಉಪನಾಮವನ್ನೇಕೆ ಬಳಸಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ನನ್ನ ಇಡೀ ಕುಟುಂಬವನ್ನು ಅವಮಾನಿಸಿದರು. ಆದರೆ, ಈವರೆಗೂ ಅವರ ಮೇಲೆ ಯಾವ ಕೇಸು ದಾಖಲಾಗಲಿಲ್ಲ. ಸಂಸತ್ತಿನಿಂದ ಅವರನ್ನು ಹೊರಗಟ್ಟಲಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

“ಇಷ್ಟೆಲ್ಲಾ ಯಾಕೆ ನಡೆಯುತ್ತಿದೆ ಗೊತ್ತೇ? ಇಷ್ಟು ದಿನಗಳ ಕಾಲ ನಾವು ಮೌನವಾಗಿದ್ದೆವು. ನೀವು ಅಷ್ಟೆಲ್ಲಾ ಅಪಪ್ರಚಾರ, ಅವಮಾನ ಮಾಡಿದರೂ ನನ್ನ ಅಣ್ಣ ನಿಮಗೆ ಏನು ಹೇಳಲಿಲ್ಲ. ಬರೀ ಅಪ್ಪಿಕೊಂಡರು. ಸೈದ್ದಾಂತಿಕ ವ್ಯಾತ್ಯಾಸಗಳ ನಡುವೆಯೂ ರಾಹುಲ್ ದ್ವೇಷ ಹರಡಲಿಲ್ಲ” ಎಂದು ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ನಾವು ಪರಿವಾರವಾದಿಗಳು ಎನ್ನುತ್ತೀರಿ. ಹಾಗಾದರೆ ರಾಮ ಯಾರು? ಭಗವಾನ್ ರಾಮನನ್ನು ವನವಾಸಕ್ಕೆ ಕಳುಹಿಸಿದರು. ಅವರು ತಮ್ಮ ಕುಟುಂಬದ ಧರ್ಮವನ್ನು ಪಾಲಿಸಿದರು. ಅದಕ್ಕೆ ಅವರನ್ನು ಕುಟುಂಬವಾದಿ ಎಂದು ಹೇಳುತ್ತಾರೆಯೆ? ಪಾಂಡವರು ಕುಟುಂಬವಾದಿಗಳೆ? ದೇಶಕ್ಕಾಗಿ ಹೋರಾಡಿದ ಈ ಕುಟುಂಬಗಳನ್ನು ಕುಟುಂಬವಾದಿಗಳು ಎಂದು ಕರೆಯಬೇಕೆ? ನನ್ನ ಕುಟುಂಬದವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ ಎನ್ನುವ ವಿಷಯಕ್ಕೆ ನಾವು ನಾಚಿಕೆಪಡಬೇಕೇನು? ಈ ಧ್ವಜದಲ್ಲಿ ಅವರ ರಕ್ತವಿದೆ. ಈ ಮಣ್ಣಿನಲ್ಲಿ ಅವರ ರಕ್ತವಿದೆ. ಈ ದೇಶದ ಪ್ರಜಾಪ್ರಭುತ್ವಕ್ಕೆ ನನ್ನ ಕುಟುಂಬದವರು ರಕ್ತ ನೀಡಿದ್ದಾರೆ. ಆದರೆ, ನಮ್ಮನ್ನು ಬೆದರಿಸಿ, ಅವಹೇಳನ ಮಾಡಿ ಭಯಪಡಿಸಬಹುದು ಎಂದು ತಿಳಿದರೆ, ಅದು ನಿಮ್ಮ ಭ್ರಮೆಯಷ್ಟೆ” ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

“ನನ್ನ ಅಣ್ಣ ಜಗತ್ತಿನ ಎರಡು ಪ್ರತಿಷ್ಠಿತ ಮತ್ತು ವಿಶ್ವವಿಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ್ದಾನೆ. ನೀವು ಅವನ ಪದವಿಗಳನ್ನ ಸಹ ನೋಡಿಲ್ಲ. ಆದರೆ, ಮಾಧ್ಯಮಗಳ ಮೂಲಕ ಅವನನ್ನು ಪಪ್ಪು ಎಂದು ಬಿಂಬಿಸಿದಿರಿ. ನಿಮಗೆ ಆಮೇಲೆ ಗೊತ್ತಾಗಿದೆ ಅವನು ಪಪ್ಪು ಅಲ್ಲ, ಅವನ ಪರವಾಗಿ ಲಕ್ಷಾಂತರ ಮಂದಿ ನಿಂತಿದ್ದಾರೆ. ಅವನೊಂದಿಗೆ ನಡೆಯುತ್ತಾರೆ ಎಂಬುದು” ಎಂದು ಬಿಜೆಪಿಯನ್ನು ಕುಟುಕಿದ್ದಾರೆ.

“ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ ವ್ಯಕ್ತಿ ಕಳೆದ ವರ್ಷ ಕೇಸ್‌ಗೆ ತಡೆ ಹಿಡಿದಿದ್ದ ಎಂಬುದು ನಿಮಗೆ ಗೊತ್ತಿದೆಯೇ? ರಾಹುಲ್, ಅದಾನಿ ಪ್ರಕರಣದ ಬಗ್ಗೆ ಮಾತನಾಡಿದ ಬಳಿಕ ಹಳೆಯ ಪ್ರಕರಣ ಮತ್ತೆ ತೆರೆಯಲಾಯಿತು” ಎಂದು ಕಿಡಿಕಾರಿದ್ದಾರೆ.

“ಈ ದೇಶ ಪ್ರೀತಿಯಿಂದ ಮಾತನಾಡುತ್ತದೆ ಎನ್ನುವುದನ್ನು ನನ್ನ ಕುಟುಂಬ ನನಗೆ ಕಲಿಸಿದೆ. ಆದರೆ, ಇಂದಿನಿಂದ ಎಲ್ಲವೂ ಬದಲಾಗಲಿದೆ ಎಂದು ನನಗೆ ತಿಳಿದಿದೆ” ಎಂದಿದ್ದಾರೆ.

“ಈ ದೇಶದ ಮಾಧ್ಯಮಗಳ ಮೇಲೆ ಎಷ್ಟು ಒತ್ತಡವಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಪ್ರಜಾಪ್ರಭುತ್ವ ಅಪಾಯದಲ್ಲಿದ್ದಾಗಲಾದರೂ ಎದ್ದೇಳಿ. ಪ್ರತಿಪಕ್ಷದ ನಾಯಕನನ್ನು ಎಂಟು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಸರ್ಕಾರ ನಿರ್ಬಂಧಿಸಿದರೆ ಅದು ಅಪಾಯಕಾರಿ ನಡೆ” ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...