ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜುಲೈ 8ರಂದು ಹಿಂಸಾಚಾರ ಪೀಡಿತ ಮಣಿಪುರದ ಜಿರಿಬಾಮ್ನಲ್ಲಿನ ಜುಲೈ 8ರಂದು ಮಣಿಪುರದ ಜಿರಿಬಾಮ್ನಲ್ಲಿನ ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ನೀಡಿದ್ದು ಮೈತಿ ಸಮುದಾಯದ ಜನರನ್ನು ಭೇಟಿಯಾದರು.
ಮಣಿಪುರಕ್ಕೆ ತೆರಳುವ ಮೊದಲು, ರಾಹುಲ್ ಗಾಂಧಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದ ಅಸ್ಸಾಂಗೆ ಸ್ಥಳಾಂತರಗೊಂಡ ಕುಕಿ ಸಮುದಾಯ ಸದಸ್ಯರು ಮತ್ತು ಅಸ್ಸಾಂ ಪ್ರವಾಹ ಪೀಡಿತರನ್ನು ಭೇಟಿಯಾಗಿ ಸಂವಾದ ನಡೆಸಿದರು.
ರಾಹುಲ್ ಗಾಂಧಿ ಒಂದು ದಿನದಲ್ಲೇ ಅಸ್ಸಾಂ ಮತ್ತು ಮಣಿಪುರಕ್ಕೆ ಭೇಟಿ ನೀಡಿದ್ದಾರೆ. ಇದು ರಾಹುಲ್ ಲೋಕಸಭೆಯ ವಿಪಕ್ಷ ನಾಯಕರಾದ ಬಳಿಕ ಜನಾಂಗೀಯ ಸಂಘರ್ಷ ಪೀಡಿತ ಮಣಿಪುರಕ್ಕೆ ಮಾಡಿದ ಮೊದಲ ಭೇಟಿಯಾಗಿದೆ.
VIDEO | Congress MP and Leader of Opposition Rahul Gandhi (@RahulGandhi) visits a relief camp in Manipur’s Churachandpur district. pic.twitter.com/VGhKDSRXLR
— Press Trust of India (@PTI_News) July 8, 2024
ರಾಹುಲ್ ಗಾಂಧಿಯ ಜೊತೆ ಮಣಿಪುರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕೀಶಮ್ ಮೇಘಚಂದ್ರ ಮತ್ತು ಕಾಂಗ್ರೆಸ್ ನಾಯಕ ಓ ಇಬೋಬಿ ಸಿಂಗ್ ಇದ್ದರು. “ಹಿಂಸಾಚಾರದ ನಂತರ ಜನರಲ್ಲಿರುವ ಕಳವಳವನ್ನು ಪರಿಹರಿಸುವ ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ಪ್ರತಿಬಿಂಬಿಸುವುದು, ಸಂತ್ರಸ್ತ ಜನರಿಗೆ ಬೆಂಬಲವನ್ನು ನೀಡುವುದು ರಾಹುಲ್ ಗಾಂಧಿ ಭೇಟಿಯ ಉದ್ದೇಶವಾಗಿದೆ” ಎಂದು ಮಾಧ್ಯಮಗಳಿಗೆ ಕೀಶಮ್ ಮೇಘಚಂದ್ರ ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ? ಮಣಿಪುರಕ್ಕೆ ತೆರಳಲಿರುವ ರಾಹುಲ್ ಗಾಂಧಿ; ನಿರಾಶ್ರಿತರ ಕೇಂದ್ರಗಳಿಗೆ ಭೇಟಿ
ಪ್ರಧಾನಿ ಮೋದಿಗೆ ಸಂದೇಶ
ರಾಹುಲ್ ಗಾಂಧಿ ಈ ಹಿಂದೆ ಎರಡು ಬಾರಿ ಮಣಿಪುರಕ್ಕೆ ಭೇಟಿ ನೀಡಿದ್ದಾರೆ. ಇನ್ನು ಇಂಡಿಯಾ ಒಕ್ಕೂಟವು ಇತ್ತೀಚಿನ ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಮಣಿಪುರ ಹಿಂಸಾಚಾರದ ವಿಷಯವನ್ನು ಪದೇ ಪದೇ ಪ್ರಸ್ತಾಪಿಸಿದೆ.
ಕಳೆದ ವರ್ಷ ಮೇ ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ಆರಂಭವಾಗಿದೆ. ಆದರೆ ಪ್ರಧಾನಿ ಮೋದಿ ಈವರೆಗೂ ಮಣಿಪುರಕ್ಕೆ ಭೇಟಿ ನೀಡಿಲ್ಲ. ಆದ್ದರಿಂದ ರಾಹುಲ್ ಗಾಂಧಿಯ ಈ ಮಣಿಪುರ ಭೇಟಿಯು ಪ್ರಧಾನಿ ಮೋದಿಗೆ ಸಂದೇಶವಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ.




